ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ ಕಮ್ಮಿ ಇಲ್ಲ, ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಸಿಗರೇಟ್ ಸೇದುತ್ತಾರೆ, ಇನ್ನು ಹಿಂದಿನ ಕಾಲದಲ್ಲಿ ಕೇವಲ ವಯಸ್ಸಾದವರು ಮಾತ್ರ ಸಿಗರ್ಟ್ ಸೇದುತ್ತಿದ್ದರು ಆದರೆ ಈಗ ಶಾಲೆಗೆ ಹೋಗುವ ಮಕ್ಕಳು ಕೂಡ ಸಿಗರೇಟ್ ಗಳನ್ನ ಸೇದುತ್ತಿದ್ದಾರೆ ಮತ್ತು ಅದನ್ನ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 31 ಲಕ್ಷ ಸಿಗರೇಟ್ ಸೇದುತ್ತಿದ್ದಾರೆ ಜನರು, ಇನ್ನು ಜನರು ಸಿಗರೇಟ್ ಸೇದಿದ ಮೇಲೆ ಅದರ ತುದಿಯನ್ನ ಎಸೆಯುತ್ತಾರೆ ಮತ್ತು ಇನ್ನು ಕೆಲವರು ಅದನ್ನ ಕಾಲಿನ ಕೆಳಗೆ ಹಾಕಿ ತುಳಿಯುತ್ತಾರೆ. ಸ್ನೇಹಿತರೆ ನಾವು ಹೇಳುವ ಇವರು ಬಿಸಾಕಿದ ಸಿಗರೇಟ್ ತುದಿಗಳಿಂದ ಕೋಟಿ ಕೋಟಿ ಹಣವನ್ನ ಸಂಪಾದನೆ ಮಾಡುತ್ತಿದ್ದಾರೆ.
ಗುರ್ಕಾಗೆ ಸೇರಿದ ವಿಶಾಲ್ ಮತ್ತು ನಮನ್ ಗುಪ್ತ ಒಂದು ಭಾರಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಲು ಹೋಗಿದ್ದರು ಮತ್ತು ಆ ಸಮಯದಲ್ಲಿ ಅಲ್ಲಿ ಬಿದ್ದಿದ್ದ ಸಾವಿರಾರು ಸೇದು ಬಿಸಾಕಿದ ಸಿಗರೇಟ್ ತುದಿಗಳನ್ನ ನೋಡಿ ಇಬ್ಬರು ಶಾಕ್ ಆದರು. ಈ ಒಂದು ಸ್ಥಳದಲ್ಲೇ ಇಷ್ಟು ಸಿಗರೇಟ್ ತುದಿಗಳು ಇದ್ದರೆ ಪ್ರಪಂಚದಲ್ಲಿ ಇನ್ನೆಷ್ಟು ಇರಬಹುದು ಎಂದು ಭಾವಿಸಿಕೊಂಡ ವಿಶಾಲ್ ಮತ್ತು ನಮನ್ ಗೆ ಒಂದು ಆಲೋಚನೆ ಬರುತ್ತದೆ. ಹೌದು ಸೇದು ಬಿಸಾಕಿದ ಸಿಗರೇಟ್ ಫಿಲ್ಟರ್ ಗಳನ್ನ ರಿಸೈಕಲ್ ಮಾಡಿದರೆ ಹೇಗೆ ಅನ್ನುವ ಆಲೋಚನೆ ಇಬ್ಬರಿಗೆ ಬರುತ್ತದೆ, ಹೀಗೆ ಸ್ವಲ್ಪ ಸಮಯದ ನಂತರ ಕೋಡ್ ಅನ್ನುವ ಕಂಪೆನಿಯನ್ನ ಆರಂಭ ಮಾಡುತ್ತಾರೆ ವಿಶಾಲ್ ಮತ್ತು ನಮನ್.
ಸೇದು ಬಿಸಾಕಿದ ಸಿಗರೇಟ್ ಫಿಲ್ಟರ್ ಗಳನ್ನ ರಿಸೈಕಲ್ ಮಾಡುವುದೇ ಈ ಕಂಪನಿಯ ಕೆಲಸ, ಆದರೆ ಅಷ್ಟು ಮೊತ್ತ ಸಿಗರೇಟ್ ಫಿಲ್ಟರ್ ಗಳನ್ನ ಹೇಗೆ ಒಟ್ಟುಗೂಡಿಸುವುದು ಅನ್ನುವುದು ಅವರಿಗೆ ದೊಡ್ಡ ಸವಾಲಾಗುತ್ತದೆ. ಇನ್ನು ಸಮಯದಲ್ಲಿ ಇನ್ನೊಂದು ಉಪಾಯ ಮಾಡಿದ ಇವರು ಯಾರು ಅದನ್ನ ಶೇಖರಣೆ ಮಾಡಿ ಕೊಡುತ್ತಾರೆ ಅವರಿಗೆ ಒಂದು ಕೆಜಿ ಗೆ ಇಂತಿಷ್ಟು ಹಣ ಕೊಡುತ್ತೇವೆ ಎಂದು ಘೋಷಣೆ ಮಾಡಿದರು ವಿಶಾಲ್ ಮತ್ತು ನಮನ್. ಇನ್ನು ಆಸಕ್ತಿ ಇರುವವರ ಮನೆಯ ಬಳಿ ಒಂದು ಬಾಕ್ಸ್ ಇಡಲು ಶುರು ಮಾಡಿದರು, ಇನ್ನು ಒಂದು ಕೆಜಿ ಸಿಗರೇಟ್ ಫಿಲ್ಟರ್ ಗಳನ್ನ ಶೇಖರಣೆ ಮಾಡಿಕೊಟ್ಟರೆ 700 ರೂಪಾಯಿಗಳನ್ನ ಕೊಡಲಾಗುತ್ತದೆ ಮತ್ತು ಇದನ್ನ ಕೇಳಿದ ಕೆಲವು ಸಿಗರೇಟ್ ಸೇದುವವರು ತಾವೇ ಶೇಖರಣೆ ಮಾಡಲು ಶುರು ಮಾಡಿದರು.
ಈಗ ತಮ್ಮ ಕಂಪನಿಯನ್ನ 20 ರಾಜ್ಯಗಳಲ್ಲಿ ವಿಸ್ತರಣೆ ಮಾಡಿರುವ ವಿಶಾಲ್ ಮತ್ತು ನಮನ್ 10 ಸಾವಿರ ಸ್ಥಳಗಳಲ್ಲಿ ಸಿಗರೇಟ್ ಫಿಲ್ಟರ್ ಶೇಖರಣೆಯ ಬಾಕ್ಸ್ ಇಟ್ಟಿದ್ದಾರೆ, ಇನ್ನು ಶೇಖರಣೆ ಆದ ಸಿಗರೇಟ್ ಪೀಸ್ ಗಳನ್ನ ರಿಸೈಕಲ್ ಮಾಡುವ ಇವರು ಅದರಲ್ಲಿನ ಪೇಪರ್ ಗಳನ್ನ ಗಿಡಗಳಿಗೆ ಆರ್ಗಾನಿಕ್ ಬೋಡೇರ್ ಆಗಿ ಮತ್ತು ಫಿಲ್ಟರ್ ನಲ್ಲಿ ಇರುವ ಪಾಲಿಮರ್ ನ್ನ ಟಾಯ್ಸ್, ಕೀ ಚೈನ್ ಮತ್ತು ದಿಂಬುಗಳನ್ನ ತಯಾರು ಮಾಡಲು ಬಳಸುತ್ತಿದ್ದಾರೆ. ತಮ್ಮ ವಿನೂತನ ಮೂಲಕ ಆಲೋಚನೆಯಿಂದ ಸಾವಿರಾರು ಜನರ ಕೈಗೆ ಒಂದಿಷ್ಟು ಹಣ ಸಿಗುವಂತೆ ಮಾಡುತ್ತಿರುವ ಮತ್ತು ಪರಿಸರ ಸಂರಕ್ಷಣೆ ಮಾಡುತ್ತಿರುವ ವಿಶಾಲ್ ಮತ್ತು ನಮನ್ ಅವರ ಕೆಲಸಕ್ಕೆ ನಾವು ಮೆಚ್ಚಲೇಬೇಕು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.
ಬಿಹಾರದ ಬಾಗಲ್ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ. 19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ….
ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು. ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಪರಾಭವಗೊಂಡ ಸಿಎಂ ಪುತ್ರ ನಿಖಿಲ್ ಕುಮಾರ್ ಬೇಸರದಲ್ಲಿ ಮದ್ಯ ಸೇವಿಸಿ ರಂಪಾಟ ಮಾಡಿದ್ದಾರೆ ಎಂದು ಸುದ್ದಿಯಾಗಿದ್ದು, ಆದರೆ ಇದು ಸುಳ್ಳು ಸುದ್ದಿ ಎಂದು ಹೇಳಲಾಗಿದೆ. ನಿಖಿಲ್ ಸೋತ ನಂತರ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ತೆರಳಿ ಕೂಗಾಡಿದ್ದಾರೆ. ಅಲ್ಲದೆ, ಮೈಸೂರಿನ ಹೋಟೆಲ್ ನಲ್ಲಿ ತಂಗಿದ್ದ ಅವರು ಮದ್ಯ ಸೇವಿಸಿ ರಂಪಾಟ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಇದು ಸುಳ್ಳು ಸುದ್ದಿ ಎನ್ನುವುದು ಗೊತ್ತಾಗಿದೆ….
ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್ಮೆಂಟ್ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…
ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ… ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ –…