ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಆಸಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಕೊಡುಗೈ ದೊರೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ! ಕುಂತಿ-ಸೂರ್ಯದೇವನ ಸಮಾಗಮದ ಕಾರಣಕ್ಕೆ ಹುಟ್ಟಿದವನು ಕರ್ಣ. ಮಗನ ಮೇಲಿನ ಮಮತೆಯಿಂದ ಅವನು ಕವಚ ಕುಂಡಲಗಳೊಂದಿಗೇ ಜನಿಸುವಂತೆ ನೋಡಿಕೊಂಡ ಸೂರ್ಯದೇವ.
ಮುಂದೆ, ಅಪವಾದಕ್ಕೆ ಹೆದರಿದ ಕುಂತಿ, ಆಗ ತಾನೆ ಹುಟ್ಟಿದ ಮಗುವನ್ನು ನದಿಯಲ್ಲಿ ತೇಲಿ ಬಿಡುವುದು, ಹಾಗೆ ತೇಲಿ ಹೋದ ಮಗು ರಾಧಾ-ಅದಿರಥ ಎಂಬ ಬೆಸ್ತ ದಂಪತಿಗೆ ಸಿಗುವುದು; ಅವರಿಬ್ಬರೂ ಈತನನ್ನು ಸಾಕುವುದು ಮತ್ತು ಅದೇ ಕಾರಣಕ್ಕೆ ಸೂತಪುತ್ರ ಎಂಬ ಹೀಯಾಳಿಕೆಯಂಥ ಮಾತಿಗೆ ಕರ್ಣ ಪದೇಪದೇ ಈಡಾಗುವುದು. ಈ ಕಥೆ ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ, ಬಿಲ್ವಿದ್ಯೆ ಕಲಿಯಬೇಕೆಂಬ ಮಹದಾಸೆಯಿಂದ ತಾನು ಬ್ರಾಹ್ಮಣ ಕುಮಾರ ಎಂದು ಹೇಳಿಕೊಂಡು ಪರಶುರಾಮರ ಬಳಿ ಹೋಗುವುದು, ವಿದ್ಯೆ ಕಲಿಯುವುದು, ಅವರ ಮೆಚ್ಚಿನ ಶಿಷ್ಯನಾಗುವುದು ಹಾಗೂ ಕಡೆಗೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಬಾಣ ಪ್ರಯೋಗದ ಮಂತ್ರವೇ ನೆನಪಿಗೆ ಬಾರದಿರಲಿ’ ಎಂಬ ಶಾಪಕ್ಕೆ ಗುರಿಯಾಗುವುದು.
ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ. ಕರ್ಣ ಪರಾಕ್ರಮಿ ಎಂದು ಕೃಷ್ಣನಿಗೆ ತಿಳಿದಿತ್ತು, ಕರ್ಣ ಅಸಾಧಾರಣ ಯೋಧನೆಂದು ಕೃಷ್ಣನಿಗೆ ಮೊದಲೇ ತಿಳಿದಿತ್ತು, ಅರ್ಜುನ ಎಷ್ಟೇ ದೊಡ್ಡ ಬಿಲ್ಲುಗಾರನಾಗಿದ್ದರೂ ಅವನನ್ನು ಕರ್ಣ ಮುಂದೆ ಸೋಲಿಸಬಹುದು ಎಂಬ ಭಯ ಕೂಡ ಕ್ರಷ್ಣನನಿಗಿತ್ತು.
ಸ್ನೇಹಿತರೆ ಕರ್ಣ ಸಾಯಲು ಅನೇಕ ಕಾರಣಗಳಿವೆ, ಇದರಲ್ಲಿ ಒಂದು ಕಾರಣ ಕರ್ಣನು ಸೂರ್ಯನಿಂದ ಪಡೆದ ರಕ್ಷಾಕವಚ, ಇದು ಇರುವವರೆಗೂ ಕೂಡ ಯಾವುದೇ ಆಯುಧವು ಅವನಿಗೆ ಹಾನಿ ಮಾಡಲು ಸಾದ್ಯವಿರಲಿಲ್ಲ ಆದ್ದರಿಂದ ಅರ್ಜುನ ಕರ್ಣನನ್ನು ಕೊಲ್ಲುವುದು ಅಸಾಧ್ಯವಾಗಿತ್ತು. ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು, ಭೀಮ ದುರ್ಯೋಧನರಿಗೆ ಹೇಗೆ ಬದ್ಧವೈರವೋ ಹಾಗೆಯೇ ಕರ್ಣ ಅರ್ಜುನರಿಗೆ ಎಲ್ಲ ವಿಷಯಗಳಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು. ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ ಇಂದ್ರನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು. ಕರ್ಣನ ಉದಾರಗುಣವನ್ನು ಕೇಳಿದ ಆತ ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ.
ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ. ನಂತರ ತಾನು ಅರಿಯದೆ ಮಾಡಿದ ತಪ್ಪಿನಿಂದಾಗಿ ಹಾಗು ಅಗತ್ಯ ಇರುವ ಸಂದರ್ಭದಲ್ಲೇ ಕರ್ಣನಿಗಿದ್ದ ಶಾಪಗಳು ಅವನಿಗೆ ಮುಳುವಾಗಿ ಸಾಯಬೇಕಾಯಿತು. ಇಷ್ಟಕ್ಕೂ ಸಾಯುವ ಮುನ್ನ ಕೃಷ್ಣನಿಂದ ಮೂರು ವರ ಪಡೆದಕೊಂಡ ಈ ರೋಚಕ ಕಥೆ ನಿಮಗೆ ಗೊತ್ತಾ ಹೇಳುತ್ತೇವೆ ಕೇಳಿ, ಕೊನೆಯ ಕ್ಷಣಗಳಲ್ಲಿ ಕರ್ಣನ ಕೌಶಲ್ಯ ಮತ್ತು ಭಕ್ತಿಯಿಂದ ಸಂತಸಗೊಂಡ ಶ್ರೀ ಕೃಷ್ಣ ಕರ್ಣನಿಗೆ ಮೂರು ವರಗಳನ್ನು ಕೇಳುವಂತೆ ಹೇಳುತ್ತಾನೆ. ಇದೆ ಸಮಯದಲ್ಲಿ ಕರ್ಣ ಕೇಳಿದ ಆ ಕೊನೆಯ ಆಸೆಗಳು ಏನಾಗಿದ್ದವು ಗೊತ್ತಾ, ಹಾಗಾದರೆ ಕರ್ಣ ಕೇಳಿದ ಕೊನೆಯ ಆಸೆಯ ಬಗ್ಗೆ ನಾವು ಈಗ ನಿಮಗೆ ತಿಳಿಸುತ್ತೇವೆ ಓದಿ.
ತನ್ನ ಮೊದಲ ವರದಲ್ಲಿ ಜ್ಞಾನಿ ಕರ್ಣನು ಕೃಷ್ಣನನ್ನು ಮುಂದಿನ ಜೀವನದಲ್ಲಿ ತನ್ನ ರೀತಿಯ ಜನರ ಉನ್ನತಿಗಾಗಿ ವಿಶೇಷವಾದ ಏನನ್ನಾದರೂ ಮಾಡಲು ವರವನ್ನು ಕೇಳಿದನು, ಏಕೆಂದರೆ ಅವನು ಸೂತ್ರ ಪುತ್ರನಾಗಿರುವುದರಿಂದ ಅವನ ಜೀವನದುದ್ದಕ್ಕೂ ಮೋಸ ಮತ್ತು ದುಃಖವನ್ನು ಎದುರಿಸಿದ್ದ. ಎರಡನೆಯ ವರವಾಗಿ ಕರ್ಣನು ತನ್ನ ಮುಂದಿನ ಜೀವನದಲ್ಲಿ ಕೃಷ್ಣನು ತನ್ನ ರಾಜ್ಯದಲ್ಲಿ ಜನಿಸಬೇಕೆಂದು ಕರ್ಣನು ಕೇಳಿಕೊಳ್ಳುತ್ತಾನೆ, ಇನ್ನು ತನ್ನ ಕೊನೆಯ ವರದಲ್ಲಿ ಕರ್ಣ ತನ್ನ ಕೊನೆಯ ವಿಧಿಗಳನ್ನು ಭೂಮಂಡಲದಲ್ಲಿ ಯಾವುದೇ ಪಾಪವಿಲ್ಲದ ಸ್ಥಳದಲ್ಲಿ ನಡೆಸಬೇಕೆಂದು ಕೃಷ್ಣನಿಗೆ ಹೇಳಿದನು, ಇನ್ನು ಇಡೀ ಭೂಮಿಯ ಮೇಲೆ ಅಂತಹ ಸ್ಥಳವಿಲ್ಲದ ಕಾರಣ ಕೃಷ್ಣನು ತನ್ನ ಅಂಗೈಯಲ್ಲೇ ಕರ್ಣನ ಕೊನೆಯ ವಿಧಿಗಳನ್ನು ಮಾಡಿದನು ಇದರಿಂದ ಕರ್ಣ ಮೋಕ್ಷವನ್ನು ಕೂಡ ಪಡೆಯುತ್ತಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….
ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ವಾಘಪುರ್ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ. ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ…
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು
ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.
ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು. ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ…
ಸ್ಮಾರ್ಟ್ಫೋನ್ ಹಳೆಯದಾದಷ್ಟು ಅದು ಹ್ಯಾಂಗ್ ಹಾಗೂ ಸ್ಲೋ ಆಗುವ ಚಾನ್ಸ್ ಹೆಚ್ಚಾಗಿರುತ್ತದೆ. ಅಂದರೆ ಬಳಕೆ ಮಾಡುವಾಗ ಲೇಟ್ ಆಗಿ ರೆಸ್ಪಾನ್ಸ್ ಮಾಡುತ್ತದೆ. ನಂತರ ಹ್ಯಾಂಗ್ ಆಗುತ್ತದೆ. ಹೀಗೆ ಆದರೆ ಫೋನ್ನ್ನು ಮತ್ತೆ ಮತ್ತೆ ರಿಸ್ಟಾರ್ಟ್ ಮಾಡಬೇಕಾಗುತ್ತದೆ.