ಜ್ಯೋತಿಷ್ಯ

ದಿನ ಭವಿಷ್ಯ ಬುಧವಾರ ….ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

116

ಪ್ರತಿನಿತ್ಯ ಎದುರಿಸುವ ಆಧುನಿಕ ಬದುಕಿನ ಗೋಜಲು ಗದ್ದಲಗಳಿಗೂ ಹುಟ್ಟಿದ ಜನ್ಮರಾಶಿಗಳಿಗೂ ಒಂದು ನಿಕಟ ಸಂಬಂಧ ಇದೆ ಎಂಬುದು ಲಕ್ಷಾಂತರ ಜನರ ನಂಬಿಕೆ. ಪ್ರಪಂಚದಾದ್ಯಂತ ನಿತ್ಯ ರಾಶಿಗಳ ಆಧಾರದ ಮೇಲೆ ದಿನವನ್ನು ಎದುರುಗೊಳ್ಳುವ ಸಂಪ್ರದಾಯವಿದೆ. ಬದುಕಿನ ಭವಿಷ್ಯವನ್ನು ಒಟ್ಟು 12 ರಾಶಿಗಳ ಆಧಾರದ ಮೇಲೆ ಹೇಳಿಕೊಂಡು ಬರಲಾಗುತ್ತಿದೆ….

ಈ ಹಿನ್ನೆಲೆಯಲ್ಲಿ ಇದು ನಿತ್ಯ ಭವಿಷ್ಯ. ನಿಮ್ಮ ನಿಮ್ಮ ರಾಶಿಯ ಫಲಾಫಲವನ್ನು ವಯೋಮಾನಕ್ಕೆ ಅನುಗುಣವಾಗಿಯೂ ಇಲ್ಲಿ ನೀಡಲಾಗಿದೆ. ದಿನ ಆರಂಭಕ್ಕೆ ಉತ್ತಮ ಮಾರ್ಗದರ್ಶಿ ಇದು.

ಮೇಷ…

ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ.

ವಯಸ್ಕರಿಗೆ: ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ, ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಲಾಭವಿದೆ.

ಹಿರಿಯರಿಗೆ: ಸದಾ ಸಾವಿನ ಬಗ್ಗೆ ಯೋಚನೆ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ….

ವೃಷಭ…

ಯುವಜನರಿಗೆ: ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೀರಿ. ಹೊಸ ವಿಷಯಗಳತ್ತ ಹುಸಿ ಹುರುಪು ಬೇಡ.

ವಯಸ್ಕರಿಗೆ: ದಾಂಪತ್ಯದಲ್ಲಿನ ವಿರಸ ಮಾನಸಿಕ ಆರೋಗ್ಯ ಕೆಡಿಸುತ್ತದೆ. ನ್ಯಾಯಾಲಯಲ್ಲಿ ಗೆಲವು.

ಹಿರಿಯರಿಗೆ: ಹಣದ ಬಗ್ಗೆ ಎಚ್ಚರದಿಂದ ಇರಿ. ಆರೋಗ್ಯದ ತಪಾಸಣೆಯಿಂದ ಒಳ್ಳೆಯದಾಗುತ್ತದೆ. ಭಯ ನಿವಾರಣೆ ಸಾಧ್ಯ.

ಮಿಥುನ…

ಯುವಜನರಿಗೆ: ವೃತ್ತಿ ಶಿಕ್ಷಣದ ಕೊನೆಯ ಹಂತದಲ್ಲಿದ್ದೀರಿ. ಇದುವರೆವಿಗೂ ಎದುರಾಗುತ್ತಿದ್ದ ನೆನಪಿನ ಸಮಸ್ಯೆಗಳು ಬದಲಾಗುವ ಸೂಚನೆಗಳಿವೆ.

ವಯಸ್ಕರಿಗೆ: ನಿವೃತ್ತಿಯ ಅಂಚಿನಲ್ಲಿದ್ದೀರಿ. ಮುಂದಿನ ದಿನಗಳ ಬಗ್ಗೆ ಕೊಂಚ ಕಾಳಜಿಯಿಂದ ಯೋಚಿಸಿ. ಕುಡಿತದಿಂದ ಅಪಾಯ.

ಹಿರಿಯರಿಗೆ: ಮನೆಮಂದಿಯೊಂದಿಗೆ ಮುನಿಸಿಕೊಂಡರೆ ನಿಮಗೆ ತೊಂದರೆ. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಬೇಡ.

ಕರ್ಕಾಟಕ…

ಯುವಜನರಿಗೆ: ಸೋಲು ಸತತವಾಗಿ ಬರುತ್ತಿರುವುದರಿಂದ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಎದ್ದಿವೆ. ಯಶಸ್ಸಿಗೆ ಬಹಳ ಹತ್ತಿರದಲ್ಲಿದ್ದೀರಿ ಎನ್ನುವುದನ್ನು ನಂಬಿ ಮುನ್ನುಗ್ಗಿ.

ವಯಸ್ಕರಿಗೆ: ನಿಮ್ಮಂತೆಯೇ ನಿಮ್ಮ ಮಕ್ಕಳು ಬೆಳೆಯಬೇಕೆಂಬ ಹಠ ಬೇಡ. ನೀವು ನಿಮ್ಮ ಯಶಸ್ಸಿನ ಕಡೆ ಗಮನ ಹರಿಸಿ. ನಿಮ್ಮ
ಚಟವೊಂದು ಕುಟುಂಬದ ಶಾಂತಿಯನ್ನು ಕೆದಡಲಿದೆ.

ಹಿರಿಯರಿಗೆ: ಭೂತದ ಆರಾಧಕರಿಂದ ದೂರವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ.

ಸಿಂಹ…

ಯುವಜನರಿಗೆ: ಸದಾ ಒಂದಲ್ಲಾ ಒಂದು ತೊಂದರೆಗೆ ಸಿಕ್ಕಿಕೊಳ್ಳುವುದಕ್ಕೆ ನಿಮ್ಮ ಮೊಂಡುತನ ಕಾರಣ. ಇಂದು ಇದರ ಸಲುವಾಗಿಯೇ ಹಿಂಸೆಗೆ ಒಳಗಾಗುತ್ತೀರಿ.

ವಯಸ್ಕರಿಗೆ: ಕುಟುಂಬದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳದಿರುವುದರಿಂದಾಗಿಯೇ ಜಗಳ-ಕದನ. ಸಾಲಗಾರರಿಂದ ಹಿಂಸೆ ಹೆಚ್ಚಾಗಲಿದೆ.

ಹಿರಿಯರಿಗೆ: ನೀವು ನೆನೆಪಿನ ಶಕ್ತಿ ಹೀನತೆಯ ಬಗ್ಗೆ ಗಮನ ಹರಿಸದಿರುವುದರಿಂದಾಗಿ ತಪ್ಪು ಅಭಿಪ್ರಾಯಗಳು ಹೆಚ್ಚಾಗುತ್ತಿವೆ ತಜ್ಙ ವೈದ್ಯರ ಸಲಹೆ ಉಪಯುಕ್ತ.

ಕನ್ಯಾ…

ಯುವಜನರಿಗೆ: ನೀವು ಇರುವ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ದಾರಿಗಳನ್ನು ಆರಿಸುವ ಮನಸ್ಸು ಪ್ರಬಲ. ನಿಮಗಿರುವ ಚಂಚಲ ಮನಸ್ಸುನನ್ನು ಬದಲಾಯಿಸಿಕೊಳ್ಳಿ.

ವಯಸ್ಕರಿಗೆ: ಹೀಗೆ ಬಾಳ ಸಂಗಾತಿಯ ಆಯ್ಕೆಯನ್ನು ಒಂದಲ್ಲಾ ಒಂದು ಕಾರಣದಿಂದ ಮುಂದು ಹಾಕುವುದ ಸರಿಯಲ್ಲ ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಹಿರಿಯರಿಗೆ: ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.

ತುಲಾ…

ಯುವಜನರಿಗೆ: ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯತ್ತ ಒಗೆಯುವ ಸ್ವಭಾವ ನಿಮ್ಮದು. ಇಂದದು ಅಪಾಯದ ಮಟ್ಟ ಮುಟ್ಟಲಿದೆ.

ವಯಸ್ಕರಿಗೆ: ಒಂಟಿ ತಾಯಿ ಆಗಿ ಮಕ್ಕಳನ್ನು ಬೆಳೆಸುತ್ತಿರುವುದು ಕಷ್ಟದ ಕೆಲಸ. ಆದರೂ ದೃಢ ಮನಸ್ಸಿನಿಂದ ಮುಂದುವರೆಯರಿ.

ಹಿರಿಯರಿಗೆ: ಒಡ ಹುಟ್ಟಿದವರ ಬಗ್ಗೆ ಇನ್ನೆಷ್ಟು ದಿನ ಈರ್ಷ್ಯೆ ವ್ಯಕ್ತಪಡಿಸುವಿರಿ. ಇದು ನಿಮ್ಮ ಮನೋಬಲವನ್ನು ಹಿಂಡುತ್ತದೆ. ಇಂದು ಎಚ್ಚರದಿಂದ ಅತ್ತ ಗಮನಿಸಿ.

ವೃಶ್ಚಿಕ…

ಯುವಜನರಿಗೆ: ನಿಮ್ಮ ಕ್ರೀಡಾಪಟುತ್ವ ಇಂದು ಮುಖ್ಯ ಪರೀಕ್ಷೆಯನ್ನು ಎದುರಿಸಲಿದೆ. ಗುರಿಯತ್ತ ಮಾತ್ರವಷ್ಟೇ ಗಮನವಿರಲಿ.

ವಯಸ್ಕರಿಗೆ: ಇಷ್ಟ ಪಟ್ಟವರನ್ನು ಮದುವೆಯಾಗುವ ನಿಮ್ಮ ಮಗಳ ಬಗ್ಗೆ ನಿಶ್ಚಿಂತೆ ಇಂದ ಇರುವುದೇ ಸರಿ. ಹಲವಾರು ವರ್ಷಗಳ ಹಿಂದೆ ನೀವೂ ಕೂಡ ಅದನ್ನೇ ಮಾಡಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ.

ಹಿರಿಯರಿಗೆ: ಇಳಿ ವಯಸ್ಸಿನಲ್ಲಿ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಧನಸ್ಸು…

ಯುವಜನರಿಗೆ: ನಿಮ್ಮ ಪೋಷಕರ ಸಂಬಂಧಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ನಿಮ್ಮ ನಕಾರಾತ್ಮಕ ಭಾವನೆಗಳು ಕಡಿಮೆಯಾಗುವುದಿಲ್ಲ.

ವಯಸ್ಕರಿಗೆ: ನಿಮ್ಮ ಸ್ವಭಾವ ಎಲ್ಲರನ್ನು ನಂಬುವಂತಹದ್ದು. ಅದನ್ನು ಬದಲಾಯಿಸುವ ಪ್ರಸಂಗ ಎದುರಾಗಲಿದೆ.

ಹಿರಿಯರಿಗೆ: ವಯೋಮಾನಕ್ಕೆ ಅನುಗುಣವಾದ ನಡೆ ನುಡಿ ನಿಮ್ಮಲ್ಲಿ ಇಲ್ಲವೆನ್ನುವುದನ್ನು ನೆನಪಿಗೆ ತರುವ ದಿನಗಳು ಮುಂದೆ ಬರಲಿವೆ.

ಮಕರ…

ಯುವಜನರಿಗೆ: ಹೆಣ್ಣು ಎನ್ನುವ ಕಾರಣದಿಂದ ಎಲ್ಲದರ ಬಗ್ಗೆ ಮುಜುಗರ ಬೇಡ. ನಿಮಗೆ ಇಷ್ಟವಾದದನ್ನು ಪಡೆಯುವುದರತ್ತ ಹೆಚ್ಚು ಗಮನ ಇರಲಿ.

ವಯಸ್ಕರಿಗೆ: ನೀವು ವೃತ್ತಿಯಲ್ಲಿದ್ದುಕೊಂಡೇ ಉನ್ನತ ಪದವಿಯ ಶಿಕ್ಷಣ ಮುಂದುವರೆಸಿ. ಯಶಸ್ಸು, ಕೀರ್ತಿ ಅದರ ಹಿಂದೆ ತಾನಾಗಿಯೇ ಬರುವುದು.

ಹಿರಿಯರಿಗೆ: ಸಾವಿನ ಬಗ್ಗೆ ಅಷ್ಟೊಂದು ಆಲೋಚಿಸಿ ಪ್ರಯೋಜನವಿಲ್ಲ. ಮುಂದಾಗುವುದರ ಮುನ್ಸೂಚನೆ ಇದ್ದರೂ ಆ ಬಗ್ಗೆ ಆತಂಕ, ಅಂಜಿಕೆ ಬೇಡ.

ಕುಂಭ…

ಯುವಜನರಿಗೆ: ನಿಮ್ಮ ಒಳಮುಖದ ಸ್ವಭಾವದಿಂದ ಅನಗತ್ಯವಾಗಿ ಕಿರಿಕಿರಿ ಎದುರಿಸುತ್ತೀರಿ. ಇದರಿಂದಾಗಿಯೇ ನಿಕಟವಾಗಲಿದ್ದ ಸಂಬಂಧವೊಂದಕ್ಕೆ ಹಿನ್ನಡೆ. ಕೋಪ-ತಾಪದಿಂದ ಹಾನಿಯಾಗುವುದು.

ವಯಸ್ಕರಿಗೆ: ಮಕ್ಕಳಿಂದ ತುಂಬಾ ನಿರೀಕ್ಷಿಸುತ್ತೀರಿ. ಇದು ಸಂಯಮ ಕೆಡಿಸುತ್ತದೆ. ವೃತ್ತಿಯಲ್ಲಿ ಕಿರಿಕಿರಿ; ಮೆಚ್ಚುಗೆಯ ಮಾತುಗಳನ್ನು ಆಡುವುದರಿಂದ ಬಿಟ್ಟು ಹೋಗಿದ್ದ ಸಂಬಂಧವೊಂದು ಗಟ್ಟಿಯಾಗುತ್ತದೆ.

ಹಿರಿಯರಿಗೆ: ಆರೋಗ್ಯದ ಬಗ್ಗೆ ತವಕ ಬೇಡ. ಇಷ್ಟ ದೇವತಾ ಸ್ಮರಣೆ ನಿಷ್ಠೆಯಿಂದ ಮಾಡಿ. ಮಕ್ಕಳ ಸೋಲಿನ ಬಗ್ಗೆ ಆತಂಕ ಪಡುವುದರಿಂದ ನಿದ್ದೆ ಕೆಡಿಸಿಕೊಳ್ಳುತ್ತೀರಿ.

ಮೀನ…

ಯುವಜನರಿಗೆ: ಸಾಮಾಜಿಕ ಜಾಲತಾಣವನ್ನು ನಂಬಿ ಸಮಸ್ಯೆಗೆ ಸಿಕ್ಕಿಕೊಳ್ಳುತ್ತೀರಿ. ಕೆಡಕು ಮಾಡುವ ಮನಸ್ಸು ಬಿಡಿ.

ವಯಸ್ಕರಿಗೆ: ಕರ್ತವ್ಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳದಿದ್ದರೇ ಅವಕಾಶಗಳು ಕೈ ತಪ್ಪುತ್ತದೆ. ಸಂಗಾತಿಯ ಬಗ್ಗೆ ಸಂಶಯ ಬೇಡ.

ಹಿರಿಯರಿಗೆ: ಹಳೆಯದನ್ನು ಎಷ್ಟು ನೆನಪಿಸಿಕೊಂಡರೂ ಪ್ರಯೋಜನವಿಲ್ಲ. ತಪ್ಪದೇ ವ್ಯಾಯಮ ಮಾಡಿ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದುವೆ ಮೆರವಣಿಗೆಗೆ ಬಂದು ಸ್ಮಶಾನಕ್ಕೆ ಸೇರಿದ್ರು…ಕಾರಣ?

    ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ. ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಟೀ-ಕಾಫಿ ಕುಡಿಯುವ ಮುಂಚೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ. ಹಲ್ಲು ಕೊಳೆಯಾಗಲ್ಲ :-ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು.  ಅಸಿಡಿಟಿ:-ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ…

  • ಸುದ್ದಿ

    ಕರ್ನಾಟಕಕ್ಕೆ ಮೊಟ್ಟ ಮೊದಲ ಬಾರಿಗೆ ಸಿಗಲಿದೆ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ….!

    ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುತೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ. ಪ್ರಸ್ತುತ ಕೆ.ಆರ್ ಪುರಂ ನಲ್ಲಿರುವ ಡೀಸೆಲ್ ಲೋಕೋ ಶೆಡ್ ನ್ನು ಎಲೆಕ್ಟ್ರಿಕ್ ಲೋಕೋ ಶೆಡ್ ನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಸ್ಥಾಪನೆಯಾಗಲಿದೆ. ಬೆಂಗಳೂರು ಮೂಲದ ಬಾಲಾಜಿ ಬಿಲ್ಡರ್ಸ್ ಗೆ ಈ ಗುತ್ತಿಗೆ ಲಭ್ಯವಾಗಿದ್ದು, ವರ್ಷಾಂತ್ಯ ಅಥವಾ 2020 ರ ಜನವರಿಗೆ ಕಾಮಗಾರಿ…

  • ಸುದ್ದಿ

    ಇನ್ಮುಂದೆ ಹೊಸ ಅಂಕಪಟ್ಟಿ ಪಡೆಯಬೇಕೆಂದರೆ ಆಧಾರ್‌ ಕಡ್ಡಾಯ,.!

    ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…

  • ಸಿನಿಮಾ

    ದೊಡ್ಮನೆ ಹುಡುಗ ಅಣ್ಣಾವ್ರ ಮೊಮ್ಮಗನ ಮದುವೆ ಸಂಭ್ರಮ ಹೇಗಿತ್ತು ಯಾವೆಲ್ಲಾ ಸ್ಟಾರ್’ಗಳು ಬಂದಿದ್ದರು..ತಿಳಿಯಲು ಈ ಲೇಖನ ಓದಿ…

    ಕನ್ನಡ ಚಿತ್ರರಂಗದ ದೊಡ್ಮನೆ ಅಣ್ಣಾವ್ರ ಮನೆಯಲ್ಲಿ‌ ಮದುವೆ ಸಂಭ್ರಮ ನಡೆದಿದೆ. ಇದು ದೊಡ್ಮನೆಯ ಮೂರನೇ‌ ತಲೆಮಾರಿನ‌ ಮದುವೆಯಾಗಿದ್ದು, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಮಗ ಶಾನ್ (ಷಣ್ಮುಖ) ರ ಮದುವೆ ಮಾರ್ಚ್ 26 ರಂದು ಶಿವಮೊಗ್ಗದಲ್ಲಿ ನಡೆದಿದೆ. ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಬಿಮಾನಿಗಳು ಮದುವೆಗೆ ಬನ್ನಿ ಎಂದು ಎಲ್ಲರನ್ನೂ ಆಹ್ವಾನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ಮದುವೆ…

  • ಸುದ್ದಿ

    ಆಧಾರ್ ಕಾರ್ಡ್ನಲ್ಲಿ ನಿಮ್ ಫೋಟೊ ಬದಲಾಯಿಸಬೇಕೆ….ತಕ್ಷಣ ಇದನ್ನು ಓಧಿ

    ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಿಸಲು ಅಥವಾ ನವೀಕರಿಸಲು ಬಯಸುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತೋಷದ ವಿಷಯ. ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ..ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ನಿಮ್ಮ ಆಧಾರ್ ಕಾರ್ಡ್ ನೊಂದಿಗೆ…