ಜ್ಯೋತಿಷ್ಯ

ದಿನ ಭವಿಷ್ಯ ಬುಧವಾರ ….ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

112

ಪ್ರತಿನಿತ್ಯ ಎದುರಿಸುವ ಆಧುನಿಕ ಬದುಕಿನ ಗೋಜಲು ಗದ್ದಲಗಳಿಗೂ ಹುಟ್ಟಿದ ಜನ್ಮರಾಶಿಗಳಿಗೂ ಒಂದು ನಿಕಟ ಸಂಬಂಧ ಇದೆ ಎಂಬುದು ಲಕ್ಷಾಂತರ ಜನರ ನಂಬಿಕೆ. ಪ್ರಪಂಚದಾದ್ಯಂತ ನಿತ್ಯ ರಾಶಿಗಳ ಆಧಾರದ ಮೇಲೆ ದಿನವನ್ನು ಎದುರುಗೊಳ್ಳುವ ಸಂಪ್ರದಾಯವಿದೆ. ಬದುಕಿನ ಭವಿಷ್ಯವನ್ನು ಒಟ್ಟು 12 ರಾಶಿಗಳ ಆಧಾರದ ಮೇಲೆ ಹೇಳಿಕೊಂಡು ಬರಲಾಗುತ್ತಿದೆ….

ಈ ಹಿನ್ನೆಲೆಯಲ್ಲಿ ಇದು ನಿತ್ಯ ಭವಿಷ್ಯ. ನಿಮ್ಮ ನಿಮ್ಮ ರಾಶಿಯ ಫಲಾಫಲವನ್ನು ವಯೋಮಾನಕ್ಕೆ ಅನುಗುಣವಾಗಿಯೂ ಇಲ್ಲಿ ನೀಡಲಾಗಿದೆ. ದಿನ ಆರಂಭಕ್ಕೆ ಉತ್ತಮ ಮಾರ್ಗದರ್ಶಿ ಇದು.

ಮೇಷ…

ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ.

ವಯಸ್ಕರಿಗೆ: ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ, ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಲಾಭವಿದೆ.

ಹಿರಿಯರಿಗೆ: ಸದಾ ಸಾವಿನ ಬಗ್ಗೆ ಯೋಚನೆ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ….

ವೃಷಭ…

ಯುವಜನರಿಗೆ: ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೀರಿ. ಹೊಸ ವಿಷಯಗಳತ್ತ ಹುಸಿ ಹುರುಪು ಬೇಡ.

ವಯಸ್ಕರಿಗೆ: ದಾಂಪತ್ಯದಲ್ಲಿನ ವಿರಸ ಮಾನಸಿಕ ಆರೋಗ್ಯ ಕೆಡಿಸುತ್ತದೆ. ನ್ಯಾಯಾಲಯಲ್ಲಿ ಗೆಲವು.

ಹಿರಿಯರಿಗೆ: ಹಣದ ಬಗ್ಗೆ ಎಚ್ಚರದಿಂದ ಇರಿ. ಆರೋಗ್ಯದ ತಪಾಸಣೆಯಿಂದ ಒಳ್ಳೆಯದಾಗುತ್ತದೆ. ಭಯ ನಿವಾರಣೆ ಸಾಧ್ಯ.

ಮಿಥುನ…

ಯುವಜನರಿಗೆ: ವೃತ್ತಿ ಶಿಕ್ಷಣದ ಕೊನೆಯ ಹಂತದಲ್ಲಿದ್ದೀರಿ. ಇದುವರೆವಿಗೂ ಎದುರಾಗುತ್ತಿದ್ದ ನೆನಪಿನ ಸಮಸ್ಯೆಗಳು ಬದಲಾಗುವ ಸೂಚನೆಗಳಿವೆ.

ವಯಸ್ಕರಿಗೆ: ನಿವೃತ್ತಿಯ ಅಂಚಿನಲ್ಲಿದ್ದೀರಿ. ಮುಂದಿನ ದಿನಗಳ ಬಗ್ಗೆ ಕೊಂಚ ಕಾಳಜಿಯಿಂದ ಯೋಚಿಸಿ. ಕುಡಿತದಿಂದ ಅಪಾಯ.

ಹಿರಿಯರಿಗೆ: ಮನೆಮಂದಿಯೊಂದಿಗೆ ಮುನಿಸಿಕೊಂಡರೆ ನಿಮಗೆ ತೊಂದರೆ. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಬೇಡ.

ಕರ್ಕಾಟಕ…

ಯುವಜನರಿಗೆ: ಸೋಲು ಸತತವಾಗಿ ಬರುತ್ತಿರುವುದರಿಂದ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಎದ್ದಿವೆ. ಯಶಸ್ಸಿಗೆ ಬಹಳ ಹತ್ತಿರದಲ್ಲಿದ್ದೀರಿ ಎನ್ನುವುದನ್ನು ನಂಬಿ ಮುನ್ನುಗ್ಗಿ.

ವಯಸ್ಕರಿಗೆ: ನಿಮ್ಮಂತೆಯೇ ನಿಮ್ಮ ಮಕ್ಕಳು ಬೆಳೆಯಬೇಕೆಂಬ ಹಠ ಬೇಡ. ನೀವು ನಿಮ್ಮ ಯಶಸ್ಸಿನ ಕಡೆ ಗಮನ ಹರಿಸಿ. ನಿಮ್ಮ
ಚಟವೊಂದು ಕುಟುಂಬದ ಶಾಂತಿಯನ್ನು ಕೆದಡಲಿದೆ.

ಹಿರಿಯರಿಗೆ: ಭೂತದ ಆರಾಧಕರಿಂದ ದೂರವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ.

ಸಿಂಹ…

ಯುವಜನರಿಗೆ: ಸದಾ ಒಂದಲ್ಲಾ ಒಂದು ತೊಂದರೆಗೆ ಸಿಕ್ಕಿಕೊಳ್ಳುವುದಕ್ಕೆ ನಿಮ್ಮ ಮೊಂಡುತನ ಕಾರಣ. ಇಂದು ಇದರ ಸಲುವಾಗಿಯೇ ಹಿಂಸೆಗೆ ಒಳಗಾಗುತ್ತೀರಿ.

ವಯಸ್ಕರಿಗೆ: ಕುಟುಂಬದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳದಿರುವುದರಿಂದಾಗಿಯೇ ಜಗಳ-ಕದನ. ಸಾಲಗಾರರಿಂದ ಹಿಂಸೆ ಹೆಚ್ಚಾಗಲಿದೆ.

ಹಿರಿಯರಿಗೆ: ನೀವು ನೆನೆಪಿನ ಶಕ್ತಿ ಹೀನತೆಯ ಬಗ್ಗೆ ಗಮನ ಹರಿಸದಿರುವುದರಿಂದಾಗಿ ತಪ್ಪು ಅಭಿಪ್ರಾಯಗಳು ಹೆಚ್ಚಾಗುತ್ತಿವೆ ತಜ್ಙ ವೈದ್ಯರ ಸಲಹೆ ಉಪಯುಕ್ತ.

ಕನ್ಯಾ…

ಯುವಜನರಿಗೆ: ನೀವು ಇರುವ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ದಾರಿಗಳನ್ನು ಆರಿಸುವ ಮನಸ್ಸು ಪ್ರಬಲ. ನಿಮಗಿರುವ ಚಂಚಲ ಮನಸ್ಸುನನ್ನು ಬದಲಾಯಿಸಿಕೊಳ್ಳಿ.

ವಯಸ್ಕರಿಗೆ: ಹೀಗೆ ಬಾಳ ಸಂಗಾತಿಯ ಆಯ್ಕೆಯನ್ನು ಒಂದಲ್ಲಾ ಒಂದು ಕಾರಣದಿಂದ ಮುಂದು ಹಾಕುವುದ ಸರಿಯಲ್ಲ ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಹಿರಿಯರಿಗೆ: ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.

ತುಲಾ…

ಯುವಜನರಿಗೆ: ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯತ್ತ ಒಗೆಯುವ ಸ್ವಭಾವ ನಿಮ್ಮದು. ಇಂದದು ಅಪಾಯದ ಮಟ್ಟ ಮುಟ್ಟಲಿದೆ.

ವಯಸ್ಕರಿಗೆ: ಒಂಟಿ ತಾಯಿ ಆಗಿ ಮಕ್ಕಳನ್ನು ಬೆಳೆಸುತ್ತಿರುವುದು ಕಷ್ಟದ ಕೆಲಸ. ಆದರೂ ದೃಢ ಮನಸ್ಸಿನಿಂದ ಮುಂದುವರೆಯರಿ.

ಹಿರಿಯರಿಗೆ: ಒಡ ಹುಟ್ಟಿದವರ ಬಗ್ಗೆ ಇನ್ನೆಷ್ಟು ದಿನ ಈರ್ಷ್ಯೆ ವ್ಯಕ್ತಪಡಿಸುವಿರಿ. ಇದು ನಿಮ್ಮ ಮನೋಬಲವನ್ನು ಹಿಂಡುತ್ತದೆ. ಇಂದು ಎಚ್ಚರದಿಂದ ಅತ್ತ ಗಮನಿಸಿ.

ವೃಶ್ಚಿಕ…

ಯುವಜನರಿಗೆ: ನಿಮ್ಮ ಕ್ರೀಡಾಪಟುತ್ವ ಇಂದು ಮುಖ್ಯ ಪರೀಕ್ಷೆಯನ್ನು ಎದುರಿಸಲಿದೆ. ಗುರಿಯತ್ತ ಮಾತ್ರವಷ್ಟೇ ಗಮನವಿರಲಿ.

ವಯಸ್ಕರಿಗೆ: ಇಷ್ಟ ಪಟ್ಟವರನ್ನು ಮದುವೆಯಾಗುವ ನಿಮ್ಮ ಮಗಳ ಬಗ್ಗೆ ನಿಶ್ಚಿಂತೆ ಇಂದ ಇರುವುದೇ ಸರಿ. ಹಲವಾರು ವರ್ಷಗಳ ಹಿಂದೆ ನೀವೂ ಕೂಡ ಅದನ್ನೇ ಮಾಡಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ.

ಹಿರಿಯರಿಗೆ: ಇಳಿ ವಯಸ್ಸಿನಲ್ಲಿ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಧನಸ್ಸು…

ಯುವಜನರಿಗೆ: ನಿಮ್ಮ ಪೋಷಕರ ಸಂಬಂಧಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ನಿಮ್ಮ ನಕಾರಾತ್ಮಕ ಭಾವನೆಗಳು ಕಡಿಮೆಯಾಗುವುದಿಲ್ಲ.

ವಯಸ್ಕರಿಗೆ: ನಿಮ್ಮ ಸ್ವಭಾವ ಎಲ್ಲರನ್ನು ನಂಬುವಂತಹದ್ದು. ಅದನ್ನು ಬದಲಾಯಿಸುವ ಪ್ರಸಂಗ ಎದುರಾಗಲಿದೆ.

ಹಿರಿಯರಿಗೆ: ವಯೋಮಾನಕ್ಕೆ ಅನುಗುಣವಾದ ನಡೆ ನುಡಿ ನಿಮ್ಮಲ್ಲಿ ಇಲ್ಲವೆನ್ನುವುದನ್ನು ನೆನಪಿಗೆ ತರುವ ದಿನಗಳು ಮುಂದೆ ಬರಲಿವೆ.

ಮಕರ…

ಯುವಜನರಿಗೆ: ಹೆಣ್ಣು ಎನ್ನುವ ಕಾರಣದಿಂದ ಎಲ್ಲದರ ಬಗ್ಗೆ ಮುಜುಗರ ಬೇಡ. ನಿಮಗೆ ಇಷ್ಟವಾದದನ್ನು ಪಡೆಯುವುದರತ್ತ ಹೆಚ್ಚು ಗಮನ ಇರಲಿ.

ವಯಸ್ಕರಿಗೆ: ನೀವು ವೃತ್ತಿಯಲ್ಲಿದ್ದುಕೊಂಡೇ ಉನ್ನತ ಪದವಿಯ ಶಿಕ್ಷಣ ಮುಂದುವರೆಸಿ. ಯಶಸ್ಸು, ಕೀರ್ತಿ ಅದರ ಹಿಂದೆ ತಾನಾಗಿಯೇ ಬರುವುದು.

ಹಿರಿಯರಿಗೆ: ಸಾವಿನ ಬಗ್ಗೆ ಅಷ್ಟೊಂದು ಆಲೋಚಿಸಿ ಪ್ರಯೋಜನವಿಲ್ಲ. ಮುಂದಾಗುವುದರ ಮುನ್ಸೂಚನೆ ಇದ್ದರೂ ಆ ಬಗ್ಗೆ ಆತಂಕ, ಅಂಜಿಕೆ ಬೇಡ.

ಕುಂಭ…

ಯುವಜನರಿಗೆ: ನಿಮ್ಮ ಒಳಮುಖದ ಸ್ವಭಾವದಿಂದ ಅನಗತ್ಯವಾಗಿ ಕಿರಿಕಿರಿ ಎದುರಿಸುತ್ತೀರಿ. ಇದರಿಂದಾಗಿಯೇ ನಿಕಟವಾಗಲಿದ್ದ ಸಂಬಂಧವೊಂದಕ್ಕೆ ಹಿನ್ನಡೆ. ಕೋಪ-ತಾಪದಿಂದ ಹಾನಿಯಾಗುವುದು.

ವಯಸ್ಕರಿಗೆ: ಮಕ್ಕಳಿಂದ ತುಂಬಾ ನಿರೀಕ್ಷಿಸುತ್ತೀರಿ. ಇದು ಸಂಯಮ ಕೆಡಿಸುತ್ತದೆ. ವೃತ್ತಿಯಲ್ಲಿ ಕಿರಿಕಿರಿ; ಮೆಚ್ಚುಗೆಯ ಮಾತುಗಳನ್ನು ಆಡುವುದರಿಂದ ಬಿಟ್ಟು ಹೋಗಿದ್ದ ಸಂಬಂಧವೊಂದು ಗಟ್ಟಿಯಾಗುತ್ತದೆ.

ಹಿರಿಯರಿಗೆ: ಆರೋಗ್ಯದ ಬಗ್ಗೆ ತವಕ ಬೇಡ. ಇಷ್ಟ ದೇವತಾ ಸ್ಮರಣೆ ನಿಷ್ಠೆಯಿಂದ ಮಾಡಿ. ಮಕ್ಕಳ ಸೋಲಿನ ಬಗ್ಗೆ ಆತಂಕ ಪಡುವುದರಿಂದ ನಿದ್ದೆ ಕೆಡಿಸಿಕೊಳ್ಳುತ್ತೀರಿ.

ಮೀನ…

ಯುವಜನರಿಗೆ: ಸಾಮಾಜಿಕ ಜಾಲತಾಣವನ್ನು ನಂಬಿ ಸಮಸ್ಯೆಗೆ ಸಿಕ್ಕಿಕೊಳ್ಳುತ್ತೀರಿ. ಕೆಡಕು ಮಾಡುವ ಮನಸ್ಸು ಬಿಡಿ.

ವಯಸ್ಕರಿಗೆ: ಕರ್ತವ್ಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳದಿದ್ದರೇ ಅವಕಾಶಗಳು ಕೈ ತಪ್ಪುತ್ತದೆ. ಸಂಗಾತಿಯ ಬಗ್ಗೆ ಸಂಶಯ ಬೇಡ.

ಹಿರಿಯರಿಗೆ: ಹಳೆಯದನ್ನು ಎಷ್ಟು ನೆನಪಿಸಿಕೊಂಡರೂ ಪ್ರಯೋಜನವಿಲ್ಲ. ತಪ್ಪದೇ ವ್ಯಾಯಮ ಮಾಡಿ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ವಯಾಗ್ರಾಕ್ಕಾಗಿ ಎರಡು ಗ್ರಾಮಗಳ ನಡುವೆ ಜಗಳ- ಹಿಮಾಲಯದ ಪರ್ವತದಲ್ಲಿ ನಿಷೇಧಾಜ್ಞೆ ಜಾರಿ….!

    ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್‍ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ. ಪಿತೋರ್‌ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು…

  • ಸುದ್ದಿ

    18.70 ಲಕ್ಷ ರೈತರ 8759 ಕೋಟಿ ಸಾಲ ಮನ್ನಾ…!

    ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ. ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.49…

  • ಸುದ್ದಿ

    ಹಾವು ಕಚ್ಚಿ ಸ್ಮಶಾನ ಸೇರಿದವರ ಮನೆಯಲ್ಲಿ ನಾಗ-ನಾಗಿಣಿ ನೃತ್ಯ….ನಂತರ ಏನಾಯ್ತು ಗೊತ್ತ..?ತಪ್ಪದೆ ಇದನ್ನು ಓದಿ…!

    ಸತ್ತ ವ್ಯಕ್ತಿ ಜೀವಂತವಾಗಿ ಬರುವುದಿಲ್ಲ ಎನ್ನುವ ಮಾತಿದೆ. ಆದ್ರೆ ರಾಜಸ್ಥಾನದ ಭಾರತ್ಪುರದಲ್ಲಿ ಚಮತ್ಕಾರಿ ಘಟನೆ ನಡೆದಿದೆ. ಹಾವು ಕಚ್ಚಿ ಸ್ಮಶಾನ ಸೇರಿದ್ದವಳು ಮನೆಗೆ ವಾಪಸ್ ಆಗಿದ್ದಾಳೆ. ಆಕೆಗೆ ಚಿಕಿತ್ಸೆ ಮುಂದುವರೆದಿದೆ. 21 ವರ್ಷದ ಶ್ವೇತಾಗೆ ಹಾವು ಕಚ್ಚಿತ್ತು. ವೈದ್ಯರು ಶ್ವೇತಾ ಸಾವನ್ನಪ್ಪಿದ್ದಾಳೆ ಎಂದಿದ್ದರು. ದುಃಖದಲ್ಲಿದ್ದ ಕುಟುಂಬಸ್ಥರು ಶ್ವೇತಾ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಸ್ಮಶಾನಕ್ಕೆ ಶ್ವೇತಾ ಶವವನ್ನು ತೆಗೆದುಕೊಂಡು ಹೋಗ್ತಿದ್ದಂತೆ ಮನೆಯಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿತ್ತು. ಶ್ವೇತಾ ಮನೆಯಲ್ಲಿ ನಾಗ-ನಾಗಿಣಿ ನೃತ್ಯ ಮಾಡಿದ್ದಾರೆ. ಈ ವಿಷ್ಯವನ್ನು ಸ್ಮಶಾನಕ್ಕೆ…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಶುಕ್ರವಾರ, ಈ ದಿನದ ರಾಶಿಭವಿಷ್ಯದಲ್ಲಿ ಈ ರಾಶಿಗಳಿಗೆ ರಾಜಯೋಗವಿದ್ದು, ವಿಪರೀತ ಧನಲಾಭವಿದೆ!ಇದ್ರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ(28 ಡಿಸೆಂಬರ್, 2018) ಕಲ್ಪನೆಗಳ ಹಿಂದೆ ಓಡಬೇಡಿ ಹಾಗೂಸಾಧ್ಯವಾದಷ್ಟೂ ವಾಸ್ತವವಾದಿಗಳಾಗಿರಿ. ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯಿರಿ -ಇದು ಒಳ್ಳೆಯದನ್ನು ಮಾಡುತ್ತದೆ. ಇಂದು,…

  • ಕ್ರೀಡೆ

    ಖ್ಯಾತ ಬ್ಯಾಡ್ಮಿಂಟನ್ ತಾರೆ,ಈಗ ಜಿಲ್ಲಾಧಿಕಾರಿ!ಇದಕ್ಕೆ ನಿಮ್ಮ ಸಹಮತವೇನು?ಈ ಲೇಖನಿ ಓದಿ,ಕಾಮೆಂಟ್ ಮಾಡಿ ತಿಳಿಸಿ…

    ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು.

  • ಉಪಯುಕ್ತ ಮಾಹಿತಿ

    ಯಾವ ದಿಕ್ಕಿಗೆ ಮಲಗಿದ್ರೆ ಒಳ್ಳೆಯದು ಗೊತ್ತಾ?ಇದು ಮೂಡ ನಂಬಿಕೆಯಲ್ಲ.. ಇದರ ಹಿಂದಿದೆ ನೋಡಿ ಅಧ್ಬುತ ಮಹತ್ವ..!

    ನಮ್ಮ ಹಿರಿಯರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ನಮಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳುವುದು ನಮ್ಮ ಹಿಂದೂ ಧರ್ಮದಲ್ಲಿ ವಾಡಿಕೆಯಾಗಿದೆ. ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಭೂತ ಪ್ರೇತಗಳು ನಮ್ಮನ್ನು ಆವರಿಸುತ್ತವೆ ಎಂಬ ಮೂಢನಂಬಿಕೆಗಳಿವೆ. ಅಲ್ಲದೆ  ಪುರಾಣದಲ್ಲಿ ಗಣೇಶನಿಗೆ ತೊಡಿಸಿದ ಆನೆಯ ತಲೆಯನ್ನು ಕಡಿದಿದ್ದು ಸಹ ಅದು ಉತ್ತರಕ್ಕೆ ತಲೆ ಹಾಕಿ ಮಲಗಿದ್ದರಿಂದ. ಈ ಕಾರಣಕ್ಕೆ ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದರೆ…