ಸುದ್ದಿ

ಎದೆಯುರಿ ಸಮಸ್ಯೆಯಿಂದ ಬಳಲಿತ್ತಿದ್ದೀರಾ ….ಅಗಾದರೆ ಇದನ್ನು ಒಮ್ಮೆ ಓದಿ ……!

73

ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ.

ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ.

►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ

ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್‌ಇಎಸ್) ’ನ ಮೇಲೆ ಹೆಚ್ಚುವರಿ ಒತ್ತಡವುಂಟಾಗುತ್ತದೆ. ಈ ಸ್ನಾಯುವು ಜಠರದಲ್ಲಿಯ ಆಮ್ಲ ಇತ್ಯಾದಿಗಳು ಅನ್ನನಾಳವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಅದರ ಮೇಲೆ ಹೆಚ್ಚುವರಿ ಒತ್ತಡವುಂಟಾದಾಗ ಅದರ ಕಾರ್ಯದಲ್ಲಿ ವ್ಯತ್ಯಯಗಳುಂಟಾಗುತ್ತವೆ.

►ಕಡಿಮೆ ಕಾರ್ಬೊಹೈಡ್ರೇಟ್ ಇರುವ ಆಹಾರ ಸೇವಿಸಿ

ಬೊಜ್ಜುದೇಹಿಗಳು ಕಡಿಮೆ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವುದು ಎದೆಯುರಿಯನ್ನು ತಗ್ಗಿಸಲು ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಬೆಟ್ಟುಮಾಡಿವೆ. ಅತಿಯಾದ ಕಾರ್ಬೊಹೈಡ್ರೇಟ್‌ಗಳ ಸೇವನೆಯಿಂದ ಹೊಟ್ಟೆಯಲ್ಲಿ ವಾಯು ಸಂಗ್ರಹಗೊಳ್ಳುತ್ತದೆ ಮತ್ತು ಹೊಟ್ಟೆಯುಬ್ಬರ ವುಂಟಾಗುತ್ತದೆ ಹಾಗೂ ಇದು ಎದೆಯುರಿಗೆ ಕಾರಣವಾಗುತ್ತದೆ.

►ಆಹಾರವನ್ನು ಸರಿಯಾಗಿ ಅಗಿದು ತಿನ್ನಿ

ಆಹಾರವನ್ನು ನಿಧಾನವಾಗಿ,ಚೆನ್ನಾಗಿ ಅಗಿದು ಸೇವಿಸಿದಾಗ ಅದು ಜೀರ್ಣ ರಸಗಳು ಆಹಾರವನ್ನು ವಿಭಜಿಸಲು ಮತ್ತು ಅದನ್ನು ಜೀರ್ಣಗೊಳಿಸಲು ಸಾಕಷ್ಟು ಸಮಯಾವಕಾಶವನ್ನು ನೀಡುತ್ತವೆ. ಆದರೆ ಅವಸರದಿಂದ ಊಟ ಮಾಡಿದಾಗ ಅದು ಸರಿಯಾಗಿ ಜೀರ್ಣಗೊಳ್ಳುವುದಿಲ್ಲ ಮತ್ತು ಇದು ಅಜೀರ್ಣ,ಆಮ್ಲೀಯತೆ ಹಾಗೂ ಎದೆಯುರಿಗೆ ಕಾರಣವಾಗುತ್ತದೆ.

►ತಡರಾತ್ರಿ ಆಹಾರ ಸೇವನೆ ಬೇಡ

ಹೊತ್ತಲ್ಲದ ಹೊತ್ತಿಗೆ ಊಟ ಮಾಡುವುದು ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಕೆಲಸದ ಒತ್ತಡದಿಂದಲೋ ಅಥವಾ ಸಂಜೆಯ ಸಮಯದಲ್ಲಿ ಹೊಟ್ಟೆ ಬಿರಿಯುವುಷ್ಟು ತಿನಿಸುಗಳನ್ನು ಸೇವಿಸಿಯೋ ತಡರಾತ್ರಿಯಲ್ಲಿ ಊಟ ಮಾಡುವುದು ಎದೆಯುರಿಗೆ ಸುಲಭವಾಗಿ ತುತ್ತಾಗಿಸುತ್ತದೆ.

►ಹಸಿ ಈರುಳ್ಳಿಯಿಂದ ದೂರವಿರಿ

ಹೆಚ್ಚಿನ ಜನರು ಊಟದೊಂದಿಗೆ ಹಸಿ ಈರುಳ್ಳಿಯನ್ನು ಅಥವಾ ಅದನ್ನು ಸಲಾಡ್‌ನೊಂದಿಗೆ ಸೇರಿಸಿಕೊಂಡು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ನಿಮಗೆ ಆಮ್ಲೀಯತೆಯ ಸಮಸ್ಯೆಯಿದ್ದರೆ ಹಸಿ ಈರುಳ್ಳಿಯಿಂದ ದೂರವಿರಿ,ಏಕೆಂದರೆ ಅದು ಎದೆಯುರಿ ಮತ್ತು ತೇಗಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಸಿ ಈರುಳ್ಳಿಯು ಹುದುಗು ಬರುವ ನಾರನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತದೆ ಮತ್ತು ಇದು ಜೀರ್ಣ ಸಂದರ್ಭದಲ್ಲಿ ಹೆಚ್ಚು ಅನಿಲವನ್ನು ಉತ್ಪಾದಿಸುತ್ತದೆ. ಅಲ್ಲದೆ ಹಸಿ ಈರುಳ್ಳಿಯಲ್ಲಿನ ಸಂಯುಕ್ತಗಳು ಅನ್ನನಾಳದ ಒಳಪದರವನ್ನು ಕೆರಳಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ.

►ಕಾರ್ಬನೀಕೃತ ಪಾನೀಯಗಳನ್ನು ನಿವಾರಿಸಿ

ಸೋಡಾದಂತಹ ಕಾರ್ಬನೀಕೃತ ಪಾನೀಯಗಳು ಎಲ್‌ಇಎಸ್‌ನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತವೆ ಮತ್ತು ಆಮ್ಲ ಹಿಮ್ಮುಖ ಹರಿವಿನಿಂದಾಗಿ ಪದೇ ಪದೇ ತೇಗನ್ನುಂಟು ಮಾಡುತ್ತವೆ. ಈ ಪಾನೀಯಗಳಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಅನ್ನನಾಳವನ್ನು ಪ್ರವೇಶಿಸುವ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಇವೆಲ್ಲ ಎದೆಯುರಿಗೆ ಕಾರಣವಾಗುತ್ತವೆ.

►ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಚ್ಯೂವಿಂಗ್ ಗಮ್ ಬಳಸಿ

ಸಕ್ಕರೆ ರಹಿತ ಚ್ಯೂಯಿಂಗ್ ಗಮ್ ಆಮ್ಲೀಯತೆಯ ಸಮಸ್ಯೆಯನ್ನು ನಿಭಾಯಿಸಲು ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಗಮ್‌ನ್ನು ಅಗಿಯುವಾಗ ಅದು ಹೆಚ್ಚಿನ ಪ್ರಮಾಣದಲ್ಲಿ ಜೊಲ್ಲು ಉತ್ಪತ್ತಿಯಾಗುವಂತೆ ಮಾಡುತ್ತದೆ ಮತ್ತು ಇದು ಅನ್ನನಾಳದಲ್ಲಿಯ ಹೆಚ್ಚುವರಿ ಆಮ್ಲವನ್ನು ನಿವಾರಿಸುತ್ತದೆ.

►ಕಾಫಿಯ ಸೇವನೆ ಮಿತವಾಗಿರಲಿ

ಆಮ್ಲ ಹಿಮ್ಮುಖ ಹರಿವಿಗೆ ಕಾರಣವಾಗಿರುವ ಆಹಾರಗಳ ಸೇವನೆಯಿಂದ ದೂರವಿರುವುದು ಎದೆಯುರಿಯನ್ನು ತಡೆಯಲು ಪ್ರಮುಖ ಮಾರ್ಗಗಳಲ್ಲೊಂದಾಗಿದೆ. ಕಾಫಿ ಇಂತಹ ಆಹಾರಗಳಲ್ಲಿ ಸೇರಿದೆ. ಕಾಫಿಯು ಎಲ್‌ಇಎಸ್‌ನ್ನು ತಾತ್ಕಾಲಿಕವಾಗಿ ದುರ್ಬಲಗೊಳಿಸುತ್ತದೆ ಮತ್ತು ಇದು ಆಮ್ಲ ಹಿಮ್ಮುಖ ಹರಿವಿನ ಅಪಾಯವನ್ನು ಹೆಚ್ಚಿಸುತ್ತದೆ.

►ಮದ್ಯಪಾನ ಬೇಡ

ಮದ್ಯಪಾನ ಆರೋಗ್ಯಕ್ಕೆ ಕೆಟ್ಟದ್ದು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಮತ್ತು ವ್ಯಕ್ತಿಯು ಎದೆಯುರಿಯಿಂದ ಬಳಲುತ್ತಿದ್ದರೆ ಅದು ಇನ್ನೂ ಕೆಟ್ಟದ್ದು. ಮದ್ಯವು ಆಮ್ಲ ಹಿಮ್ಮುಖ ಹರಿವಿನ ಅಪಾಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ಸ್ಥಿತಿಯನ್ನೂ ಇನ್ನಷ್ಟು ಹದಗೆಡಿಸುತ್ತದೆ. ಅದು ಜಠರಾಮ್ಲಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆಮ್ಲವನ್ನು ನಿವಾರಿಸುವ ಎಲ್‌ಇಎಸ್‌ನ ಸಾಮರ್ಥ್ಯವನ್ನು ಕುಂದಿಸುತ್ತದೆ.

►ಆಹಾರ ಸೇವಿಸಿದ ತಕ್ಷಣ ವ್ಯಾಯಾಮ ಬೇಡ

ವ್ಯಾಯಮವು ನಾವು ಸೇವಿಸಿದ ಆಹಾರವು ಜೀರ್ಣಗೊಳ್ಳಲು ನೆರವಾಗುತ್ತದೆ,ಆದರೆ ಆಹಾರ ಸೇವಿಸಿದ ತಕ್ಷಣ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಹಾಗೆ ಮಾಡಿದರೆ ಜೀರ್ಣಕ್ರಿಯೆಗೆ ವ್ಯತ್ಯಯವುಂಟಾಗುತ್ತದೆ ಮತ್ತು ಅನ್ನನಾಳದಲ್ಲಿ ಆಮ್ಲ ಸಂಗ್ರಹಗೊಳ್ಳುತ್ತದೆ. ಇದು ಎದೆಯುರಿಗೆ ಕಾರಣವಾಗುತ್ತದೆ ಮತ್ತು ಈಗಾಗಲೇ ಎದೆಯುರಿಯಿಂದ ಬಳಲುತ್ತಿದ್ದರೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವ ಮುನ್ನ ತನ್ನಲ್ಲಿರುವುದನ್ನು ಖಾಲಿ ಮಾಡಲು ಜಠರಕ್ಕೆ ಸ್ವಲ್ಪ ಸಮಯಾವಕಾಶ ನೀಡಿ.

►ಊಟವಾದ ತಕ್ಷಣ ನಿದ್ರಿಸಬೇಡಿ

ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಊಟವಾದ ತಕ್ಷಣ ಹಾಸಿಗೆಯನ್ನು ಸೇರಿಕೊಂಡರೆ ಎಲ್‌ಇಎಸ್ ಮೇಲಿನ ಒತ್ತಡ ಹೆಚ್ಚುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿಗೆ ಸುಲಭದ ಗುರಿಯಾಗಿಸುತ್ತದೆ. ಊಟ ಮತ್ತು ನಿದ್ರೆಯ ಮಧ್ಯೆ ಅಂತರವನ್ನು ಕಾಯ್ದುಕೊಳ್ಳುವುದು ಆಹಾರವನ್ನು ಜೀರ್ಣಗೊಳಿಸಲು ಜಠರಕ್ಕೆ ನೆರವಾಗುತ್ತದೆ ಮತ್ತು ಎದೆಯುರಿಯನ್ನು ತಡೆಯುತ್ತದೆ.

►ಹಾಸಿಗೆಯ ತಲೆಭಾಗ ಎತ್ತರವಾಗಿರಲಿ

ವಿಶೇಷವಾಗಿ ರಾತ್ರಿಗಳಲ್ಲಿ ಎದೆಯುರಿಯುಂಟಾಗುತ್ತಿದ್ದರೆ ಅದಕ್ಕೆ ನಿಮ್ಮ ಹಾಸಿಗೆಯ ಭಂಗಿಯನ್ನು ದೂರಬೇಕಾಗುತ್ತದೆ. ಹಾಸಿಗೆಯ ತಲೆಭಾಗವನ್ನು ಎತ್ತರಿಸುವುದರಿಂದ ಜಠರಾಮ್ಲದ ನಿವಾರಣೆ ಉತ್ತಮಗೊಳ್ಳುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿನ ಆವರ್ತನಗಳನ್ನು ಕಡಿಮೆ ಮಾಡುತ್ತದೆ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ.

►ಬಲಮಗ್ಗುಲಾಗಿ ನಿದ್ರಿಸಬೇಡಿ

ನೀವು ಮಲಗುವ ಭಂಗಿಯು ಜೀರ್ಣಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಎಡಮಗ್ಗುಲಾಗಿ ಮಲಗುವುದು ಎದೆಯುರಿಯನ್ನು ತಡೆಯುವ ಜೊತೆಗೆ ಒಳ್ಳೆಯ ನಿದ್ರೆಯನ್ನೂ ನೀಡುತ್ತದೆ. ಬಲಮಗ್ಗುಲಾಗಿ ಮಲಗುವುದು ಆಮ್ಲ ಹಿಮ್ಮುಖ ಹರಿವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಬಲಮಗ್ಗುಲಾಗಿ ಮಲಗುವುದರಿಂದ ಎಲ್‌ಇಎಸ್ ಮೂಲಕ ಆಮ್ಲ ಸೋರಿಕೆಯ ಸಾಧ್ಯತೆಯು ಹೆಚ್ಚಾಗಿರುತ್ತದೆ ಮತ್ತು ಇದು ಎದೆಯುರಿಯ ಅಪಾಯವನ್ನು ಹೆಚ್ಚಿಸುತ್ತದೆ.

►ದೇಹದ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿ

ನೀವು ಅಗತ್ಯಕ್ಕಿಂತ ಹೆಚ್ಚಿನ ದೇಹತೂಕವನ್ನು ಹೊಂದಿದ್ದರೆ ಮತ್ತು ಆಮ್ಲ ಹಿಮ್ಮುಖ ಹರಿವಿನಿಂದ ಬಳಲುತ್ತಿದ್ದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ನಿಮ್ಮ ಆದ್ಯತೆಯಾಗಿರಬೇಕು. ಅತಿಯಾದ ಕೊಬ್ಬು,ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿಯ ಕೊಬ್ಬು ಜಠರ ಮತ್ತು ಎಲ್‌ಇಎಸ್ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಇದರಿಂದಾಗಿ ಜಠರಾಮ್ಲವು ಮೇಲ್ಮುಖವಾಗಿ ತಳ್ಳಲ್ಪಡುತ್ತದೆ ಮತ್ತು ಎದೆಯುರಿಗೆ ಕಾರಣವಾಗುತ್ತದೆ.

►ನಿಮ್ಮ ಔಷಧಿಗಳನ್ನು ಪರಿಶೀಲಿಸಿ ಕೆಲವು ಔಷಧಿಗಳು ಆಮ್ಲ ಸಂಗ್ರಹಗೊಳ್ಳಲು ಅಥವಾ ಅನ್ನನಾಳದ ಉರಿಯೂತಕ್ಕೆ ಕಾರಣವಾಗುತ್ತವೆ ಮತ್ತು ಇದು ಎದೆಯುರಿಯನ್ನುಂಟು ಮಾಡುತ್ತದೆ ಅಥವಾ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ವೈದ್ಯರು ನಿಮಗೆ ಸೂಚಿಸಿರುವ ಔಷಧಿಗಳು ಎದೆಯುರಿಯಂತಹ ಅಡ್ಡಪರಿಣಾಮಗಳನ್ನು ಹೊಂದಿವೆಯೇ ಎನ್ನುವುದನ್ನು ಅವರ ಬಳಿ ಕೇಳಿ ತಿಳಿದುಕೊಳ್ಳಿ. ಲಕ್ಷಣಗಳು ಮುಂದುವರಿದರೆ ಎದೆಯುರಿಯಿಂದ ಪಾರಾಗಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನವ ವಧು ವರರ ಮೇಲೆ ಲಕ್ಷಾಂತರ ರೂ ನೋಟುಗಳ ಸುರಿಮಳೆ ಮಾಡಿದ್ರು!ಈ ಸುದ್ದಿ ನೋಡಿ…

    ಮದುವೆಯಾದ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ರೂ. ಹಣವನ್ನು ಸುರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಶಾಂತ್ ಕೋಟಾ ಹಾಗೂ ಮೇಘನಾ ಗೌಡ್ ಮಾರ್ಚ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಶಾಂತ್ ಕೋಟಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಈ ಮದುವೆಯ ವಿಡಿಯೋ ವೈರಲ್ ಆಗಿದೆ. ವರ ಹಾಗೂ ವಧುವಿನ ಪೋಷಕರು ನವಜೋಡಿ ಮೇಲೆ ಹಣದ ಹೊಳೆಯನ್ನೇ ಹರಿಸಲು ಒಂದು ದೊಡ್ಡ ಬಾಸ್ಕೆಟ್‍ನಲ್ಲಿ ನೋಟುಗಳನ್ನು ತೆಗೆದುಕೊಂಡು…

  • ಉಪಯುಕ್ತ ಮಾಹಿತಿ

    ನಿಮ್ಮ ಮನೆಯ ಅಂಗಳದಲ್ಲಿ ಹಾವುಗಳು ಕಂಡು ಬರುತ್ತದೆಯೇ .?ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕೆಲವು ಗಿಡಗಳಿರುವಲ್ಲಿ ಹಾವುಗಳು ಬರುವುದಿಲ್ಲ. ಗೊಂಡೆಹೂವು, ಮಾಚಿಪತ್ರೆ, ಪಶ್ಚಿಮ ಭಾರತದ ಮಜ್ಜಿಗೆಹುಲ್ಲು, ಸರ್ಪಗಂಧ ಹಾಗೂ ಬೆಳ್ಳುಳ್ಳಿಯ ಗಿಡ ಬೆಳೆಯುವಲ್ಲಿ ಹಾವುಗಳು ಸುಳಿಯದಿರುವುದನ್ನು ಕೃಷಿಕರು ಗಮನಿಸಿದ್ದಾರೆ. ಇವುಗಳ ರುಚಿ ಹಾಗೂ ಪರಿಮಳದಲ್ಲಿ ಸರ್ಪಗಳನ್ನು ವಿಕರ್ಷಿಸುವ ಗುಣವಿದೆ.

  • ಸುದ್ದಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಧಾಮುರ್ತಿ ದಂಪತಿಯ ಮಗ. ಇವರ ಮದುವೆ ಏಗೆ ನಡೆಯಿತು ಗೊತ್ತಾ.!

    ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು,  ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೋಹನ್ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ಪದವಿಯನ್ನು ಪಡೆದಿದ್ದಾರೆ. ರೋಹನ್ ಮೂರ್ತಿ ಕ್ಲಾಸಿಕಲ್ ಲೈಬ್ರರಿ…

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663953892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663953892 ಮೇಷ(27 ನವೆಂಬರ್, 2018) ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನುಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು…

  • ಆರೋಗ್ಯ

    ಬೇವು ತಿನ್ನಲು ಕಹಿ ಆದರೂ ಆರೋಗ್ಯಕ್ಕೆ ರಾಮಬಾಣದಂತಹ ಔಷಧಿ. ಈ ಅರೋಗ್ಯ ಮಾಹಿತಿ ನೋಡಿ.

    ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ. ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ…

  • ಮನರಂಜನೆ

    ಬಿಗ್ ಬಾಸ್ 5 ಸಂಚಿಕೆಯ ಎಲ್ಲಾ ಸ್ಪರ್ಧಿಗಳು ವಾರಕ್ಕೆ ಗಳಿಸುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..?ಯಾರಿಗೆ ಹೆಚ್ಚು, ಯಾರಿಗೆ ಅತೀ ಕಡಿಮೆ..ತಿಳಿಯಲು ಇದನ್ನು ಓದಿ…

    ‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ತಮ್ಮ ಗಾಯನದಿಂದಲೇ ಮೋಡಿ ಮಾಡಿದ ಸಂಗೀತ ಮಾಂತ್ರಿಕ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಜಯಗಳಿಸಿದ್ದಾರೆ.ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.