ಸುದ್ದಿ

ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿ ಬಂಪರ್ ಖುಷಿ ನೀಡಿದ ಯಡಿಯೂರಪ್ಪ…!

39

ಬೆಂಗಳೂರು, ಜುಲೈ 29  ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ.

ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. 2017-18, 2018-19 ಸಾಲಿನಲ್ಲಿ  ಕರಾವಳಿಯ 3 ಜಿಲ್ಲೆಗಳಲ್ಲಿ  ಒಟ್ಟು 23507 ಮೀನುಗಾರರು  ವಾಣಿಜ್ಯ  ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್ ಯಡಿಯೂರಪ್ಪ ಅವರು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಶಾಸಕರಾದ  ರಘುಪತಿಭಟ್ಇವರ  ನೇತೃತ್ವದಲ್ಲಿ  ಭಾನುವಾರ  ನಡೆದ  ಶಾಸಕಾಂಗ  ಸಭೆಯಲ್ಲಿ  ಮೂರು ಜಿಲ್ಲೆಗಳ  ಕರಾವಳಿಯ  ಶಾಸಕರು  ಮುಖ್ಯಮಂತ್ರಿಗಳಲ್ಲಿ  ಆಗ್ರಹ  ಮಾಡಿದ  ಮೇಲೆ  ಸೋಮವಾರ  ನಡೆದ ಕ್ಯಾಬಿನೆಟ್ನಲ್ಲಿ  ಈ  ನಿರ್ಣಯಮಾಡಿರುತ್ತಾರೆ.

 ಹಾಗಾಗಿ ನೇಕಾರರ ಜೊತೆಗೆ ಮೀನುಗಾರರ ಸಮುದಾಯಕ್ಕೂ ಈ ಸವಲತ್ತನ್ನು ವಿಸ್ತರಣೆ ಮಾಡಿದಂತಹ ಮುಖ್ಯ ಮಂತ್ರಿಯವರಿಗೆ ಉಡುಪಿ ಶಾಸಕರಘು ಪತಿಭಟ್ರವರು ಅಭಿನಂದನೆ  ಸಲ್ಲಿಸಿರುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ