ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನುಷ್ಯ ಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದರೆ ಅದಕ್ಕೆ ಕಾರಣ ಆತನ ಸೂಕ್ಷ್ಮವಾದ ಬುದ್ದಿ ಮತ್ತು ಆತನ ಸೂಕ್ಷ್ಮ ಅವಲೋಕನೆ ಆಗಿದೆ. ಜೀವನದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಮ್ಮನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಅಥವಾ ನಮ್ಮನ್ನ ಪಾತಾಳಕ್ಕೆ ತಳ್ಳಬಹುದು, ಆದರೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ಯೋಚನೆಗಳು ನಮ್ಮ ಜೀವನವನ್ನ ಬದಲಾವಣೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ನಾವು ಹೇಳುವ ಈ ವ್ಯಕ್ತಿ 4 ಲಕ್ಷ ಸಂಬಳದ ಉದ್ಯೋಗವನ್ನ ಬಿಟ್ಟು ವ್ಯವಸಾಯ ಮಾಡಿ ಇವತ್ತು ವಿದೇಶಿಗರಿಗೆ ಸೆಡ್ಡು ಹೊಡೆಯುತ್ತಿದ್ದಾರೆ ಮತ್ತು ಕನ್ನಡದ ಮಣ್ಣಲ್ಲಿ ಚಿನ್ನವನ್ನ ಬೆಳೆಯಲು ಹೊರಟಿದ್ದಾರೆ ಈ ವ್ಯಕ್ತಿ.
ಇವರು ಮಾಡಿದ ಒಂದೇ ಒಂದು ಉಪಾಯ ಇಂದು ಅವರ ಜೀವನವನ್ನೇ ಬದಲಾಯಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ, ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ 36 ವರ್ಷದ ಗಿರೀಶ್ ಅವರು ಬಿ.ಇ ಮಾಡಿ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿಯ ಸಂಬಳವನ್ನ ಪಡೆಯುತ್ತ ಜರ್ಮನಿಯಲ್ಲಿ ಒಳ್ಳೆಯ ಉದ್ಯೋಗ ಮಾಡುತ್ತಿದ್ದರು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಅವರ ಮನಸ್ಸು ಯಾವಾಗಲು ಊರಿನ ಕಡೆ ಇರುತ್ತಿತ್ತು ಮತ್ತು ಊರಿನಲ್ಲಿ ಇರುವ ತಂದೆ ತಾಯಿಯನ್ನ ಸೆಳೆಯುತ್ತಿತ್ತು ಗಿರೀಶ್ ಮನಸ್ಸು.
ಕೊನೆಗೆ ಒಂದು ದಿಟ್ಟ ನಿರ್ಧಾರವನ್ನ ಮಾಡಿದ ಗಿರೀಶ್ ತಾನು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆಯನ್ನ ಕೊಟ್ಟು ಊರಿನಲ್ಲಿ ತನಗೆ ಇದ್ದ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು ಗಿರೀಶ್ ಅವರು. ಜಮೀನಿನಲ್ಲಿ ನೀರಿಗಾಗಿ ಸುಮಾರು 40 ಬೋರ್ ವೆಲ್ ಗಳನ್ನ ಹಾಕಿಸಿದರು ಗಿರೀಶ್, ಆದರೆ ನೀರು ಮಾತ್ರ ಸಿಗಲೇ ಇಲ್ಲ ಮತ್ತು ಈ ಸಮಯದಲ್ಲಿ ಗಿರೀಶ್ ಗೆ ಒಂದು ಅದ್ಭುತವಾದ ಆಲೋಚನೆ ಬರುತ್ತದೆ ಮತ್ತು ಅವರಿಗೆ ಬಂದ ಆಲೋಚನೆ ತುಂಬಾ ಸರಳವಾದದ್ದು ಆದರೆ ಅದನ್ನ ಕಾರ್ಯರೂಪಕ್ಕೆ ತರುವುದು ದೊಡ್ಡ ಸವಾಲು ಆಗಿತ್ತು.
ಹೌದು ಗಿರೀಶ್ ಅವರಿಗೆ ಬಂದ ಆಲೋಚನೆ ಏನು ಅಂದರೆ ಮಳೆ ನೀರನ ಸಂಗ್ರಹ ಮಾಡಿ ಅದರಲ್ಲಿ ವ್ಯವಸಾಯ ಮಾಡುವುದು, ಆದರೆ ಅದೂ ಹೇಗೆ ಅನ್ನುವುದು ಗಿರೀಶ್ ಅವರ ಮುಂದೆ ಇದ್ದ ದೊಡ್ಡ ಸವಾಲು ಆಗಿತ್ತು. ತನಗೆ ಇದ್ದ ಹತ್ತು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆಯುವ ನಿರ್ಧಾರ ಮಾಡಿದ ಗಿರೀಶ್ ಅವರು ಒಂದು ಎಕರೆ ವಿಸ್ತಾರದ ಏಳು ಪಾಲಿ ಹೌಸ್ ನಿರ್ಮಾಣ ಮಾಡಿ ಅದರ ಒಳಗೆ ಗುಲಾಬಿ ಬೆಳೆಯಲು ನಿರ್ಧಾರ ಮಾಡಿದರು. ಇನ್ನು ಮಳೆಗಾಲದ ಸಮಯದಲ್ಲಿ ಆ ಪಾಲಿ ಹೌಸ್ ಮನೆಯ ಮೇಲೆ ಬೀಳುವ ಮಳೆಯ ನೀರನ್ನ ಪೈಪ್ ಗಳ ಮೂಲಕ ಹರಿಸಿ ವ್ಯವಸ್ಥಿತವಾಗಿ ನಿರ್ಮಾಣ ಮಾಡಿರುವ ಒಂದು ಕೆರೆಯಲ್ಲಿ ಶೇಖರಣೆ ಮಾಡುವುದು ಮತ್ತು ಆ ಶೇಖರಣೆ ಆದ ನೀರನ್ನ ವರ್ಷಪೂರ್ತಿ ಬಳಸಿಕೊಳ್ಳುವುದು ಗಿರೀಶ್ ಅವರ ಉಪಾಯ ಆಗಿತ್ತು. ಇನ್ನು ಹೀಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿದ ಗಿರೀಶ್ ಅವರು ಪಾಲಿ ಹೌಸ್ ಮೇಲೆ ಬೀಳುವ ಮಳೆಯ ನೀರನ್ನ ಬಳಸಿಕೊಂಡು ಗುಲಾಬಿಯನ್ನ ಬೆಳೆಯುತ್ತಿದ್ದಾರೆ.
ಇನ್ನು ಮಳೆಗಾಲದಲ್ಲಿ 1.30 ಲಕ್ಷ ಲೀಟರ್ ಮಳೆಯ ನೀರನ್ನ ಶೇಖರಣೆ ಮಾಡುತ್ತಿರುವ ಗಿರೀಶ್ ಅವರು ಆ ನೀರನ್ನ ಬಳಸಿಕೊಂಡು ಸುಂದರವಾದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ತಿಂಗಳಿಗೆ ಸುಮಾರು 15000 ಗುಲಾಬಿ ಹೂವುಗಳನ್ನ ಬೆಳೆಯುತ್ತಿರುವ ಗಿರೀಶ್ ಅವರು ಅವುಗಳನ್ನ ಭಾರತ ಮತ್ತು ವಿದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಎಮ್ ಟೆಕ್ ಓದಿರುವ ಗಿರೀಶ್ ಅವರ ಪತ್ನಿ ಕೂಡ ಗಂಡನ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ, ಗಿರೀಶ್ ಅವರ ಈ ಉಪಾಯ ಹಲವು ರೈತರಿಗೆ ಸ್ಫೂರ್ತಿ ಆಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗೋವಾ ಪ್ರವಾಸಮಾಡ ಹೊರಟಿರುವ ಪ್ರವಾಸಿಗರೂ ಮತ್ತು ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಗೋವಾದಿಂದಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ. ಅಚ್ಚರಿ ಪಡಬೇಡಿಇದು ನಿಜ…. ಹೌದು.. ಗೋವಾ ಪ್ರವಾಸಕ್ಕೆ ಹೋಗುವ ಮದ್ಯಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿನೀಡಿದ್ದು, ಇನ್ನು ಮುಂದೆ ಪ್ರವಾಸ ಮುಗಿಸಿ ಮನೆಗೆ ಮರಳುವ ಇತರೆ ರಾಜ್ಯಗಳ ಪ್ರವಾಸಿಗರು ಹೆಚ್ಚುವರಿಮದ್ಯದ ಬಾಟಲಿಗಳನ್ನು ಮನೆಗೆ ಕೊಂಡೊಯ್ಯಬಹುದು. ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ…
ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆನೀಡದೇ ಮಾಗಲು ಸಾಧ್ಯವಾಗುತ್ತದೆ… ಬನ್ನಿ ಹಾಗಲಕಾಯಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಯೋಣ. ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ : ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣವ್ಯಾಧಿ (dyspepsia) ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ…
ಒಂದು ಕೋಳಿ ತಲೆ ತೆಗೆದ ಮೇಲೆ ಎಷ್ಟು ಕಾಲ ಬದುಕಬಹುದು..? ಈ ಪ್ರಶ್ನೆ ನಿಮ್ಮನ್ನು ಕೇಳಿದ್ರೆ, ನೀವು ಹೇಳೋದು ಒಂದೇ ನಿನ್ನಷ್ಟು ಮೂರ್ಖ ಬೇರೆ ಯಾರು ಇಲ್ಲ ಅಂತ.ನೀವು ಹಾಗೆ ಅನ್ನೋದ್ರಲ್ಲಿ ಏನೂ ಅಚ್ಚರಿಯಿಲ್ಲ ಬಿಡಿ. ಯಾಕಂದ್ರೆ ಕೋಳಿ ತಲೆ ತೆಗೆದ ಮೇಲೆ ಕೋಳಿ ಬದುಕೋಕೆ ಹೇಗೆ ಸಾಧ್ಯ ಅಲ್ವ. ಆದ್ರೆ, ನೀವೂ ಹಾಗೆ ಅನ್ಕೊಂಡಿದ್ರೆ ಅದು ಸುಳ್ಳು.ಯಾಕಂದ್ರೆ ಇಲ್ಲಿ ಕೋಳಿ ಒಂದರ ಬದುಕಿಗಾಗಿ ನಡೀತಿರುವ ಹೋರಾಟವೋ ಅಥವಾ ಪವಾಡವೋ ಗೊತ್ತಿಲ್ಲ, ತಲೆ ತೆಗೆದ ಮೇಲೇನೂ ಒಂದು…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹೈದರಾಬಾದ್’ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿ ಇಂದಿನ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 1 ವಿಕೆಟ್ ಗಳ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್ 2018ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಸತತ ಎರಡನೇ ಸೋಲಿಗೆ ಗುರಿಯಾಗಿದೆ. ಅತ್ತ ಹೈದರಾಬಾದ್ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಮುಂಬೈ ಬ್ಯಾಟಿಂಗ್ :- 20 ಓವರ್ ಗಳಲ್ಲಿ…
ಜಿಲ್ಲೆಯಲ್ಲಿ ಈಗಾಗಲೇ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಹೀಗೆ ಅಪ್ಲೋಡ್ ಮಾಡಿದ ಬೆಳೆ ಸಮೀಕ್ಷೆಯ ವಿವರ ರೈತರು ಪಡೆಯಲು ಕೃಷಿ ಇಲಾಖೆ ಬೆಳೆ ದರ್ಶಕ್-2020 ಆಪ್ ಬಿಡುಗಡೆ ಮಾಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಖ್ ಅವರು ತಿಳಿಸಿದ್ದಾರೆ. ಬೆಳೆ ದರ್ಶಕ್-2020 ಹೆಸರಿನ ಈ ಆಪ್ ಮೂಲಕ ರೈತರು ಅಪ್ಲೋಡ್ ಆಗಿರುವ ತಮ್ಮ ಬೆಳೆಯ ವಿವರ ಮಾಹಿತಿ ಪಡೆಯಬಹುದು. ಅಲ್ಲದೇ…
ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. 3 ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು.