News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಆರೋಗ್ಯ

ಚುಕ್ಕೆ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ, ನಿಮಗೆ ತಿಳಿದಿಲ್ಲ ಇದರ ಈ ರಹಸ್ಯ.!

349

ಬಾಳೆ ಹಣ್ಣು ಯಾರು ತಾನೇ ತಿನ್ನಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಬಾಳೆ ಹಣ್ಣನ್ನ ತಿನ್ನುತ್ತಾರೆ, ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ, ಬಾಳೆಹಣ್ಣು ತ್ವರಿತ ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ. ಎರಡು ಬಾಳೆಹಣ್ಣು ತಿಂದರೆ 90 ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯನದಿಂದ ತಿಳಿದು ಬಂದಿದೆ, ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ ನಂಬರ್ ಒಂದು ಹಣ್ಣು ಎಂದರೆ ಬಾಳೆಹಣ್ಣು ಎಂದು ಹೇಳಿದರೆ ಅಚ್ಚರಿಪಡಬೇಕಾಗಿಲ್ಲ. ಸರ್ವಕಾಲದಲ್ಲಿ ಲಭ್ಯ, ಅಗ್ಗ ಹಾಗೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಹಣ್ಣು ಎಂದರೆ ಬಾಳೆಹಣ್ಣು. ಅದರಲ್ಲೂ ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್ಎಫ್) ಎಂಬ ಪೋಷಕಾಂಶವಿದ್ದು ಇವು ಕ್ಯಾನ್ಸರ್ ಗೆಡ್ಡೆಗಳನ್ನು ನಾಶಪಡಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇನ್ನು ಸಾಮಾನ್ಯವಾಗಿ ನೀವು ಬಾಳೆಹಣ್ಣನ್ನು ತಿನ್ನುವಾಗ ಅದರ ಸಿಪ್ಪೆ ಮೇಲೆ ಚುಕ್ಕೆಗಳನ್ನು ನೋಡಿರಬಹುದು, ಈ ಸಿಪ್ಪೆಗಳು ಹೇಗೆ ನಮ್ಮ ಆರೋಗ್ಯಕ್ಕೆ ಲಾಭಕಾರಕ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ, ಹಾಗಾದರೆ ಚುಕ್ಕೆ ಇರುವ ಬಾಳೆ ಹಣ್ಣು ನಮ್ಮ ದೇಹಕ್ಕೆ ಹೇಗೆ ಆರೋಗ್ಯಕರ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮಾ ಅನಿಸಿಕೆಯನ್ನ ನಮಗೆ ತಿಳಿಸಿ. ಚುಕ್ಕೆಗಳು ಗಾಢ ಮತ್ತು ಅಗಲವಾಗಿದ್ದಷ್ಟೂ ಬಾಳೆಹಣ್ಣು ಹೆಚ್ಚು ಹೆಚ್ಚು ಹಣ್ಣಾಗುತ್ತಾ ಬಂದಿದೆ ಎಂದು ತಿಳಿದುಕೊಳ್ಳಬಹುದು, ಚುಕ್ಕೆಬೀಳಲು ತೊಡಗಿದ ಬಳಿಕ ಬಾಳೆಹಣ್ಣು ತನ್ನ ಎಲ್ಲಾ ಉತ್ತಮ ಗುಣಗಳನ್ನು ಪಡೆದಿರುತ್ತದೆ ಹಾಗಾಗಿ ಈ ಚುಕ್ಕೆಗಳು ಅಗಲವಾಗುವುದನ್ನು ಕಾಯುವ ಅಗತ್ಯವಿಲ್ಲ ಮತ್ತು ಚಿಕ್ಕ ಚುಕ್ಕೆಗಳಿದ್ದರೂ ಸಾಕು.

ಎದೆಯುರಿಯನ್ನು ಶಮನಗೊಳಿಸುತ್ತದೆ
ಅಜೀರ್ಣತೆಯ ಪ್ರಭಾವವನ್ನು ವಿರುದ್ಧ ದಿಕ್ಕಿನತ್ತ ಹೊರಳಿಸಲು ಬಾಳೆಹಣ್ಣು ಅತ್ಯುತ್ತಮವಾಗಿದೆ. ಪ್ರಾಯಶಃ ಮೊಸರಿನ ಬಳಿಕ ನಾವು ಅತಿ ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಆಹಾರಗಳಲ್ಲಿ ಬಾಳೆಹಣ್ಣು ಪ್ರಮುಖವಾಗಿದೆ. ತನ್ಮೂಲಕ ಈಗಾಗಲೇ ಕೆಟ್ಟಿರುವ ಹೊಟ್ಟೆಯನ್ನು ಈ ಆಹಾರ ಇನ್ನಷ್ಟು ಕೆಡಿಸಲಾರದು, ಬದಲಿಗೆ ಉಂಟಾಗಿರುವ ಎದೆಯುರಿ ಮತ್ತು ಹುಳಿತೇಗನ್ನು ಶಮನಗೊಳಿಸಬಲ್ಲುದು. ಹಾಗಾಗಿ ಮುಂದಿನ ಬಾರಿ ಈ ತೊಂದರೆ ಎದುರಾದರೆ ತಕ್ಷಣ ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣೊಂದನ್ನು ಸೇವಿಸಿದರೆ ಸಾಕು.

ಕ್ಯಾನ್ಸರ್ ವಿರುದ್ಧ ಹೆಚ್ಚುವರಿ ರಕ್ಷಣೆ
ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್ಎಫ್) ಎಂಬ ಪೋಷಕಾಂಶವಿದ್ದು ಇವು ಕ್ಯಾನ್ಸರ್ ಗೆಡ್ಡೆಗಳನ್ನು ನಾಶಪಡಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮೂಲಕ ಕ್ಯಾನ್ಸರ್ ವಿರುದ್ದ ಹೆಚ್ಚುವರಿ ರಕ್ಷಣೆ ಪಡೆಯಲು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣೇ ಸೇವನೆಗೆ ಅತ್ಯುತ್ತಮವಾಗಿದೆ.

ಮಾಸಿಕ ದಿನಗಳ ಸೋವಿನಿಂದ ಶಮನ ನೀಡುತ್ತದೆ
ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ಭಾಗದ ಸ್ನಾಯುಗಳ ಸೆಡೆತವನ್ನು ಸಡಿಲಿಸಲು ಬಾಳೆಹಣ್ಣಿನ ಪೊಟ್ಯಾಶಿಯಂ ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ B6 ಹೊಟ್ಟೆಯುಬ್ಬರಿಕೆಯಾಗದಂತೆ ಹಾಗೂ ಕೆಳಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಳ್ಳದಂತೆ ತಡೆಯುತ್ತದೆ. ಹಾಗಾಗಿ ಮಾಸಿಕ ದಿನಗಳಲ್ಲಿ ಸೇವೆಸಲು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಅತ್ಯುತ್ತಮ ಆಹಾರವಾಗಿದೆ.

ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ
ನಿಮ್ಮ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟಗಳ ಮಿತಿಯೊಳಗೇ ಇರುವಂತೆ ಕಾಪಾಡಿಕೊಳ್ಳಲು, ನಿಮ್ಮ ರಕ್ತದಲ್ಲಿ ನೀವು ಉತ್ತಮ ಪೊಟ್ಯಾಸಿಯಮ್ ಮಟ್ಟವನ್ನು ಹೊಂದಿರಬೇಕು ಮತ್ತು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಪೊಟ್ಯಾಶಿಯಂನ ಆಗರವಾಗಿದೆ. ಹಾಗೂ ಹೃದಯದ ಒತ್ತಡವನ್ನು ಹೆಚ್ಚು ಮಾಡುವ ಸೋಡಿಯಂ ಪ್ರಮಾಣ ಅತಿ ಕಡಿಮೆ ಇದೆ. ಮತ್ತು ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುತ್ತವೆ,

ಖಿನ್ನತೆಯನ್ನು ನಿವಾರಿಸುತ್ತದೆ
ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತವನ್ನು ಉತ್ಪಾದಿಸಲು ಪ್ರಚೋದನೆ ನೀಡುತ್ತದೆ. ಇದು ಮನೋಭಾವವನ್ನು ನಿಯಂತ್ರಿಸುವ ಹಾಗೂ ಸುಖನಿದ್ದೆ ಆವರಿಸಲು ಅಗತ್ಯವಾದ ರಸದೂತವಾಗಿದೆ. ಹಾಗಾಗಿ ಬಾಳೆಹಣ್ಣು ತಿಂದ ಬಳಿಕ ನಿರಾಳತೆ ದೊರಕುವ ಜೊತೆಗೇ ಸುಖನಿದ್ದೆಯೂ ಆವರಿಸುತ್ತದೆ.

ಅವು ಶಕ್ತಿಯ ತ್ವರಿತ ಶಕ್ತಿಯ ಮೂಲವಾಗಿದೆ
ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣು ಮೂರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ – ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ಮತ್ತು ಕರಗುವ ನಾರಿನೊಂದಿಗೆ ಸಂಯೋಜಿಸಲ್ಪಟ್ಟಿದೆ. ಶ್ರಮದಾಯಕ ವ್ಯಾಯಾಮದ ಮೊದಲು ಕೇವಲ 2 ಬಾಳೆಹಣ್ಣುಗಳನ್ನು ತಿನ್ನುವುದರಿಂದ ದೇಹದ ಸಹಿಷ್ಣುತೆಯನ್ನು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಿಸಬಹುದು ಎಂದು ಸಂಶೋಧನೆಗಳು ವಿವರಿಸಿವೆ. ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ತಡೆಯಲು ಸಹಾ ಸಹಾಯ ಮಾಡುತ್ತದೆ.

ತಕ್ಷಣವೇ ಶಕ್ತಿ ದೊರಕುತ್ತದೆ
ಬಾಳೆಹಣ್ಣಿನಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು ತಿಂದ ಬಳಿಕ ಕ್ಷಿಪ್ರ ಸಮಯದಲ್ಲಿಯೇ ರಕ್ತದ ಮೂಲಕ ದೇಹದಲ್ಲಿ ಹೆಚ್ಚಿನ ಶಕ್ತಿ ಒದಗಿಸಲು ಸಾಧ್ಯವಾಗುತ್ತದೆ. ಹಾಗಾಗಿ ಹೆಚ್ಚಿನ ಶಕ್ತಿಯ ಅಗತ್ಯವಿರುವ ಸಂದರ್ಭದಲ್ಲಿ ಅನಾರೋಗ್ಯಕರ ಶಕ್ತಿಪೇಯಗಳನ್ನು ಕುಡಿಯುವ ಬದಲು ಕೆಲವು ಬಾಳೆಹಣ್ಣುಗಳನ್ನು ತಿಂದರೆ ಸಾಕು. ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ನಿಮ್ಮ ಸ್ನಾಯುಗಳನ್ನು ಸೆಳೆತದಿಂದ ತಡೆಯುತ್ತದೆ. ಇತರ ಖನಿಜಗಳು ಮತ್ತು ಪೋಷಕಾಂಶಗಳು ದೀರ್ಘಕಾಲದ ದೈಹಿಕ ಸಹಿಷ್ಣುತೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಜೀರ್ಣಾಂಗದಲ್ಲಿ ಉಂಟಾಗಿದ್ದ ಹುಣ್ಣುಗಳು ಬೇಗನೇ ಮಾಗುತ್ತವೆ
ಆಮ್ಲೀಯ ಆಹಾರದ ಕಾರಣ ಎದುರಾಗಿರುವ ಹೊಟ್ಟೆ ಮತ್ತು ಕರುಳಿನ ಹುಣ್ಣುಗಳು (ಅಲ್ಸರ್) ನಿಮ್ಮ ಆಹಾರಸೇವನೆಯನ್ನೇ ಬಾಧಿತಗೊಳಿಸಬಹುದು. ಹೊಟ್ಟೆಯ ಹುಣ್ಣು ಇದ್ದರೆ ಖಾರ, ಹುಳಿ ಉಪ್ಪು ಯಾವುದನ್ನೂ ತಿನ್ನಲು ಸಾಧ್ಯವಾಗುವುದಿಲ್ಲ. ಆದರೆ ಈ ಹುಣ್ಣುಗಳ ಮೇಲೆ ಬಾಳೆಹಣ್ಣು ಶಮನಕಾರಿ ಪ್ರಭಾವ ನೀಡುತ್ತದೆ ಹಾಗೂ ಉರಿಯನ್ನೂ ಉಂಟುಮಾಡುವುದಿಲ್ಲ. ಈ ಮೂಲಕ ಈ ತೊಂದರೆ ಇರುವ ವ್ಯಕ್ತಿಗಳಿಗೆ ಅಗತ್ಯವಿರುವ ಅಮೂಲ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ.

ಮಲಬದ್ದತೆಯನ್ನು ಇಲ್ಲವಾಗಿಸುತ್ತದೆ
ಬಾಳೆಹಣ್ಣಿನಲ್ಲಿರುವ ಕರಗುವ ನಾರು ಜೀರ್ಣಗೊಂಡ ಆಹಾರ ಕರುಳುಗಳಲ್ಲಿ ಸುಲಭವಾಗಿ ಚಲಿಸಲು ನೆರವಾಗುವ ಮೂಲಕ ತ್ಯಾಜ್ಯಗಳು ಗಟ್ಟಿಯಾಗದಂತೆ ಹಾಗೂ ಮಲಬದ್ದತೆಯಾಗದಂತೆ ನೆರವಾಗುತ್ತವೆ. ಮುಂದಿನ ಬಾರಿ ಮಲಬದ್ದತೆಯ ತೊಂದರೆ ಕಾಣಿಸಿಕೊಂಡರೆ ರಾತ್ರಿ ಮಲಗುವ ಮುನ್ನ ಎರಡು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣುಗಳನ್ನು ತಿಂದರೆ ಸಾಕು.

ರಕ್ತಹೀನತೆಯನ್ನು ಇಲ್ಲವಾಗಿಸುತ್ತದೆ
ಬಾಳೆಹಣ್ಣಿನದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ನಮ್ಮ ಪು ರಕ್ತ ಕಣಗಳ ಮುಖ್ಯ ಅಂಶಗಳಲ್ಲಿ ಕಬ್ಬಿಣವೂ ಒಂದು, ಅದು ನಮ್ಮ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸಲು ಅಗತ್ಯವಾಗಿದೆ. ಬಾಳೆಹಣ್ಣುಗಳು ನಿಮ್ಮ ದೇಹದ ಕಬ್ಬಿಣದ ಅಗತ್ಯವನ್ನು ಪೂರೈಸುತ್ತವೆ, ಇದರಿಂದಾಗಿ ರಕ್ತಹೀನತೆಯ ಸಂಭವವನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆಯಿರುವ ವ್ಯಕ್ತಿಗಳ ರಕ್ತದಲ್ಲಿ ಬ್ಬಿಣದ ಅಂಶದ ಕೊರತೆ ಇರುತ್ತದೆ ಮತ್ತು ರೋಗಪೀಡಿತ ಕೆಂಪು ರಕ್ತ ಕಣಗಳು ಹೆಚ್ಚಿರುತ್ತವೆ.

ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಹೆಚ್ಚು ಪೊಟ್ಯಾಶಿಯಂ ಇರುತ್ತದೆ
ಚುಕ್ಕೆಬೀಳಲು ಪ್ರಾರಂಭವಾದ ಬಳಿಕ ತಿರುಳಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚುತ್ತಾ ಹೋಗುವುದು ಒಂದು ವಿಸ್ಮಯ. ಆದರೆ ಸೋಡಿಯಂ ಮಟ್ಟ ಮಾತ್ರ ಅಲ್ಪವೇ ಇರುತ್ತದೆ. “Journal of the American Medical Association”ಮಾಧ್ಯಮದಲ್ಲಿ ಪ್ರಕಟವಾದ ಪಿ.ಕೆ ವ್ಹೆಲ್ಟನ್ ಮತ್ತು ತಂಡದವರ ವರದಿಯ ಪ್ರಕಾರ ನಿತ್ಯವೂ ಬಾಳೆಹಣ್ಣು ಸೇವಿಸುತ್ತಾ ಬಂದರೆ ಇದು ಸಂಕೋಚನದ ಒತ್ತಡವನ್ನು 3 mmHg ಹಾಗೂ ವಿಕಸನದ ಒತ್ತಡವನ್ನು2 mmHg ವರೆಗೆ ತಗ್ಗಿಸುತ್ತದೆ. “Health foodstyle.net” ಪ್ರಕಾರ, ದಿನಕ್ಕೆರಡು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣನ್ನು ಸೇವಿಸಿದಾಗ ಇದರಲ್ಲಿರುವ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಚುನಾವಣೆ

    ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು…

  • ಆಧ್ಯಾತ್ಮ, ಜ್ಯೋತಿಷ್ಯ

    ಶ್ರೀ ಕೃಷ್ಣ ಪರಮಾತ್ಮನ 80 ಮಕ್ಕಳ ಹೆಸರು ನಿಮಗೆ ತಿಳಿದಿತ್ತೆ? : ಇಲ್ಲಿದೆ ನೋಡಿ….

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಶ್ರೀ ಕೃಷ್ಣನ…

  • ಆರೋಗ್ಯ

    ಕಾಡುವ ಡ್ಯಾಂಡ್ರಫ್‌ಗೆ ಇಲ್ಲಿದ ಮನೆ ಮದ್ದು, ಒಮ್ಮೆ ಟ್ರೈ ಮಾಡಿ ನೋಡಿ.

    ತಲೆ ಹೊಟ್ಟಿನ (Dandruff) ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ವೇಳೆ ಕಾಡಿಯೇ ಕಾಡುತ್ತೆ. ಇದಕ್ಕಿದೆ ಸರಳ ಪರಿಹಾರ. ಮೆಂತ್ಯಪುಡಿಯನ್ನು ತುಸು ಕಾಲ ನೆನೆಸಿಟ್ಟು, ನೆಲ್ಲಿಕಾಯಿ ಪುಡಿಯೊಂದಿಗೆ ಕಲೆಸಿ, ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಲೋಳೆಸರದ ಬಿಳಿ ತಿರುಳನ್ನು ನೆನೆಸಿ, ದಾಸವಾಳದ ಎಲೆಯೊಂದಿಗೆ ರುಬ್ಬಿ ಹಚ್ಚಿಕೊಳ್ಳಿ. ಮೊಸರಿನೊಂದಿಗೆ ಹಚ್ಚಿಕೊಂಡರೆ ಮೆಹಂದಿಯೂ ಪರಿಣಾಮಕಾರಿ. ಕಡಲೆಹಿಟ್ಟು ಸೀಗೆಯೊಂದಿಗೆ ನಂತರ ತಲೆ ತೊಳೆದುಕೊಳ್ಳಬೇಕು. ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ಸುಟ್ಟು, ತಿರುಳನ್ನು ತೆಗೆದು ರುಬ್ಬಿ ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಕೊಬ್ಬರಿ ಎಣ್ಣೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಗುರು, ಹಿರಿಯರು ನಿಮಗೆ ಅತ್ಯಂತ ಅವಶ್ಯಕ ಸಲಹೆಗಳನ್ನು ಕೊಡುವರು. ಅವರ ಸಲಹೆಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನೀವು ಮಹತ್ತರ ಸಾಧನೆ ಮಾಡುವಿರಿ..ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • Uncategorized, ಸಿನಿಮಾ

    ರಾಜಕುಮಾರ ಚಿತ್ರ ಪ್ರದರ್ಶನ ಅರ್ಧಕ್ಕೆ ಸ್ಥಗಿತ……..!!!!!

    ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು. ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್‍ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನ ನಡೀತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದ್ರೂ ಥಿಯೇಟರ್‍ನಲ್ಲಿ ಎಸಿ ಆನ್ ಆಗಿರಲಿಲ್ಲ. ಸೆಕೆಯಿಂದ ಬೇಸರಗೊಂಡ ಪ್ರೇಕ್ಷಕರು ಎಸಿ ಆನ್ ಮಾಡುವಂತೆ ಮಾಲ್ ಸಿಬ್ಬಂದಿಯನ್ನ ಕೇಳಿದ್ದಾರೆ. ಆದ್ರೆ ಎಸಿ ಆನ್ ಮಾಡುವ ಬದಲಿಗೆ ಮಾಲ್‍ನವವರು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ…

  • ಜ್ಯೋತಿಷ್ಯ

    ತಿಮ್ಮಪ್ಪನನ್ನು ಕೃಪೆಯಿಂದ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(13 ಮಾರ್ಚ್, 2019) ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ…