News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಉಪಯುಕ್ತ ಮಾಹಿತಿ

ಮೊಡವೆ ಕಲೆಗಳು ಒಂದೇ ದಿನದಲ್ಲಿ ಮಾಯವಾಗಲು ಆಲ್ಮಂಡ್ ನಿಂದ ಈಗೆ ಮಾಡಿದರೆ ಸಾಕು,.!

82

ಪ್ರಾಯದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಗುಳ್ಳೆಗಳು ಮೂಡುವುದು ಸಹಜ. ಕೇವಲ ಒಂದು ಅಥವಾ ಎರಡು ಗುಳ್ಳೆಗಳು ಬಂದರೆ ಪರವಾಗಿಲ್ಲ ಎನ್ನಬಹುದು. ಆದರೆ ಇಡೀ ಮುಖದ ತುಂಬಾ ತುಂಬಿಕೊಂಡು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತವೆ. ಮತ್ತು ವಾಸಿಯಾದ ನಂತರವೂ ಸಹ ಅವುಗಳ ಕಲೆಗಳು ಮುಖದ ಚರ್ಮದ ಮೇಲೆ ದೀರ್ಘಕಾಲ ಹಾಗೆಯೇ ಉಳಿದು ಮುಖದ ಮೇಲೆ ಕಪ್ಪು ಬಣ್ಣ ಚುಕ್ಕೆಗಳ ರೀತಿಯಲ್ಲಿ ಮೆತ್ತಿಕೊಂಡಂತೆ ಕಾಣುತ್ತದೆ. ಇಷ್ಟೇ ಅಲ್ಲದೆ ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವವರು ಸಹ ಮುಖದ ಮೇಲೆ ಮೊಡವೆಗಳ ಕಲೆಗಳ ರೀತಿ ಸಣ್ಣ ಸಣ್ಣ ಗುರುತುಗಳನ್ನು ಹೊಂದಿರುತ್ತಾರೆ.

 ಈ ರೀತಿಯ ಕಿರಿ ಕಿರಿ ಉಂಟುಮಾಡುವ ಯಾವುದೇ ಬಗೆಯ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ, ಈ ಲೇಖನದಲ್ಲಿ ನಾವು ತಿಳಿಸಿರುವ ಒಂದು ಸರಳ ಮನೆ ಮದ್ದು ಕೇವಲ 1 ನಿಮಿಷದಲ್ಲಿ ನಿಮಗೆ ಪರಿಹಾರ ಒದಗಿಸಿ ಕೊಡುತ್ತದೆ.ಬಹಳ ಪ್ರಯೋಜನಕಾರಿಯಾಗಿ ಕೆಲಸ ಮಾಡುವ ಈ ಸರಳ ಮನೆ ಮದ್ದಿನ ತಯಾರಿಕೆಗೆ ನಿಮಗೆ ಬೇಕಾಗಿರುವುದು ಕೇವಲ ಎರಡು ಬಾದಾಮಿ ಬೀಜಗಳು ಮತ್ತು ಸ್ವಲ್ಪ ಮೊಸರು. ಈ ಮನೆ ಮದ್ದನ್ನು ತಯಾರು ಮಾಡಲು ನಿಮಗೆ ಅಬ್ಬಬ್ಬಾ ಎಂದರೆ ಎರಡು ನಿಮಿಷ ಹಿಡಿಯಬಹುದು. ಹಾಗಾದರೆ ನೈಸರ್ಗಿಕವಾಗಿ ಬಾದಾಮಿ ಬೀಜಗಳನ್ನು ಮತ್ತು ಮೊಸರನ್ನು ಬಳಸಿಕೊಂಡು ತಯಾರು ಮಾಡುವ ಮನೆ ಮದ್ದನ್ನು ನೋಡೋಣ ಬನ್ನಿ.

ಕಲೆಗಳನ್ನು ಹೋಗಲಾಡಿಸುವ ಮನೆ ಮದ್ದನ್ನು ತಯಾರು ಮಾಡುವ ಬಗೆ:

  • ಮೊದಲಿಗೆ ಗ್ಯಾಸ್ ಸ್ಟವ್ ಆನ್ ಮಾಡಿ ಚಿಮಟ ಅಥವಾ ಇಕ್ಕಳದ ಸಹಾಯದಿಂದ 2 ಬಾದಾಮಿ ಬೀಜಗಳನ್ನು ಸುಟ್ಟು ಕೊಳ್ಳಿ. ( ನಿಮಗೆ ಮುಖದ ಮೇಲೆ ಹೆಚ್ಚಿನ ಕಲೆಗಳಿದ್ದರೆ, ನೀವು ಹೆಚ್ಚಿನ ಬಾದಾಮಿ ಬೀಜಗಳನ್ನು ತೆಗೆದುಕೊಳ್ಳಬಹುದು )
  • ಬಾದಾಮಿ ಬೀಜಗಳು ಸಂಪೂರ್ಣವಾಗಿ ರೋಸ್ಟ್ ಆದ ಮೇಲೆ ಅವುಗಳನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಹಾಕಿಡಿ.
  • ಬಿಸಿ ಆರಿದ ಮೇಲೆ ಸುಟ್ಟ ಬಾದಾಮಿ ಬೀಜಗಳನ್ನು ಒಂದು ಮಿಕ್ಸರ್ ಜಾರ್ ನಲ್ಲಿ ಹಾಕಿ ನುಣ್ಣಗೆ ಪುಡಿ ಆಗುವವರೆಗೂ ಗ್ರಾಯ್ನ್ಡ್ ಮಾಡಿಕೊಳ್ಳಿ. ಇದು ಪುಡಿಯಾದ ಮೇಲೆ ನೋಡಲು ಕಲ್ಲಿದ್ದಲಿನ ಪುಡಿಯಂತೆ ಕಾಣುವುದರಿಂದ ಇದನ್ನು ” ಆಲ್ಮಂಡ್ ಚಾರ್ಕೋಲ್ ಪೌಡರ್ ” ಎಂತಲೂ ಕರೆಯುತ್ತಾರೆ.
  • ಈ ಪುಡಿಗೆ ಈ ಸಮಯದಲ್ಲಿ 1/4 ಟೀ ಚಮಚದಷ್ಟು ಗಟ್ಟಿ ಮೊಸರನ್ನು ಹಾಕಿ.
  • ಈಗ ಮೊಸರು ಮತ್ತು ಸುಟ್ಟ ಬಾದಾಮಿ ಪುಡಿಯನ್ನು ಚೆನ್ನಾಗಿ ಕಲಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.
  • ಈಗ ನಿಮ್ಮ ಮೊಡವೆ ಕಲೆಗಳಿಗೆ ಮನೆಯಲ್ಲೇ ತಯಾರು ಮಾಡಿದ ಮನೆ ಮದ್ದು ರೆಡಿ ಆಗಿದೆ. ಇದನ್ನು ನಿಮ್ಮ ಮೊಡವೆ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ.

ಮುಖದ ಮೇಲಿನ ಕಪ್ಪು ಕಲೆಗಳಿಗೆ ಆಲ್ಮಂಡ್ ಚಾರ್ಕೋಲ್ ಪೌಡರ್ ಅನ್ನು ಹಚ್ಚಿಕೊಳ್ಳುವ ಬಗೆ :

  • ಕೆಲವೊಂದು ಕ್ರೀಮ್ ಗಳಿಗೆ ಇಂತಹದೇ ಸಮಯವೆಂದು ಇರುತ್ತದೆ. ಆದರೆ ನೀವು ತಯಾರು ಮಾಡಿದೆ ಬಾದಾಮಿ ಪುಡಿ ಮತ್ತು ಮೊಸರಿನ ಮನೆ ಮದ್ದಿಗೆ ಇಂತಹದೇ ಸಮಯವೆಂದು ಯಾವುದೇ ಅಡೆತಡೆ ಇಲ್ಲ. ನಿಮ್ಮ ಬಿಡುವಿನ ಸಮಯದಲ್ಲಿ ಅಂದರೆ ಬೆಳಗ್ಗೆ ಅಥವಾ ಸಂಜೆಯ ಹೊತ್ತಿನಲ್ಲಿ ನೀವು ಇದನ್ನು ಹಚ್ಚಿಕೊಳ್ಳಬಹುದು.
  • ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ನಿಮ್ಮ ಮುಖವನ್ನು ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆದು ಪಾಟಿಂಗ್ ಟವೆಲ್ ನ ಮುಖಾಂತರ ನಿಮ್ಮ ಮುಖವನ್ನು ಯಾವುದೇ ನೀರಿನ ಅಂಶ ಇಲ್ಲದಂತೆ ಚೆನ್ನಾಗಿ ಒತ್ತಿಕೊಳ್ಳಿ.
  • ನಿಮ್ಮ ಮುಖ ಚೆನ್ನಾಗಿ ಒಣಗಿದ ಮೇಲೆ, ನೀವು ತಯಾರು ಮಾಡಿಕೊಂಡ ಆಲ್ಮಂಡ್ ಚಾರ್ಕೋಲ್ ಕ್ರೀಮ್ ಅನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ.
  • ನಂತರ 1 – 2 ಗಂಟೆಗಳ ಕಾಲ ಇದನ್ನು ಹಾಗೇ ಒಣಗಲು ಬಿಡಿ. ಒಂದು ವೇಳೆ ನೀವು ಯಾವುದಾದರೂ ಕೆಲಸದ ಅವಸರದಲ್ಲಿ ಇದ್ದರೆ, ಕಡೆಯ ಪಕ್ಷ 30 ನಿಮಿಷಗಳವರೆಗೆ ಆದರೂ ಹಾಗೆ ಬಿಡಿ.
  • ಈಗ ನಿಮ್ಮ ಮುಖವನ್ನು ತಣ್ಣಗಿರುವ ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳಿ ಮತ್ತು ಟವೆಲ್ ನಿಂದ ಒತ್ತಿಕೊಂಡು ಮುಖದ ಚರ್ಮವನ್ನು ಒಣಗಲು ಬಿಡಿ.
  • ಈ ತಂತ್ರದಿಂದ ನಿಮ್ಮ ಮುಖದಲ್ಲಿ ಎಂತಹದೇ ಕಲೆಗಳಿದ್ದರೂ ನಿಧಾನವಾಗಿ ಬಣ್ಣಗುಂದುತ್ತಾ ಬರುತ್ತವೆ. ಒಂದು ವಾರದಲ್ಲಿ 3 – 4 ಬಾರಿ ಈ ಪ್ರಯತ್ನವನ್ನು ಮಾಡಿದ್ದೇ ಆದಲ್ಲಿ ಸಂಪೂರ್ಣವಾಗಿ ಕಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Cinema

    1.60 ಕೋಟಿ ರೂ ವಂಚನೆ, ಸಿಸಿಬಿಗೆ ದೂರು ನೀಡಿದ ಸ್ಯಾಂಡಲ್​ವುಡ್ ನಿರ್ದೇಶಕ

    ಸ್ಯಾಂಡಲ್​ವುಡ್ ಕಲಾ ಸಾಮ್ರಾಟ್ ಎಸ್​.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್  ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್​. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು. ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್​.ನಾರಾಯಣ್…

  • ಉಪಯುಕ್ತ ಮಾಹಿತಿ, ಸುದ್ದಿ

    ಸಿಗರೇಟ್ ಸೇದಿ ಬಿಸಾಕಿದ ಪೀಸ್ ಗಳಿಂದ ಕೋಟಿ ಕೋಟಿ ಗಳಿಸಿದ ಯುವಕರು, ನೀವು ಕೂಡ ಮಾಡಬಹುದು.

    ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ ಕಮ್ಮಿ ಇಲ್ಲ, ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಸಿಗರೇಟ್ ಸೇದುತ್ತಾರೆ, ಇನ್ನು ಹಿಂದಿನ ಕಾಲದಲ್ಲಿ ಕೇವಲ ವಯಸ್ಸಾದವರು ಮಾತ್ರ ಸಿಗರ್ಟ್ ಸೇದುತ್ತಿದ್ದರು ಆದರೆ ಈಗ ಶಾಲೆಗೆ ಹೋಗುವ ಮಕ್ಕಳು ಕೂಡ ಸಿಗರೇಟ್ ಗಳನ್ನ ಸೇದುತ್ತಿದ್ದಾರೆ ಮತ್ತು ಅದನ್ನ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 31 ಲಕ್ಷ ಸಿಗರೇಟ್ ಸೇದುತ್ತಿದ್ದಾರೆ ಜನರು, ಇನ್ನು ಜನರು ಸಿಗರೇಟ್ ಸೇದಿದ ಮೇಲೆ ಅದರ ತುದಿಯನ್ನ ಎಸೆಯುತ್ತಾರೆ ಮತ್ತು ಇನ್ನು ಕೆಲವರು ಅದನ್ನ…

  • ಸುದ್ದಿ

    ಮೆಟ್ರೋ ಪ್ರಯಾಣಿಕರಿಗೊಂದು ಸಿಹಿ ಸುದ್ದಿ….!ಇದನ್ನೊಮ್ಮೆ ಓದಿ..

    ಮೆಟ್ರೋ ರೈಲು ಪ್ರಯಾಣಿಕರು ಇನ್ನು ಮುಂದೆ 25 ಕೆಜಿವರೆಗೂ ಲಗೇಜ್ ಕೊಂಡೊಯ್ಯಬಹುದಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಲಗೇಜ್ ತೂಕ ಮಿತಿಯನ್ನು 25 ಕೆಜಿ ಗೆ ಹೆಚ್ಚಳ ಮಾಡಿದೆ. ಪ್ರಸ್ತುತ ಮೆಟ್ರೋ ರೈಲುಗಳಲ್ಲಿ 15 ಕೆಜಿ ತೂಕದ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಅದನ್ನು 25 ಕೆಜಿಗೆ ಹೆಚ್ಚಿಸಲಾಗಿದೆ. ಆದರೆ ಇಷ್ಟು ತೂಕದ ಒಂದು ಬ್ಯಾಗ್ ಗೆ ಮಾತ್ರ ಅನುಮತಿ ಇರುತ್ತದೆ. ಮೊದಲಿಗೆ ಮೆಟ್ರೋ ರೈಲ್ವೆ ಅಧಿಕಾರಿಗಳಿಂದಲೂ ಪೂರ್ವ ಅನುಮತಿ ಪಡೆಯಬೇಕಿದೆ. ವಿಮಾನ ನಿಲ್ದಾಣಗಳಿಗೆ ಸಂಪರ್ಕ…

  • ಉಪಯುಕ್ತ ಮಾಹಿತಿ, ನೀತಿ ಕಥೆ

    ಕೋತಿಯಿಂದ ಶ್ರೀಮಂತನಾದ. ನಿಜಕ್ಕೂ ರೋಚಕ ಕಥೆ.!

    ಹಣಗಳಿಸುವುದಕ್ಕೆ ಶಕ್ತಿಯೊಂದಿದ್ದರೆ ಸಾಕಾಗುವುದಿಲ್ಲ, ಯುಕ್ತಿಯೂ ಇರಬೇಕು. ತಮ್ಮ ಕಠಿಣ ಪರಿಶ್ರಮದೊಂದಿಗೆ ಚಾಣುಕ್ಯ ತನವಿದ್ದರೆ, ಹಣಗಳಿಸುವುದರ ಜೊತೆ ಹೆಸರನ್ನು ಕೂಡ ಸಂಪಾದಿಸಬಹುದು! ಹೀಗೆ ಒಬ್ಬ ವ್ಯಕ್ತಿ ಹಳ್ಳಿಯ ಜನರ ಮನಸ್ಥಿತಿಯನ್ನು ಅರಿತು ಅವರಿಂದ ಹೇಗೆ ಹಣವನ್ನು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಮುಂದೇ ಓದಿ.. ಇದನ್ನು ಮೋಸ ಎನ್ನಬೇಕಾ? ಅಥವಾ ಅವನ ಚಾಣಕ್ಷತನ ಎನ್ನಬೇಕಾ? ನೀವೇ ನಿರ್ಧರಿಸಿ ! ಚಿಕ್ಕದೊಂದು ಹಳ್ಳಿ, ಅಲ್ಲಿಯ ಜನತೆಗೆ ಕೃಷಿಯೆ ಬಂಡವಾಳ, ಬಾಳೆ, ತೆಂಗು, ಮಾವು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿರುತ್ತಾರೆ,…

  • ಸುದ್ದಿ

    40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ ನಂತರ ಏನಾಯ್ತು ಗೊತ್ತೇ,.??

    ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್ ​ಮಾಡುತ್ತಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಮಹಿಳೆಯ ಪತಿ ಜನಕರಾಜ್​, ಅಕ್ಟೋಬರ್​ 29ರಂದು ಈ ಘಟನೆ ನಡೆಯಿತು. ತರಕಾರಿ ಕತ್ತರಿಸಿ ತುಂಬಲಾಗಿದ್ದ ಬೌಲ್​ನಲ್ಲಿ ನನ್ನ ಪತಿ ಹಾಗೂ ಸೊಸೆ ತಮ್ಮ ಚಿನ್ನಾಭರಣವನ್ನು ಅದರಲ್ಲಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಚಿನ್ನದಮೇಲೆ ತರಕಾರಿ ತ್ಯಾಜ್ಯವನ್ನು ಇಡಲಾಗಿತ್ತು.ಕೊನೆಯಲ್ಲಿ ಇದರ ಅರಿವಿಲ್ಲದೆ ಅದನ್ನು ಕಸದ ಗುಂಡಿಗೆ ಎಸೆಯಲಾಗಿತ್ತು….

  • ದೇಶ-ವಿದೇಶ

    ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವ ಮಕ್ಕಳಿಗೆ ಕಾದಿದೆ ಮಾರಿ ಹಬ್ಬ!ಮೋದಿ ಸರ್ಕಾರ ತರಲಿದೆ ಹೊಸ ಕಾನೂನು?

    ಈಗಿನ ಕಾಲದಲ್ಲಿ ಮಕ್ಕಳಿಗೆ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಗಳನ್ನು ಸಾಕುವುದೇ ದೊಡ್ಡ ಕಷ್ಟವೆನಿಸಿದೆ.ಹಾಗಾಗಿ ತಮ್ಮ ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವುವರೇ ಹೆಚ್ಚು. ಆದರೆ ಇನ್ನು ಮುಂದೆ ಹಾಗೆ ಮಾಡುವ ಆಗಿಲ್ಲ.