ಮನರಂಜನೆ

ವಿಷ್ಣು ಹಾಡಿಗೆ ಅವಮಾನ ಮಾಡಿದ್ರ!ಹಾಗಾದ್ರೆ ದಿವಾಕರ್ ನಿವೇದಿತಾ ನಡುವೆ ನಡೆದ ವಾಗ್ವಾದ ಏನು?ತಿಳಿಯಲು ಮುಂದೆ ಓದಿ…

498

ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ‌ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ, ಟಕಿಲ,ಜಸ್ಟ್ ಲವ್ ಮತ್ತು ಪರವಶನಾದೇನು ಹಾಡಿಗೆ ಸಮ್ಮತಿ ಸೂಚಿಸಿದರು..

ಮೊದಲಿಗೆ ಕಿಚನ್ ಏರಿಯಾದಲ್ಲಿ ಶೃತಿಯವರು ಲಿಪ್ ಬಾಮ್ ಕಳಿಸಿದ್ದಕ್ಕೆ ಧನ್ಯವಾದ ಹೇಳಿದರು.
ದಿವಾಕರ್ ಅವರು ಸಕ್ಕರೆ ಖಾಲಿಯಾದ ಕಾರಣಕ್ಕೆ ಹಾಲಿಗೆ ಜಾಮೂನು ಪಾಕವನ್ನು ಸುರುವಿ ಕುಡಿದರು..

“ಸವಿ-ಸವಿ ನೆನಪು” ಚಟುವಟಿಕೆಯಲ್ಲಿ ಕ್ಯಾನ್‌ವಾಸ್ ಕುಂಚದ ಮೇಲೆ ಬಣ್ಣವನ್ನು ಬಳಸಿ ಆಟೋಗ್ರಾಫ್ ರಚಿಸುವುದಾಗಿತ್ತು.. ಎಲ್ಲ ಸದಸ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಆಟೋಗ್ರಾಫ್ ರಚಿಸಿದರು.. ಅದರಲ್ಲಿ ಚಂದನ್ ಮತ್ತು ಜೆಕೆಯವರ ಆಟೋಗ್ರಾಫ್ ಸೃಜನಾತ್ಮಕವಾಗಿತ್ತು..


ಈ ವೇಳೆಯಲ್ಲಿ ನಿವೇದಿತಾ ಅವರು ಪೇಂಟ್ ಸುರುವಿ ಹೋಗಿದ್ದಕ್ಕೆ ಕಣ್ಣೀರು ಹಾಕಿದ್ದು ತರ್ಕಕ್ಕೆ ನಿಲುಕದ್ದು. ಈ ಹುಡುಗಿ ಇಷ್ಟೊಂದು ಸೂಕ್ಷ್ಮವಾ ಎಂಬ ಪ್ರಶ್ನೆ ಮೂಡಿದ್ದಂತೂ ನಿಜ!

“ನನ್ನ ಬಿಗ್‌ಬಾಸ್ ಮನೆ” ಚಟುವಟಿಕೆಯಲ್ಲಿ ಬಿಗ್‌ಬಾಸ್ ಕೇಳಿದ 30ಪ್ರಶ್ನೆಗಳಲ್ಲಿ ಜೆಕೆಯವರು 15, ಶೃತಿ-ದಿವಾಕರ್ 10, ಮತ್ತು ಚಂದನ್ -ನಿವೇದಿತಾ 14 ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರು.

“ನನ್ನ ಹಾಡು ನನ್ನದು” ಉಳಿದ ಮೂರು ದಿನಗಳಲ್ಲಿ ಬೆಳಿಗ್ಗೆ ಹಾಕುವ ಮೂರು ಹಾಡನ್ನು ಸೂಚಿಸಲು ಬಿಗ್‌ಬಾಸ್ ಹೇಳಿದ್ದರು..ಆಗ ಚಂದನ್ ತಮ್ಮ ಟಕೀಲ ಸಿನಿಮಾದ ಹಾಡು ಮತ್ತು ಜೆಕೆ ತಮ್ಮ ಜಸ್ಟ್ ಲವ್ ಚಿತ್ರದ ಹಾಡಿಗೆ ಸಮ್ಮತಿ ಸೂಚಿಸಿದರು..

ನಿವೇದಿತಾ ಮೆಲೊಡಿ ಹಾಡಿಗೆ ಮತ್ತು ದಿವಾಕರ್ ವಿಷ್ಣುವರ್ಧನ್ ಅವರ ಹಾಡನ್ನು ಕೇಳಿದಾಗ ವಾಗ್ವಾದ ಶುರುವಾಯಿತು..

ನಿವೇದಿತಾ : ಮೆಲೊಡಿ ಸಾಂಗ್ ಇರಲಿ
ದಿವಾಕರ್: ಯಜಮಾನ ಮೂವಿ ನಮ್ಮ ಮನೆಯಲಿ ಸಾಂಗ್ ಇರಲಿ

ನಿವೇದಿತಾ: ವಿಷ್ಣುವರ್ಧನ್ ಅವರದ್ದೇ ಯಾವುದಾದರೂ ಮೆಲೊಡಿ ಸಾಂಗ್ ಹೇಳಿ.
ದಿ: ೩ದಿನವಾದ್ಮೇಲೆ ಮೆಲೊಡಿ ಸಾಂಗ್ ಹಾಕಿಸಿಕೊಡ್ತಿನಿ ಬಿಡು.. ಇವಾಗ ಇದು ಇರಲಿ..

ನಿವೇದಿತಾ: actually daily ಈ ಸಾಂಗ್ ಹಾಕಿ ಅಂತ ಬಿಗ್‌ಬಾಸ್ ಗೆ ಕೇಳ್ತಿದ್ದೆ.
ಜೆಕೆ: ನಂದು ಬೇಡ, ವಿಷ್ಣು ದು,ಟಕೀಲ, ಮೆಲೊಡಿ ಇರಲಿ.

ನಿವೇದಿತಾ:no problem ಯಾವುದಾದರೂ ಹಾಕೊಳ್ಳಿ!
ಚಂ: ಟಕೀಲ ಬೇಡ, ಫೀನಾಲೆಗೆ ಹಾಕೋಣ..
ದಿ: ಇವಳ್ದೆ ಹಾಕಿ, ನಂದು ಮನೆಗೆ ಹೋಗಿ ಕೇಳ್ಕೊತೀನಿ.
ನಿವೇದಿತಾ: ಇಷ್ಟೊತ್ತು ನೀವು ಹೇಳಾಯ್ತಲ್ವಾ!(ಇಲ್ಲಿಂದ ಶುರುವಾಯ್ತು)
ದಿ: ನೀ ಮುನಿಸ್ಕೊತಿಯಲ್ಲ..
ನೀ: ನೀನೇ ಮುನಿಸ್ಕೊಂಡು ರೇಗಾಡ್ತಿದೀಯಾ!
ದಿ: ನೀನು ಮಾತಾಡೋಕೆ ಬಿಟ್ರೆ ಮಾತಾಡಿಬಿಡ್ತಿಯಾ!
ನೀ: ಏನು ಹೇಳಿದ್ದು.
ದಿ: ಇಂತದ್ದು ಮಾತಾಡೋಕೆ ಬಿಟ್ರೆ ಮಾತಾಡ್ತಿಯಾ..
ನೀ: ಸುಮ್ನೆ ರೇಗಾಡ್ತಾರೆ.. ಒಂದು ಒಳ್ಳೆಯದು ಹೇಳ್ತಿದ್ರೆ!
ದಿ: ಸುಮ್ನೆ ತಲೆ ತಿಂತಾಳೆ!
ನೀ: ನೀವ್ಯಾಕೆ ತಲೆ ಕೊಡ್ತಿರಿ ನನಗೆ ತಿನ್ನೋಕೆ
ದಿ: ಮೆಂಟಲ್ ತರ ಆಡಬಾರದು.
ನೀ: ಯಾರ್ ಮೆಂಟಲ್ ಯಾರ್ ಮೆಂಟಲ್, ಮೆಂಟಲ್-ಗಿಂಟಲ್ ಅಂತೆಲ್ಲ ಹೇಳಬಾರ್ದು ಚಂದನ್
ದಿ: ಹೇಳು ಮಗ ಚಂದನ್ ಸಾಂಗ್ ಅವಳದ್ದೆ
ನೀ: ಯಾರು ಹೇಳ್ತಾರೆ ಅವರೇ ಮೆಂಟಲ್ ಆಗಿರ್ತಾರೆ.
ದಿ: ಏನ್ ಕಂಯ್ಯಾ ಕಂಯ್ಯಾ ಅಂತೀಯಾ
ನೀ: ಕಂಯ್ಯಾ ಕಂಯ್ಯಾ ಮಾಡಿಸ್ತಿರೋದು ಯಾರು..
ಬೇಗ ಹೇಳಿ
ಚಂ: ಜೆಕೆ ಲೈನ್ ಹಾಡ್ಬೇಕಂತೆ ಬನ್ನಿ, ನೀವಿ ನೀನು ಬಾ
ನೀ: ನಾನು ಬರಲ್ಲ
ಚಂ: ಏ!
ನೀ: ಎದ್ದು ಬರುತ್ತಾ, ತಲೆ ತಿಂತಾರೆ ಅಂತ ಯಾಕೆ ಕೊಡ್ಬೇಕು.
ದಿ: ಏನಾದರೂ ಹೊಸದು ಹೇಳು, ಹೇಳಿದ್ದೆ ಹೇಳ್ತಿಯಲ್ಲ.
ನೀ: ಚಂದನ್ ಗೆ ಹೊಡೆಯುತ್ತಿದ್ದಾಗ
ದಿ: ಸಿಟ್ಟು ಬಂದು ಹೊಡೆಯೋದಂತೆ..
ನೀ: ಚಂದನ್ ನಕ್ಕಿದ್ದಕ್ಕೆ ಹೊಡೆದಿದ್ದು, ನಿಮ್ಮ ಮೇಲಿನ ಸಿಟ್ಟಿಗೆ ಹೊಡೆದಿಲ್ಲ..
ದಿ: ಬೊರ್ ಹೊಡೆಯುತ್ತೆ ಜನರಿಗೆ.
ನೀ: ವಾಯಲಿನ್ ತರ ಕುಯ್ತಾರೆ.. ವಿಶ್ ಹೇರ್ ಬಂತು.
ಯಾರ ಸಾಂಗ್ ಕೂಡ ಪ್ಲೆ ಮಾಡ್ಬೇಡಿ. ನನ್ನ ಸಾಂಗ್ ಪ್ಲೆ ಮಾಡಿ..
ದಿ: ಹೊಟ್ಟೆ ಉರಿ
ನೀ: ನಾನು ನಿಮ್ಮ ಸಾಂಗ್ ಹಾಕ್ಬೇಡ ಅಂದ್ನಾ? ವಿಶ್ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಕರ್ಸ್ ಆಗುತ್ತೆ..
ದಿ: ಡಬ್ಬ ಎಲ್ಲ‌ ಹೇಳ್ಬೇಡ, ನೀನು ಡವ್ ರಾಣಿ,ದಡ್ಡಿಯಂತೂ ಅಲ್ಲ,ಬುದ್ಧಿವಂತೆ.
ನೀ: ಚಂದನ್ ಕೈಯಿಂದ ಬಿಡಿಸಿಕೊಂಡು ಅಳ್ತಾ ಬೆಡ್‌ರೂಮ್ ಏರಿಯಾಗೆ ಹೋಗಿ ಅಲ್ಲಿಂದ ಕ್ಯಾಪ್ಟನ್ ರೂಮಿಗೆ ಹೋಗ್ತಾರೆ..


ಅಲ್ಲಿ ಚಂದನ್ ಅವರು ಸಮಾಧಾನ ಮಾಡಿ ಸಮಸ್ಯೆಯನ್ನು ಬಗೆಹರಿಸ್ತಾರೆ..
ಅಂತೂ-ಇಂತೂ ವಿಷ್ಣುವರ್ಧನ್ ಹಾಡು ಕ್ಯಾನ್ಸಲ್ ಆಗೋಯ್ತು..ಇಲ್ಲಿ ಯಾರ ತಪ್ಪಿದೆ ನೀವೆ  ನಿರ್ಧರಿಸಿ..

ಕೃಪೆ:ಉದಯ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಂಬಂಧ

    ಒಂದು ಫೋಟೋಗಾಗಿ ಮದುವೆಮನೆಯಲ್ಲೇ ಕಿತ್ತಾಡಿಕೊಂಡ ವಧು ವರರು!ಆಮೇಲೆ ಏನಾಯ್ತು ಗೊತ್ತಾ???

    ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.

  • ಸಿನಿಮಾ, ಸುದ್ದಿ

    ವಿನೋದ್ ರಾಜ್ ರನ್ನು ಕ್ಯಾರೆ ಎನ್ನದ ಟಿವಿ ಶೋಗಳು, ಹುಡುಕಿಕೊಂಡು ಬಂತು ಬಂಪರ್ ಆಫರ್.

    ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ…

  • ಜ್ಯೋತಿಷ್ಯ

    ನಿಂಬೆ ಹಣ್ಣು ಮತ್ತು ಹಸಿ ಮೆಣಸಿನಕಾಯಿಯನ್ನು ಮನೆ ಮುಂದೆ ಮತ್ತು ವಾಹನಗಳ ಮುಂದೆ ಕಟ್ಟುವುದು ಏಕೆ ಗೊತ್ತಾ..?

    ಶಾಸ್ತ್ರಗಳ ಪ್ರಕಾರ ಜನರು ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಜನರ ದೃಷ್ಠಿಯನ್ನು ಬೇರೆಡೆ ಸೆಳೆಯಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸ್ತಾರೆ. ಮನೆ ಮತ್ತು ಕಚೇರಿಯಲ್ಲಿ ನಿಂಬೆ ಹಣ್ಣು ಹಾಗೂ ಹಸಿ ಮೆಣಸನ್ನು ಕಟ್ಟುವುದು ಕೂಡ ಇದ್ರಲ್ಲಿ ಒಂದು. ನಿಂಬೆ-ಮೆಣಸಿನಲ್ಲಿ ತಂತ್ರ-ಮಂತ್ರದ ಜೊತೆ ಮನೋವಿಜ್ಞಾನದ ಸಂಬಂಧವೂ ಅಡಗಿದೆ. ನಿಂಬೆ ಹಣ್ಣು ಸೇರಿದಂತೆ ಹಸಿ ಮೆಣಸಿನಕಾಯಿ ಇನ್ನಿತರೇ ಅಡುಗೆಗೆ ಮಾತ್ರ ಮೀಸಲಾಗಿಲ್ಲ.ತಂತ್ರ-ಮಂತ್ರಕ್ಕೂ ಸಂಬಂಧವಿದೆ.ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನ ಖಾರದ ರುಚಿ ಕೆಟ್ಟ ದೃಷ್ಟಿಯುಳ್ಳವರ ಗಮನವನ್ನು ಬೇರೆಡೆಗೆ…

  • Law

    ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ 10 ವರ್ಷ ಜೈಲು ಶಿಕ್ಷೆ..!

    ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆಯಾಗಿದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(12 ಫೆಬ್ರವರಿ, 2019) ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಹಠಮಾರಿ ಪ್ರಕೃತಿ ನಿಮ್ಮ ಪೋಷಕರ…

  • ಮನರಂಜನೆ

    ಇಲ್ಲಿಂದ ಹೋದ ನಾಲ್ಕೇ ದಿನಕ್ಕೆ ನನ್ನ ಮದ್ವೆ ಮಾಡ್ತಾರೆ ಎಂದ, ಬಿಗ್ ಬಾಸ್ ಮನೆಯ ಭೂಮಿ ಶೆಟ್ಟಿ.

    ನೀವೆಲ್ಲ ಹೀಗೆ ಹೇಳ್ತಾ ಇದ್ದರೆ ಬಿಗ್‍ಬಾಸ್ ಮನೆಯಿಂದ ಹೊರ ಹೋದ ನಾಲ್ಕೇ ದಿನಕ್ಕೆ ನನ್ನ ಮದುವೆ ಮಾಡಿಸ್ತಾರೆ ಎಂದು ಭೂಮಿ ಶೆಟ್ಟಿ ಹೇಳಿಕೊಂಡಿದ್ದಾರೆ. ಬಿಗ್‍ಬಾಸ್ ಫಿನಾಲೆಗೆ ಮೂರು ದಿನಗಳು ಮಾತ್ರ ಉಳಿದಿದ್ದು, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಭೂಮಿ ಶೆಟ್ಟಿ ಸಹ ಒಬ್ಬರು. ಕೊನೆಯ ವಾರ ಆಗಿದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಟಾಸ್ಕ್ ಗಳು ಸಿಗುತ್ತಿಲ್ಲ. ಬದಲಾಗಿ ಹಳೆಯ ಸ್ಪರ್ಧಿಗಳನ್ನು ಮನೆಗೆ ಕರೆ ತರುವ ಮೂಲಕ ಫೈನಿಲಿಸ್ಟ್ ಗಳಿಗೆ  ಸರ್ಪ್ರೈಸ್ ನೀಡಲಾಗುತ್ತಿದೆ. ಗೆಸ್ಟ್ ಬಂದು ಹೋದ ನಂತರ ಸ್ಪರ್ಧಿಗಳು…