ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 5 ದಿನಗಳು ಬಾಕಿ ಉಳಿದಿವೆ. ನೆನ್ನೆ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ರಾತ್ರೋ ರಾತ್ರಿ ಒಬ್ಬರನ್ನು ಎಲಿಮಿನೇಟ್ ಮಾಡುವ ಮುಖಾಂತರ ಶಾಕ್ ಕೊಟ್ಟಿದ್ದಲ್ಲದೆ, ವೀಕ್ಷಕರಲ್ಲಿ ಬಾರಿ ಕುತೂಹಲವನ್ನು ಉಂಟುಮಾಡಿದೆ.
ಹೌದು, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸಮೀರ್ ಆಚಾರ್ಯವರನ್ನು ಎಲಿಮಿನೇಟ್ ಮಾಡುವ ಮುಖಾಂತರ ಉಳಿದ 5 ಜನ ಸ್ಪರ್ಧಿಗಳು ಬಿಗ್ ಬಾಸ್ ಸಂಚಿಕೆ 5ರ ಫೈನಲ್ ತಲುಪಿದ್ದಾರೆ. ದಿವಾಕರ್,ನಿವೇದಿತಾ ಗೌಡ,ಶ್ರುತಿ ಪ್ರಕಾಶ್,ಜಯರಾಂ ಕಾರ್ತಿಕ್,ಮತ್ತು ಚಂದನ್ ಶೆಟ್ಟಿ ಈ 5 ಜನರ ಗ್ರಾಂಡ್ ಪಿನಾಲೆ ತಲುಪಿದ್ದಾರೆ.
ಬಿಗ್ ಬಾಸ್ ಸಂಚಿಕೆ 5ರ ಪಟ್ಟಕ್ಕೆ ನೆನ್ನೆಯಿಂದಲೇ ವೋಟಿಂಗ್ ಶುರುವಾಗಿದೆ.ಈ 5 ಜನರಲ್ಲಿ ದಿವಾಕರ್ ಉಳಿದಂತೆ 4 ಜನ ಸೇಲೆಬ್ರೆಟಿಗಳಾಗಿದ್ದು, ಕಾಮನ್ ಮ್ಯಾನ್ Vs ಸೇಲೆಬ್ರೆಟಿಸ್ ಇವರಲ್ಲಿ ಯಾರೂ ಗೆಲ್ಲುತ್ತಾರೆಂಬ ಕುತೂಹಲ ಜನರಲ್ಲಿ ಇಮ್ಮಡಿಗೊಂಡಿದೆ.ಹಾಗಾದ್ರೆ ವೀಕ್ಷಕರು ಹೇಳುವ ಪ್ರಕಾರ ಯಾರು ಗೆಲ್ಬೇಕು ಎಂಬ ವಿವರ ಇಲ್ಲಿದೆ ಮುಂದೆ ನೋಡಿ…
ನಿವೇದಿತಾ ಗೌಡ ಹುಟ್ಟಿದ್ದು ಮತ್ತು ಬೆಳೆದಿದ್ದು ಮೈಸೂರಿನಲ್ಲಿಯೇ. ಆದರೂ ಆಕೆಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಏಕೆಂದರೆ ಆಕೆ ಓದಿದ ಶಾಲೆ ಅಟಾಮಿಕ್ ಎನರ್ಜಿ ಸ್ಕೂಲಿನಲ್ಲಿ. ಶಾಲೆಯಲ್ಲಿ ಕನ್ನಡ ಇಲ್ಲದ ಕಾರಣ ಕನ್ನಡ ಬರೆಯಲು ಗೊತ್ತಿಲ್ಲ, ಶಾಲೆಯಲ್ಲಿ ಮಾತಾಡಲು ಸಹ ಇಲ್ಲದಿರುವುದರಿಂದ ಕನ್ನಡ ಆಕೆಗೆ ಮಾತಾಡಲು ತುಂಬ ಕಷ್ಟ. ಮನೆಯಲ್ಲಿ ಕನ್ನಡ, ಶಾಲಾ ಕಾಲೇಜ್ನಲ್ಲಿ ಇಂಗ್ಲಿಷ್, ಇವೆರಡು ಮಿಶ್ರಣವಾಗಿ ಇಂಗ್ಲಿಷ್ ಸ್ಟೈಲಿನ ಕನ್ನಡ ಮಾತನಾಡುತ್ತಾರೆ. ನಿವೇದಿತಾ ಈಗ ಮೈಸೂರಿನ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ವಯಸ್ಸು 18. ಬಿಗ್ಬಾಸ್ ಇತಿಹಾಸದಲ್ಲಿ ಅತೀ ಕಡಿಮೆ ವಯಸ್ಸಿನ ಸ್ಪರ್ಧಿಯಾಗಿದ್ದಾರೆ.ತಂದೆ ರಮೇಶ್ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಒಬ್ಬ ಕಿರಿಯ ಸಹೋದರ ಇದ್ದಾನೆ.
ಡಬ್ ಸ್ಮ್ಯಾಶ್ ಮಾಡುವುದರಲ್ಲಿ ನಿವೇದಿತಾ ಗೌಡ ಎತ್ತಿದ ಕೈ. ನಿಜ ಹೇಳಬೇಕು ಅಂದ್ರೆ, ಡಬ್ ಸ್ಮ್ಯಾಶ್ ಜಗತ್ತಿನಲ್ಲಿ ನಿವೇದಿತಾ ಸೂಪರ್ ಸ್ಟಾರ್. ಕನ್ನಡದ ಸೂಪರ್ ಹಿಟ್ ಡೈಲಾಗ್ ಗಳನ್ನು ತಮ್ಮದೇ ಶೈಲಿಯಲ್ಲಿ ನಿವೇದಿತಾ ಹೇಳಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈಕೆ ಈಗ ಅದರಿಂದಲೇ ‘ಬಿಗ್ ಬಾಸ್’ ಎಂಬ ದೊಡ್ಡ ಕಾರ್ಯಕ್ರಮಕ್ಕೆ ಬಂದು, ಟಾಪ್ 5ರಲ್ಲಿ ತಮ್ಮ ಸ್ಥಾನ ಗಳಿಸುವ ಮೂಲಕ ಮೋಡಿ ಮಾಡಿದ್ದಾರೆ.
ಜಯರಾಂ ಕಾರ್ತಿಕ್ ಒಬ್ಬ ನಟನಾಗಿದ್ದು, ಕನ್ನಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಇವರು ಕಲರ್ಸ್ ವಾಹಿನಿಯಲ್ಲಿ 2012-15ರಲ್ಲಿ ಪ್ರಸಾರಗೊಂಡ ಧಾರಾವಾಹಿಯಾದ ಅಶ್ವಿನಿ ನಕ್ಷತ್ರದಲ್ಲಿನ ಜೆ. ಕೃಷ್ಣ ಎಂಬ “ಸೂಪರ್ಸ್ಟಾರ್” ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು.2014 ರಲ್ಲಿ ತೆರೆಕಂಡ ಜಸ್ಟ್ ಲವ್ ಚಿತ್ರದ ಮೂಲಕ ನಾಯಕ ನಟರಾದರು. ನಟನೆಯ ಜೊತೆಜೊತೆಗೆ ಇವರು ಇಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಸ್ಪರ್ದಿಸಿದ್ದ ಇವರು, ಈಗ ಟಾಪ್ 5 ತಲುಪುವ ಮೂಲಕ ಬಿಗ್ ಬಾಸ್ ಪಟ್ಟ ಗೆಲ್ಲುವಲ್ಲಿ ಮುನ್ನುಗ್ಗುತ್ತಿದ್ದಾರೆ.
ಚಂದನ್ ಶೆಟ್ಟಿ, ಇದು 2012ರಿಂದಲೇ ಕನ್ನಡ ಸಿನಿಮಾಗಳಲ್ಲಿ ಕೇಳುತ್ತಿದ್ದ, ಕಾಣುತ್ತಿದ್ದ ಹೆಸರು. ಹಾಡುಗಳನ್ನು ಬರೆಯುವ, ಹಾಡುವ ಮತ್ತು ಸಂಗೀತ ಸಂಯೋಜಿಸುವ ಚಂದನ್ ಶೆಟ್ಟಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದರೂ ಒಂದು ಐಡೆಂಟಿಟಿ ಎಂದು ಕೊಟ್ಟಿದ್ದು ‘ಧಮ್ ಪವರ್ರೇ…’ ಪುನೀತ್ ರಾಜಕುಮಾರ್ ಅಭಿನಯದ ‘ಪವರ್’ ಚಿತ್ರದ ಈ ಶೀರ್ಷಿಕೆ ಗೀತೆ ಬರೆದು, ಹಾಡಿದ ಚಂದನ್ ಒಮ್ಮೆಲೇ ಲೈಮ್ಲೈಟ್ಗೆ ಬಂದರು.
ಹಾಸನ ಚಂದನ್ ಹುಟ್ಟೂರಾದರೂ ಬೆಳೆದಿದ್ದು ಸಕಲೇಶಪುರದಲ್ಲಿ. ಅಲ್ಲಿ ಹೈಸ್ಕೂಲ್ ಮುಗಿಸಿ ಪುತ್ತೂರಲ್ಲಿ ಪಿಯು ಓದಿ, ಮೈಸೂರಿಗೆ ಬಂದು ಬಿಬಿಎಂ ಮುಗಿಸಿದರು. ಉದ್ಯೋಗದ ಬೆನ್ನು ಹತ್ತಿ ಕಾಲ್ಸೆಂಟರ್ನಲ್ಲಿ ಒಂದು ವರ್ಷ ಕೆಲಸವನ್ನೂ ಮಾಡಿದರು.
ಸಂಗೀತದ ಕಡೆಗೆ ಸೆಳೆಯುತ್ತಿದ್ದ ಮನಸು ಕಾಲ್ಸೆಂಟರ್ ಬಿಡಿಸಿತು. ಬೆಂಗಳೂರಲ್ಲಿ ಯಾವುದಾದರೂ ನೌಕರಿ ಹಿಡಿದರೆ ಸಂಗೀತವನ್ನೂ ಜೊತೆಯಲ್ಲೇ ತೂಗಿಸಿಕೊಂಡು ಹೋಗಬಹುದು ಎಂದುಕೊಂಡು ಬೆಂಗಳೂರಿಗೆ ಬಂದರು.ಕಂಡ ಕನಸು ಕೈಗೂಡಿದಂತೆ ಅರ್ಜುನ್ ಜನ್ಯ ಅವರ ಶಿಷ್ಯತ್ವವೂ ಸಿಕ್ಕಿತು. ಅವರ ಜೊತೆ ಚಂದನ್ ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ‘ಅಲೆಮಾರಿ’ ಚಿತ್ರದಲ್ಲಿ ಹಾಡುವ ಮೂಲಕ ಚಂದನ್ ಹಾಡಿನ ಬಂಡಿಯೂ ಆರಂಭವಾಯಿತು.ಹೀಗೆ ತಮ್ಮ ವಿಶಿಷ್ಟ ಗಾಯನದ ಮೂಲಕ ಹೆಸರು ಮಾಡಿರುವ ಇವರು ಬಿಗ್ ಬಾಸ್’ನಲ್ಲಿ ಸ್ಪರ್ದಿಸಿ ಟಾಪ್ 5ರ ಹಂತಕ್ಕೆ ತಲುಪಿ, ಇವರು ಕೂಡ ಬಿಗ್ ಬಾಸ್ ಸಂಚಿಕೆ 5ರ ಗೆಲ್ಲುವ ಕುದುರೆ ಎಂದು ಹೇಳಲಾಗುತ್ತಿದೆ.
ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್, ಬೆಳಗಾವಿಯಲ್ಲಿ ಹುಟ್ಟಿದ, ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುವ ಆಸೆ ಶ್ರುತಿ ಪ್ರಕಾಶ್ ರವರಿಗಿದೆ. ಹೀಗಾಗಿ ಅವರಿಗೆ ‘ಬಿಗ್ ಬಾಸ್’ ಒಂದು ಒಳ್ಳೆಯ ವೇದಿಕೆಯಾಗಿದ್ದು, ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ ಕೂಡ.ಜಯರಾಂ ಕಾರ್ತಿಕ್ ಜೊತೆ ತುಂಬಾ ಸ್ನೇಹದಿಂದ ಇವರ ಮೇಲೆ, ಜಯರಾಂರವರನ್ನು ಪ್ರೀತಿಸುತ್ತಿದ್ದಾರೆಯೇ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.ಇವರೂ ಕೂಡ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಟಪ್ 5ರ ಸ್ಪರ್ದಿಯಾಗಿದ್ದು ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸೊಂಟ ನೋವು, ತಲೆನೋವು… ದೇಹದ ಯಾವುದೇ ನೋವಿರಲಿ… ನೆಗಡಿ, ಶೀತ, ಕೆಮ್ಮು.. ನಿಮಗೆ ಏನೇ ಆದರೂ… ಇವರ ಹತ್ತಿರ ಇದೆ ಔಷಧಿ. ಇವರೇ ಆಯುರ್ವೇದ ಪ್ರಾಡೆಕ್ಟ್ ಸೇಲ್ಸ್ ಮ್ಯಾನ್ ದಿವಾಕರ್. ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದಿರುವ ದಿವಾಕರ್ ಹೊಟ್ಟೆ ಪಾಡಿಗಾಗಿ ಮಾಡದ ಕೆಲಸ ಇಲ್ಲ. ಎಮ್ಮೆ ಮೇಯಿಸುವುದರಿಂದ ಹಿಡಿದು ಹೋಟೆಲ್ ನಲ್ಲಿ ಕೆಲಸ, ಕೂಲಿ ಕೆಲಸ, ಗಾರೆ ಕೆಲಸ ಕೂಡ ಮಾಡಿರುವ ದಿವಾಕರ್ ಹೊಟ್ಟೆ ಹಸಿವಾದಾಗ ಭಿಕ್ಷೆ ಕೂಡ ಬೇಡಿದ್ದಾರಂತೆ.
ಇಷ್ಟೊಂದು ಕಷ್ಟಗಳಲ್ಲಿಯೇ ಬೆಳೆದು ಬಂದಿರುವ ಕಾಮಾನ್ ಮ್ಯಾನ್ ದಿವಾಕರ್ ಬಿಗ್ ಬಾಸ್ 5ರ ಸಂಚಿಕೆಯಲ್ಲಿ ಭಾಗವಹಿಸಿ, ಘಟಾನುಘಟಿ ಸೇಲೆಬ್ರೆಟಿಗಳ ಜೊತೆ ಸ್ಪರ್ದಿಸಿ ತಮ್ಮ ಪರಿಶ್ರಮದಿಂದ ಟಾಪ್ 5ರ ಹಂತ ತಲುಪಿದ್ದಾರೆ.ಬಿಗ್ ಬಾಸ್ ಪಟ್ಟ ಒಲಿಸಿಕೊಳ್ಳುವಲ್ಲಿ ಇವರು ಸೇಲೆಬ್ರೆಟಿಗಳಿಗಿಂತ ಮುಂದೆ ಇದ್ದು,ಗೆಲ್ಲುವ ನೆಚ್ಚಿನ ಸ್ಪರ್ದಿಯಾಗಿದ್ದಾರೆ.
ಜನರ ಅಭಿಪ್ರಾಯದ ಪ್ರಕಾರ ದಿವಾಕರ್’ರವರಿಗೆ ಹೆಚ್ಚಿಗೆ ವೋಟ್ ಮಾಡಿ ಗೆಲ್ಲಿಸಿ ಎಂದು ಸೋಶಿಯಲ್ ಮಿಡಿಯಾದಲ್ಲಿ ಅಭಿಯಾನ ಶುರುವಾಗಿದೆ.ನಮ್ಮ ಪ್ರಕಾರ ತುಂಬಾ ಕಷ್ಟದಿಂದಲೇ ಬಂದಿರುವ ಕಾಮನ್ ಮ್ಯಾನ್ ದಿವಾಕರ್ ಗೆದ್ದರೆ, ಅದು ಕಾಮನ್ ಮ್ಯಾನ್ ಸಿಕ್ಕ ಗೆಲುವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….
ದಿನನಿತ್ಯ ಅಡುಗೆ ಮಾಡುವುದು ಸಾಮಾನ್ಯ. ಅದರಲ್ಲೂ ನಾವು ತಿನ್ನುವ ಪ್ರಮುಖ ಅಡುಗೆ ಪದಾರ್ತವೆಂದರೇ ಅಕ್ಕಿ. ನಮ್ಮ ದೇಹದ ಪೌಷ್ಟಿಕತೆಗೆ ಬೇಕಾದ ಅಕ್ಕಿಯನ್ನು ಅನ್ನ ಮಾಡುವಾಗ ಅದನ್ನು ಚೆನ್ನಾಗಿ ತೊಳೆದು ಬಳಸುತ್ತೇವೆ. ಆ ನೀರನ್ನು ಚೆಲ್ಲುತ್ತೇವೆ. ಆದರೆ ಚೆಲ್ಲುವ ಮುನ್ನ ಈ ಸುದ್ದಿಯತ್ತ ಗಮನಿಸಿ. ನಮ್ಮ ಸಧೃಡ ಕೂದಲಿಗೆ ವಿಧ-ವಿಧವಾದ ಎಣ್ಣೆ, ಶ್ಯಾಂಪೂ, ಹೇರ್ ಪ್ಯಾಕ್ ಬಳಸುತ್ತೇವೆ. ಅದರಲ್ಲೂ ಕೂದಲು ಉದುರುವ ಸಮಸ್ಯೆ ಇದ್ದರಂತೂ ಎಲ್ಲರ ಸಲಹೆ ಪಡೆದು ದಿನಕ್ಕೊಂದು ಮನೆ ಮದ್ದು ಮಾಡುತ್ತೇವೆ. ಆದರೆ ಇಷ್ಟೆಲ್ಲ ಮಾಡುವ…
ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ. ಸಂಪರ್ಕಿಸಿ:-9353957085 ಮೇಷ(11 ನವೆಂಬರ್, 2019) : ಧ್ಯಾನ ಮತ್ತು ಯೋಗ ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳೆರಡಕ್ಕೂ ಪ್ರಯೋಜನಕಾರಿಯಾಗುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ನಿಮ್ಮ ಅಸಡ್ಡೆಯ ವರ್ತನೆ ಪೋಷಕರನ್ನು ಚಿಂತೆಗೀಡು ಮಾಡಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ಪ್ರೇಮಪ್ರಯಾಣ ಮಧುರವಾಗಿದ್ದರೂ ಅಲ್ಪಾವಧಿಯದ್ದಾಗಿರುತ್ತದೆ. ಸಹೋದ್ಯೋಗಿಗಳನ್ನು ನಿರ್ವಹಿಸುವಾಗ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(10 ಡಿಸೆಂಬರ್, 2018) ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಕೆಲವರಿಗೆ ಕುಟುಂಬದಲ್ಲಿಒಂದು ಹೊಸ ಆಗಮನ ಸಂಭ್ರಮಾಚರಣೆ…
ಸ್ಯಾಂಡಲ್ ವುಡ್ ನಟ ಚಿರು ಅವರ ಪ್ರೀತಿಯ ಶ್ವಾನ ದ್ರೋಣ ಇದೀಗ ತನ್ನ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿದೆ. ಹೌದು. ದ್ರೋಣ, ಚಿರು ಅವರ ಮುದ್ದಿನ ಶ್ವಾನವಾಗಿದೆ. ಆದರೆ ಇದೀಗ ಚಿರು ಅವರು ಹೃದಯಾಘಾತಕ್ಕೆ ಒಳಗಾಗಿ ಚಿರನಿದ್ರೆಗೆ ಜಾರಿದ್ದು, ತನ್ನ ಯಜಮಾನನನ್ನ ನೋಡಲು ದ್ರೋಣ ಹಠ ಮಾಡುತ್ತಿದ್ದಾನೆ. ರೆಬೆಲ್ ಸ್ಟಾರ್ ಅಂಬರೀಶ್ ಕೊಟ್ಟಿರುವ ನಾಯಿಯೊಂದು ಚಿರು ಮನೆಯಲ್ಲಿದೆ. ಆ ಶ್ವಾನಂದರೆ ಅಂದ್ರೆ ಚಿರು ಸರ್ಜಾಗೆ ತುಂಬಾನೇ ಇಷ್ಟ. ಪ್ರಾಣಿಗಳನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ದ ಚಿರು, ಇತ್ತೀಚಿಗಷ್ಟೇ ದರ್ಶನ್ಗೆ…
ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.30 ವರ್ಷದ ಸಂತ್ರಸ್ತೆ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಸೋಮವಾರ ಐವರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ಐವರು ಆರೋಪಿಗಳು ಬಂದು ಬಲವಂತವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದಾರೆ. ಬಳಿಕ…