ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ.
ಹೌದು, ಶ್ರೀಕಾಂತ್ ಜಿಕ್ಖರ್ರವರು ಭಾರತದ ಅತಿ ಹೆಚ್ಚಿನ ವಿದ್ಯಾರ್ಹತೆಯುಳ್ಳ ವ್ಯಕ್ತಿಯಾಗಿ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಅನ್ನು ಹೊಂದಿದ್ದಾರೆ. ಎಮ್. ಬಿ. ಬಿ. ಎಸ್ ಮತ್ತು ಎಮ್. ಡಿ. ಇಂದ ಶುರು ಮಾಡಿದ ಇವರು ಎಲ್. ಎಲ್. ಬಿ ಮಾಡಿ ಕಾನೂನನ್ನು ಕೂಡ ಓದಿದ್ದಾರೆ. ನಂತರ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ(ಎಲ್. ಎಲ್. ಎಮ್) ಯನ್ನು ಪಡೆಯುತ್ತಾರೆ. ಹಾಗೂ ಇವರು ಬಿಸ್ನೆಸ್ ಆಡಳಿತ ಮತ್ತು ಪತ್ರಿಕೋದ್ಯಮದಲ್ಲಿಯು ಮಾಸ್ಟರ್ಸ್ ಅನ್ನು ಹೊಂದಿದ್ದಾರೆ .

ಎಂ. ಎ. ಸಾರ್ವಜನಿಕ ಆಡಳಿತ ,
ಎಂ. ಎ.ಸಮಾಜ ಶಾಸ್ತ್ರ ,
ಎಂ. ಎ. ಅರ್ಥ ಶಾಸ್ತ್ರ ,
ಎಂ. ಎ. ಸಂಸ್ಕೃತ,
ಎಂ. ಎ. ಇತಿಹಾಸ,
ಎಂ. ಎ. ಆಂಗ್ಲ ಸಾಹಿತ್ಯ ,
ಎಂ. ಎ. ತತ್ವ ಶಾಸ್ತ್ರ ,
ಎಂ. ಎ.ರಾಜ್ಯ ಶಾಸ್ತ್ರ ,
ಎಂ. ಎ.ಪ್ರಾಚೀನ ಭಾರತೀಯ ಇತಿಹಾಸ ,
ಸಂಸ್ಕೃತಿ ಮತ್ತು ಪುರಾತನ ಶಾಸ್ತ್ರ ,
ಎಂ. ಎ.ಮನೋವಿಜ್ಞಾನ . ಮತ್ತು ಇವರು ಯಾವುದೇ ಪದವಿಗಿಂತ ಉನ್ನತ ಪದವಿಯಾದ ಡಿ.ಲಿಟ್ (ಡಾಕ್ಟರ್ ಆಫ್ ಲೆಟರ್ಸ್) ಅನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಸಾಕಷ್ಟು ಪದವಿಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಇವರು ಹಲವಾರು ಪದವಿಗಳಲ್ಲಿ ಪ್ರಥಮ ಶ್ರೇಣಿ /ಪ್ರಥಮ ದರ್ಜೆಯನ್ನು ಗಳಿಸಿದ ಹೆಮ್ಮೆ ಇವರದಾಗಿದೆ.

1978 ರಲ್ಲಿ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ (IPS)ಯನ್ನು ಬರೆದು,ಇಂಡಿಯನ್ ಸಿವಿಲ್ ಸರ್ವಿಸ್ (ಐಪಿಎಸ್) ನಲ್ಲಿ ಆಯ್ಕೆಯಾದರು. ನಂತರ ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡಿ,ಮತ್ತೆ 1980ರಲ್ಲಿ ಭಾರತೀಯ ಸಿವಿಲ್ ಸರ್ವೀಸ್ ಪರೀಕ್ಷೆ (IAS) ಪರೀಕ್ಷೆಯನ್ನು ಬರೆದ್ರು.ಅದರಲ್ಲೂ ಕೂಡ ಐಎಎಸ್ ಆಫಿಸರ್ ಆಗಿ ಆಯ್ಕೆ ಆದ್ರು.ಆದರೆ ನಾಲ್ಕು ತಿಂಗಳ ನಂತರ ತಮ್ಮ ಐಎಎಸ್ ಹುದ್ದೆಗೂ ರಾಜೀನಾಮೆ ನೀಡಿದ್ರು.
1980ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ,ತಮ್ಮ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಗೆದ್ದು, ತಮ್ಮ 26ನೇ ವಯಸ್ಸಿನಲ್ಲೇ,ಎಂಎಲ್ಎ ಆಗಿ ಆಯ್ಕೆ ಆದ್ರು.ಹಾಗೂ ಭಾರತದಲ್ಲೇ ಅತೀ ಕಿರಿಯ ವಯಸ್ಸಿನ ಎಂಎಲ್ಎ ಎಂಬ ಹೆಸರಿಗೆ ಪಾತ್ರರಾದ್ರು ಕೂಡ. ತರುವಾಯ ಆ ಸಮಯದಲ್ಲಿ 14 ಶಾಸಕಾಂಗಗಳನ್ನು ಹೊಂದಿರುವ ಸರ್ಕಾರದ, ಅತ್ಯಂತ ಶಕ್ತಿಶಾಲಿ ಸರ್ಕಾರಿ ಮಂತ್ರಿಯಾದರು.
ಭಾರತದಲ್ಲಿ 52,000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯಗಳಲ್ಲಿ ಇವರದು ಒಂದು ವೈಯುಕ್ತಿಕ ಗ್ರಂಥಾಲಯ ಸೇರಿದೆ.ಶ್ರೀಕಾಂತ್ ಜಿಕ್ಖರ್ರವರು ಒಬ್ಬ ಶಿಕ್ಷಣತಜ್ಞ, ವರ್ಣಚಿತ್ರಕಾರ, ವೃತ್ತಿಪರ ಛಾಯಾಗ್ರಾಹಕ, ಮತ್ತು ನಟರು ಕೂಡ ಆಗಿದ್ದರುಇವರು 1992-98ರವರೆಗೆ ಭಾರತ ರಾಜ್ಯಾಂಗದ ಸದಸ್ಯರಾಗಿದ್ದರು. ಅವರು 1992 ರಲ್ಲಿ ನಾಗಪುರದಲ್ಲಿ ಸಂದಿಪಾನಿ ಎಂಬ ಶಾಲೆ ಸ್ಥಾಪಿಸಿದರು.ದುರದೃಷ್ಟಕರ ಎಂದರೆ ತಮ್ಮ 49ನೇ ವಯಸ್ಸಿನಲ್ಲಿ ಕಾರ್ ಅಪಘಾತವೊಂದರಲ್ಲಿ ತೀರಿಕೊಂಡ್ರು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೇ 23ರ ಗುರುವಾರದಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗಗಳಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಷೇರುಪೇಟೆಯ ಮೇಲೆ ಪ್ರಭಾವ ಬೀರಿದ್ದು, ಹೂಡಿಕೆದಾರರು ಬೃಹತ್ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಆಹಾರ ವಿತರಣಾ ಸಂಸ್ಥೆ ಜೋಮ್ಯಾಟೊ (Zomato) ಸಾರ್ವಜನಿಕರಿಗೆ ಭರ್ಜರಿ ಉಡುಗೊರೆ ನೀಡುವ ಘೋಷಣೆ ಮಾಡಿದೆ. ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು…
ಹಣ ಸಂಪಾದನೆಗೆ ಅನೇಕ ವಿಧಾನಗಳಿವೆ. ಆದ್ರೆ ಕೆಲವರು ಹಣ ಗಳಿಸುವ ವಿಧಾನ ವಿಚಿತ್ರ ಹಾಗೂ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಈ ಯುವಕ ಹಣ ಸಂಪಾದನೆ ಮಾಡುವ ವಿಧಾನ ದಂಗಾಗಿಸುತ್ತದೆ. ಆತ ಯಾವುದೇ ಸೆಲೆಬ್ರಿಟಿಯಲ್ಲ. ಆದ್ರೆ ಸಿನಿಮಾ ತಾರೆಯರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾನೆ. ನಟರು ಸಿನಿಮಾದಲ್ಲಿ ನೀಡುವ ಮುತ್ತಿಗಿಂತ ದುಪ್ಪಟ್ಟು ಮುತ್ತನ್ನು ಹುಡುಗಿಯರಿಗೆ ನೀಡಿದ್ದಾನೆ. ಮುತ್ತು ಕೊಟ್ಟು ಹಣ ಗಳಿಸುವುದು ಇವ್ನ ಕೆಲಸ. ಈತನ ಹೆಸ್ರು ಕ್ರಿಸ್ ಮೆನ್ರೋ. ಈತ ಪ್ರಾಂಕ್ ಸ್ಟಾರ್. ದಾರಿಯಲ್ಲಿ ಹೋಗುವ ಹುಡುಗಿಯರಿಗೆ ಮುತ್ತು ನೀಡಿ…
ಯೌವ್ವನದಲ್ಲಿ ತ್ವಚೆಯ ಸೌಂದರ್ಯದ ಕಾಳಜಿವಹಿಸಿದರೆ ವಯಸ್ಸಾದಂತೆ ಅದರ ಪ್ರತಿಫಲ ಕಾಣಬಹುದು. ಸಾಮಾನ್ಯವಾಗಿ ಹೆಚ್ಚಿನವರು ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಹಲವು ರೀತಿಯ ರಾಸಾಯನಿಕ ಸೌಂದರ್ಯವರ್ಧಕಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಎಲ್ಲ ಕಡೆಯು ಹೇರಳವಾಗಿ ದೊರೆಯುವ ಕೆಲ ಗಿಡಗಳಿಂದಲೂ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು, ಲೋಳೆಸರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಅಲೋವೇರ ಎಲೆಗಳನ್ನು ಬಳಸಿ ಕೂಡ ತ್ವಚೆಯನ್ನು ಆರೈಕೆ ಮಾಡಬಹುದು. ಪ್ರಸ್ತುತ ಅನೇಕ ಕಂಪೆನಿಗಳು ಸಹ ಅಲೋವೇರ ಉತ್ಪನ್ನಗಳನ್ನು ಮಾರುಕಟ್ಟೆಗೆ…
ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್ ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…
ಚಂದನವನದ ಆ್ಯಕ್ಷನ್ ಪ್ರಿನ್ಸ್ ದೃವಾ ಸರ್ಜಾ ಮೊನ್ನೆ ಮೊನ್ನೆ ಅಷ್ಟೇ ದುರಂತ ಅಂತ್ಯ ಕಂಡ ಖಳನಾಯಕ ಉದಯ್ ಅವರ ಅಕ್ಕನ ಗಂಡ ಅಂದರೆ ಬಾವ ರಾಜ ನಿರ್ದೇಶನದ ಐರಾ ಚಿತ್ರದ ಮೂಹೂರ್ತವನ್ನು ಉದಯ್ ಅವರ ಸಮಾಧಿ ಬಳಿ ಕ್ಲಾಪ್ ಮಾಡುವ ಆ ಚಿತ್ರಕ್ಕೆ ಚಾಲನೆಯನ್ನು ಮಾಡಿ ಗೆಳೆಯನನ್ನು ನೆನೆದು ಭಾವುಕರಾಗಿದ್ದರು. ದೃವಾ ಸರ್ಜಾ ಮದುವೆಯ ತಯಾರಿ ಕೂಡ ಭರ್ಜರಿಯಾಗಿ ಸಾಗಿದೆ. ಇತ್ತ ದೃವಾ ಸರ್ಜಾ ಮದುವೆಯ ಆಮಂತ್ರಣ ಪತ್ರಿಕೆ ಹಿಡಿದು ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಮನೆ…
ಸತತ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ತರುವಂತೆ ಮಾಡಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಚಿನ್ನದ ದರ ಇಳಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ಗೊತ್ತು ಆದರೆ ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10ಗ್ರಾಂ ಚಿನ್ನಕ್ಕೆ38,072 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು…