ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಓದು ಜೀವನಕ್ಕೆ ತುಂಬಾನೇ ಮುಖ್ಯ., ವಿದ್ಯೆ ಮುಖ್ಯ ಆದ್ರೆ ವಿನಯ ಅತ್ಯಗತ್ಯ. ವಿನಯಾನ ಯಾವ ಶಾಲೇಲೂ ಹೇಳಿಕೊಡಲ್ಲ. ಯೋಗ ಎಲ್ಲರಿಗೂ ಬರಬಹುದು, ಆದ್ರೆ ಯೋಗ್ಯತೆ ಕೆಲವರಿಗೆ ಮಾತ್ರ ಇರತ್ತೆ.. ” ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಅಂತಾರೆ ದೊಡ್ಡವರು. ಹಾಗೆ ಎಲ್ಲಾ ಜ್ಞಾನಾನೂ ಪುಸ್ತಕದಿಂದಾನೆ ಸಿಗಲ್ಲ, ಅನುಭಾವಾನೂ ಅಷ್ಟೇ ಮುಖ್ಯ.
1. ಅಕ್ಷಯ್ ಕುಮಾರ್:-
ಮಾರ್ಷಲ್ ಆರ್ಟ್ಸ್ ಮುಂದುವರಿಸಬೇಕು ಅಂತ ಕಾಲೇಜನ್ನ ಬಿಟ್ರು. ಇವ್ರೊಂಥರ ಮಲ್ಟಿ ಟ್ಯಾಲೆಂಟೆಡ್. ನಟನೆ ಮಾಡ್ತಾರೆ, ಅಡಿಗೆ ಮಾಡ್ತಾರೆ, ಫೈಟ್ ಮಾಡ್ತಾರೆ.ಸಮಾಜ ಸೇವೇನೂ ಮಾಡ್ತಾರೆ.
ಇವರ ಬಗ್ಗೆ ನಿಮಗೆ ಗೊತ್ತೇ ಇರತ್ತೆ ಬಿಡಿ. ಇವರಿಗೆ ಯಾವತ್ತೂ ಓದಿನ ಬಗ್ಗೆ ಜಾಸ್ತಿ ಒಲವಿರಲಿಲ್ಲ ಅಂತ ಇವ್ರೇ ಆಗಾಗ ಹೇಳ್ಕೊತಾರೆ.
2. ದೀಪಿಕಾ ಪಡುಕೋಣೆ:-
ಅದ್ಬುತ ನಟಿ, ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದ್ರೆ ಇವಳು ಓದಿರೋದು ಬರಿ ಪಿಯುಸಿ ತಂಕ ಮಾತ್ರ! ಚಿಕ್ಕ ವಯಸ್ಸಿಂದಾನೇ ದುಡಿಯಕ್ಕೆ ಶುರು ಮಾಡಿದ್ರಿಂದಾ ಕಾಲೇಜಿಗೆ ಹೋಗಕ್ಕಾಗ್ಲಿಲ್ಲ.
ಮೊದಮೊದ್ಲು ಅವರ ಅಪ್ಪಾ ಅಮ್ಮಂಗೆ ಇದರ ಬಗ್ಗೆ ಅಸಮಾಧಾನ ಇದ್ರೂ ಮಗಳಿಗೆ ಈ ಕ್ಷೇತ್ರ ಎಷ್ಟ್ ಇಷ್ಟ ಅಂತ ಗೊತ್ತಾಗಿ ಅವಳ ಈ ಕನಸಿಗೆ ಸಾಥ್ ಕೊಟ್ರಂತೆ.
3. ಅಮಿರ್ ಖಾನ್:-
ಇವರ ನಟನೆ ಬಗ್ಗೆ ನಿಮಗೇ ಗೊತ್ತೆ ಇದೆ. ಇವ್ರು ಕಾಲೇಜಿನ ಮೆಟ್ಟಲನ್ನ ಹತ್ತಲೇ ಇಲ್ಲ. ಬಾಲಿವುಡ್ ಆಳುತ್ತಿರುವ ಖಾನ್ಗಳಲ್ಲಿ ಇವ್ರೂ ಕೂಡ ಒಬ್ರು.
ತಮಗೆ ಓದಿಗಿಂತಾ ಚಿತ್ರಗಳಲ್ಲೇ ಆಸಕ್ತಿ ಜಾಸ್ತಿ ಅಂತ ಗೊತ್ತಾದ್ಮೇಲೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಕ್ಕೆ ಶುರುಮಾಡಿದ್ರು. ಈಗ ಸೂಪರ್ ಸ್ಟಾರ್ ಆಗಿದ್ದಾರೆ .
4. ಐಶ್ವರ್ಯ ರೈ:-
ವಿಶ್ವಸುಂದರಿ ಐಶ್ವರ್ಯ ರೈ ಕಾಲೇಜನ್ನ ಅರ್ಧಕ್ಕೆ ಕೈ ಬಿಟ್ಟು ಮಾಡೆಲ್ಲಿಂಗ್ ಮಾಡಿ, ಅದ್ಬುತ ನಟಿಯಾಗಿದ್ದಾರೆ. ಹಲವು ವೇದಿಕೆಗಳಲ್ಲಿ ನಮ್ಮ ದೇಶಾನ ಪ್ರತಿನಿಧಿಸಿದ್ದಾರೆ.
ಈಗ ಅಷ್ಟೊಂದು ನಟಿಸ್ತಿಲ್ಲ… ಆದ್ರೂ ಇವರ ಫ್ಯಾನ್ಗಳಿಗೇನೂ ಕಮ್ಮಿ ಇಲ್ಲ.ಇವರು ಬಿಗ್ ಬೀ ಅಮಿತ ಬಚನ್ ಅವರ ಸೊಸೆ ಸಹ ಆಗಿದ್ದಾರೆ.
5. ಕಪಿಲ್ ದೇವ್:-
ಕಾಲೇಜ್ ಅರ್ಧಕ್ಕೆ ಬಿಟ್ಟ ಪುಂಡ ಅಂತ ಅಂದಿದ್ರಂತೆ ಇವ್ರನ್ನ, 1983 ರಲ್ಲಿ ಇಡೀ ದೇಶಾನೇ ಹೆಮ್ಮೆ ಪಡೋ ಹಾಗೆ ಮಾಡಿದ್ರು.
ಡಿಗ್ರಿ ಇಲ್ದೆ ಇದ್ರೆ ಏನ್ ಸ್ವಾಮೀ? ಸಾಧನೆ ಮಾಡಕ್ಕೆ ಛಲ ಬೇಕು. ಡಿಗ್ರಿ ಇಟ್ಕೊಂಡಿರೋ ಎಷ್ಟ್ ಜನ ಕಪಿಲ್ ದೇವ್ ಆಗಿದ್ದಾರೆ ಹೇಳಿ? ಭಾರತಕ್ಕೆ ವಿಶ್ವ ಕಪ್ ತಂದು ಕೊಟ್ಟವರು.
6. ಸಚಿನ್ ತೆಂಡೂಲ್ಕರ್:-
ಹತ್ತನೇ ಕ್ಲಾಸ್ ಆದ್ಮೇಲೆ ಓದಲೇ ಇಲ್ಲ ಇವ್ರು. ಕ್ರಿಕೆಟ್..ಕ್ರಿಕೆಟ್..ಕ್ರಿಕೆಟ್! ಯಾವಾಗ್ಲೂ ಕ್ರಿಕೆಟ್ ಜಪ ಮಾಡಿ ಈಗ ಕ್ರಿಕೆಟ್ ದೇವರಾಗಿದ್ದಾರೆ.ಎಲ್ಲರಿಗೂ ಗೊತ್ತೇ ಇದೆ.
7. ಗೌತಮ್ ಅದಾನಿ:-
ಇವ್ರು ಪ್ರತಿಷ್ಟಿತ ಎಂ ಎನ್ ಸಿ ಅದಾನಿ ಗ್ರೂಪಿನ ಮಾಲೀಕರು. ಈ ಕಾಲೇಜು, ಕ್ಲಾಸು, ಡಿಗ್ರಿ, ಕಾಮರ್ಸು ಇವೆಲ್ಲ ಬೇಡಪ್ಪ ಅಂತ ಕೋಟ್ಯಾಂತರ ರುಪಾಯಿ ಬೆಲೆಬಾಳೋ ತನ್ನದೇ ಕಂಪನಿ ಶುರು ಮಾಡಿದ ಮಹಾನ್ ವ್ಯಕ್ತಿ ಇವರು.
8. ಮೇರಿ ಕಾಮ್:-
ಸ್ಕೂಲನ್ನ ಅರ್ಧಕ್ಕೆ ಬಿಟ್ಟು ಬಾಕ್ಸಿಂಗ್ ಮಾಡಕ್ಕೆ ಹೊರಟ ಇವರು 2012 ರಲ್ಲಿ ಒಲಂಪಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ದೇಶದ ಏಕೈಕ ಮಹಿಳೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿರುತ್ತವೆ. ಸರ್ಕಾರಗಳು ಜಾರಿಗೊಳಿಸುವ ಎಷ್ಟೋ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಇಂತಹ ಯೋಜನೆಗಳಲ್ಲಿ ಒಂದಾಗಿದೆ ‘ಉದ್ಯೋಗಿನಿ’ ಯೋಜನೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತಿದೆ. ಏನಿದು ‘ಉದ್ಯೋಗಿನಿ’ ಯೋಜನೆ.. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ…
ನೋಡಿ, ನಾವು ದಿನಾಲೂ ನೋಡುವ ಬಳಸುವ ವಸ್ತುಗಳ ಬಗ್ಗೆ ಮಾಹಿತಿಯೇ ಗೊತ್ತಿರೋದಿಲ್ಲ.ಯಾಕಂದ್ರೆ ನಾವು ಅದು ಏನು,ಎತ್ತ ಅಂತ ತಿಳ್ಕೊಲ್ಲೋ ಗೊಡವೆಗೆ ಹೋಗೋದಿಲ್ಲ. ಅದರಲ್ಲಿ ಒಂದನ್ನು ಹೇಳಬೇಕಂದ್ರೆ ನಮ್ಮ ವಾಹನದ ರಿಜಿಸ್ಟ್ರೇಷನ್ ಸಂಖ್ಯೆ. ಏನಪ್ಪಾ ನಾವು ಹೊಸ ಗಾಡಿ ತಂಡ ಮೇಲೆ ಅರ್ ಟಿ ಓ ಗೆ ಹೋಗ್ತೀವಿ.ರಿಜಿಸ್ಟ್ರೇಷನ್ ಮಾಡಿಸ್ಕೊಂಡು ಬರ್ತೀವಿ.ಮತ್ತೆ ಬೇರೆ ಉಸಾಬರಿ ನಮಗೆತಕ್ಕೆ ಅಂತ ಅನ್ಕೊಳ್ತಿವಿ.ಆದ್ರೆ ಆದಷ್ಟೂ ನಾವು ಉಪಯೋಗಿಸುವ ಯಾವುದೇ ವಸ್ತುಗಳಾಗಲಿ,ವಾಹನಗಲಾಗಲಿ ಅದರ ಬಗ್ಗೆ ನಾವು ತಿಳಿದಿರ್ಲೆಬೇಕು.
ಯಾಕೆಂದ್ರೆ ಇನ್ನು ಮುಂದೆ ಎಲ್ಲಾ ಬಗೆಯ ಚಿನ್ನದ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ. ಹೌದು, ಎಲ್ಲಾ ರೀತಿಯ ಚಿನ್ನದ ವಹಿವಾಟುಗಳಿಗೆ ಪಾನ್ ಸಂಖ್ಯೆ ನಮೂದಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.
ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…
ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ.. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ. ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ…