ಆರೋಗ್ಯ, ಉಪಯುಕ್ತ ಮಾಹಿತಿ

ಕ್ಯಾನ್ಸರ್ ಚಿಕಿತ್ಸೆಯಿಂದ ನಿಮ್ಮ ಕೂದಲು ಉದುರುತ್ತಿದಿಯೇ -ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

522

ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.

ಹಾಗೆಂದು ಕೂದಲು ಶಾಶ್ವತವಾಗಿ ಉದುರಿ ಹೋಗುತ್ತದೆ ಎಂದು ಭಾವಿಸಬೇಡಿ. ಇದು ಈ ಚಿಕಿತ್ಸೆಯನ್ನು ಪಡೆಯುವವರೆಗೆ ಮಾತ್ರ, ಚಿಕಿತ್ಸೆ ನಿಲ್ಲಿಸಿದ ಕೂಡಲೆ ಕೂದಲು ಬೆಳೆಯುವಿಕೆಯು ಮೊದಲಿನಂತಾಗುತ್ತದೆ. ಆದರೆ ಕೂದಲು ತೆಳ್ಳಗೆ ಇರುತ್ತದೆ ಅಷ್ಟೇ.

  1. ಕೂದಲು ಉದುರುವಿಕೆಯ ಕಾರಣಗಳು ಯಾವುವು

ಕೂದಲು ಉದುರುವಿಕೆಯು ಈ ಕೆಳಕಂಡ ಕಾರಣಗಳ ಸಲುವಾಗಿ ಕಾಣಿಸಿಕೊಳ್ಳಬಹುದು:

  • ಕಿಮೊಥೆರಪಿ: ಈ ಚಿಕಿತ್ಸೆಯಲ್ಲಿ ಔಶಧಿಗಳು ಬಹುತೇಕ ಬಾರಿ ಆರೋಗ್ಯಕರ ಹಾಗು ಕ್ಯಾನ್ಸರ್‌ಕಾರಕ ಕೋಶಗಳೆರಡರ ಮೇಲೆ ದಾಳಿ ಮಾಡುತ್ತವೆ. ಆ ಪ್ರಕ್ರಿಯೆಯಲ್ಲಿ ಇವು ಕೂದಲಿನ ಕೋಶಗಳ ಮೇಲೂ ಸಹ ದಾಳಿ ಮಾಡುತ್ತವೆ. ಹೀಗಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೂದಲು ಉದುರುತ್ತದೆ.

  • ರೇಡಿಯೇಶನ್ ಥೆರಪಿ: ರೇಡಿಯೇಶನ್ ಚಿಕಿತ್ಸೆಯನ್ನು ಯಾವ ಭಾಗದ ಮೇಲೆ ಕೊಡಲಾಗುತ್ತದೆಯೋ, ಅದರ ಆಧಾರದ ಮೇಲೆ ಕೂದಲು ಉದುರುವಿಕೆಯು ಕಾಣಿಸಿಕೊಳ್ಳುತ್ತದೆ. ಉದಾ> ಒಂದು ವೇಳೆ ರೇಡಿಯೇಶನ್ ಅನ್ನು ಮೆದುಳಿನಲ್ಲಿರುವ ಮೆಟಾಸ್ಟಾಸಿಸ್‌ಗೆ ನೀಡಿದಲ್ಲಿ, ತಲೆಯ ಭಾಗದಲ್ಲಿ ಸಂಪೂರ್ಣ ಕೂದಲು ಉದುರಬಹುದು.

  • ಹಾರ್ಮೋನ್ ಥೆರಪಿ: ಇದು ಕೂದಲನ್ನು ತೆಳ್ಳಗೆ ಮಾಡುತ್ತದೆ ಆದರೆ ಸಂಪೂರ್ಣ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ.
  1. ಯಾವಾಗ ಕೂದಲು ಬೆಳೆಯುತ್ತದೆ?

ಈ ಮೊದಲೇ ಹೇಳಿದಂತೆ, ಕೂದಲು ಉದುರುವಿಕೆಯು ಕ್ಯಾನ್ಸರ್‌ ಚಿಕಿತ್ಸೆಯ ಒಂದು ತಾತ್ಕಾಲಿಕ ಭಾಗವಾಗಿರುತ್ತದೆ.

  • ಒಂದು ವೇಳೆ ನೀವು ಕಿಮೊಥೆರಪಿಗೆ ಒಳಗಾದಲ್ಲಿ, ನಿಮ್ಮ ಕೂದಲು ಒಂದು ಇಂಚು ಬೆಳೆಯಲು 3-6 ತಿಂಗಳ ಕಾಲ ತೆಗೆದುಕೊಳ್ಳುತ್ತದೆ.

  • ಒಂದು ವೇಳೆ ನೀವು ರೇಡಿಯೇಶನ್ ಥೆರಪಿಯಿಂದ ಕೂದಲನ್ನು ಕಳೆದುಕೊಂಡಲ್ಲಿ, 4-6 ತಿಂಗಳ ನಂತರ ನಿಮ್ಮ ಕೂದಲು ಒಂದು ಇಂಚು ಬೆಳೆಯುತ್ತದೆ.
  1. ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೇಗೆ ತಡೆದುಕೊಳ್ಳುವುದು?

ಕೂದಲು ಉದುರುವಿಕೆಗೆ ಮೊದಲೇ ಅದನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಚಿಕಿತ್ಸೆ ನಡೆಯುವಾಗ ಮತ್ತು ನಡೆದ ಮೇಲೆ ಈ ಸಲಹೆಗಳನ್ನು ಅನುಸರಿಸಿ:-

a.ಚಿಕಿತ್ಸೆಗೆ ಮೊದಲು :-

ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ: ಚಿಕಿತ್ಸೆ ಪಡೆಯುವ ಮೊದಲೇ ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಆಗ ಕೂದಲು ಉದುರುವುದು ಮತ್ತು ಬೆಳೆಯುವುದು ನಿಮ್ಮ ಅರಿವಿಗೆ ಬರುವುದು ಕಡಿಮೆಯಾಗುತ್ತದೆ. ಪುರುಷರು ತಮ್ಮ ತಲೆಯನ್ನು ಬೋಳಿಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಇದು ಇಷ್ಟವಾಗದ ಸಲಹೆಯಾಗಿರುತ್ತದೆ.

ಕೋಲ್ಡ್ ಕ್ಯಾಪ್ ಥೆರಪಿ: ನಿಮಗೆ ಚಿಕಿತ್ಸೆ ನೀಡುವಾಗ ಕ್ಯಾಪ್ ಅಥವಾ ಕೋಲ್ಡ್ ಪ್ಯಾಕ್‌ಗಳನ್ನು ಧರಿಸಲು ಸಲಹೆ ಮಾಡಬಹುದು. ಕೂದಲು ಉದುರುವುದನ್ನು ತಪ್ಪಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಕೋಲ್ಡ್ ಪ್ಯಾಕ್ ತಲೆಯಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಕಿಮೊಥೆರಪಿಯ ಔಷಧಿಗಳು ಕೂದಲಿನ ಬುಡಕ್ಕೆ ತಲುಪುವುದನ್ನು ತಡೆಯುತ್ತದೆ.

b.ಚಿಕಿತ್ಸೆ ಅವಧಿಯಲ್ಲಿ:-

  • ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಲು ಹೋಗಬೇಡಿ.
  • ಯಾವಾಗಲೂ ಬೇಬಿ ಶಾಂಪೂವಿನಂತಹ ಮೃದುವಾದ ಶಾಂಪೂವನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

  • ಮೃದುವಾದ ಹೇರ್‌ಬ್ರಷ್ ಅನ್ನು ಬಳಸಿ ಹಾಗೂ ಬಿಗಿಯಾದ ಕ್ಲಿಪ್‌ಗಳನ್ನು ಬಳಸಿ ನಿಮ್ಮ ಕೂದಲಿನ ಸ್ಟೈಲ್ ಅನ್ನು ಮಾಡಬೇಡಿ.
  • ಬಿಸಿಲಿನಲ್ಲಿ ಹೋಗವಾಗ ನಿಮ್ಮ ತ್ವಚೆಗೆ ಸನ್‌ಸ್ಕ್ರೀನ್ ಲೋಶಹ್ ಮತ್ತು ತಲೆಗೆ ಸ್ಕಾರ್ಫ್ ಸುತ್ತಿಕೊಂಡು ಹೋಗುವುದನ್ನು ಮರೆಯಬೇಡಿ.
  • ಒಂದು ವೇಳೆ ನಿಮ್ಮ ಕೂದಲಿನಲ್ಲಿ ಹಕ್ಕಳೆಗಳು ಅಥವಾ ತುರಿಕೆಗಳು ಇದ್ದಲ್ಲಿ, ಅದು ಒಣ ತ್ವಚೆಯನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಎಣ್ಣೆ ಅಥವಾ ಮೊಯಿಶ್ಚರೈಸರ್ ಅನ್ನು ಬಳಸಿ. ಆ್ಯಂಟಿ ಡೆಂಡ್ರಫ್ ಶಾಂಪೂವನ್ನು ಬಳಸಬೇಡಿ.

  • ಕರ್ಲಿಂಗ್, ಸ್ಟ್ರೈಟೆನಿಂಗ್ ಅಥವಾ ಕಲರಿಂಗ್ ಅನ್ನು ಮಾಡಿಸಬೇಡಿ.

c.ಚಿಕಿತ್ಸೆಯ ನಂತರ :-

ನಿಮ್ಮ ಸ್ವಾಭಾವಿಕ ಕೂದಲನ್ನು ಮೃದುವಾಗಿ ತೊಳೆಯಿರಿ, ಬಾಚಿರಿ ಅಥವಾ ಕಲರ್ ಮಾಡಿ. ಏಕೆಂದರೆ ಈ ಕೂದಲುಗಳು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತವೆ:

  • ನಿಮ್ಮ ಕೂದಲನ್ನು ವಾರಕ್ಕೆ ಎರಡು ದಿನ ಮಾತ್ರ ತೊಳೆಯಿರಿ.
  • ತ್ವಚೆಯಲ್ಲಿ ಹಕ್ಕಳೆಗಳು ಹಾಗೂ ಒಣ ತ್ವಚೆಯನ್ನು ನಿವಾರಿಸಿಕೊಳ್ಳಲು ನೀವು ಕೂದಲಿನ ಮಸಾಜ್ ಅನ್ನು ಮಾಡಿಸಿಕೊಳ್ಳಬಹುದು.

ಆತುರಪಡಬೇಡಿ, ನೀವು ಕೂದಲು ಬೆಳೆಯುವುದನ್ನು ನೋಡಲು ಕಾತರದಿಂದ ಇರಬಹುದು. ಆದರೆ ಅದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಆದಿ ಪರಾಶಕ್ತಿಯನ್ನು ನೆನೆಯುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ಆಹಾರದ ಸ್ವಾದ…

  • ರಾಜಕೀಯ

    ಪ್ರದಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಧೈರ್ಯ ಒಂದಿರುವವರು ಯಾರು ಗೊತ್ತ….!

    ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯಲ್ಲಿನ ಪ್ರಶ್ನಾತೀತ ನಾಯಕರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವರ್ಚಸ್ಸನ್ನೇ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಇದರ ಮಧ್ಯೆ ಪ್ರಧಾನಿ ಮೋದಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಮಾತನಾಡುವ ವೇಳೆ, ಪಕ್ಷದಲ್ಲಿ ತಮ್ಮನ್ನು ಎಚ್ಚರಿಸುವ, ಬುದ್ಧಿವಾದ ಹೇಳುವ ಹಾಗೂ ಪ್ರಶ್ನಿಸುವವರು ಯಾರೆಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ನರೇಂದ್ರ ಮೋದಿಯವರು ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಜೊತೆ ಈ ಹಿಂದೆ ತಾವು ಪಕ್ಷದ ಕೆಲಸ ಮಾಡಿದ್ದು,…

  • ಸುದ್ದಿ

    ಕಡಲೆ ತಿನ್ನುವುದರಿಂದ ಗರ್ಭಿಣಿಯರಿಗಿರುವ ಪ್ರಯೋಜನಗಳೇನು ಗೊತ್ತಾ?ತಿಳಿಯಲು ಇದನ್ನೊಮ್ಮೆ ಓದಿ..!

    ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ. ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು…

  • ಸುದ್ದಿ

    ದೇವಸ್ತಾನದಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅನಾರೋಗ್ಯ…!

    ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…

  • ವಿಚಿತ್ರ ಆದರೂ ಸತ್ಯ

    ಈ ವ್ಯಕ್ತಿಯ ಮಹಾ ಸಂಸಾರದ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಕೆಲವೊಂದು ಸಂಗತಿಗಳು ವಿಚಿತ್ರ ಅನಿಸಿದರೂ ಸತ್ಯಕ್ಕೆ ಹತ್ತಿರವಾಗಿರುತ್ತವೆ. ಆದರೆ ಅದೆಲ್ಲದಕ್ಕೂ ಸರಿಯಾದ ಮಾಹಿತಿ ಸಿಕ್ಕ ಮೇಲೆನೇ ಸತ್ಯ ಏನು ಅನ್ನೋದು ಗೊತ್ತಾಗೋದು. ಈ ಸುದ್ದಿಯು ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ನೈಜೀರಿಯಾದ ಈ ವ್ಯಕ್ತಿಗೆ 13 ಜನ ಹೆಂಡತಿಯರಂತೆ ಹಾಗು ಅವರೆಲ್ಲರೂ ಒಮ್ಮೆಲೇ ಗರ್ಭಿಣಿಯರಾಗಿದ್ದರೆ ಅನ್ನೋ ಸುದ್ದಿ ಎಲ್ಲೆಡೆ ಹರಡುತ್ತಿದೆ

  • ಹಣ

    ಇವುಗಳನ್ನು ಪಾಲಿಸಿದ್ರೆ ನೀವೂ ಸಹ ಕೋಟ್ಯಾಧಿಪತಿ ಆಗಬಹುದು!ಹೇಗೆ ಅಂತೀರಾ?ಈ ಲೇಖನಿ ಓದಿ…

    ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು.