ಸಿನಿಮಾ

ಆಟೋ ಚಾಲಕನಿಂದ ಉಪ್ಪಿಗೆ ಬಂದ,ಈ ಪತ್ರದಲ್ಲಿ, ಇದ್ದ ಅಸಲಿ ವಿಷಯ ಏನು ಗೊತ್ತಾ..?ತಿಳಿಯಲು ಈ ಲೇಖನಿ ಓದಿ…

3249

ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.

ಆ ಪತ್ರದಲ್ಲಿ ಏನಿತ್ತು ಗೊತ್ತಾ? ಮುಂದೆ ಓದಿ…

ಗೌರವಾನ್ವಿತ ಉಪೇಂದ್ರರವರಿಗೆ,
ನಾನೊಬ್ಬ ಆಟೋ ಚಾಲಕ. ಬಸವನಗುಡಿಯಲ್ಲಿಯೇ ನಾನು ಆಟೋ ಚಾಲಕನಾಗಿರುವವನು. ನಿಮ್ಮ ಮನೆ ನನ್ನ ಆಟೋ ನಿಲ್ದಾಣಕ್ಕೆ ತೀರಾ ದೂರವಿಲ್ಲ. ನಾನೊಬ್ಬ ಕನ್ನಡದ ಅಭಿಮಾನಿ! ಶಂಕರ್ ನಾಗ್ ಹಾಗೂ ನಿಮ್ಮ ಚಿತ್ರವನ್ನು ಆಟೋದ ಹಿಂದೆ ಮುಂದೆ ಹಾಕಿಕೊಂಡಿದ್ದೇನೆ! ಕಾರಣ ನಿಮ್ಮ ಮೇಲಿನ ಅಭಿಮಾನದಿಂದಷ್ಟೇ.

ಒಟ್ಟಾರೆಯಾಗಿ ಹೇಳಬೇಕೆಂದರೆ ನಾನೊಬ್ಬ ನಿಮ್ಮ ಅಪ್ಪಟ ಅಭಿಮಾನಿ! ನಿಮ್ಮ ಸಿನಿಮಾಗಳನ್ನು ಅದೆಷ್ಟೋ ಸಲ ನೋಡಿದ್ದೇನೆ, ಒಂದೇ ಸಲಕ್ಕೆ ಅರ್ಥವಾಗದಿದ್ದರೂ ಎರಡು ಮೂರನೇ ಸಲ ನೋಡಿ ಅರ್ಥ ಮಾಡಿಕೊಂಡಿದ್ದೇನೆ! ಪೂರ್ತಿಯಾಗಿ ಅರ್ಥಾಗದೇ ಹೋದರೂ ಅದೇನೋ ಖುಷಿಯೊಂದು ನನ್ನಲ್ಲಿರುತ್ತದೆ.

ನೀವು ರಾಜಕೀಯವನ್ನು ‘ಪ್ರಜಾಕೀಯ’ ಮಾಡಲು ಹೊರಟಿದ್ದು ಬಹಳ ಸಂತೋಷವಾಗಿತ್ತು! ಒಬ್ಬ ನಾಯಕ ನಟನಾದ ನೀವು ಹೆಮ್ಮೆಯ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದು ನೋಡಿ ನಮ್ಮ ಕರ್ನಾಟಕಕ್ಕೂ ಒಂದೊಳ್ಳೆಯ ನಾಯಕ ಸಿಗಬಹುದೆಂದು ಅಂದುಕೊಂಡಿದ್ದೆ! ನಿಮ್ಮ ಸುದ್ದಿಗೋಷ್ಠಿ ನೋಡಿದ ಮೇಲೆ ಕೇಳಲೇಬೇಕು ಎಂದೆನಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.

  1. ನಿಮ್ಮ ದೃಷ್ಟಿಯಲ್ಲಿ ಈಗಿರುವ ಪ್ರಜಾಕಾರಣಿ ಯಾರು? ಮತ್ತು ಯಾಕೆ?

2. ನೀವೇ ಹೇಳಿದಂತೆ, ಒಬ್ಬ ಪ್ರಜಾಕಾರಣಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಾರ್ಮಿಕನ ಹಾಗೆ ಕೆಲಸ ಮಾಡಬೇಕು ಎಂದಿರಿ. ಹಾಗಿದ್ದರೆ, ನರೇಂದ್ರ ಮೋದಿಯವರು ಬೆಳಗ್ಗಿನ ಜಾವ 4ರಿಂದ ರಾತ್ರಿ 12ರವರೆಗೂ ಬರೋಬ್ಬರಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಮ್ಮ ದೃಷ್ಟಿಯಲ್ಲಿ ಅವರು ಈ ಯಾವ ‘ಪ್ರಜಾಕಾರಣ’ದ ವರ್ಗಕ್ಕೆ ಸೇರುತ್ತಾರೆ?

3. ನೀವೇ ಹೇಳಿದಂತೆ, ಚುನಾವಣೆಯ ಪ್ರಚಾರಕ್ಕೆ ಫ್ಲೆಕ್ಸು, ಬ್ಯಾನರ್‌ಗಳನ್ನು ಹಾಕಿದರೆ ಸ್ವಚ್ಛ ಭಾರತದ ಕನಸು ಕನಸಾಗುಳಿದುಬಿಡುತ್ತೆ ಎಂದಿರಿ. ಆದರೆ ನಿಮ್ಮ ಯಾವುದೇ ಸಿನಿಮಾಗಳ ಬಿಡುಗಡೆ ನೋಡಿದರೂ ಪಟಾಕಿ, ಬ್ಯಾನರ್, ಪ್ಲೆಕ್ಸುಗಳಿಲ್ಲದೇ ನಡೆಯುವುದೇ ಇಲ್ಲ! ಆಗೆಲ್ಲಿತ್ತು, ಈ ಸ್ವಚ್ಛ ಭಾರತದ ಪರಿಕಲ್ಪನೆ?

ಹೂವಿನ ಹಾರ ಹಾಕುವುದು ತಪ್ಪು ಎನ್ನುವುದು ನಿಮ್ಮ ಸಿದ್ಧಾಂತವಾದರೆ, ನಿಮ್ಮ ಸಿನಿಮಾ ಬಿಡುಗಡೆಗಳಲ್ಲೇ ನಿಮ್ಮ ಅದೆಷ್ಟೋ ಉದ್ದದ ಪ್ರತಿಕೃತಿಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದ್ದನ್ನು ಸ್ವತಃ ನೋಡಿದ್ದೇನೆ. ಸ್ವತಃ ನಿಮಗೂ ಅಭಿಮಾನಿಗಳು ಹಾರ ಹಾಕಿದ್ದಾರೆ! ಆಗ್ಯಾಕೆ, ನೀವು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಲಿಲ್ಲ? ಅದೇ ದುಡ್ಡನ್ನು ಇನ್ನೊಬ್ಬರಿಗೆ ದಾನ ಮಾಡಿ ಎಂದು ಘೋಷಿಸಲಿಲ್ಲ?

4. ಒಬ್ಬ ‘ಖಾಕಿ’ ಹಾಕಿಬಿಟ್ಟರೆ ಆತ ಕಾರ್ಮಿಕ ಹೇಗಾಗುತ್ತಾನೆ ಸ್ವಾಮಿ? ನೀವು ಖಾಕಿಗೆ ಬೆಲೆ ಕೊಡುವವರಾಗಿದ್ದಾರೆ ನಿಮ್ಮ ರೆಸಾರ್ಟಿನಲ್ಲಿ ನೀವು ಪ್ರೆಸ್ ಮೀಟ್ ಮಾಡುತ್ತಿರಲಿಲ್ಲ ಅಲ್ಲವೇ? ಕಾರ್ಮಿಕರಿರುವ ಸಾರ್ವಜನಿಕ ಸ್ಥಳಗಳಲ್ಲಿಯೇ ನಡೆಸುತ್ತಿದ್ದೀರಿ ಅಲ್ಲವೇ?

5. ನೀವೇ ಕೆಲವು ವರ್ಷಗಳ ಹಿಂದೆ ಹೇಳಿದಂತೆ, ನೀವು ರಾಜಕೀಯಕ್ಕೆ ಇಳಿಯುವ ಮುನ್ನ ಮೊದಲು ಕುಟುಂಬವನ್ನು ಆರ್ಥಿಕವಾಗಿ ರಕ್ಷಿಸಿರಬೇಕು, ನ್ಯಾಯ ಒದಗಿಸಿರಬೇಕು ಎಂದಿದ್ದಿರಿ. ಹಲವು ವರ್ಷಗಳ ಹಿಂದೆಯೇ ನೀವು ಮೂರು ಕೋಟಿಯ ಮನೆ ಕಟ್ಟಿಸಿ, ಬೇಕಾದಷ್ಟು ಆಸ್ತಿ ಮಾಡಿ ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿರಿ ಮತ್ತು ನ್ಯಾಯ ಒದಗಿಸಿದಿರಿ. ಹಾಗಾದರೆ, ಬರುವ ಪ್ರತಿಯೊಬ್ಬ ಕಾರ್ಯಕರ್ತನೂ (ಅಥವಾ ಪ್ರಜಾಕೀಯದ ಪ್ರಾಯಕರ್ತನೋ?) ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿ ಪ್ರಾಯ ಮುಗಿದ ನಂತರವೇ ನಿಮ್ಮ ಪಕ್ಷ ಸೇರಿದ್ದಲ್ಲಿ ನಿಮಗೆ ಅಭ್ಯಂತರವಿದೆಯೇ?

6. ಇಷ್ಟು ದಿನವೂ ಸುಮ್ಮನಿದ್ದ ನೀವು ಅಮಿತ್ ಷಾ ಬರುವ ದಿನವೇ ನಿಮ್ಮ ಪ್ರಜಾಕೀಯದ ಪಾದಾರ್ಪಣೆಯನ್ನು ಘೋಷಿಸಿದಿರಿ. ಪರಿಣಾಮ ಅತ್ಯಂತ ಅಗತ್ಯವಾಗಿದ್ದ ಅವರ ಪ್ರವಾಸ ಕಾರ್ಯಕ್ರಮವೊಂದು ಅಂದುಕೊಂಡಷ್ಟು ಯಶಸ್ವಿಯಾಗಲೇ ಇಲ್ಲ. ಈ ಲಾಜಿಕ್ಕುಗಳ ಹಿಂದೆ ನೀವೇ ಇದ್ದದ್ದೋ ಅಥವಾ ಕಾಣದ ಕೈಗಳ ‘ಕೈ’ ಅಡಗಿದೆಯೋ?

7. ಅಚ್ಚರಿಯೆನ್ನಿಸಿದ್ದು ನಿಮ್ಮ ಹಣವಿಲ್ಲದ ಪ್ರಜಾಕೀಯ! ಒಂದು ರುಪಾಯಿ ಹಾಕೊಲ್ಲ, ತೆಗೆಯೊಲ್ಲ ಅಂದಿರಿ. ಆದರೆ, ಚುನಾವಣೆಗೆ ಅದರದೇ ಆದ ಖರ್ಚುಗಳಿದ್ದೇ ಇರುತ್ತದೆ. ಪ್ರಚಾರಕ್ಕೆ, ಪತ್ರಕ್ಕೆ ಇತ್ಯಾದಿ. ಪ್ರಚಾರಕ್ಕೆ ಹಣವೇ ನಾ ನೀಡೋದಿಲ್ಲ ಎಂದಿರಿ. ಮುಂದೆ ಇದಕ್ಕೆ ನೀಡುವ ಹಣ ನಿಮ್ಮ ಕುಟುಂಬದ ಸದೃಢತೆಯದೋ ಅಥವಾ ಯಾರಾದರಿಂದಲೂ ತೆಗೆದುಕೊಳ್ಳುವಿರೋ?

8. ಈ ಹಿಂದೆಯೂ ಕೂಡ ತೆಲುಗಿನ ನಟ ಚಿರಂಜೀವಿ ‘ಪ್ರಜಾರಾಜ್ಯಂ’ ಎಂಬ ಪಕ್ಷ ಸ್ಥಾಪಿಸಿ ನಿಮ್ಮಂತೆಯೇ ತತ್ತ್ವ ಸಿದ್ಧಾಂತಗಳನ್ನು ಮಂಡಿಸಿ, ಎಷ್ಟೋ ಜನರ ತಲೆಕೆಡಿಸಿ, ನಂತರ ತನಗೆ ಸ್ಥಾನ ಸಿಕ್ಕ ನಂತರ ಪರ ಪಕ್ಷಕ್ಕೆ ಹಾರಿ, ಕಾರ್ಯಕರ್ತರನ್ನೆಲ್ಲ ನಡು ನೀರಿನಲ್ಲಿ ಕೈ ಬಿಟ್ಟರು. ನೀವು ಚಿರಂಜೀವಿ, ಕೇಜ್ರಿವಾಲ್ ತರಹ ಮುಂದೆ ಹೀಗೆ ವರ್ತಿಸುವುದಿಲ್ಲವೆಂಬ ಯಾವ ಗ್ಯಾರಂಟಿ?

9. ಪ್ರಜಾಕೀಯ ಕೇವಲ ಪದಗಳ ಆಟವಲ್ಲವಷ್ಟೇ? ರಾಜಕೀಯವನ್ನು ಪ್ರಜಾಕೀಯ ಅಂದ ತಕ್ಷಣ ಚುನಾವಣಾ ವ್ಯವಸ್ಥೆ ಬದಲಾಗದು. ಲೋಕಸಭಾ ಚುನಾವಣೆಯಿಂದ ಗ್ರಾಮಪಂಚಾಯತ್ ವರೆಗೆ ವ್ಯವಸ್ಥೆ ಹಾಗೆಯೇ ಮುಂದುವರಿಯುತ್ತದೆ. ಇದನ್ನು ನೀವು ಹೇಗೆ ಬದಲಾಯಿಸುವಿರಿ?

ನಾನೊಬ್ಬ ಸಾಮಾನ್ಯ ಕಾರ್ಮಿಕ! ನನಗೆ ಈ ಪ್ರಜಾಕೀಯವೆನ್ನುವುದೆಲ್ಲ ತೀರಾ ತಿಳಿಯದ ವಿಷಯಗಳಾದರೂ ಒಂದಷ್ಟು ಸಾಮಾನ್ಯ ಜ್ಞಾನವಂತೂ ಇರುವುದರಿಂದ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಇದಕ್ಕೆ ನಿಮ್ಮಿಂದ ಉತ್ತರವನ್ನೂ ನಿರೀಕ್ಷಿಸುತ್ತಿದ್ದೇನೆ.

ನಿಮ್ಮ ಉತ್ತರಗಳು ಸಮರ್ಪಕವಾಗಿದ್ದರೆ ನಾನು ನನ್ನೆಲ್ಲ ಕೆಲಸ ಕಾರ್ಯಗಳನ್ನೂ ಬಿಟ್ಟು ನಿಮ್ಮ ‘ಸ್ವಚ್ಛ’ ಪ್ರಜಾಕೀಯದ ಪ್ರಚಾರಕ್ಕೆ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತೇನೆ. ನಿಮ್ಮ ಉತ್ತರಗಳು ನಿಮ್ಮ ಸಿನಿಮಾ ನೋಡಿ ಸಿಕ್ಕಿದ ಖುಷಿಯ ಅರ್ಧವಾದರೂ ಇರಲಿ ಎಂಬ ನಂಬಿಕೆ ಅಷ್ಟೇ. ನಿಮಗೆ ಮೇಲ್ ಕೂಡ ಮಾಡಿದ್ದೇನೆ. ಉತ್ತರ ಮೇಲ್‌ನಲ್ಲಿ ಕೊಟ್ಟರೂ ಸರಿಯೇ.
ಕೃಪೆ: ಶಂಕರ ಕಾಳೇಗೌಡ

ಮೂಲ

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಅಕ್ಷಯ ತೃತೀಯ ದಿನದಂದು ಅತೀ ಸುಲಭವಾದ ಈ ನಿಯಮಗಳನ್ನು ತಪ್ಪದೆ ಪಾಲಿಸಿ…

    ವೈಶಾಖ – ಶುಕ್ಲ ತೃಥಿಯವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.ಈ ಬಾರಿ ಮೇ 7 ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗ್ತಿದೆ. ಅಕ್ಷಯ ತೃತೀಯ ಪವಿತ್ರ ದಿನ. ಅಂದು ಮದುವೆ, ಗೃಹ ಪ್ರವೇಶ ಸೇರಿದಂತೆ ಕೆಲ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಅಕ್ಷಯ ತೃತೀಯದಂದು ಮಾಡಿದ ದಾನದ ಫಲ ಎಂದೂ ನಾಶವಾಗುವುದಿಲ್ಲ. ಮುಂದಿನ ಜನ್ಮಕ್ಕೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಈಗ ನಾವು ಹೇಳುವ ಕೆಲಸದಲ್ಲಿ ಎರಡನ್ನು ಮಾಡಿದ್ರೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಸಿಹಿ ಹಾಗೂ ತಣ್ಣನೆ…

  • ಸುದ್ದಿ

    ನಮ್ಮ ನಿಮ್ಮ ಎಲ್ಲ ಪ್ರಶ್ನೆಗೆ ಉತ್ತರಿಸೋ ಗೂಗಲ್ ನ ವಯಸ್ಸು ಎಷ್ಟು ಎಂದು ನಿಮಗೆ ಗೊತ್ತಾ.? ಇಲ್ಲಿದೆ ನೋಡಿ ಡಿಟೇಲ್ಸ್…!!

    ನಿಮಗೆ ಯಾವುದಾದರೂ ಕಾಯಿಲೆ ಬಗ್ಗೆ ಮಾಹಿತಿ ಬೇಕಾ? ಯಾವುದಾದರೂ ಸ್ಥಳದ ವಿಶೇಷತೆ ಹುಡುಕಬೇಕಾ? ವಿಶೇಷ ವ್ಯಕ್ತಿಯ ಬಗ್ಗೆ ಮಾಹಿತಿ ಬೇಕಾ? ಹೀಗೆ ನಿಮ್ಮ ಯಾವುದೇ ಅಗತ್ಯಕ್ಕೆ ತಕ್ಷಣ‌ ಉತ್ತರ ಒದಗಿಸಬಲ್ಲ ಬೆರಳಂಚಿನ ಮಾಂತ್ರಿಕ ಗೂಗಲ್ ಸರ್ಚ್ ಇಂಜಿನ್. ಬಹುಷಃ ಗೂಗಲ್ ಬರೋದಿಕ್ಕೆ ಮೊದಲು ನಮ್ಮ ಪಾಡು ಹೇಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಾಗದಷ್ಟು ದಟ್ಟವಾಗಿ ಗೂಗಲ್ ನಮ್ಮನ್ನು ಆವರಿಸಿದೆ. ಇಂತಹ ಗೂಗಲ್ ಸರ್ಚ್ ಇಂಜಿನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.ಅದಕ್ಕೆ ಗೂಗಲ್ ವಿನೂತನ ಡೂಡಲ್ ಮೂಲಕ ಗೌರವ‌‌ ಸಮರ್ಪಿಸಿದೆ….

  • ಆರೋಗ್ಯ

    “ಅನ್ನ” ತಿನ್ನುವುದಕ್ಕೆ ಮುಂಚೆ ಸ್ವಲ್ಪ ಇದನ್ನು ಓದಿ! ಬೇರೆಯವರೆಗೂ ತಿಳಿಸಿ…..

    ಅಕ್ಕಿ ಯನ್ನು ಉಪಯೋಗಿಸದವರು ಯಾರಿದ್ದಾರೆ ಹೇಳಿ ನೋಡೋಣ, ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿರುವುದನ್ನು ಕೇಳಿರುತ್ತೀರಿ…

  • ಆಧ್ಯಾತ್ಮ, ಜ್ಯೋತಿಷ್ಯ

    ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚುವುದರಿಂದ ಏನಾಗುತ್ತೆ ಗೊತ್ತಾ..!

    ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತು ಶುಭಂ ಕರೋತಿ ಎನ್ನುವ ಸಂಜೆಯ ಪ್ರಾರ್ಥನೆಯನ್ನ ಮಾಡ್ತಿದ್ರು, ಆದ್ರೆ ಈಗಿನ ಮಕ್ಕಳಿಗೆ ಸಂಜೆಯ ಹೊತ್ತು ಟಿ.ವಿ . ನೋಡುವುದಕ್ಕೆ ಸಮಯವಿರುವುದಿಲ್ಲ. ಎಲ್ಲೋ ಹಿಂದೂಗಳು ನಮ್ಮ ಹಿಂದೂ ಸಂಸ್ಕೃತಿ ಇಂದ ಆಚಾರ ಧರ್ಮಗಳಿಂದ ದೂರ ಸರಿಯುತ್ತಿದೇವೆ ಎನ್ನಿಸುತ್ತಿದೆ. ಆಚಾರಧರ್ಮಗಳನ್ನ ಪಾಲಿಸುವುದೇ ಆಧ್ಯತ್ಮೀಕತೆಗೆ ಅಡಿಪಾಯವಾಗಿದೆ. ಸಂಧ್ಯಾ ಕಾಲ ವೆಂದರೆ ಸೂರ್ಯೋದಯಕ್ಕೂ ಮೊದಲು, ಸೂರ್ಯಾಸ್ತದ ನಂತರ ೪೮ ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು  ಕರೆಯಲಾಗುತ್ತದೆ.ಸಂಧ್ಯಾ ಕಾಲ / ಸಂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ಉಚಿತ…

  • ಸುದ್ದಿ

    ತನ್ನ ಸ್ವಂತ ಮನೆಯವರೇ ‘ಮತ’ ಹಾಕಿಲ್ಲವೆಂದು ಕಣ್ಣೀರಿಟ್ಟ ಅಭ್ಯರ್ಥಿ…!

    ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆಯ ಎದುರು ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೆಲ ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲು ವಿಫಲವಾಗಿದೆ. ಇದರ ಮಧ್ಯೆ ಬಹು ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ ಐದು ಮತಗಳನ್ನು ಪಡೆದಿದ್ದಾರೆ. ಆ ಬಳಿಕ ಎಲ್ಲರ ಮನ ಕರಗುವಂತೆ ಅವರು ಕಣ್ಣೀರಿಟ್ಟಿದ್ದು, ಇದರ ನೈಜ ಕಾರಣ ತಿಳಿದ ಸಾರ್ವಜನಿಕರು ದಂಗಾಗಿದ್ದಾರೆ. ಪಂಜಾಬ್ ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಈ…

  • ಸುದ್ದಿ

    ಬಾದಾಮಿಗೂ ಹೊಟ್ಟೆ ಉಬ್ಬರಕ್ಕೂ ಸಂಬಂಧವಿದೆಯೇ …..?

    ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಎಂದಾದರೂ ಪೋಷಕಾಂಷಕಾಂಶಗಳ ಕೊರತೆ ಕಂಡು ಬಂದರೆ ವೈದ್ಯರು ಥಟ್ಟನೆ ಸೂಚಿಸುವುದು ಡ್ರೈ ಫ್ರೂಟ್ಸ್ ಬಳಸಲು . ಏಕೆಂದರೆ ಅವುಗಳಲ್ಲಿರುವಷ್ಟು ಒಟ್ಟು ಪೌಷ್ಟಿಕಾಂಶಗಳು ಬೇರೆಲ್ಲೂ ಅಷ್ಟು ಸುಲಭವಾಗಿ ಸಿಗುವುದಿಲ್ಲ . ಒಣ ದ್ರಾಕ್ಷಿ , ಖರ್ಜೂರ , ಗೋಡಂಬಿ ಮತ್ತು ಬಾದಾಮಿ ಹೀಗೆ . ಒಂದಕ್ಕಿಂತ ಒಂದು ಹೆಚ್ಚು . ಅದರಲ್ಲೂ ಬಾದಾಮಿ ಯಲ್ಲಿ ನ್ಯೂಟ್ರಿಯೆಂಟ್ ಗಳ ಜೊತೆಗೆ ಮೆಗ್ನೀಷಿಯಂ , ವಿಟಮಿನ್ ‘ ಈ ‘ ಮತ್ತು ಫೈಬರ್ ನ ಅಂಶ ಅಗಾಧವಾಗಿದೆ…