Village

ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

27

ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

ಆಶ್ಚರ್ಯ ಅಂದ್ರೆ ಸಿಟಿಗಳಿಗಿಂತಲೂ ವೇಗವಾಗಿ ಹಳ್ಳಿಗಳಲ್ಲಿ ಖಾಯಿಲೆ ಹರಡುತ್ತಿದೆ. ಇದಕ್ಕೆ ಕಾರಣಗಳನ್ನ ಪಟ್ಟಿ ಮಾಡ್ತಾ ಹೋದ್ರೆ ಹಳ್ಳಿ ಜನರ ಬೇಜವಾಬ್ದಾರಿತನ, ಅನಕ್ಷರತೆ, ಮೂಢನಂಬಿಕೆ, ಭಕ್ತಿ, ಭಯ, ಮಾನವೀಯತೆ ಮುಗ್ಧತೆಯಂತ ಹಲವು ಕಾರಣಗಳು ಸಿಕ್ಕುತ್ತವೆ.

ಯಾವೆಲ್ಲಾ ಕಾರಣಗಳಿಂದಾಗಿ ಜನರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಅನ್ನೋದನ್ನ ಒಂದು ಪಟ್ಟಿಯಲ್ಲಿ ನೋಡೋದಾದ್ರೆ..

1) ಹಳ್ಳಿಗಳಲ್ಲಿ ಜನ ಮಾಸ್ಕ್ ಹಾಕೋದೇ ಇಲ್ಲ

2) ಮಾಸ್ಕ್ ಹಾಕಿದ್ರೂ ತಿಂಗಳುಗಟ್ಟಲೇ ತೊಳೆಯಲ್ಲ

3) ಪೊಲೀಸರಿಗೆ ಹೆದರಿ ತೋರಿಕೆಗೆ ಮಾಸ್ಕ್ ಹಾಕ್ತಾರೆ

4) ಮಾಸ್ಕ್ ಸರಿಯಾಗಿ ಹಾಕಲ್ಲ

5) ಸ್ಯಾನಿಟೈಜರ್ ಉಪಯೋಗಿಸುವುದೇ ಇಲ್ಲ

6) ಪದೇ ಪದೇ ಕೈ ತೊಳೆಯುವ ಪದ್ದತಿಯೇ ಇಲ್ಲ

7) ಸ್ನಾನವೂ ಸೇರಿದಂತೆ ಸ್ವಚ್ಛತೆಯ ಬಗ್ಗೆ ಗಮನ ನೀಡದೇ ಇರುವುದು

8) ಸೋಷಿಯಲ್ ಡಿಸ್ಟನ್ಸ್ ಗೆ ಅರ್ಥವೇ ಗೊತ್ತಿಲ್ಲ

9) ಟಂ ಟಂ ವಾಹನ ಗೂಡ್ಸ್ ವಾಹನ, ಟ್ರ್ಯಾಕ್ಟರ್ ಗಳಲ್ಲಿ ಗುಂಪಾಗಿ ಪ್ರಯಾಣ

10) ಹಳ್ಳಿಗಳ ಚಹಾ ಅಂಗಡಿಗಳಲ್ಲಿ ಗುಂಪು ಸೇರೋದು

11) ದೇವಸ್ಥಾನ ಅರಳಿಕಟ್ಟೆಗಳಲ್ಲಿ ಗುಂಪಾಗಿ ಸೇರುವದು

12) ಚಹಾದ ಅಂಗಡಿಗಳಲ್ಲಿ ಗುಂಪು ಸೇರುವದು

13) ಮದುವೆಗೆ 40 ಜನಕ್ಕೆ ಪರವಾನಿಗೆ ತೆಗೆದುಕೊಂಡು ಕದ್ದು ಮುಚ್ಚಿ ನೂರಾರು ಜನ ಸೇರುವುದು

14) ಒಬ್ಬರ ಮನೆಯಲ್ಲಿ ಯಾರಿಗಾದ್ರೂ ಹುಷಾರ್ ಇಲ್ಲಾಂದ್ರೆ ಎಲ್ಲರೂ ಖಾಯಿಲೆ ಬಿದ್ದವರನ್ನು ಮಾತನಾಡಿಸಲು ಹೋಗುವುದು

15) ಕದ್ದು ಮುಚ್ಚಿ ರಾತ್ರೋ ರಾತ್ರಿ ಜಾತ್ರೆ ಪೂಜೆ ಹೋಮ ಹವನ ಮಾಡುವುದು

16) ಕೊರೊನಾ ಹಳ್ಳಿ ಜನಕ್ಕೆ ಬರಲ್ಲ ಅನ್ನೋ ಭ್ರಮೆ

17) ಕೊರೊನಾ ಸಿಟಿಗೆ ಸೀಮಿತವಾದ ಖಾಯಿಲೆ ಅನ್ನೋ ಭ್ರಮೆ

18) ನಾವು ಚೆನ್ನಾಗಿ ದುಡಿತೀವಿ ತಿಂತೀವಿ ನಮಗೆ ಬರಲ್ಲ ಅನ್ನೋ ನಂಬಿಕೆ

19) ಮದ್ಯಪಾನ ಮಾಡಿದ್ರೆ ಕೊರೊನಾ ಬರಲ್ಲ ಅನ್ನೋ ಭ್ರಮೆ

20) ಕೊರೊನಾ ಕೇವಲ ಸರಕಾರ ಹಾಗೂ ಮಾಧ್ಯಮಗಳ ಸೃಷ್ಠಿ ಎಂದುಕೊಂಡಿರುವುದು

21) ದುಡ್ಡು ಹೊಡೆಯಲು ಸರಕಾರ ಇದನ್ನೆಲ್ಲಾ ಮಾಡುತ್ತಿದೆ ಎಂಬ ಸುಳ್ಳು ನಂಬಿಕೆ

22) ವ್ಯಾಕ್ಸಿನ್ ಬಗ್ಗೆ ಇಲ್ಲಸಲ್ಲದ ತಪ್ಪು ತಿಳುವಳಿಕೆಗಳು

23) ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಜ್ವರ ಬರುತ್ತೆ ಮುಂದೆ ಸಾಯ್ತಾರೆ ಅನ್ನೋದು

24) ಕೊರೊನಾದಿಂದ ಶೀತ ಕೆಮ್ಮು ಬಂದ್ರೂ ವೈದ್ಯರ ಬಳಿಗೆ ಹೋಗಲ್ಲ

25) ಕೆಮ್ಮು ಶೀತ ಜ್ವರ ಸಾಮಾನ್ಯ ಖಾಯಿಲೆಗಳು ಎಂಬ ನಂಬಿಕೆ

26) ಗ್ರಾಮದಲ್ಲೇ ಲಭ್ಯ ಇರುವ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು

27) ಕೊರೊನಾ ಟೆಸ್ಟ್ ನಿಂದ ದೂರ ಇರೋದು

28) ಸರಕಾರಿ ಆಸ್ಪತ್ರೆಗೆ ಹೋದ್ರೆ ಕೊರೊನಾ ಟೆಸ್ಟ್ ಮಾಡ್ತಾರೆ

29) ಸರಕಾರಿ ಆಸ್ಪತ್ರೆ, ದೊಡ್ಡ, ಆಸ್ಪತ್ರೆಯಿಂದ ದೂರ ಇರ್ತಾರೆ

30) ಕೆಮ್ಮು ಶೀತಕ್ಕೆಲ್ಲ ಹೆದರಬೇಡ ಎಂಬ ಹಳ್ಳಿಗರ ಮಾತಿಗೆ ಮಣಿಯೋದು

31) ಜ್ವರ ಕೆಮ್ಮು ಉಲ್ಬಣಿಸಿದ್ರೆ ಯಂತ್ರ ಮಂತ್ರ ಬೂದಿ ಪ್ರಯೋಗ

32) ಸೋಷಿಯಲ್ ಮೀಡಿಯಾದ ನಕಲಿ ಹಾಗೂ ಸುಳ್ಳು ವಿಡಿಯೋಗಳ ಮೇಲೆ ಭರವಸೆ ಇಟ್ಟುಕೊಳ್ಳುವದು

33) ದೊಡ್ಡಾಸ್ಪತ್ರೆಗಳಲ್ಲಿ ಕಿಡ್ನಿ ಕಣ್ಣು ಮಿದುಳು ಸೇರಿದಂತೆ ಹಲವು ಅಂಗಾಂಗಗಳನ್ನು ಕದಿಯಲು ವೈದ್ಯರು, ಸರ್ಕಾರ ನಡೆಸಿದ ಹುನ್ನಾರ ಎಂಬ ನಂಬಿಕೆ

34) ಮೃತ ಶರೀರ ಪ್ಯಾಕ್ ಮಾಡಿಕೊಡುವ ಉದ್ದೇಶ ಹಾಗೂ ಯಾರೂ ಮುಟ್ಟದಂತೆ ನೋಡಿಕೊಳ್ಳಲು ಕಾರಣ ಅಂಗಾಂಗಗಳನ್ನ ಕದ್ದಿರ್ತಾರೆ ಎಂದು ಕೊಂಡಿರುವ ಜನ

35) ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಂಡ್ರೆ ನೋಡೋಕೂ ಬಿಡಲ್ಲ, ಒಳಗೆ ಏನ್ ಮಾಡ್ತಾರೆ ಗೊತ್ತೇ ಆಗಲ್ಲ ಎಂದು ವೈದ್ಯರನ್ನೂ ನಂಬದ ಜನ

36) ಕೊರೊನಾ ಪೀಡಿತ ಅಂತ ಗೊತ್ತಿದ್ದರೂ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯದೇ ಇರೋದು

37) ಖಾಯಿಲೆ ಪೀಡಿತನಿಗೆ ಅಸ್ಪಶ್ಯತಾ ಭಾವನೆ ಬರದೇ ಇರಲಿ ಅನ್ನೋ ಕಾರಣಕ್ಕೆ ಅವನನ್ನು ತಮ್ಮ ಬಳಿ ಸೇರಿಸಿಕೊಳ್ಳುವದು

ಇವು ಸಾಮಾನ್ಯವಾಗಿ ಎಲ್ಲಾ ಹಳ್ಳಿಗಳಲ್ಲಿ ಕೊರೊನಾ ಉಲ್ಬಣಗೊಳ್ಳಲು ಪ್ರಮುಖ ಕಾರಣಗಳು ಇನ್ನು ಆಯಾ ಪ್ರದೇಶ ಆಯಾ ಸಂಸ್ಕೃತಿಗಳ ಮೇಲೆ ಕಾರಣಗಳು ಬದಲಾಗ್ತಾ ಹೋಗುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಡುಗೆ ಮಾಡಲು ಹೊಲದಲ್ಲಿ ಕ್ಯಾರೆಟ್ ಕಿತ್ತಾಗ, ಅದರಲ್ಲಿ ಇದ್ದ ವಸ್ತುವನ್ನು ನೋಡಿ ಶಾಕ್ ಆದ ಮಹಿಳೆ.

    ಸ್ವೀಡನ್ ದೇಶಕ್ಕೆ ಸೇರಿದ ಲೀನಾ ಅನ್ನುವ ಮಹಿಳೆ 16 ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಇದ್ದಾಗ ತನ್ನ ಮದುವೆಯ ದಿನ ಗಂಡ ಕೊಡಿಸಿದ್ದ ಅಮೂಲ್ಯವಾದ ವಸ್ತುವನ್ನ ಕಳೆದುಕೊಳ್ಳುತ್ತಾಳೆ. ಇನ್ನು ಅದೂ ವೆಡ್ಡಿಂಗ್ ರಿಂಗ್ ಮತ್ತು ದುಬಾರಿ ಬೆಲೆಯ ವಜ್ರದ ಉಂಗುರ ಆದ್ದರಿಂದ ತುಂಬಾ ಬೇಜಾರು ಮಾಡಿಕೊಂಡು ಕಣ್ಣೀರು ಹಾಕುತ್ತ ಮಕ್ಕಳ ಜೊತೆ ಮನೆಯ ತುಂಬಾ ಹುಡುಕಿದಳು ಲೀನಾ, ಆದರೆ ಎಷ್ಟೇ ಹುಡುಕಿದರೂ ಕೂಡ ಆ ಉಂಗುರ ಮಾತ್ರ ಸಿಗಲೇ ಇಲ್ಲ. ಹೀಗೆ 16 ವರ್ಷ ಕಳೆದ ನಂತರ…

  • ಸುದ್ದಿ

    ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ ಪೈಲ್ವಾನ್ ಕಿಚ್ಚ ಸುದೀಪ್…!

    ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ…

  • ಸುದ್ದಿ

    ಹಾಲಲ್ಲ,ಆಲ್ಕೋಹಾಲ್‍ನಲ್ಲೂ ಕಲಬೆರಕೆ; ಬಾಟಲ್ ಖಾಲಿ ಮಾಡುವಾಗ ಬಯಲಿಗೆ ಬಂದ ಸತ್ಯ..! ಈ ಗಟನೆ ನಡೆದಿದ್ದು ಎಲ್ಲಿ ಗೊತ್ತಾ?

    ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು ಬಾರ್ ಮಾಲೀಕರು…

  • ಜ್ಯೋತಿಷ್ಯ

    ಅರ್ಧನಾರೀಶ್ವರನನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯದಲ್ಲಿ ಏನಿದೆ ಎಂದು ನೋಡಿರಿ

    ಮೇಷ ರಾಶಿ ಭವಿಷ್ಯ (Monday, December 13, 2021) ಇಂದು ನಿಮ್ಮನ್ನು ಆವರಿಸುವ ಭಾವನಾತ್ಮಕ ಮನಸ್ಥಿತಿಯಿಂದ ನೀವು ಹೊರಬರಲು ಬಯಸಿದರೆ ಹಿಂದಿನದ್ದೆಲ್ಲವನ್ನೂ ಮರೆತುಬಿಡಬೇಕು. ಆರ್ಥಿಕ ಜೀವನದ ಸ್ಥಿತಿ ಇಂದು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ, ಇಂದು ನಿಮ್ಮನ್ನು ಉಳಿಸಲು ನಿಮಗೆ ಕಷ್ಟವಾಗಬಹುದು. ಒಂದು ಮಂಕು ಕವಿದ ಮತ್ತು ಒತ್ತಡದ ದಿನದಲ್ಲಿ ಸ್ನೇಹಿತರು ಮತ್ತು ಸಂಗಾತಿ ನಿಮಗೆ ಆರಾಮ ಮತ್ತು ಸಂತೋಷ ತರುತ್ತಾರೆ. ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ…

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗ… ನಿಮ್ಮ ರಾಶಿಯೂ ಇದೆಯಾ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಪ್ರತಿದಿನದಂತೆ ಎಲ್ಲವೂ ಸರಿಯಾಗಿದೆ ಎಂದುಕೊಂಡಾಗಲೇ ಕುತಂತ್ರಿಗಳಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾಕಷ್ಟು ಪೂರ್ವಭಾವಿ ತಯಾರಿ ಮಾಡಿಕೊಂಡೇ ಅವರನ್ನು ಎದುರಿಸಿದಾಗ ಅವರು ಕೇವಲ ಪೇಪರ್‌ ಹುಲಿಗಳೆಂದು…

  • ಸುದ್ದಿ

    ಹೊಸ ವರ್ಷದ ಆರಂಭದಲ್ಲಿ ಮದ್ವೆ ಮಾಡಿಕೊಳ್ಳಬೇಕು ಎಂದಿದ್ದವರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್..!

    2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…