ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ಅನಾಮಿಕ ವ್ಯಕ್ತಿಗಳು ನಮ್ಮ ಮೊಬೈಲ್’ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ.ಅವರು ಯಾರೂ ಎಂದು ನಮಗೆ ತಿಳಿಯುವುದಿಲ್ಲ.ಹಾಗಾಗಿ ನಾವು ಹೆಚ್ಚಾಗಿ ಈಗ ನಮ್ಮ ಮೊಬೈಲ್’ಗಳಲ್ಲಿ ಟ್ರೂ ಕಾಲರ್ ಆ್ಯಪ್’ನ್ನು ಬಳಸುವುದು ಹೆಚ್ಚು.ನಮ್ಮ ಮೊಬೈಲ್ನಲ್ಲಿ ನಂಬರ್ ಸೇವ್ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಮ್ಮ ಮೊಬೈಲ್ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನಾವು ಟ್ರೂ ಕಾಲರ್ ಆ್ಯಪ್ ಅನ್ನು ಮೊಬೈಲ್ಗೆ ಡೌನ್ಲೋಡ್ ಮಾಡಿಕೊಂಡಿರುತ್ತೇವೆ.
ನಿಜ ವಿಷಯ ಏನಪ್ಪಾ ಅಂದರೆ ಅನಾಮಿಕನ ಕರೆ ವಿವರ ನಮಗೆ ಲಭಿಸಿದಷ್ಟೇ ಮಾಹಿತಿ ಕರೆ ಮಾಡಿದವನಿಗೂ ಸಿಗುತ್ತದೆ. ಅಲ್ಲದೇ ನಮ್ಮ ಮೊಬೈಲ್ನಲ್ಲಿನ ಎಲ್ಲಾ ಮಾಹಿತಿ ಸೋರಿಕೆಯಾಗಿ ಮತ್ತೊಬ್ಬರ ಕೈಗೆ ಸಿಗುತ್ತಿದೆ. ಆದರೆ ಅದು ನಮಗೆಗೊತ್ತೇ ಆಗುವುದಿಲ್ಲ. ಹಾಗಾಗಿ ಟ್ರೂ ಕಾಲರ್ ಮೊಬೈಲ್ ಅಪ್ಲಿಕೇಶನ್ ಬಗ್ಗೆ ನಾವು ಎಚ್ಚರದಿಂದಿರುವುದು ಬಹಳ ಸೂಕ್ತ.
ನಮ್ಮ ಮೊಬೈಲ್ ನಲ್ಲಿ ಸೇವ್ ಆಗದೆ ಇರುವ ನಂಬರ್ ಗಳಿಂದ ನಮಗೇನಾದರೂ ಕರೆ ಬಂದರೆ ಕರೆ ಮಾಡಿದವರ ಹೆಸರು, ಮತ್ತು ಅದರಲ್ಲಿರುವ ಇತರ ಮಾಹಿತಿಗಳನ್ನು ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸುತ್ತದೆ. ಅದು ಹೇಗೆ ಅಂತ ಗೊತ್ತಾ? ‘ಟ್ರೂ ಕಾಲರ್ ಗೆ ಈ ಎಲ್ಲಾ ಮಾಹಿತಿಗಳು ಎಲ್ಲಿಂದ ಸಿಗುತ್ತವೆ’ ಎಂಬ ಸುಳಿವು ನಮಗೆ ದೊರೆತಿದೆಯೇ?
ಅವರು ಈ ಮಾಹಿತಿಗಳನ್ನೆಲ್ಲಾ ನಮ್ಮಿಂದಲೇ, ಅಂದರೆ ನಾವು ಯಾರೆಲ್ಲಾ ಟ್ರೂ ಕಾಲರ್ ಆ್ಯಪ್ ಉಪಯೋಗಿಸುತ್ತೀರೋ ಅವರಿಂದಲೇ ಪಡೆದಿರುತ್ತಾರೆ. ಈ ಆ್ಯಪ್ ಅನ್ನು ಉಪಯೋಗಿಸುವ ಮೂಲಕ ನಾವು ನಮ್ಮ ಬಗ್ಗೆ ಮಾಹಿತಿ ಅಷ್ಟೇ ಅಲ್ಲ, ಯಾರೆಲ್ಲ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇವ್ ಆಗಿದ್ದಾರೋ ಅವರ ಬಗ್ಗೆ ಮಾಹಿತಿಯನ್ನೂ ಈ ಸಂಸ್ಥೆಗೆ ನೀಡುತ್ತಿರುತ್ತೀವಿ. ಇಲ್ಲಿ ಓದಿ:-ನಿಮ್ಮ ಸ್ಮಾರ್ಟ್ ಫೋನ್’ನ ಈ 8 ಸೀಕ್ರೆಟ್ ಆಪ್ಷನ್ಸ್’ಗಳು ನಿಮ್ಗೆ ಗೊತ್ತಿದೆಯೇ?
ಟ್ರೂ ಕಾಲರ್ ಆಪ್ ಇನ್ಸ್ಟಾಲ್ ಮಾಡಿದ ನಮ್ಮ ಮೊಬೈಲ್ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.ಇದರಿಂದ ಯಾರಾದರೂ ಒಂದು ಹೆಸರು ಅಥವಾ ನಂಬರ್ ಟ್ರೂ ಕಾಲರ್ ನಲ್ಲಿ ಸರ್ಚ್ ಮಾಡಿದಾಗ ನಮ್ಮ ಮತ್ತು ನಮ್ಮ ಸಂಪರ್ಕದಲ್ಲಿರುವವರ ಮಾಹಿತಿ ಅದೆಷ್ಟೋ ಜನರಿಗೆ ಸುಲಭವಾಗಿ ಸಿಗುತ್ತದೆ. ನಮಗೆ ಇದು ಸರಿ ಎನಿಸುತ್ತದೆಯೇ? ಅವರಲ್ಲಿ ಕೇಳದೇನೆ ನಾವು ನಮ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ತಪ್ಪಲ್ಲವೇ?
ಟ್ರೂ ಕಾಲರ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
ನಾವು ಟ್ರೂ ಕಾಲರ್ ಆ್ಯಪ್ ಅನ್ನು ನಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿದಾಗ ಅದು ಸುಲಭವಾಗಿ ನಮ್ಮ ಫೋನ್ ನಲ್ಲಿರುವ ಪ್ರತಿಯೊಂದು ಕಾಂಟ್ಯಾಕ್ಟ್ ನಂಬರ್ ಮತ್ತು ಇತರ ಮಾಹಿತಿಗಳನ್ನು ತನ್ನ ಸರ್ವರ್ ಗೆ ರವಾನೆ ಮಾಡುತ್ತದೆ. ಯಾರಾದರೂ ಒಂದು ಮೊಬೈಲ್ ನಂಬರ್ ಅಥವಾ ಒಂದು ಹೆಸರನ್ನು ಸರ್ಚ್ ಮಾಡಿದಾಗ ಟ್ರೂ ಕಾಲರ್ ನಮ್ಮಿಂದ ಪಡೆದುಕೊಂಡ ಮಾಹಿತಿಗಳನ್ನು, ನಂಬರ್ ಗಳನ್ನು ಹುಡುಕುವವರಿಗೆ ರಿಸಲ್ಟ್ ಆಗಿ ಕೊಡುತ್ತದೆ. ಟ್ರೂ ಕಾಲರ್ ಕೆಲಸ ಮಾಡುವುದೇ ಹೀಗೆ… ಪ್ರಪಂಚಾದಾದ್ಯಂತ ಇರುವ ಎಲ್ಲಾ ಫೋನ್ ನಂಬರ್ ಗಳನ್ನು, ಹೆಸರು ಸಮೇತ ಪಡೆದುಕೊಂಡು ಅದನ್ನೇ ಇನ್ನೊಂದು ರೂಪದಲ್ಲಿ ನಮಗೆ ಒದಗಿಸುತ್ತದೆ.
ನಾವು ಟ್ರೂ ಕಾಲರ್ ಆ್ಯಪ್ ನಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಮಾಡದೇ ಇದ್ದರೂ, ನಾವು ಟ್ರೂ ಕಾಲರ್ ವೆಬ್ ಸೈಟ್ ನಲ್ಲಿ ಯಾವುದಾದರೂ ಹೆಸರು ಮತ್ತು ನಂಬರ್ ಹುಡುಕಲು ಹೋದರೆ ಅದು ನಮ್ಮನ್ನು ಫೇಸ್ ಬುಕ್, ಗೂಗಲ್, ಯಾಹೂ ಅಥವಾ ಮೈಕ್ರೋಸಾಫ್ಟ್ ಖಾತೆಗಳ ಮೂಲಕ ಸೈನ್ ಇನ್ ಆಗಲು ಸೂಚಿಸುತ್ತದೆ. ಯಾಕೆಂದರೆ ಹೆಚ್ಚಿನ ಜನರು ತಮ್ಮ ಫೋನ್ ನಂಬರ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುತ್ತೇವೆ. ಹೀಗೆ ನಾವು ನಮ್ಮ ಸಾಮಾಜಿಕ ಪ್ರೊಫೈಲ್ ಗಳ ಮೂಲಕ ಟ್ರೂ ಕಾಲರ್ ವೆಬ್ ಸೈಟ್ ಗೆ ಹೋದಾಗ ಅದು ನಮ್ಮ ಮತ್ತು ನಿಮ್ಮ ಗೆಳೆಯರ ನಂಬರ್ ಮತ್ತು ಹೆಸರುಗಳನ್ನೂ ಕಸಿದುಕೊಳ್ಳುತ್ತದೆ.
ಯಾಕೆ ಉಪಯೋಗಿಸಬಾರದು?
ಈ ಆ್ಯಪ್ ಅನಗತ್ಯ ಸ್ಪ್ಯಾಮ್ ಕಾಲ್ ಗಳನ್ನು ತಡೆಗಟ್ಟುವುದು ತಮ್ಮ ಪ್ರಥಮ ಕೆಲಸ ಎಂದು ಹೇಳಿಕೊಳ್ಳುತ್ತದೆ. ಆದರೆ ನಿಜವಾದ ವಿಷಯ ಏನೆಂದರೆ, ಈ ಆ್ಯಪ್ ಬಳಸಿದರೆ, ಅನಗತ್ಯ ಕರೆಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಆ್ಯಪ್ ಬಳಸದೇ ಇದ್ದರೂ ನೀಮಗೆ ಅಪರಿಚಿತ ಕರೆ ಬರುತ್ತಿದ್ದರೆ, ನಿಮ್ಮ ಕಾಲ್ ಲಿಸ್ಟ್ ನಲ್ಲಿರುವ ಗೆಳೆಯರು ಈ ಆ್ಯಪ್ ಬಳಸುತ್ತಿದ್ದಾರೆ. ಅದು ಪರಿಣಾಮ ಇದು ಎಂದು ನೀವು ಅರಿತುಕೊಳ್ಳಬೇಕು.
ನಾವೇನು ಮಾಡಬೇಕು?
ನಿಮ್ಮ ಮಾಹಿತಿಯನ್ನು ಆದಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಷೇರ್ ಮಾಡದೆ ಗುಪ್ತವಾಗಿಡುವುದು ಸುರಕ್ಷಿತ ವಿಧಾನ.ನೀವು ಅಂತರ್ಜಾಲದಲ್ಲಿ ಏನೆಲ್ಲಾ ಮಾಹಿತಿ ಹಾಕುತ್ತೀರೋ ಅದೆಲ್ಲಾ ಸಾರ್ವಜನಿಕವಾಗಿ ತಕ್ಷಣ ಅಥವಾ ಸ್ವಲ್ಪ ತಡವಾಗಿಯಾದರೂ ಬಹಿರಂಗವಾಗುತ್ತದೆ ಎಂದು ನೆನಪಿರಲಿ.
ಇಷ್ಟೆಲ್ಲಾ ತಿಳಿದ ಮೇಲೆ ನಿಮಗೇನಾದರೂ ಟ್ರೂ ಕಾಲರ್ ಆ್ಯಪ್ ನಿಂದ ಹೊರ ಬರಬೇಕು ಅನಿಸಿದರೆ, ತಡಮಾಡಬೇಡಿ ಟ್ರೂ ಕಾಲರ್ ಆ್ಯಪ್ ಗೆ ಹೋಗಿ ಅನ್-ಲಿಸ್ಟ್ ಗೆ ಕ್ಲಿಕ್ ಮಾಡಿ. ಅಷ್ಟೇ! ನೀವು ಅಲ್ಲಿಂದ ಹೊರ ಬಂದಾಯ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಭಾನುವಾರ , 25/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಮುಂದಿನ ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೊಳಿಸಿದೆ. ರೈತರಿಗೆ ಕೃಷಿ ಕಾರ್ಯಗಳಿಗೆ ಯಂತ್ರಗಳನ್ನು ಬಾಡಿಗೆಗೆ ನೀಡಲು ಕೃಷಿ ಸಚಿವಾಲಯ ಸಿ.ಹೆಚ್.ಸಿ. ಫಾರ್ಮ್ ಮೆಷಿನರಿ ಆಪ್ ಪರಿಚಯಿಸಿದೆ. ಇದರ ಮೂಲಕ ರೈತರು ಕೃಷಿ ಉಪಕರಣ ಬಾಡಿಗೆ ಪಡೆಯಬಹುದಾಗಿದೆ. ಕೃಷಿ ಕೇಂದ್ರಗಳಿಂದ 50 ಕಿಲೋಮೀಟರ್ ದೂರದಲ್ಲಿನ ಪ್ರದೇಶಗಳಿಗೆ ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. 12 ಭಾಷೆಗಳಲ್ಲಿ ಆಪ್ ಮಾಹಿತಿ ನೀಡಲಿದೆ. ರೈತರು ತಮಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ…
ಕುಟುಂಬದ ಆರ್ಥಿಕ ಸಂಕಷ್ಟವನ್ನು ತೀರಿಸಿಕೊಳ್ಳಲು ಕೆಲವರು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಕ್ಕೆ ಬರುತ್ತಾರೆ. ಸಮಾಜಕ್ಕೆ ಏನಾದರೂ ಒಳಿತು ಮಾಡುವ ಉದ್ದೇಶದಿಂದ ಕೆಲವರು ಹಾಟ್ ಸೀಟ್ಮೇಲೆ ಕೂರುತ್ತಾರೆ. ವಿದ್ಯಾಭ್ಯಾಸಕ್ಕೆ ಸಹಾಯ ಆಗಲಿ ಎಂದೂ ಕೆಲವರು ಪುನೀತ್ ರಾಜ್ ಕುಮಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಂಥದ್ರಲ್ಲಿ, ಇವರೆಲ್ಲರಿಗಿಂತಲೂ ಕೊಂಚ ವಿಭಿನ್ನವಾಗಿ ಕಂಡಿದ್ದು ಮನೋಜ್ ಎಂಬ ಯುವಕ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ತಂದೆಗೆ ಸಹಾಯ ಮಾಡಬೇಕು ಎಂಬ ಇಚ್ಛೆಏನೋ ಮನೋಜ್ ಗಿದೆ. ಆದ್ರೆ,ಅದಕ್ಕಿಂತ ಹೆಚ್ಚಾಗಿ ತಾನು ಮುಟ್ಟಾಳ ಅಲ್ಲ ಎಂಬುದನ್ನ…
ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು…
ಅಪ್ಪಿತಪ್ಪಿಯೂ ಈ ನಾಲ್ಕು ಆಹಾರ ಸೇವಿಸಬೇಡಿ,ಕಿಡ್ನಿ ಸ್ಟೋನ್ ಗ್ಯಾರೆಂಟಿ.ಈಗಲೆ ನೋಡಿ. ನಮಸ್ಕಾರ ವೀಕ್ಷಕರೇ ಕೆಲವೊಂದು ಆಹಾರ ಪದಾರ್ಥಗಳನ್ನು ತಿಂದರೆ ಕಿಡ್ನಿ ಸ್ಟೋನ್ ಆಗುತ್ತದೆ ಮಾಹಿತಿಯನ್ನು ತಿಳಿದುಕೊಳ್ಳೋಣ ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಇವು ರಕ್ತವನ್ನು ಹಾಳು ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ ಮೂತ್ರದ ಮೂಲಕ ವರ ಹಾಕಿ ಆಹಾರಗಳ ಸಮತೋಲನವನ್ನು ಕಾಪಾಡುತ್ತವೆ ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಪಟಿಕ ರೂಪದಲ್ಲಿ ಮಾರ್ಪಟ್ಟು ಗಣವನ್ನು ವಸ್ತುವಾಗಿ ಪರಿವರ್ತನೆಯಾಗುತ್ತದೆ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿಸ್ಟೋನ್…
ಪ್ರಕೃತಿಯ ಅನೇಕ ಸುಂದರವಾದ ಉಡುಗೊರೆಗಳಲ್ಲಿ ಸೂರ್ಯೋದಯ-ಸೂರ್ಯಾಸ್ತದ ಸೊಬಗು ತುಂಬಾ ಅದ್ಭುತ.ಈ ಸೂರ್ಯೋದಯ-ಸೂರ್ಯಾಸ್ತವನ್ನು ನೋಡುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಈ ಸೌಂದರ್ಯ