ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಬ್ದದ ವೇಗಕ್ಕಿಂತ 2ಪಟ್ಟು ಸ್ಪೀಡಾಗಿ ಚಲಿಸುವ ಈ ವಿಮಾನ 1969 ರಿಂದ 2003 ರವರೆಗೆ ನಿರಂತರವಾಗಿ ಲಕ್ಷಾಂತರ ಜನ ಪ್ರಯಾಣಿಕರನ್ನ ಸುರಕ್ಷಿತವಾಗಿ ಅತಿ ಬೇಗನೆ ತಲುಪಿಸುವಂತಹ ಕೆಲಸವನ್ನು ಮಾಡಿದ ಈ ವಿಮಾನ ಈಗ ಮ್ಯೂಸಿಯಂಯೊಂದರಲ್ಲಿ ಕೇವಲ ಒಂದು ಬೊಂಬೆಯಾಗಿ ನೋಡುವುದಕ್ಕೆ ಕಾಣಲು ಸಿಗುತ್ತದೆ.

1969ರಲ್ಲಿ ರಾಯಲ್ ಏರ್ಕ್ರಾಫ್ಟ್ ಎಸ್ಟಾಬ್ಲಿಷ್ಮೆಂಟ್ ಅಂದರೆ RAE ಡೈರೆಕ್ಟರ್ ಆದ ಅರ್ನಾಲ್ಡ್ ಎಂಬ ವ್ಯಕ್ತಿ ಕಾನ್ ಕಾರ್ಡ್ ಸೂಪರ್ ಸೋನಿಕ್ ಅನ್ನುವ ಒಂದು ಕಾನ್ಸೆಪ್ಟ್ ನನ್ನು ತನ್ನ ತಂಡದ ಮುಂದೆ ಇಡುತ್ತಾರೆ. ಅವರ ಉದ್ದೇಶವೇನೆಂದರೆ ಈ ಪ್ರಪಂಚದಲ್ಲಿ ಎಲ್ಲಾ ವಿಮಾನಗಳಿಗಿಂತ ಅತ್ಯಂತ ವೇಗವಾಗಿ ಚಲಿಸುವ ವಿಮಾನವೊಂದನ್ನು ಪ್ರಯಾಣಿಕರಿಗೆ ಹೇಗಾದರೂ ಮಾಡಿ ನಾವು ಒದಗಿಸಬೇಕೆಂಬುದು ಅವರ ಆಸೆಯಾಗಿತ್ತು. ಇನ್ನು ಅವರ ಆಸೆಯಂತೆ ಒಂದು ವಿಮಾನ ಸಿದ್ಧವಾಗಿತ್ತು. ಗಾಳಿಯಲ್ಲಿ ಶಬ್ದದ ವೇಗ ಗಂಟೆಗೆ 1,235 ಕಿ.ಮೀ ಇರುತ್ತದೆ. ಆದರೆ ಇವರು ಸಿದ್ಧಪಡಿಸಿದ ಕಾನ್ ಕಾರ್ಡ್ ವಿಮಾನ ಗಂಟೆಗೆ 2,170 ಕಿ.ಮೀ. ಚಲಿಸುವಂತಹ ಸಾಮರ್ಥ್ಯವನ್ನ ಹೊಂದಿತ್ತು. ಅಂದರೆ ಶಬ್ದದ ವೇಗಕ್ಕಿಂತ 2 ಪಟ್ಟು ಜಾಸ್ತಿ. ಆದರೆ ಆ ಕಾಲಕ್ಕೆ ಆ ಒಂದು ವಿಮಾನ ಸಿದ್ಧ ಹೊಂದುವುದಕ್ಕೆ ಖರ್ಚಾದ ಹಣ ಭಾರಿ ಮೊತ್ತದು.

ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 1200 ಕೋಟಿ ರೂಪಾಯಿ ಖರ್ಚಾಗಿತ್ತು.ಇನ್ನೂ ಈ ಒಂದು ವಿಮಾನ ಹೆಚ್ಚಾಗಿ ಸಮುದ್ರ ಮಾರ್ಗದಲ್ಲೇ ತನ್ನ ಪ್ರಯಾಣವನ್ನು ಬೆಳೆಸುತ್ತಿತ್ತು. ಏಕೆಂದರೆ ಈ ಒಂದು ವಿಮಾನದಿಂದ ಬರುತ್ತಿದ್ದಂತಹ ಶಬ್ದ ಭಾರಿ ಶಬ್ದವಾಗಿತ್ತು. ಇನ್ನು ಈಗಿರುವ ವಿಮಾನಗಳು 30ರಿಂದ 38 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತವೆ. ಆದರೆ ಈ ಒಂದು ವಿಮಾನ ಅತ್ಯಂತ ವೇಗವಾಗಿ ಚಲಿಸುವುದಕ್ಕೆ ಸುಮಾರು 60 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು. ಇನ್ನೂ ಆಗಿನ ಕಾಲಕ್ಕೆ ಈ ಒಂದು ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಈಗಿನ ಟೀಕೆಟ್ ಗಳ ದರ ಏನ್ನಿದೆ ಅದರ 30 ರಿಂದ 40 ಪಟ್ಟು ಹೆಚ್ಚು ಹಣವನ್ನ ಕೊಡಬೇಕಾಗಿತ್ತು.

ಏಕೆಂದರೆ ಆಗಿನ ಕಾಲದಲ್ಲೇ ಇದರಲ್ಲಿ ಲಂಡನ್ನಿಂದ ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಬೇಕೆಂದರೆ ಸುಮಾರು 7 ಸಾವಿರಕ್ಕೂ ಹೆಚ್ಚು ಡಾಲರ್ ಹಣವನ್ನು ಕೊಡಬೇಕಾಗಿತ್ತು.ಅಂದರೆ ನಮ್ಮ ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ ಸುಮಾರು 5ಲಕ್ಷ ರೂಪಾಯಿ ಆಗುತ್ತದೆ.ಮತ್ತೆ ಈ ಒಂದು ವಿಮಾನದ ಮೇಂಟೆನೆನ್ಸ್ ತುಂಬಾ ಕಷ್ಟವಾದ್ದರಿಂದ ಆರ್ಥಿಕವಾಗಿ ಈ ಒಂದು ವಿಮಾನ ಹೆಚ್ಚಿನ ಲಾಭವನ್ನು ಮಾಡಲಿಲ್ಲ. 1969 ರಿಂದ ಬೇರೆ ವಿಮಾನಗಳಿಗೆ ಹೋಲಿಸಿದರೆ ಈ ಒಂದು ವಿಮಾನದಲ್ಲಿ ಯಾವುದೇ ರೀತಿಯ ಪ್ರಾಣಹಾನಿಗಳಾಗಿರುವ ಘಟನೆ ನಡೆದ್ದಿಲ್ಲ. ಆದರೆ ಜುಲೈ 25,2000ನೇ ಇಸವಿಯಲ್ಲಿ ಜರುಗಿದ ಈ ಘಟನೆ ಕಾನ್ ಕಾರ್ಡ್ ವಿಮಾನವನ್ನ ಇತಿಹಾಸ ಸೇರಿಕೊಳ್ಳುವಂತೆ ಮಾಡಿತು. ಅವತ್ತಿನ ದಿನ ಟೇಕಾಫ್ ಆಗುವಂತ ಸಮಯದಲ್ಲಿ ಈ ಒಂದು ವಿಮಾನ ಕ್ರ್ಯಾಶ್ ಆಗಿ ಸುಮಾರು 113 ಜನ ಸಾವನ್ನಪ್ಪಿದ್ದರು. ಈ ಘಟನೆಯಾದ ನಂತರ ಆ ವಿಮಾನ ಮತ್ತೆ ಕಾಣಿಸಿಕೊಳ್ಳಲಿಲ್ಲ.

ಮತ್ತೆ ಕೆಲವೊಂದು ಸೇಫ್ಟಿಗಳೊಂದಿಗೆ 2001ರಲ್ಲಿ ಮತ್ತೆ ತನ್ನ ಸೇವೆಯನ್ನ ಆರಂಭಿಸಿದರು 2003ರ ಹೊತ್ತಿಗೆ ಬ್ರಿಟಿಷ್ ಏರ್ ವೇಸ್ ಇದರವೊಂದು ಸೇವೆಯನ್ನ ನಿಲ್ಲಿಸಿತು. ಕಾನ್ ಕಾರ್ಡ್ ವಿಮಾನ ತಂತ್ರಜ್ಞಾನದಲ್ಲಿ ಒಂದು ಅದ್ಭುತ ವಿಮಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವೊಂದು ವಿಮಾನಕ್ಕೆ ಬೇಕಾದಂತಹ ಎನರ್ಜಿ ಮತ್ತೆ ಇವೊಂದು ವಿಮಾನವನ್ನ ಚಲಾಯಿಸಲು ಬೇಕಾದಂತಹ ಇಂಧನ ಇವೆಲ್ಲವನ್ನು ಮೇನ್ಟೇನ್ ಮಾಡುವುದು ತುಂಬಾ ಕಷ್ಟವಾಗಿತ್ತು. ಇಂಧನದ ಬೆಲೆ ಕೂಡ ಹೆಚ್ಚಾಗುತ್ತಿದ್ದುದರಿಂದ ಇದರ ಮೇಂಟೆನೆನ್ಸ್ ತುಂಬಾ ಕಷ್ಟ ಆಗಿತ್ತು. ಆದ್ದರಿಂದ ಬ್ರಿಟಿಷ್ ಏರ್ವೇಸ್ ಇದರ ಸೇವೆಯನ್ನು ನಿಲ್ಲಿಸಿತು. ಈ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವಂತಹ ವಿಮಾನ ಈಗ ಇತಿಹಾಸ ಸೇರಿಕೊಂಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ನಿಮಿಷ ಸಮಯ ಮಾಡಿಕೊಂಡು ಓದಿ, ಅಮ್ಮನ ಬಗ್ಗೆ 2 ಸಾಲುಗಳು ಪ್ರತಿ ತಾಯಿಯೂ ತನ್ನ ಹೆಣ್ಣುಮಗುವಿನಲ್ಲಿ ತನ್ನ ಬಾಲ್ಯವನ್ನು ಕಂಡು ಸಂತಸಪಡುವವಳು.
ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ. ಪ್ರಸ್ತುತ, ರಾಜಸ್ಥಾನದ ಜೈಪುರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಗಳನ್ನು ಕಾಣಬಹುದಾಗಿದ್ದು, ಜೈಪುರದಲ್ಲಿರುವ ಜಂತರ್ ಮಂತರ್ ದೊಡ್ಡ ಹಾಗೂ ಹೆಚ್ಚು ಹೆಸರುವಾಸಿಯಾಗಿದೆ. ರಜಪೂತ್ ದೊರೆ ಸವಾಯ್ ಜೈಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಗಳನ್ನು ಈತ ನಿರ್ಮಿಸಿದ್ದಾನೆ. ದೆಹಲಿ ಹಾಗೂ ಜೈಪುರ ಹೊರತುಪಡಿಸಿ ಮಥುರಾ, ವಾರಣಾಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಗಳನ್ನು ಜೈಸಿಂಗನು ನಿರ್ಮಿಸಿದ್ದು ಸುಮಾರು 1724 ರಿಂದ 1735…
ದಕ್ಷಿಣ ಭಾರತದ ಪ್ರಮುಖ ಬ್ರೇಕ್ಫಾಸ್ಟ್ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.
ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ
ಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವು. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ.ಈ ವೈಜ್ಞಾನಿಕ ಜ್ಞಾನವನ್ನೇ ಸಂಪ್ರದಾಯದ ಹೆಸರಿನಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿಯಬಿಡಲಾಗಿದೆ ಸಾಮಾನ್ಯ ಜನರಿಗೆ ಈ ಆಚರಣೆಗಳ ಹಿಂದಿನ ವಿಜ್ಞಾನದ ಅರಿವು ಇಲ್ಲವಾದರೂ, ಅವರಿದನ್ನು ನಂಬಿಕೆಯ ತಳಹದಿ ಮೇಲೆ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಂಥ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆಗಳನ್ನಿಲ್ಲಿ ಕೊಡಲಾಗಿದೆ. ನಾಣ್ಯಗಳನ್ನು ನದಿಗೆಸೆಯುವುದು : ನಾಣ್ಯಗಳನ್ನುದೇವಸ್ಥಾನದ ಸಮೀಪದ…
ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ. ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.