ಉಪಯುಕ್ತ ಮಾಹಿತಿ, ನೀತಿ ಕಥೆ

ಕೋತಿಯಿಂದ ಶ್ರೀಮಂತನಾದ. ನಿಜಕ್ಕೂ ರೋಚಕ ಕಥೆ.!

146

ಹಣಗಳಿಸುವುದಕ್ಕೆ ಶಕ್ತಿಯೊಂದಿದ್ದರೆ ಸಾಕಾಗುವುದಿಲ್ಲ, ಯುಕ್ತಿಯೂ ಇರಬೇಕು. ತಮ್ಮ ಕಠಿಣ ಪರಿಶ್ರಮದೊಂದಿಗೆ ಚಾಣುಕ್ಯ ತನವಿದ್ದರೆ, ಹಣಗಳಿಸುವುದರ ಜೊತೆ ಹೆಸರನ್ನು ಕೂಡ ಸಂಪಾದಿಸಬಹುದು! ಹೀಗೆ ಒಬ್ಬ ವ್ಯಕ್ತಿ ಹಳ್ಳಿಯ ಜನರ ಮನಸ್ಥಿತಿಯನ್ನು ಅರಿತು ಅವರಿಂದ ಹೇಗೆ ಹಣವನ್ನು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಮುಂದೇ ಓದಿ.. ಇದನ್ನು ಮೋಸ ಎನ್ನಬೇಕಾ? ಅಥವಾ ಅವನ ಚಾಣಕ್ಷತನ ಎನ್ನಬೇಕಾ? ನೀವೇ ನಿರ್ಧರಿಸಿ !

ಚಿಕ್ಕದೊಂದು ಹಳ್ಳಿ, ಅಲ್ಲಿಯ ಜನತೆಗೆ ಕೃಷಿಯೆ ಬಂಡವಾಳ, ಬಾಳೆ, ತೆಂಗು, ಮಾವು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿರುತ್ತಾರೆ, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ನೆಮ್ಮದಿಯಿಂದ ಬದುಕುವ ಸಂದರ್ಭದಲ್ಲಿ ಆ ಹಳ್ಳಿಗೆ ಕೋತಿಗಳ ದಂಡೆ ಬಂದು ಸೇರುತ್ತವೆ, ದಿನದಿಂದ ದಿನಕ್ಕೆ ಕೋತಿಗಳ ಹಾವಳಿ ಜಾಸ್ತಿಯಾಗುತ್ತಾ ಹೋಗುತ್ತದೆ, ರೈತರು ಬೆಳೆದಿದ್ದ ಎಳನೀರುಗಳನ್ನು ಕುಡಿದು, ಮಾವು ಮತ್ತು ಬಾಳೆಗಳನ್ನು ಚಪ್ಪರಿಸಿ ತಿನ್ನುತ್ತಾ ರೈತರ ಬೆಳೆಗಳನ್ನು ನಾಶ ಮಾಡುತ್ತಿರುತ್ತವೆ.. ಅಂಜನೇಯ ಎಂದು ಪೂಜಿಸುವ ಮಂಗಗಳು, ಆ ಹಳ್ಳಿಯ ಜನತೆಗೆ ರಾವಣನಂತಾಗಿರುತ್ತವೆ!

ಮಂಗಗಳ ಚೇಷ್ಟೆಗೆ ಹಳ್ಳಿಯ ಜನತೆ ಬೇಸತ್ತಿರುತ್ತಾರೆ, ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳಿಗೆ ಮತ್ತು ರಾಜಕೀಯ ನಾಯಕರಿಗೆ ದೂರು ನೀಡಿದ್ದರು, ಅವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ಅವರ ಸಹಾಯಕ್ಕೆ ಯಾರು ಬರುವುದಿಲ್ಲ. ಹಳ್ಳಿಯ ಮಂದಿ ನಮ್ಮನ್ನು ರಕ್ಷಿಸಲು ಯಾರು ಇಲ್ಲವೇ ಎಂದು ದೇವರ ಬಳಿ ಕೇಳಿಕೊಳ್ಳುವ ಸಂದರ್ಭದಲ್ಲಿ, ನಗರದಿಂದ ಸುಶಿಕ್ಷಿತ ವ್ಯಕ್ತಿಯೊಬ್ಬ ಆ ಹಳ್ಳಿಗೆ ಬಂದು ಸೇರಿಕೊಳ್ಳುತ್ತಾನೆ. ದಿನಗಳುರುಳಿದಂತೆ ಆ ಹಳ್ಳಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಾನೆ..

ನಂತರ ಹಳ್ಳಿಯ ಜನರೆನೆಲ್ಲಾ ಪಂಚಾಯಿತಿ ಕಟ್ಟೆ ಸೇರಿಸಿ, ನಿಮ್ಮ ಊರಿನಲ್ಲಿ ಆಗುತ್ತಿರುವ ಸಮಸ್ಯೆಯನ್ನು ತಡೆಯಲು ನನ್ನನ್ನು ಅಧಿಕಾರಿಗಳು ಕಳುಹಿಸಿದ್ದಾರೆ, ಅದುದರಿಂದ ನಾನು ಬಂದಿದ್ದೇನೆ, ನನ್ನೊಟ್ಟಿಗೆ ಯಾರು ಬಂದಿಲ್ಲ, ಒಬ್ಬನೇ ಬಂದಿದ್ದೇನೆ, ನಿಮ್ಮ ಸಮಸ್ಯೆಯನ್ನು ತೀರಿಸುವ ಜೊತೆಗೆ ಒಂದಿಷ್ಟು ಹಣವನ್ನು ಗಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇನೆ, ಎಂದು ನಗರದ ಸುಶಿಕ್ಷಿತ ವ್ಯಕ್ತಿ ಹೇಳುತ್ತಾನೆ.. ಇವನ ಮಾತನ್ನು ಕೇಳಿದ ಹಳ್ಳಿಯ ಜನತೆ ಬಹಳ ಖುಷಿಯಾಗುತ್ತಾರೆ !

ನಿಮ್ಮ ಊರಿನಲ್ಲಿ ಕೋತಿಗಳ ದಂಡೆ ಇದೆ, ಆ ಕೋತಿಗಳು ನನಗೆ ಬೇಕು, ಅವುಗಳಿಂದ ನಮಗೆ ಉಪಯೋಗಗಳಿವೆ, ಆದುದರಿಂದ ನಿಮಗೆಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಡುತ್ತೇನೆ, ನೀವೆಲ್ಲಾ ಒಟ್ಟುಗೂಡಿ ಕೋತಿಗಳನ್ನು ಹಿಡಿದುಕೊಂಡು ನನಗೆ ತಂದು ಕೊಡಿ, ಒಂದು ಕೋತಿಗೆ 20 ರೂಪಾಯಿಯಂತೆ ನಿಮಗೆ ಪಾವತಿಸುತ್ತೇನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಹಳ್ಳಿಯವರು, ಆಶ್ಚರ್ಯ ಮತ್ತು ಖುಷಿಯಿಂದ ಕೋತಿಗಳನ್ನು ಹಿಡಿಯಲು ಮುಂದಾಗುತ್ತಾರೆ..

ಅಂತೆಯೇ ಹಗಲು ರಾತ್ರಿಯೆಂದು ಲೆಕ್ಕಿಸಿದೇ, ಗೌಪ್ಯವಾಗಿ ಕಾಯುತ್ತಾ, ಹೊಲದಲ್ಲೆಲ್ಲಾ ಒದ್ದಾಡಿ ಸಾಕಷ್ಟು ಕೋತಿಗಳನ್ನು ಹಿಡಿದು ಆತನಿಗೆ ತಂದು ಕೊಟ್ಟು, ಅವನ ಮಾತಿನಂತೆ ತಲಾ ಒಂದು ಕೋತಿಗೆ 20ರೂ ಅಂತೆ ಪಡೆದುಕೋಳ್ಳುತ್ತಾರೆ, ಹಳ್ಳಿಯಲ್ಲಿ ಶೇಕಡ 70 ಭಾಗದಷ್ಟು ಕೋತಿಗಳನ್ನು ಸೆರೆಹಿಡಿಯಲಾಗಿರುತ್ತದೆ, ಇನ್ನುಳಿದ ಕೋತಿಗಳು ಸ್ವಲ್ಪ ಬುದ್ದಿವಂತ ಕೋತಿಗಳು, ಯಾರ ಕೈಗೂ ಸಿಗುತ್ತಿರಲಿಲ್ಲ.. ಮತ್ತೇ ಆ ವ್ಯಕ್ತಿ ಪಂಚಾಯಿತಿ ಸೇರಿಸಿ, ನೋಡಿ ಇನ್ನು ಸ್ವಲ್ಪ ಕೋತಿಗಳಿರುವುದನ್ನು ನಾನು ನೋಡಿದ್ದೇನೆ, ಅವುಗಳನ್ನು ಹಿಡಿದು ಕೊಟ್ಟರೆ, ಒಂದು ಕೋತಿಗೆ ತಲಾ 40 ರೂಪಾಯಿ ನೀಡುತ್ತಾನೆ ಎಂದು ಹೇಳುತ್ತಾನೆ !

ಹಳ್ಳಿಯ ಮಂದಿ ಅವನ ಮಾತನ್ನು ಕೇಳಿ ಸಂತಸದ ತುತ್ತ ತುದಿಗೇರುತ್ತಾರೆ, ಅವನ ಮಾತಿನಂತೆ ಕಠಿಣ ಪರಿಶ್ರಮ ವಹಿಸಿ ಮೂರ್ನಾಲ್ಕು ದಿನಗಳು ಕಾಯ್ದು, ಇನ್ನೊದಷ್ಟು ಕೋತಿಗಳನ್ನು ಹಿಡಿದು ತಂದು ತಲಾ 40 ರೂಪಾಯಿನಂತೆ ಒಂದೊಂದು ಕೋತಿಗಳಿಗೆ ಪಡಿದುಕೊಳ್ಳುತ್ತಾರೆ, ಅಲ್ಲಿಗೆ ಶೇಕಡ 90 ಭಾಗದಷ್ಟು ಕೋತಿಗಳನ್ನು ಸೆರೆಹಿಡಿಯಲಾಗಿತ್ತು.. ಇನ್ನು ನಾಲ್ಕು ಕೋತಿಗಳನ್ನು ಹಿಡಿಯಲು ಎಷ್ಟೆ ಪ್ರಯ್ನಿಸಿದರು ಸಾಧ್ಯವಾಗುತ್ತಿರಲಿಲ್ಲ, ಆಗ ಮತ್ತೆ ಆವ್ಯಕ್ತಿ ಈ ನಾಲ್ಕು ಕೋತಿಗಳನ್ನು ಹಿಡಿದು ತಂದವರಿಗೆ ಒಂದು ಕೋತಿಗೆ 80 ರೂಪಾಯಿನಂತೆ ನೀಡುತ್ತೇನೆ ಎಂಬ ದೊಡ್ಡ ಆಫರ್ ನೀಡುತ್ತಾನೆ.. !

ಈ ಭಾರಿ ಹಳ್ಳಿಯ ಜನರು ಶಕ್ತಿಯ ಜೊತೆ ತಮ್ಮ ಯುಕ್ತಿಯನ್ನು ಸಹ ಉಪಯೋಗಿಸಿ, ಬಲೆಗಳ ಮೂಖಾಂತರ ನಾಲ್ಕು ಕೋತಿಗಳನ್ನು ಹಿಡಿದು ಆತನಿಗೆ ಕೊಟ್ಟು ತಮ್ಮ ಹಣವನ್ನು ಪಡೆದುಕೊಂಡು ಸಂಭ್ರಮಿಸುತ್ತಾರೆ.. ನಂತರ ಹಳ್ಳಿಯ ಜನರು, ನಮ್ಮ ಊರಿಗೆ ದೇವರಂತೆ ಬಂದ್ರಿ, ಕೋತಿಗಳ ಹಾವಳಿಯಿಂದ ಬೇಸತ್ತಿದ್ದೆವು, ಅವುಗಳ್ಳನ್ನು ನಮ್ಮ ಕೈಯಿಂದನೆ ಹಿಡಿಸಿ, ಅವುಗಳನ್ನು ನೀವು ಕೊಂಡು, ನಮ್ಮ ಸಮಸ್ಯೆಯನ್ನು ತೀರಿಸುವ ಜೊತೆಗೆ ಹಣವನ್ನು ಕೂಡ ಕೊಟ್ರಿ, ಧನ್ಯವಾದಗಳು.. ಎಂದು ಹೃದಯ ಪೂರ್ವಕವಾಗಿ ಹೇಳುತ್ತಾರೆ !

ಈ ಮಾತುಗಳಿಗೆ ಉತ್ತರಿಸಿದ ಆ ಸುಶಿಕ್ಷಿತ ವ್ಯಕ್ತಿ, ನಿಮ್ಮ ಸಮಸ್ಯೆಗಳು ಇಲ್ಲಿಗೆ ತೀರಿತು, ಇನ್ನು 15 ದಿನಗಳನ್ನು ಬಿಟ್ಟು ಮತ್ತೆ ಬರುತ್ತೇನೆ, ಆಗ ನಿಮ್ಮ ಊರಿನಲ್ಲಿ ಕೋತಿಗಳೇನಾದರು ನಿಮಗೆ ಕಂಡು ಬಂದು ಅವುಗಳನ್ನು ನೀವು ಹಿಡಿದು ಇಟ್ಟುಕೊಂಡಿದ್ದರೆ, ಅವುಗಳನ್ನು ನನಗೆ ಕೊಡಿ, ಆಗ ನಾನು ಒಂದು ಕೋತಿಗೆ ಸಾವಿರ ರೂ ನೀಡುತ್ತೇನೆ, ಎಂದು ಹೇಳಿ ಹೊರಟು ಹೋಗುತ್ತಾನೆ.. ನಂತರ 10 ದಿನಗಳ ಕಾಲ ಹಳ್ಳಿಯ ಜನರು ಕೋತಿಗಳನ್ನು ಹಡುಕುತ್ತಲೇ ಇರುತ್ತಾರೆ, ಆದರೆ ಒಂದು ಸಿಕ್ಕುವುದಿಲ್ಲ..

ನಂತರ ಆ ವ್ಯಕ್ತಿ ತನ್ನ ಹುಡುಗನನ್ನು ಕರೆದು, ನೋಡು ಎರಡು ಕೋತಿ ಕೊಡುತ್ತೇನೆ, ಆ ಕೋತಿಯನ್ನು ತೆಗೆದುಕೊಂಡು ನಾನು ಹೇಳುವ ಹಳ್ಳಿಗೆ ಹೋಗಿ ಒಂದು ಕೋತಿಗೆ ತಲಾ 200 ರೂಪಾಯಿ ನಂತೆ ಮಾರಿ ಬಾ, ಅವರು ತೆಗೆದುಕೊಂಡೆ ಕೊಳ್ಳುತ್ತಾರೆ ಎಂದು ಹೇಳುತ್ತಾನೆ, ತನ್ನ ಯಜಮಾನನ ಮಾತಿನಂತೆ ಆ ಹುಡುಗ ಆ ಹಳ್ಳಿಗೆ ಮಂಗಗಳನ್ನು ತೆಗೆದುಕೊಂಡು ಹೋಗುತ್ತಾನೆ, ನಂತರ ವಿಪರ್ಯಾಸವೇನೆಂದರೆ ಆ ವ್ಯಕ್ತಿಯ ಮಾತಿನಂತೆ ಹಳ್ಳಿಯನೊಬ್ಬ ಎರಡು ಕೋತಿಗಳನ್ನು ತೆಗೆದುಕೊಳ್ಳುತ್ತಾನೆ, ನಂತರ ಎರಡನೇ ದಿನ ಹಳ್ಳಿಯ ಜನರ ಹತ್ತಿರ ಹಿಡಿಸಿ ತಂದಿದ್ದ ಎಲ್ಲಾ ಮಂಗಗಳನ್ನು ತಲಾ 200 ರೂಪಾಯಿ ನಂತೆ ಆ ಹುಡುಗ ಅವರಿಗೆ ಮಾರಿ ಬಿಡುತ್ತಾನೆ..!

ಆ ಸುಶಿಕ್ಷಿತ ವ್ಯಕ್ತಿ 20,40,80 ರೂಪಾಯಿ ಕೊಟ್ಟು ಖರೀದಿಸಿದ ಕೋತಿಗಳನ್ನು ಅದೇ ಊರಿನವರಿಗೆ 200 ರೂಪಾಯಿಯಂತೆ ಮಾರಿ, ಸಿಕ್ಕಾಪಟ್ಟೆ ಹಣ ಸಂಪಾದಿಸತ್ತಾನೆ. ಇತ್ತ ಹಳ್ಳಿಯವರು ಕೊಂಡು ಕೊಂಡ ಮಂಗಗಳನ್ನು ಮನೆಯಲ್ಲೇ ಸಾಕುತ್ತಾ ಈ ವ್ಯಕ್ತಿಗಾಗಿ ಎದುರು ನೋಡುತ್ತಿರುತ್ತಾರೆ.. ಹಿರಿಯರ ಮಾತಿನಂತೆ ಕೊಟ್ಟೋನು ಕೋಡಂಗಿ ಇಸ್ಕೊಂಡೋನು ವೀರಭದ್ರ ಎಂಬಂತೆ ಆ ಕೋಡಂಗಿಗಳಿಂದಲೆ ಹಳ್ಳಿಯ ಅಸಾಧರಣ ಮನಸನ್ನು ಉಪೋಯೋಗಿಸಿಕೊಂಡು ಅವನು ವೀರಭದ್ರನಾಗುತ್ತಾನೆ (ಶ್ರೀಮಂತನಾಗುತ್ತಾನೆ).

ಅದಕ್ಕೇ ಹೇಳುವುದು ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು, ಸುಮ್ಮನೇ ಆ ಕೋತಿಗಳಿಗೆ ಭಯ ಪಡಿಸಿ ಓಡಿಸಿಯೋ ಅಥವಾ ತಾವೇ ಹಿಡಿದು ಬೇರೆ ಎಲ್ಲಾದರು ಬಿಟ್ಟು ಬಂದ್ದಿದ್ದರೋ ಅವರ ಸಮಸ್ಯೆ ತೀರುವುದರ ಜೊತೆಗೆ ಹಣವೂ ಸಹ ಉಳಿಯುತ್ತಿತ್ತು, ಈಗ ಕಾಸು ಹಾಳು ತಲೆಯೂ ಬೋಳು ಎಂಬಂತೆ, ತಮಗೆ ಸಮಸ್ಯೆಯಾಗಿದ್ದ ಕೋತಿಗಳನ್ನು ತಾವೇ ಸಾಕುತ್ತಾ, ಹಣವನ್ನು ಕಳೆದುಕೊಂಡು, ಆ ವ್ಯಕ್ತಿಯಿಂದ ಒಳ್ಳೆಯ ಪಾಠ ಕಲ್ಲಿತಿದ್ದಾರೆ.. ಹೀಗೆ ನಮ್ಮ ಜೀವನದಲ್ಲಿ ಕೋತಿಗಳಂತೆ ಅದೇಷ್ಟೋ ಜನರು ಬಂದು ನಮ್ಮನ್ನು ಕೆಣಕುತ್ತಾರೆ, ಆಗ ನಾವು ಯಾರ ಸಹಾಯವಿಲ್ಲದೇ ಅವರನ್ನು ಹೆದರಿಸಿ ನಿಲ್ಲಬೇಕು.. ಇಲ್ಲವಾದಲ್ಲಿ ಈ ಹಳ್ಳಿಯವರಿಗಾದಂತೆ ನಮಗೂ ಆಗುತ್ತದೆ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೆಚ್.ವಿಶ್ವನಾಥ್​ ವಿರುದ್ದ ಧೋಸ್ತಿ ಸರ್ಕಾರ ಗರಂ ; ನೀವು ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ.? ಎಂದು ಆವಾಜ್…..

    ನೀವೂ ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ, ಈಗ ಎಲ್ಲಿದ್ದೀರಾ ನೀವು.? ಯಾಕೆ ಮೋಸ ಮಾಡಿದ್ರೀ.? ಎಂದು ಹುಣಸೂರು ಕಾರ್ಯಕರ್ತರಿಂದ ಶಾಸಕ ಹೆಚ್. ವಿಶ್ವನಾಥ್ ಗೆ ನಾನ್ ಸ್ಟಾಪ್ ಕರೆ ಮಾಡಿ ಆವಾಜ್ ಹಾಕಲಾಗುತ್ತೀದೆ. ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಶಾಸಕ ಹೆಚ್ ವಿಶ್ವನಾಥ್​​ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ. ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೆ ಅದರ ಫೋಟೋವನ್ನು…

  • inspirational

    ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಪತ್ತೆಯಾದ ಅಸ್ಥಿಪಂಜರ….!

    ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…

  • ಸುದ್ದಿ

    “ಬರದ ನಾಡಿಗೆ ಭಗೀರಥನ ಪ್ರಯತ್ನ” ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯನೂರಾರು ಕೆರೆಗಳಿಗೆ ನೀರು…!

    ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…

  • Sports

    ರಣಜಿ ಟ್ರೋಫಿ ಸಿಕೆ ನಾಯ್ಡು ಟ್ರೋಫಿ ಸೀನೀಯರ್ ವುಮೆನ್ಸ್ ಲೀಗ್ ಮುಂದೂಡಲಾಗಿದೆ

    ಬಿಸಿಸಿಐ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ವುಮೆನ್ಸ್ ಟಿ 20 ಲೀಗ್ ಅನ್ನು 2021-22 ಋತುವಿಗೆ ಮುಂದೂಡಿದೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ 2021-22ರ ಸೀಸನ್‌ಗಾಗಿ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಲೀಗ್ ಅನ್ನು ಮುಂದೂಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ರಣಜಿ ಟ್ರೋಫಿ ಮತ್ತು ಕರ್ನಲ್ ಸಿ ಕೆ ನಾಯುಡು ಟ್ರೋಫಿ ಈ…

    Loading

  • ದೇವರು-ಧರ್ಮ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…

  • ಜ್ಯೋತಿಷ್ಯ

    ಗಾಳಿ ಆಂಜನೇಯನ ಕೃಪೆಯಿಂದ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ,ಶುಭ ಅಶುಭಗಳ ಲೆಕ್ಕಾಚಾರ 06/07/2019.

    ಇಂದು ಶನಿವಾರ ಶ್ರೀ ಆಂಜನೇಯನನ್ನು ನೆನೆಯುತ್ತಾ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ.21/06/2019.ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು. ಮೇಷ ಇಂದು ಮೇಷ ರಾಶಿಯವರು ನೂರಕ್ಕೆ ನೂರರಷ್ಟು ಯಶಸ್ಸು ನಿರೀಕ್ಷಿಸಿ ನಂತರ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ…