ಸುದ್ದಿ

ಟೈಗರ್ ಪ್ರಭಾಕರ್ ಅವರ ಮೂರು ಹೆಂಡತಿಯರನ್ನು ಮೊದಲ ಬಾರಿಗೆ ತೋರಿಸ್ತೀವಿ ನೋಡಿ.

1044

ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ. ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ ಇತ್ತು. ಫೈಟ್ ಅನ್ನು ಇಷ್ಟ ಪಡುವ ಪ್ರಭಾಕರ್ ಅದ್ಭುತವಾಗಿ ಫೈಟ್ ಮಾಡೋದು ಇನ್ನೊಂದು ವಿಶೇಷ. ತನಗೂ ಸೇರಿದಂತೆ ಹಲವಾರು ಸ್ಟಾರ್ ಗಳಿಗೂ ಫೈಟ್ ಅನ್ನು ಕಂಪೋಸ್ ಮಾಡುತ್ತಿದ್ದರು. ತನ್ನ 14ನೇ ವಯಸ್ಸಿನಲ್ಲಿಯೇ ಬಾಕ್ಸರ್ ಅನ್ನು ಎರಡು ಬಾರಿ ನೆಲಕ್ಕೆ ಕೆಡುವಿಹಿದ ಬಲಿಷ್ಠ ದೇಹಿ ಅವರಾಗಿದ್ದರು.

ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಭಾಕರ್ ಕನ್ನಡ ಸಿನಿಮಾ ರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಹೀಗೆ ಸ್ಟಂಟ್ ಮಾಸ್ಟರ್ ಆಗಿ ಖ್ಯಾತರಾಗಿದ್ದರು. ತನ್ನ ಫೈಟ್ಸ್ ನೋಡಲಿಕ್ಕಾಗಿಯೇ ಪ್ರೇಕ್ಷಕರು ತನ್ನ ಸಿನಿಮಾ ನೋಡಲು ಬರುತ್ತಾರೆ ಎಂಬ ಹೆಮ್ಮೆ ಪ್ರಭಾಕರ್ ಅವರಿಗೆ ಇತ್ತಂತೆ. ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರಭಾಕರ್ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಎಲ್ಲಾ ಫೈಟ್ ದೃಶ್ಯಗಳನ್ನು ತಾನೇ ಖುದ್ದಾಗಿ ಮಾಡುತ್ತಿದ್ದರು. ಇದರಿಂದಾಗಿಯೇ ತಾನು ಇಂದು ಸೋತು ಹೋದ ವ್ಯಕ್ತಿಯಾಗಿದ್ದೇನೆ. ನನ್ನೆಲ್ಲಾ ಮುರಿದ ಮೂಳೆಗಳು ಸರ್ಜರಿಯಲ್ಲಿ ನಿಂತಿವೆ ಎಂದು ಸಂದರ್ಶನವೊಂದರಲ್ಲಿ ಪ್ರಭಾಕರ್ ಹೇಳಿದ್ದರು.

ಟೈಗರ್ ಪ್ರಭಾಕರ್ ಖಳನಟ, ನಿರ್ದೇಶಕ, ನಿರ್ಮಾಪಕ, ಹೀರೋ ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಹೃದಯವಂತ ವ್ಯಕ್ತಿ. ಕನ್ನಡ, ತೆಲುಗು, ತಮಿಳು ಸೇರಿ 450 ಸಿನಿಮಾಗಳಲ್ಲಿ ನಟಿಸಿದ್ದ ಅವರು ಬಹುತೇಕರಿಂದ ಮೋಸಕ್ಕೊಳಗಾಗಿದ್ದ ವ್ಯಕ್ತಿ ಟೈಗರ್. ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಅನೇಕ ಕಲಾವಿದರಿಗೆ, ಅನಾಥಾಶ್ರಮಗಳಿಗೆ, ಸಂಘ, ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಬೈಕ್ ಅಪಘಾತದ ಬಳಿಕ ಪ್ರಭಾಕರ್ ಆರೋಗ್ಯ ಹದಗೆಡ ತೊಡಗಿತ್ತು..ನಿಧಾನಕ್ಕೆ ಸ್ಟಾರ್ ವ್ಯಾಲ್ಯೂ ಕೂಡಾ ಕಡಿಮೆಯಾಗತೊಡಗಿತ್ತು.

ಅಧಿಕೃತವಾಗಿ ಮೂರು ಮದುವೆಯಾಗಿದ್ದ ಟೈಗರ್ ಗೆ ಇಬ್ಬರು ಪುತ್ರಿಯರು ಭಾರತಿ ಮತ್ತು ಗೀತಾ ಹಾಗೂ ಪುತ್ರ ವಿನೋದ್(ಮೊದಲ ಹೆಂಡತಿ ಮಕ್ಕಳು), 2ನೇ ವಿವಾಹವಾಗಿದ್ದು ನಟಿ ಜಯಮಾಲಾ ಜೊತೆ. ಇವರಿಗೆ ಸೌಂದರ್ಯ ಎಂಬ ಮಗಳು ಹುಟ್ಟಿದ್ದಳು. ಮೂರನೆಯ ಮದುವೆ ಅಂಜು ಜೊತೆ..ಈಕೆಗೆ ಅರ್ಜುನ್ ಎಂಬ ಮಗ ಜನಿಸಿದ್ದ. 2 ಮದುವೆಗಳು ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ತಾನೇನಿದ್ದರೂ ನೇರವಾಗಿ ಮಾತನಾಡುವ ಮನುಷ್ಯ ಎಂದೇ ಹೇಳಿಕೊಳ್ಳುತ್ತಿದ್ದ ಪ್ರಭಾಕರ್ ಅದೇ ರೀತಿ ಬದುಕಿದ್ದರು. ತನ್ನ ವೈಯಕ್ತಿಕ ಸೇರಿದಂತೆ ಎಲ್ಲಾ ವಿಚಾರವನ್ನು ಮುಚ್ಚಿಡದೇ ಹೇಳುತ್ತಿದ್ದ ನಟ ಅವರಾಗಿದ್ದರು. ವಿಪರ್ಯಾಸ ಎಂಬಂತೆ ಟೈಗರ್ ಕೊನೆಗಾಲದಲ್ಲಿ ಅವರ ಜೊತೆ ಮಗ ವಿನೋದ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲವಾಗಿತ್ತು. ತನಗೆ ಎಲ್ಲಾ ಮೋಸ ಮಾಡಿಬಿಟ್ಟರು ಎಂಬುದಾಗಿ ಕೊನೆಯ ದಿನಗಳಲ್ಲಿ ಮಗನ ಜೊತೆ ಟೈಗರ್ ಹೇಳಿಕೊಂಡಿದ್ದರಂತೆ. ಕೊನೆಗೆ 1948ರಲ್ಲಿ ಜನಿಸಿದ್ದ ಟೈಗರ್ ಬಹುಅಂಗಾಂಗ ವೈಫಲ್ಯದಿಂದ ತನ್ನ 52ನೇ ವಯಸ್ಸಿನಲ್ಲಿ (2001ರ ಮಾರ್ಚ್ 25ರಂದು ) ವಿಧಿವಶರಾಗಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ಟೈಗರ್ ನಿರ್ದೇಶಿಸಿದ್ದ ಗುಡ್ ಬ್ಯಾಡ್ ಅಂಡ್ ಅಗ್ಲಿ ಸಿನಿಮಾ ತೆರೆಕಂಡಿತ್ತು..ಅದು ಪ್ರಭಾಕರ್ ಅವರ ಬದುಕು ಮತ್ತು ಅಂತ್ಯಕ್ಕೆ ಮುನ್ನುಡಿ ಬರೆದಂತೆ ಇತ್ತು..ಇವೆಲ್ಲದರ ನಡುವೆ ಟೈಗರ್ ಇನ್ನೂ ಚಿತ್ರರಸಿಕರ ಮನದಲ್ಲಿ ಉಳಿದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Top News

    ಈ ಹುಡುಗಿ ತಯಾರಿಸಿದ 1800 ರೂಪಾಯಿಯ AC ಗಾಗಿ ವಿದೇಶಿ ಕಂಪನಿಗಳು ಪೈಪೋಟಿ, ಈಕೆ ಮಾಡಿದ ಟೆಕ್ನಿಕ್ ಏನು ಗೊತ್ತಾ!

    ಓದು ಮುಗಿದ ನಂತರ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುವುದು ಸಾಮಾನ್ಯವಾಗಿದೆ, ಓದು ಮುಗಿದ ನಂತರ ಏನಾದರು ಸಾಧನೆ ಮಾಡುವ ಬದಲು ಓದುವಾಗಲೇ ಏನಾದರು ಸಾಧನೆ ಮಾಡೋಣ ಅನುವ ಛಲಕ್ಕೆ ಬಿದ್ದು ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶದವರು ಮೆಚ್ಚುವ ಕೆಲಸವನ್ನ ಮಾಡಿದ 16 ವರ್ಷದ ಹುಡುಗಿಯ ಈ ಕಥೆಯನ್ನ ಕೇಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಿ. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು ಅಂದರೆ ಏನಿಲ್ಲ ಅಂದರೆ 25 ಸಾವಿರ ರೂಪಾಯಿ…

  • ಜ್ಯೋತಿಷ್ಯ

    ಆಂಜನೇಯಸ್ವಾಮಿ ಕೃಪೆಯಿಂದ ಈ ರಾಶಿಗಳಇಗೆ ವಿಪರೀತ ರಾಜಯೋಗ..ನಿಮ್ಮ ರಾಶಿ ಇದೆಯಾ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹಣಕಾಸಿನ ವ್ಯವಸ್ಥೆ ಉತ್ತಮವಾಗಿರುವುದರಿಂದ ಬಹು ಬಂಡವಾಳದ ಉದ್ಯಮವನ್ನು ಆರಂಭಿಸಲು ತೊಡಗುವಿರಿ. ಇದಕ್ಕೆ ನಿಮ್ಮ ಸಂಗಾತಿಯ ಮತ್ತು ಸ್ನೇಹಿತರ ಬೆಂಬಲ ದೊರೆಯುವುದು.    .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ಸುದ್ದಿ

    ಇಲ್ಲಿದೆ ನೋಡಿ ಮದ್ಯ ಪ್ರಿಯರಿಗೊಂದು ಸಿಹಿಸುದ್ದಿ…!

    ಗೋವಾ ಪ್ರವಾಸಮಾಡ ಹೊರಟಿರುವ ಪ್ರವಾಸಿಗರೂ ಮತ್ತು ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಗೋವಾದಿಂದಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.  ಅಚ್ಚರಿ ಪಡಬೇಡಿಇದು ನಿಜ…. ಹೌದು.. ಗೋವಾ ಪ್ರವಾಸಕ್ಕೆ ಹೋಗುವ ಮದ್ಯಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿನೀಡಿದ್ದು, ಇನ್ನು ಮುಂದೆ ಪ್ರವಾಸ ಮುಗಿಸಿ ಮನೆಗೆ ಮರಳುವ ಇತರೆ ರಾಜ್ಯಗಳ ಪ್ರವಾಸಿಗರು ಹೆಚ್ಚುವರಿಮದ್ಯದ ಬಾಟಲಿಗಳನ್ನು ಮನೆಗೆ ಕೊಂಡೊಯ್ಯಬಹುದು.  ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ…

  • ಸಿನಿಮಾ

    ಅಣ್ಣಾವ್ರ ಬಗ್ಗೆ ರಜನಿ ಬಿಚ್ಚಿಟ್ಟರು, ನಮಗ್ಯಾರಿಗೂ ಗೊತ್ತಿಲ್ಲದ ಆ ರಹಸ್ಯ..!

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ.

  • ರಾಜಕೀಯ

    ರಾಜರಾಜೇಶ್ವರಿನಗರ ಮುನಿರತ್ನ VS ಪ್ರಜ್ವಲ್ ರೇವಣ್ಣ ನೀವು ಯಾರನ್ನ ಬೆಂಬಲಿಸುತ್ತೀರಾ..?

    ಮುನಿರತ್ನ ರವರು 2014ರಲ್ಲಿ ನಡೆದ MLA ಎಲೆಕ್ಷನ್ ನಲ್ಲಿ 71064 ವೋಟ್ ಪಡೆದು ಅವರ ಹತ್ತಿರದ ಸ್ಪರ್ದಿ Sri M. Srinivas (ಬಿಜೆಪಿ) ರವರಿಗಿಂತ 20338 ಮತಗಳಿಂದ ಗೆಲವನ್ನು ಪಡೆದರು.

  • ಆರೋಗ್ಯ

    ‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

    ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.