News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ದಿನಕ್ಕೊಂದು ನೀತಿ ಕಥೆ

ಬ್ರಹ್ಮದತ್ತನ ಗುಣ ಮತ್ತು ದೋಷ…..ಓದಿ ದಿನಕ್ಕೊಂದು ನೀತಿ ಕಥೆ…..

429

 ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .

ಇತ್ತ ಕಾಶಿಯಲ್ಲಿ ಬ್ರಹ್ಮದತ್ತನಿಗೆ ಸಕಲರೂ ತನ್ನ ಸದ್ಗುಣಗಳನ್ನೇ ಹಾಡಿ ಹೋಗಳತ್ತಿರುವುದನ್ನು ಕೇಳಿ ಕೇಳಿ ಒಂದು ಸಂದೇಹ ಬಂತು. ‘’ಪ್ರತಿಯೊಬ್ಬರೂ ನನ್ನನ್ನೂ ಹೊಗಳುತ್ತಾರೆ, ಕೀರ್ತಿಸುತ್ತಾರೆ. ಅಂದರೆ ನಾನು ಸರ್ವಗುಣ ಸಂಪನನ್ನೇ?ನನ್ನಲ್ಲಿ ಯಾವ ದೋಷವು ಇಲ್ಲವೇ?ಇದ್ದರೂ, ಕಂಡರೂ, ಯಾರೂ ಅದನ್ನು ನನ್ನ ದಾಕ್ಷೀಣ್ಯದಿಂದ ಹೇಳುತ್ತಿಲ್ಲವೇ?’’ ಎಂದುಕೊಂಡ.

ಯಾರಾದರೊಬ್ಬರಿಗೆ ತನ್ನಲ್ಲಿರುವ ದೋಷ ಕಾಣಿಸಬಹುದು, ಯಾರಾದರೊಬ್ಬರಿಗೆ ತನ್ನ ಕೊರತೆಯನ್ನು ಧೈರ್ಯವಾಗಿ ಆಡಿ ತೋರಿಸಬಹುದು, ಎಂದು ಅವನು ಹುಡುಕತೊಡಗಿದ. ಮೊದಲು ಅವನು ತನ್ನ ಪರಿವಾರದಲ್ಲಿ ಹುಡುಕಿದ.

ಆದರೆ ಅವರಲ್ಲಿ ಯಾರೂ ರಾಜನಲ್ಲಿ ದೋಷವಿದೆಯೆಂದು ಹೇಳಲಿಲ್ಲ ಅರಮನೆಯ ಪರಿವಾರದವರು ದೋಷ ಕಂಡವರು ಯಾರೂ ಇರಲಿಲ್ಲ. ನಗರದ ಹೊರಗೆ ವೇಷ ಮರೆಸಿಕೊಂಡು ಸಂಚಾರ ಮಾಡಿದ ಅಲ್ಲೂ ಕೂಡ ಎಲ್ಲ ಅವನ ಗುಣಗಾನ ಮಾಡಿದರೇ  ಹೊರತು, ಒಬ್ಬನಾದರೂ ರಾಜನ ನಡತೆಯಲ್ಲಿ ಈ ತಪ್ಪಿದೆ ಎಂದು ಹೇಳಲಿಲ್ಲ.

ಕಡೆಗೆ ಅವನು ಹಿಮಾಲಯಕ್ಕೆ ಹೋದ. ಆ ಗುಡ್ಡ ಗಾಡಿನ ತುಂಬಾ  ಸಂಚರಿಸಿದ. ಕಡೆಗೆ ಬೋಧಿಸತ್ವನ ಪರ್ಣಕುಟೀರ ಕಣ್ಣಿಗೆ ಬಿತ್ತು. ರಾಜ ಅಲ್ಲಿಗೆ ಹೋಗಿ ಅವನಿಗೆ ನಮಸ್ಕರಿಸಿ ಕುಳಿತುಕೊಂಡ. ಬೋಧಿಸತ್ವ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಂಡ.

ಬೋಧಿಸತ್ವ ಆಗ ಕಾಡಿನಿಂದ ತಂದಿದ್ದ ಅರಳಿ ಹಣ್ಣುಗಳನ್ನು ತಿನ್ನುತ್ತಿದ್ದ. ಅವನ್ನೇ ರಾಜನಿಗೆ ನೀಡಿ, ‘’ಅಯ್ಯಾ, ಹಸಿದಿರುವಂತಿದೆ, ಈ ಅರಳಿ ಹಣ್ಣುಗಳನ್ನು ತಿಂದು ನೀರು ಕುಡಿ’’ ಎಂದ.

ರಾಜ ಹಾಗೇ ಮಾಡಿದ. ಆ ಅರಳಿ ಹಣ್ಣುಗಳು ಅಮೃತದಂತಿದ್ದವು. ‘’ಪೂಜ್ಯರೆ, ಈ ಹಣ್ಣುಗಳು ಇಷ್ಟೊಂದು ಮಧುರವಾಗಿರಲು ಕಾರಣವೇನು?’’ ಎಂದು ಕೇಳಿದ.

ಬೋಧಿಸತ್ವ ಹೇಳಿದ, ‘’ಈ ಪ್ರಾಂತ್ಯವನ್ನು ಆಳುತ್ತಿರುವ ರಾಜ ಧರ್ಮವನ್ನು ಮೀರದೆ, ನ್ಯಾಯದಿಂದ ನಡೆದುಕೊಳ್ಳುತ್ತಿದ್ದಾನೆ. ಅದಕ್ಕೇ ಈ ಹಣ್ಣುಗಳು ಇಷ್ಟು ಸಿಹಿಯಾಗಿವೆ.’’

‘’ಪೂಜ್ಯರೆ’’ ಬೋಧಿಸತ್ವ ಹೇಳಿದ, ‘’ಸಿಹಿ ಕೊಡುವ ಪದಾರ್ಥಗಳು ತಮ್ಮ ಸಿಹಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಇಡೀ ದೇಶವೇ ಸತ್ವವನ್ನು ಕಳೆದುಕೊಂಡು ನಾಶವಾಗುತ್ತದೆ.’’

ರಾಜ ತನ್ನ ಪರಿಚಯವನ್ನು ಹೇಳಿಕೊಳ್ಳದೆ ನಮಸ್ಕರಿಸಿ ಅಲ್ಲಿಂದ ಹೊರಟು ಬಂದ.

ಬೋಧಿಸತ್ವನ ಹೇಳಿದ ಮಾತುಗಳನ್ನು ಪರೀಕ್ಷಿಸುವ ಮನಸ್ಸಾಯಿತು. ರಾಜ ಅಂದಿನಿಂದ ಅಧರ್ಮದಿಂದ ರಾಜ್ಯಭಾರ ಮಾಡುತ್ತ ಅನ್ಯಾಯದಿಂದ ನಡೆದುಕೊಳ್ಳತೊಡಗಿದ.

ಕೆಲವು ಕಾಲದ ನಂತರ ಮತ್ತೆ ಅವನು ಬೋಧಿಸತ್ವನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡ. ಆ ದಿನವೂ ಬೋಧಿಸತ್ವ ಅವನಿಗೆ ಅರಳಿ ಹಣ್ಣುಗಳನ್ನು ಕೊಟ್ಟ ಅದನ್ನು ಬಾಯಿಗಿಟ್ಟುಕೊಂಡ ಕೂಡಲೇ ಕಹಿಯಾಗಿ ರಾಜ ತಿನ್ನಲಾರದೆ ಉಗಿದುಬಿಟ್ಟ. ‘’ಪೂಜ್ಯರೇ, ಈ ಹಣ್ಣುಗಳನ್ನು ತಿನ್ನಲಾರದಷ್ಟು ಕಹಿಯಗಿವೆ’’ ಎಂದ.

ಬೋಧಿಸತ್ವ ಹೇಳಿದ, ‘’ಹಾಗಾದರೆ ರಾಜ ನಿಜವಾಗಲೂ ಅಧರ್ಮಿಯಗಿರಬೇಕು. ಅದರಿಂದಲೇ ಹಣ್ಣುಗಳನ್ನು ತಮ್ಮ ಸಿಹಿ ಕಳೆದುಕೊಂಡಿದೆ. ರಾಜ ಅಧಾರ್ಮಿಕನಾದರೆ ಇಡೀ ಪ್ರಜಸಮೂಹಂ ಅಧರ್ಮಚರಣೆ ಮಾಡುತ್ತ ದೇಶವೇ ದುಃಖಕ್ಕೆ ಒಳಗಾಗುತ್ತದೆ,’’

ರಾಜ ತನ್ನ ಪರಿಚಯವನ್ನು ಬಹಿರಂಗಪಡಿಸಿದ. ‘’ಪೂಜ್ಯರೇ, ನಾನೇ ಅರಳಿ ಹಣ್ಣನ್ನು ಸಿಹಿ ಮಾಡಿದೆ. ಅನಂತರ ನಾನೇ ಅದನ್ನು ಕಹಿ ಮಾಡಿದೆ. ಈಗ ಮತ್ತೆ ಸಿಹಿ ಮಾಡುತ್ತೇನೆ’’ ಎಂದು ನಮಸ್ಕರಿಸಿದ.

ಹಿಂದಿರುಗಿ ಕಾಶಿಗೆ ಹೋಗಿ ಧರ್ಮದಿಂದ ರಾಜ್ಯಭಾರ ಮಾಡಿದ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಚಂದನ್-ನಿವೇದಿತ ಎಂಗೇಜ್ಮೆಂಟ್ ಬಗ್ಗೆ ಸುದೀಪ್ ಪ್ರತಿಕ್ರಿಯೆ ಏನು ಗೊತ್ತ…!

    ಗಾಯಕ ಚಂದನ್ ಶೆಟ್ಟಿ ಅವರು ಯುವದಸರಾ ವೇದಿಕೆಯಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಭಾರಿ ವಿರೋಧಕ್ಕೆ ಗುರಿಯಾಗಿತ್ತು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಿಗ್ ಮನೆಯಲ್ಲಿ ಇಬ್ಬರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಫ್ರೆಂಡ್ ಷಿಪ್ ಮುಂದುವರಿಸಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರುಕನ್ನಡ ರ‍್ಯಾಪರ್,…

  • ಸುದ್ದಿ

    ಕೃಷ್ಣ ಜನ್ಮಾಷ್ಠಮಿಯಂದು ನವಿಲು ಗರಿಯನ್ನು ನಿಮ್ಮ ಮನೆಯ ಈ ಭಾಗದಲ್ಲಿಡಿ..ಅದೃಷ್ಟವಂತರಾಗಿ….!

    ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದಾರೆ. ಕೃಷ್ಣನಿಗೆ ಪ್ರಿಯವಾದ ವಸ್ತುಗಳಲ್ಲಿ ನವಿಲುಗರಿ ಕೂಡ ಒಂದು. ನವಿಲುಗರಿ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ.ನವಿಲುಗರಿ ಮನೆ ಸೌಂದರ್ಯವನ್ನು ಮಾತ್ರವಲ್ಲ ಆರ್ಥಿಕ ವೃದ್ಧಿಗೆ ಕಾರಣವಾಗುತ್ತದೆ. ಶ್ರೀಕೃಷ್ಣನ ಮುಕುಟದ ಮೇಲಿರುವ ನವಿಲುಗರಿ ಬಗ್ಗೆ ಶಾಸ್ತ್ರಗಳಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಜನ್ಮಾಷ್ಠಮಿಯಂದು ಆ ಉಪಾಯಗಳನ್ನು ಅನುಸರಿಸಿದ್ರೆ ಅದೃಷ್ಟ ನಿಮ್ಮದಾಗಲಿದೆ. ಮನೆಯಲ್ಲಿ ಯಾವಾಗಲೂ ಜಗಳವಾಗ್ತಿದ್ದರೆ, ಮನಸ್ಸಿನಲ್ಲಿ ಕಿರಿಕಿರಿಯಿದ್ದರೆ ಇದಕ್ಕೆ ನವಿಲುಗರಿ ಪರಿಹಾರ ನೀಡಬಲ್ಲದು. ನವಿಲುಗರಿಯನ್ನು ದೇವರ ಮನೆಯಲ್ಲಿ ಕೊಳಲಿನ ಜೊತೆ ಇಡಬೇಕು. ಮನೆಯಲ್ಲಿ ಹರಡುವ…

  • Sports, ಕ್ರೀಡೆ

    ಎಬಿ ಡಿ ವಿಲಿಯರ್ಸ್ ಆರ್ ಸಿ ಬಿ ಮತ್ತು ದಕ್ಷಿಣ ಆಫ್ರಿಕಾ ತಂಡ ದಿಲ್ಲಿ ತಮ್ಮ ಪಾತ್ರವನ್ನು ಇಲ್ಲಿ ಹೇಳಿದ್ದಾರೆ

    ಅವರಿಗೆ ಭವಿಷ್ಯ ಏನೆಂದು ಖಚಿತವಾಗಿಲ್ಲ ಆದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ರಾಷ್ಟ್ರೀಯ ತಂಡದಲ್ಲಿ ಮತ್ತು ಅವರ ಐಪಿಎಲ್ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭವಿಷ್ಯದ ಸೆಟ್‌ಅಪ್‌ನಲ್ಲಿ ಆಡಲು ಪಾತ್ರವನ್ನು ಹೊಂದಿರುತ್ತಾರೆ ಎಂದು ವಿಶ್ವಾಸ ಹೊಂದಿದ್ದಾರೆ. ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಎಲ್ಲಾ ರೀತಿಯ ಆಟದಿಂದ ನಿವೃತ್ತರಾಗಿದ್ದರು. “ಎಸ್‌ಎ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ನಾನು ಇನ್ನೂ ಒಂದು ಪಾತ್ರವನ್ನು ವಹಿಸುತ್ತೇನೆ…

    Loading

  • ಸಿನಿಮಾ

    KGF ಚಿತ್ರದ ಬಗ್ಗೆ ಪುನೀತ್ ರಾಜ್ ಸೇರಿದಂತೆ ಕನ್ನಡದ ಸ್ಟಾರ್ ನಟರು ಹೇಳಿದ್ದೇನು ಗೊತ್ತಾ..!

    ವಿಶ್ವಾದ್ಯಂತ ನಿನ್ನೆ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಕೇವಲ ಅಭಿಮಾನಿಗಳಿಂದ ಮಾತ್ರವಲ್ಲ ಇಡೀ ಸ್ಯಾಂಡಲ್ ವುಡ್ ಸ್ಟಾರ್ ಗಳೂ ಕೆಜಿಎಫ್ ಗೆ ಫಿದಾ ಆಗಿದ್ದಾರೆ. ಹೌದು.. ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಬಾಹುಬಲಿ ಬಳಿಕ ಭಾರಿ ಹವಾ ಸೃಷ್ಟಿಸಿರುವ ಚಿತ್ರ ಕೆಜಿಎಫ್.. ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ಅಭಿನಯದ ಕೆಜಿಎಫ್ ಚಿತ್ರ ಅಬ್ಬರದ ಪ್ರಚಾರದಂತೆಯೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಕೆಜಿಎಫ್ ಚಿತ್ರಕ್ಕೆ…

  • ಸುದ್ದಿ

    ಸಾನಿಯಾ ಮಿರ್ಜಾ ಪತಿಗೆ ಹೈದರಾಬಾದ್ ಪ್ರವೇಶ ಮಾಡಾಬಾರದೆಂದು ಬೆದರಿಕೆಯೊಡ್ಡಿದ ಶಾಸಕ!ಏಕೆ ಗೊತ್ತಾ?

    ಭಾರತದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಹಾಗೂ ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಹೈದರಾಬಾದ್ ಪ್ರವೇಶಿಸದಂತೆ ಬಿಜೆಪಿ ಶಾಸಕ ರಾಜಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಹಮಾರಾ ಪಾಕಿಸ್ತಾನ್ ಜಿಂದಾಬಾದ್ ಎಂದು ಟ್ವಿಟ್ಟರ್ ನಲ್ಲಿ ಶೋಯೇಬ್ ಮಲ್ಲಿಕ್ ಹೇಳಿದ್ದರ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೆಲವರು ದೈಹಿಕ ಹಲ್ಲೆಯ ಎಚ್ಚರಿಕೆಯನ್ನೂ ನೀಡಿದ್ದು, ತೆಲಂಗಾಣಕ್ಕೆ ಬಂದರೆ ಪಾಕಿಸ್ತಾನಕ್ಕೆ ಹೇಗೆ ಹಿಂದಿರುಗುತ್ತೀಯ ನೋಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜಾ…