ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು ತೊರೆದು ಹೋದ ಅಪ್ಪನನ್ನು ಸತತ ನಾಲ್ಕು ವರ್ಷ ಮಗಳು ನೆನೆದ ಭಾವುಕತೆಯೇ ತುಂಬಿ ತುಳುಕಿರುವ ಕಥೆಯಿದು. ಅಮೆರಿಕಾದ ಅರ್ಕನ್ಸಾಸ್ನ 23 ವರ್ಷದ ಚಾಸ್ತಿತ್ಯ ಪೀಟರ್ಸನ್ ಅನ್ನೋ ಯುವತಿ ನಾಲ್ಕು ವರ್ಷದ ಹಿಂದೆ ಅಂದ್ರೆ 2015ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.

ಅಂದಿನಿಂದಲೂ ಇಂದಿನವರೆಗೆ ಸತತವಾಗಿ ತನ್ನ ತಂದೆಯ ಹಳೆಯ ಮೊಬೈಲ್ ನಂಬರ್ಗೆ ಮೆಸೇಜ್ ಮಾಡುತ್ತಲೇ ಇದ್ದಳು. ತನ್ನ ದೈನಂದಿನ ಬದುಕಿನ ಬಗ್ಗೆ, ತಾನು ಪದವಿ ಗಳಿಸಿದ ಬಗ್ಗೆ, ಹಾಗೆಯೇ ಕ್ಯಾನ್ಸರ್ ಗೆದ್ದು ಬದುಕು ನೂಕುತ್ತಿರುವ ಬಗ್ಗೆ ಮೆಸೇಜ್ನಲ್ಲಿ ಹೇಳುತ್ತಾ ಅತ್ಯಂತ ಭಾವುಕ ಪತ್ರವೆನ್ನುವಂತೆ ತನ್ನ ತಂದೆಯೊಂದಿಗೆ ಏಕಮುಖಿ ಸಂವಹನ ನಡೆಸುತ್ತಿದ್ದಳು. ಆಕೆಯ ತಂದೆ ತೀರಿ ಹೋಗಿ ನಾಲ್ಕು ವರ್ಷ ಸಂದಿದ್ದವು. ಈ ಬಗ್ಗೆ ತೀವ್ರ ಭಾವುಕಳಾಗಿ ಒಂದು ಸಂದೇಶವನ್ನು ಕಳುಹಿಸಿದ್ದಳು.

‘ಹಲೋ ಡ್ಯಾಡ್, ಇದು ನಾನು, ನಾಳೆ ಮತ್ತೊಂದು ಭೀಕರ ದಿನದ ನೆನಪನ್ನು ನೆನಪಿಸಿಕೊಳ್ಳುವ ದಿನ, ನೀನು ನಮ್ಮನ್ನು ಅಗಲಿ ನಾಳೆಗೆ ನಾಲ್ಕು ವರ್ಷವಾಯ್ತು, ಈ ನಾಲ್ಕು ವರ್ಷ ಅನ್ನೋ ಪುಟ್ಟ ಸಮಯದಲ್ಲಿ ಬದುಕಿನಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆದಿವೆ. ಈಗಾಗಲೇ ನಾನು ಹಲವು ಬಾರಿ ಹೇಳಿದಂತೆ ಗ್ರಾಜುಯೇಷನ್ ಮುಗಿಸಿದ್ದೇನೆ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದಿದ್ದೇನೆ. ಪ್ರೀತಿಯಲ್ಲಿ ಬಿದ್ದು ಹೃದಯವನ್ನು ಘಾಸಿ ಮಾಡಿಕೊಂಡಿದ್ದೇನೆ. ಆದ್ರೆ ಎಲ್ಲದಕ್ಕೂ ಎದೆಗೊಟ್ಟು ನಿಂತು ಗಟ್ಟಿ ಮಹಿಳೆಯಾಗಿ ಪರಿವರ್ತಿತಗೊಂಡಿದ್ದೇನೆ. ಕ್ಷಮಿಸು ನಿನಗೆ ನನ್ನ ಅತ್ಯವಶ್ಯಕತೆಯಿದ್ದಾಗ ನಾನು ನಿನ್ನ ಜೊತೆ ಇರಲಿಲ್ಲ. ಒಂದು ದಿನ ನಾವು ಜೊತೆಗೆ ಇರಲಿದ್ದೇವೆ ನನ್ನ ಸರದಿ ಬರೋವರೆಗೂ ಈ ಬದುಕಿನ ಆಟವನ್ನು ನೋಡಬೇಕಿದೆ ’

ಒಂದು ದೀರ್ಘವಾದ ಪತ್ರವನ್ನ ಚಾಸ್ತಿತ್ಯ ಬರೆದು ಒಂದು ನಿಟ್ಟುಸಿರು ಬಿಟ್ಟು, ಸಣ್ಣದಾಗಿ ಬಿಕ್ಕಳಿಸಿದ್ದಳೇನೋ..ಕೆಲವೇ ಗಂಟೆಗಳಲ್ಲಿ ಅದೇ ನಂಬರ್ನಿಂದ ಒಂದು ರಿಪ್ಲೈ ಬಂದದ್ದು ಚಾಸ್ತಿತ್ಯಳನ್ನ ಅಚ್ಚರಿಗೆ ನೂಕಿತ್ತು. ಈ ಕಡೆ ತಂದೆಯನ್ನು ಕಳೆದುಕೊಂಡ ಹತಭಾಗ್ಯಳಾದ ಚಾಸ್ತಿತ್ಯ ಮೆಸೇಜ್ ಮಾಡಿದ್ದರೇ. ಆ ಕಡೆಯಿಂದ ಮಗಳನ್ನು ಕಳೆದುಕೊಂಡ ತಂದೆಯ ಹೃದಯವೊಂದು ಚಾಸ್ತಿತ್ಯಳ ದೀರ್ಘ ಸಂದೇಶಕ್ಕೆ ಅಷ್ಟೇ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ರು.

‘ಹಲೋ ಸ್ವೀಟ್ ಹಾರ್ಟ್, ನಾನುನಿನ್ನ ತಂದೆಯಲ್ಲ, ಆದ್ರೆ ಕಳೆದ ನಾಲ್ಕುವರ್ಷಗಳಿಂದ ನಿನ್ನಿಂದ ನಾನು ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ.ನನ್ನ ಹೆಸರು ಬ್ರಾಡ್, ಆಗಸ್ಟ್2014ರಲ್ಲಿ ಕಾರ್ ಅಪಘಾತದಲ್ಲಿ ನಾನುನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹತಾಶಗೊಂಡಿದ್ದನನ್ನನ್ನು ನಿನ್ನ ಸಂದೇಶಗಳು ಜೀವಂತವಾಗಿಟ್ಟಿವೆ.ಈ ನಾಲ್ಕು ವರ್ಷಗಳಲ್ಲಿನಿನ್ನೆಲ್ಲ ಏಳುಬೀಳುಗಳನ್ನು ನಾನು ನೋಡಿದ್ದೇನೆ. ಅನೇಕಬಾರಿ ನಿನಗೆ ಪ್ರತಿಕ್ರಿಯೆ ನೀಡಬೇಕುಅಂದುಕೊಂಡಿದ್ದೆ. ಆದ್ರೆ ನಿನ್ನ ಹೃದಯಚೂರಾದೀತು ಅಂತ ಆ ಧೈರ್ಯಮಾಡಲಿಲ್ಲ. ನೀನು ಅಸಾಮಾನ್ಯ ಯುವತಿಮಗು.

ನನ್ನ ಮಗಳು ಕೂಡನಿನ್ನಂತೆಯೇ ಇರಬೇಕು ಅಂತ ಬಯಸಿದ್ದೆ.ನಿನ್ನ ಪ್ರತಿದಿನದ ಸಮಾಚಾರಗಳಿಗೆ ಧನ್ಯವಾದ. ನನ್ನ ಮಗಳನ್ನು ಕಿತ್ತುಕೊಂಡದೇವರದ್ದು ತಪ್ಪಲ್ಲ ಅನ್ನೋ ಮನವರಿಕೆಮಾಡಿಕೊಟ್ಟಿದ್ದೀಯಾ. ದೇವರು ನಿನ್ನ ರೂಪದಲ್ಲಿನನಗೆ ನನ್ನ ಪುಟ್ಟ ದೇವತೆಯನ್ನುವಾಪಸ್ ನೀಡಿದ್ದಾನೆ. ಎಲ್ಲವೂ ಸರಿಯಾಗಲಿದೆ. ನಿನ್ನಬಗ್ಗೆ ಹೆಮ್ಮೆಯಿದೆ ನನಗೆ, ನಾಳೆಯೂ ನಿನ್ನಸಂದೇಶಗಳಿಗಾಗಿ ಕಾಯುವೇ ಅಂತ ಮೆಸೇಜ್ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐಸಿಐಸಿಐ ಬ್ಯಾಂಕ್’ಶೂನ್ಯ ಬ್ಯಾಲೆನ್ಸ್’ ಖಾತೆದಾರರು ತಮ್ಮ ಶಾಖೆಗಳಲ್ಲಿ ಮಾಡುವ ಪ್ರತಿ ನಗದು ವಿತ್ ಡ್ರಾವಲ್ ಮೇಲೆರೂ. 100 ರಿಂದ 125 ವರೆಗೆ ಶುಲ್ಕವನ್ನು ಭರಿಸಬೇಕಾಗುತ್ತದೆ. ಜಿರೋ ಬ್ಯಾಲೆನ್ಸ್ ಖಾತೆದಾರರು ಮಾಡುವ ಪ್ರತಿ ನಗದು ಹಿಂಪಡೆಯುವಿಕೆ ಮೇಲೆ ರೂ. 100-125 ಶುಲ್ಕ ವಿಧಿಸುವ ಜೊತೆಗೆ ಕರೆನ್ಸಿ ಮರುಬಳಕೆ ಮೇಲೆಮಾಡುವ ನಗದು ಠೇವಣಿ ಮೇಲೂ ಶುಲ್ಕ ವಿಧಿಸಲು ಐಸಿಐಸಿಐ ಬ್ಯಾಂಕ್ ನಿರ್ಧರಿಸಿದೆ. ಇದೇ ಸಂದರ್ಭ, ಎಲ್ಲಆನ್ಲೈನ್ ವ್ಯವಹಾರ ಸೇವೆಗಳ ಮೇಲೆ ಶುಲ್ಕ ತೆಗೆದಿರುವ ಐಸಿಐಸಿಐ ಬ್ಯಾಂಕ್, ಡಿಜಿಟಲ್ ವ್ಯವಹಾರವನ್ನುಉತ್ತೇಜಿಸಲು ಮುಂದಾಗಿರುವುದಾಗಿ…
ಬದಲಾದ ಜೀವನ ಶೈಲಿಯಿಂದಾಗಿ ನಿತ್ಯ ನಾವು ಸ್ಟೀಲ್ ಮತ್ತು ಪ್ಲಾಸ್ಟಿಕ್ ತಟ್ಟೆ, ಲೋಟಗಳ ಉಪಯೋಗಿಸುವುದು ಹೆಚ್ಚು. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ
ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ, ಹಣದ ಜೊತೆಗೆ ಜನರ ಪ್ರಾಣ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಜನರಿಗೆ ಹಲವಾರು ಹಲವಾರು ರೀತಿಯಲ್ಲಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.ಮುಂಬೈನ ಸುಮನ್ ರಾವ್ ಎನ್ನುವ ಮಹಿಳೆಯೊಬ್ಬಳು ತಮ್ಮ ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಹಣವನ್ನು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೋಸ್ಕರ ಕೊಡುವುದರ ಮುಖಾಂತರ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಇದೆ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮಗಳ ಮದುವೆ ಮಾಡಬೇಕೆಂದು ೫೦ ಲಕ್ಷರೂ…
ಇಂದು ಭಾರತ ಕಂಡ ಅದ್ಭುತ ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ 88 ವರ್ಷದ ಹುಟ್ಟುಹಬ್ಬ. ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಿಸಲಾಗುತ್ತದೆ.ದೇಶ ಕಂಡ ಪ್ರೀತಿಯ ಮಾಜಿ ರಾಷ್ಟ್ರಪತಿಗಳಿಗೆ ಪ್ರಧಾನಿ ಮೋದಿ ನಮಿಸಿದ್ದಾರೆ. ಕಲಾಂರನ್ನು ನೆನೆದು ವಿಡಿಯೋ ಶೇರ್ ಮಾಡಿ, ನೀವು ಎಂದಿಗೂ ನಮಗೆ ಪ್ರೇರಣೆ ಎಂದು ಗೌರವ ಸಲ್ಲಿಸಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ವಿನಮ್ರ ಶೃದ್ಧಾಂಜಲಿ ಮಾಡಿದದ್ದರೆ. ಅವರು ಸಮರ್ಥ ಮತ್ತು ಸಮೃದ್ಧ ಭಾರತದ…
ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್ನ ಕರಾವಳಿಗೆ ಅಪ್ಪಳಿಸಲಿದೆ. ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ. ಮುಂಬೈನಿಂದ ಮುಂದೆ ಸಾಗಿದ…
ಭಾರತವನ್ನು ಸುಮಾರು ಮುನ್ನೂರು ವರ್ಷ ಆಳಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಭಾರತ ದೇಶವನ್ನು ಆಳಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು. 1526 ರಿಂದ 1857 ರವರೆಗೂ ನಮ್ಮ ದೇಶವನ್ನು ಆಳಿದರು. ಮೊಗಲ್ ರಾಜ್ಯ ಪತನದ ನಂತರ ಅವರ ವಂಶಸ್ಥರು ಎಲ್ಲಿಗೆ ಹೋದರು ಎಂದು ಗೊತ್ತಾಗಲಿಲ್ಲ. ಆದರೆ ಈಗ ಮೊಘಲ್ ವಂಶದ…