ಉಪಯುಕ್ತ ಮಾಹಿತಿ

ಮನೆಯಲ್ಲಿ ನೀವು ಇಡಬೇಕಾದ ವಾಸ್ತು ಗಿಡಗಳು ಮತ್ತು ಅದರ ಪರಿಣಾಮಗಳು; ನೀವು ತಪ್ಪದೇ ತಿಳಿಯಬೇಕಾದ ಸಂಗತಿಗಳು….

829

ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. 
ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ ಕೆಲವೊಂದು ವಾಸ್ತು ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಸಮಸ್ಯೆಗಳು ಪರಿಹಾರವಾಗುವುದು. ಹಣಕ್ಕಾಗಿ ಇರುವಂತಹ ಕೆಲವೊಂದು ವಾಸ್ತು ಸಸ್ಯಗಳು ಯಾವುದೆಂದರೆ ಮನಿ ಪ್ಲ್ಯಾಂಟ್, ಅದೃಷ್ಟದ ಬಿದಿರು, ಪೀಸ್ ಲಿಲಿ, ಸಿಂಗೊನಿಯಮ್ ಗಳು, ಅಥುರಿಯಮ್ ಗಳು ಮತ್ತು ಜೇಡ್ ಗಳು ಇದರಲ್ಲಿದೆ. ಹಣವನ್ನು ಆಹ್ವಾನಿಸಲು ಅದೃಷ್ಟದ ಬಿದಿರು ಮತ್ತು ಮನಿ ಪ್ಲ್ಯಾಂಟ್ ನ್ನು ಮನೆಯಲ್ಲಿ ಇಡುವುದು ಸಾಮಾನ್ಯ.

ವಾಸ್ತು ಪ್ರಕಾರ ಅದೃಷ್ಟದ ಬಿದಿರು : ಫೆಂಗ್ ಶೂಯಿ ಅದೃಷ್ಟದ ಬಿದಿರನ್ನು ಮನೆಯಲ್ಲಿ ಇಡಬೇಕು ಎಂದು ಸಲಹೆ ನೀಡುತ್ತದೆ. ಇದು ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿದೆ. ಇದನ್ನು ನೀವು ಖರೀದಿ ಮಾಡುವುದು ತುಂಬಾ ಒಳ್ಳೆಯದು. ಇದು ಆನ್ ಲೈನ್ ಮತ್ತು ಅಂಗಡಿಯಲ್ಲೂ ಸಿಗುವುದು. ಇದು ನೀರು ಮತ್ತು ಮಣ್ಣಿನಲ್ಲಿ ಎರಡರಲ್ಲೂ ಬೆಳೆಯುವುದು. ಇದು ಚಿಕಣಿ ಬಿದಿರಿಗೆ ಕಂಡುಬಂದರೂ ಅದು ಡ್ರಯಕೆನಾ ಕುಲಕ್ಕೆ ಸೇರಿರುವಂತದ್ದಾಗಿದೆ. ಆಫ್ರಿಕಾ ಮೂಲದಿಂದ ಬಂದಿರುವಂತಹ ಇದರ ಎರಡು ವೈಜ್ಞಾನಿಕವಾದ ಹೆಸರುಗಳೆಂದರೆ ಡ್ರಾಕನೆ ಬ್ರಾಯುನಿ ಅಥವಾ ಡ್ರಾಕನೆ ಸ್ಯಾಂಡೇರಿಯಾನಾ. ಇದು ಮನೆಯ ಒಳಗಡೆ ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುವುದು. ಆದರೆ ಇದರ ನಿರ್ವಹಣೆ ಮತ್ತು ಆರೈಕೆಯು ತುಂಬಾ ಸುಲಭ.

ಹಣಕ್ಕಾಗಿ ಅದೃಷ್ಟದ ಬಿದಿರನ್ನು ಇಡಲು ಕೆಲವು ಸಲಹೆಗಳು •ಅದೃಷ್ಟದ ಬಿದಿರಿನಲ್ಲಿ ಎಲ್ಲಾ ಐದು ಅಂಶಗಳಾಗಿರುವಂತಹ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವು ಪ್ರತಿನಿಧಿಸುವ ಕಾರಣದಿಂದಾಗಿ ಇದು ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುವುದು. •ಮನೆಯಲ್ಲಿ ಲಕ್ಷ್ಮೀಯು ಬರಬೇಕೆಂದಿದ್ದರೆ ಆಗ ನೀವು ಈ ಅದೃಷ್ಟದ ಬಿದಿರನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. •ಉಡುಗೊರೆಯಾಗಿ ಇದನ್ನು ಪಡೆದಾಗ ಅದು ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಅದೃಷ್ಟ ತರುವುದು. •ಅದೃಷ್ಟದ ಬಿದಿರನ್ನು ಇಡುವ ವೇಳೆ ಇದರ ಸುತ್ತಲು ನಕಾರಾತ್ಮಕವಾದ ವಸ್ತುಗಳನ್ನು ಇಡಬೇಡಿ. ಅದೇನೆಂದರೆ ತುಂಡಾಗಿರುವ ಅಥವಾ ಕೆಲಸಕ್ಕೆ ಬಾರದ ವಸ್ತುಗಳನ್ನು ಇಡಬೇಡಿ.

ಮನಿಪ್ಲ್ಯಾಂಟ್ ನ್ನು ಮನೆಯಲ್ಲಿ ಇಡಲು ಕೆಲವೊಂದು ಸಲಹೆಗಳು •ಮನೆಯ ಹಾಲ್ ಅಥವಾ ವಾಸಿಸುವ ಕೊಠಡಿಯ ಆಗ್ನೇಯ ಭಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಡಲು ಸರಿಯಾದ ಜಾಗವಾಗಿದೆ. ಮನೆಯ ಆಗ್ನೇಯ ದಿಕ್ಕಿನ ಯಜಮಾನ ಗಣೇಶನಾಗಿರುವನು. ಈ ಪ್ರದೇಶದ ಆಡಳಿತಾಧಿಕಾರಿ ಶುಕ್ರ. ಗಣೇಶನು ಬರುವಂತಹ ತೊಂದರೆಗಳನ್ನು ನಿವಾರಣೆ ಮಾಡುವನು ಮತ್ತು ಶುಕ್ರನು ಸಂಪತ್ತನ್ನು ತರುವನು. ಇದರಿಂದ ಮನೆಯ ಆಗ್ನೇಯ ಭಾಗದಲ್ಲೇ ಈ ಮನಿಪ್ಲ್ಯಾಂಟ್ ನ್ನು ಇಡಬೇಕು. •ಮನೆಯ ಈಶಾನ್ಯ ಭಾಗದಲ್ಲಿ ಯಾವತ್ತಿಗೂ ಮನಿಪ್ಲ್ಯಾಂಟ್ ನ್ನು ಇಡಬಾರದು. ಈ ಭಾಗದ ಆಡಳಿತಾಧಿಕಾರಿ ಗುರು, ಇದು ಶುಕ್ರ ಗ್ರಹದ ಶತ್ರುವಾಗಿದೆ. ಈ ಜಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಟ್ಟರೆ ಅದರಿಂದ ದುರಾದೃಷ್ಟವು ಬರುವುದು. ಮರಗಳನ್ನು ನೆಡುವುದರಿಂದ ಎತ್ತರಕ್ಕೆ ಬೆಳೆಯುವ ಅಶೋಕ, ಬೇವು, ತೆಂಗಿನ ಮರ ಮತ್ತು ಗಿಡಗಳಾದ ತುಳಸಿ ಮತ್ತು ಅರಿಶಿನಗಳು ನಿಮ್ಮ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತವೆ ಹಾಗೂ ಇತರ ಸಸ್ಯಗಳಿಂದ ಎದುರಾಗಬಹುದಾಗಿದ್ದ ಕೆಟ್ಟ ಪ್ರಭಾವವನ್ನೂ ಕಡಿಮೆಗೊಳಿಸುತ್ತವೆ. ಹತ್ತಿಗಿಡ, ರೇಷ್ಮೆ ಹತ್ತಿಗಿಡ (Silky cotton plant) ಮತ್ತು ತಾಳೆ ಮರಗಳು ಮನೆಯ ಆವರಣದಲ್ಲಿರುವುದು ದುರಾದೃಷ್ಟವನ್ನು ತರುತ್ತದೆ ಎಂದು ವಾಸ್ತು ತಿಳಿಸುತ್ತದೆ. ವಿಶೇಷ ಟಿಪ್ಪಣಿ: ಮನೆಯ ಅಕ್ಕಪಕ್ಕ ಯಾವುದೇ ಗಿಡ ಅಥವಾ ಮರ ಸಾಯುತ್ತಿದ್ದರೆ ಅದನ್ನು ಆದಷ್ಟು ಬೇಗ ಅಲ್ಲಿಂದ ತೆಗೆಸಿ. ಒಣಗಿದ ಹೂವುಗಳು ಸಹಾ ದುರಾದೃಷ್ಟವನ್ನು ತರಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ, ಸೌಂದರ್ಯ

    ಈ ಕುಟುಂಬ ಹೇಗಿತ್ತು ಈಗ ಹೇಗಾಗಿದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಫಿಟ್ ಅಂಡ್ ಫೈನ್ ಆಗಿರಬೇಕೆಂದು ಹೊಸ ವರ್ಷಕ್ಕೆ ಬಹುತೇಕರು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ನಂತರದಲ್ಲಿ ಇದನ್ನು ಪಾಲಿಸುವವರು ಮಾತ್ರ ಕೆಲವೇ ಕೆಲವು ಮಂದಿ. ಆದರೆ ಚೀನಾದ ಕುಟುಂಬವೊಂದು ಇಂತಹ ನಿರ್ಧಾರ ಕೈಗೊಂಡು ಅದನ್ನು ಸಾಕಾರಗೊಳಿಸಿದ್ದಾರೆ. 2 ವರ್ಷದ ಪೋಟೋಗ್ರಾಫರ್ ಜೆಸ್ಸಿಗೆ 6 ತಿಂಗಳ ಹಿಂದೆ ಸಧೃಡ ಮೈಕಟ್ಟನ್ನು ಹೊಂದಬೇಕೆಂಬ ಬಯಕೆ ಉಂಟಾಗಿತ್ತು. ಇದನ್ನು ಆತ ತನ್ನ ಪತ್ನಿ ಬಳಿ ಹೇಳಿಕೊಂಡಿದ್ದ. ಮಗನ ನಿರ್ಧಾರವನ್ನು ಆತನ ತಾಯಿಯೂ ಬೆಂಬಲಿಸಿದ್ದಾರೆ. ಇವರೆಲ್ಲರು ಸೇರಿ ಜೆಸ್ಸಿಯ ತಂದೆಯನ್ನೂ ಒಪ್ಪಿಸಿದ್ದು. ನಾಲ್ವರು ಜಾಗಿಂಗ್ ನಿಂದ…

  • ಸುದ್ದಿ

    ಇಲ್ಲಿದೆ ನೋಡಿ ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ 18 ಸ್ಪರ್ಧಿಗಳ ಪಟ್ಟಿ..!

    ‘ಬಿಗ್ ಬಾಸ್ ಕನ್ನಡ ಸೀಸನ್ 7’ ನಿನ್ನೆ (ಅಕ್ಟೋಬರ್ 13) ಅದ್ದೂರಿಯಾಗಿ ಶುಭಾರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.  ಬಿಗ್ ಬಾಸ್ ಮನೆ ಪ್ರವೇಶ ಮಾಡಿದ  ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ. ಕಿರುತೆರೆ ಕಲಾವಿದರು, ಗಾಯಕರು, ಲೇಖಕರು ಈ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.ಹಾಸ್ಯ ನಟ ಕುರಿ ಪ್ರತಾಪ್ ರಿಂದ ಶುರುವಾದ ಬಿಗ್ ಬಾಸ್ ಮನೆ ಪ್ರವೇಶ ನಟ ಹರೀಶ್ ರಾಜ್ ಮೂಲಕ ಅಂತ್ಯವಾಯಿತು. ಹಿರಿಯ ಪತ್ರಕರ್ತ ರವಿ ಬೆಳಗೆರೆ,..  ಹಿರಿಯ ನಟ ಜೈಜಗದೀಶ್, ಹಾಸ್ಯ ನಟ ರಾಜು ತಾಳಿಕೋಟೆ, ಅಗ್ನಿಸಾಕ್ಷಿ ನಟಿ…

  • ಉಪಯುಕ್ತ ಮಾಹಿತಿ

    ಬಿಳಿ ಕೂದಲನ್ನು ಕಪ್ಪಾಗಿಸುವ ಅತೀ ಸುಲಭ ವಿಧಾನ..ಹೀಗೆ ಮಾಡಿ

    ಬಿಳಿ ಕೂದಲನ್ನು ಮರೆಮಾಚಲು ಹೇರ್ ಕಲರ್ ಗಳನ್ನು ಬಳಸುತ್ತಾರೆ. ಇಂತಹ ಕಲರ್ ಗಳು ಅನೇಕರಿಗೆ ಚರ್ಮದ ಖಾಯಿಲೆ ಅಥವಾ ಇನ್ಯಾವುದೋ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಅವುಗಳ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಿಳಿ ಕೂದಲನ್ನು ಕಪ್ಪಾಗಿಸುವ ವಿಧಾನಗಳು ಇಲ್ಲಿವೆ. ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ. ತೆಂಗಿನೆಣ್ಣೆಯೊಡನೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಿ….

  • ದೇವರು-ಧರ್ಮ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…

  • ಸುದ್ದಿ

    ರಾಯಲ್ ಆಗಿದೆ ‘Bigg Boss House’; ಇದನ್ನೊಮ್ಮೆ ನೋಡಿ,.!

    ನವದೆಹಲಿ: ಸಲ್ಮಾನ್ ಖಾನ್ ಅವರ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ‘ಬಿಗ್ ಬಾಸ್ 13’ ಪ್ರಾರಂಭಿಸಲು ಕೇವಲ ಒಂದು ವಾರ ಬಾಕಿ ಇದೆ. ಈ ಬಾರಿ ಮೊದಲ ಬಾರಿಗೆ ಪ್ರದರ್ಶನವು ಮುಂಬೈಗೆ ಸ್ಥಳಾಂತರಗೊಂಡಿದೆ. ಆದರೆ ಈ ಬಾರಿ ಸೆಟ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಕಳೆದ 12 ಋತುಗಳಿಗಿಂತ ರಾಯಲ್ ಆಗಿದೆ. ಅಂದಹಾಗೆ, ‘ಬಿಗ್ ಬಾಸ್’ ತಯಾರಕರು ಪ್ರದರ್ಶನ ಪ್ರಾರಂಭವಾಗುವವರೆಗೂ ಪ್ರದರ್ಶನವನ್ನು ಅಚ್ಚರಿಗೊಳಿಸುವಂತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ನೂತನ ಬಿಗ್ ಬಾಸ್ ನ ಕೆಲವು ಇನ್ಸೈಡ್ ಫೋಟೋಗಳನ್ನು ನಾವು…

  • ದೇವರು-ಧರ್ಮ

    ಹಿಂದೂ ಧರ್ಮದಲ್ಲಿ ಪೂಜಿಸುವ ಕಾಮಧೇನು ಗೋವಿನ ಉತ್ಪತ್ತಿಯಾಗಿರುವುದೇ ಒಂದು ರೋಚಕ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಭಾರತದಲ್ಲಿ ಹಿಂದೂ ಧರ್ಮದ ಪ್ರಕಾರ ಗೋವುಗಳಿಗೆ ತುಂಬಾ ಪೂಜ್ಯನೀಯ ಮಹತ್ವವಿದೆ. ಗೋವನ್ನು ಗೋಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂಗಳ ಪ್ರಕಾರ ಗೋವು ದೇವತೆಗಳು ವಾಸ ಮಾಡುವ ಸ್ಥಾನವಾಗಿದೆ. ಗೋವನ್ನು ಕಾಮಧೆನುವೆಂದು ಸಹ ಪೂಜಿಸಲಾಗುತ್ತದೆ. ಹಾಗಾದ್ರೆ ಪುರಾಣದ ಪ್ರಕಾರ ಗೋವನ ಉತ್ಪತ್ತಿ ಹೇಗಾಯ್ತು ಗೊತ್ತಾ ? ತಿಳಿಯಲು ಮುಂದೆ ಓದಿ… ಗೋವಿನ ಉತ್ಪತ್ತಿಯ ಬಗ್ಗೆ ಇರುವಕಥೆಯನ್ನು ‘ಶತಪಥ ಬ್ರಾಹ್ಮಣ’ ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದ ನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು. ಸುರಭಿ…