ಸುದ್ದಿ

ಟೀ ಪ್ರಿಯರಿಗೋಂದು ಸಿಹಿ ಸುದ್ದಿ, ಬೆಂಗಳೂರಿಗೆ ಬಂತು ಬಬಲ್ ಟೀ..!

40

ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್‌ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ . ಈ ಟೀ ಮೂಲತಃ ಥೈವಾನ್‌ ಟೀಯಿಂದ ಹುಟ್ಟಿಕೊಂಡಿದ್ದು, ಇದೊಂದು ಆಲ್ಕೋಹಾಲ್ ರಹಿತವಾದ, ಕಾರ್ಬೋನೇಟೆಡ್ ಅಲ್ಲದ ತಣ್ಣನೆಯ ಹಾಲಿನಿಂದ ತಯಾರಿಸಿದ ಟೀ ಇದಾಗಿದೆ. ಟಾಪಿಯೋಕ ಪರ್ಲ್ ಡ್ರಿಂಕ್, ಬಿಗ್ ಪರ್ಲ್, ಬೊಬಾ ನೈ ಚಾಯ್ ಮುಂತಾದ ಹೆಸರುಗಳು ಬಬಲ್ ಟೀಗಿದೆ.

ಇನ್ನೂ ಈ ಟೀನಲ್ಲಿ ವಿಶೆಷವಾಗಿ ಜೆಲ್ಲಿಗಳಂತಿರುವ ‘ಟ್ಯಾಪಿಕೊ ಪರ್ಲ್‌’ ಹಾಕಿರುವುದರಿಂದ ಈ ಜ್ಯೂಸ್‌ಗೆ ‘ಬಬಲ್‌ ಟೀ’ ಎಂಬ ವಿಶೇಷ ಹೆಸರು ಬಂದಿದೆ. ಪೇಯದ ಬುಡದಲ್ಲಿ ಕಾಮಕಸ್ತೂರಿ ಬೀಜದಂತೆ ಕಾಣುತ್ತಿರುತ್ತದೆ. ಅಲ್ಲದೆ ಬಬಲ್ ಟೀ ಫೇಮಸ್ ಆಗುತ್ತಿದ್ದಂತೆಯೇ ಇದರಲ್ಲಿ ಹತ್ತು ಹಲವು ರೀತಿಯ ಫ್ಲೇವರ್‌ಗಳು, ವಿಧಗಳು ಹುಟ್ಟಿಕೊಂಡಿದೆ. 1980ರಲ್ಲಿ ತೈವಾನ್‌ನ ಟೀ ಅಂಗಡಿ ಮಾಲೀಕ ಲಿಯು ಹನ್‌-ಚೀ ಎಂಬಾತ ತನ್ನ ಅಂಗಡಿಯತ್ತಾ ಜನರನ್ನು ಸೆಳೆಯಲು ಏನಾದರೂ ಹೊಸತನ್ನು ಕಂಡು ಹಿಡಿಯಬೇಕೆಂದು ಕೋಲ್ಡ್‌ ಮಿಲ್ಕ್‌ ಟೀಗೆ ಯಮ್‌, ಹಣ್ಣುಗಳು, ಸಿರಪ್‌ಗಳು ಹಾಗೂ ಟ್ಯಾಪಿಕೊ ಬಾಲ್‌ಗಳನ್ನು ಹಾಕಿ ಮೊದಲು ಈ ಪಾನೀಯವನ್ನು ತಯಾರಿಸಿದ.

ತದನಂತರ ಹತ್ತು ವರ್ಷದಲ್ಲಿ ಇದು ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಜನಪ್ರಿಯಗೊಂಡಿತು. ಸದ್ಯ ಥೈವಾನ್‌ನ ಪ್ರತೀ ಟೀ ಅಂಗಡಿಗಳೂ ಇದು ತಮ್ಮ ಹೆಗ್ಗುರುತು ಎಂಬಂತೆ ಬಬಲ್ ಟೀ ತಯಾರಿಸುತ್ತವೆ. ಇದರ ಬೇಡಿಕೆ ಹೆಚ್ಚಾಗುತ್ತಿದಂತೆಯೇ ಮತ್ತಷ್ಟು ಹೊಸ ಹೊಸ ರುಚಿಗಳನ್ನು ಕಂಡು ಹಿಡಿದು ಮಾರಲು ಆರಂಭಿಸಿದರು. ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್, ದಕ್ಷಿಣ ಆಫ್ರಿಕಾ ಅಷ್ಟೇ ಏಕೆ, ಬೆಂಗಳೂರಿನ ಮಾಲ್‌ಗಳಲ್ಲಿ ಕೂಡಾ ಈ ಬಬಲ್ ಟೀ ಎಲ್ಲರನ್ನು ಆಕರ್ಷಿಸುತ್ತಾ. ಜನಪ್ರೀತಿ ಗಳಿಸಿದೆ.

ಇನ್ನೂ ಈ ತಂಪಾದ ಪಾನೀಯದ ರುಚಿ ಹಣ್ಣು, ಅದಕ್ಕೆ ಸೇರಿಸುವ ಬೇಸ್‌ ಮತ್ತು ಸಿರಪ್‌ಗಳ ಮೇಲೆ ಆಧರಿಸಿದ್ದು, ಬಳಸುವ ಸಾಮಗ್ರಿಗಳಿಗೆ ಅನುಗುಣವಾಗಿ ಈ ಪೇಯ ಕೆಲವೊಮ್ಮೆ ಸಿಹಿ ಅಥವಾ ಕಹಿಯಾಗಿರಬಹುದು. ಅಧ್ಯಯನಗಳ ಪ್ರಕಾರ, ಒಂದು ಬಾರಿಯ ಸರ್ವಿಂಗ್‌ನ ಈ ಪೇಯದಲ್ಲಿ 38 ಗ್ರಾಂನಷ್ಟು ಸಕ್ಕರೆ ಇದ್ದು, 300ರಿಂದ 400 ಕ್ಯಾಲೊರಿ ಇರುತ್ತದೆ. ನಿಮ್ಮ ದೇಹಾರೋಗ್ಯಕ್ಕೆ ಬಬಲ್‌ ಟೀಯಲ್ಲಿ ನೀವು ಯಾವ ಹಣ್ಣು ಬಳಸುತ್ತೀರಾ? ಮತ್ತು ಎಷ್ಟು ಸಕ್ಕರೆ ಹಾಕುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಬೇಕಾದರೆ ನೀವು ಇದಕ್ಕೆ ಆಯಾ ಸೀಸನ್‌ಗೆ ತಕ್ಕಂತೆ ಮಾವು, ಬಾಳೆಹಣ್ಣು, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಇದಕ್ಕಾಗಿ ಬಳಸಬಹುದು. ಟ್ಯಾಪಿಕೋ ಪರ್ಲ್‌ಗಳಲ್ಲಿ ಪ್ರೋಟೀನ್, ವಿಟಮಿನ್ ಕೆ, ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂ ಅಧಿಕವಾಗಿದ್ದು, ಹಾಗಾಗಿ ಈ ಬಬಲ್‌ಗಳು ಟೀಗೆ ಹೆಚ್ಚಿನ ಪೋಷಕಾಂಶ ಒದಗಿಸುತ್ತವೆ

ಅಲ್ಲದೆ ಬಬಲ್‌ ಟೀ ತಯಾರಿಸುವಾಗ ಅತಿಯಾಗಿ ಸಕ್ಕರೆ ಹಾಗೂ ಫ್ಲೇವರ್ ಬಳಸಿದರೆ ಖಂಡಿತಾ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಅವಾಯ್ಡ್ ಮಾಡಿ ಹಣ್ಣುಗಳನ್ನು ಬಳಸಿ ತಯಾರಿಸಿದರೆ ಪೇಯವು ಸಹಜವಾಗಿಯೇ ಸಿಹಿಯಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಸದ್ಯ ಭಾರತದಲ್ಲಿ ಫೇಮಸ್ಆಗಿರುವ ಈ ಟೀನಲ್ಲಿ ಹಲವು ವೆರೈಟಿಗಳಿದ್ದು, ಕಾಫಿ ಬಬಲ್ ಟೀ, ಕೋಕೋನಟ್ ಬಬಲ್ ಟೀ, ಮ್ಯಾಂಗೋ ಬಬಲ್ ಟೀ, ಕ್ಲಾಸಿಕ್ ಬಬಲ್ ಟೀ ಹಾಗೂ ಸ್ಟ್ರಾಬೆರಿ ಆಲ್ಮಂಡ್ ಮಿಲ್ಕ್ ಬಬಲ್ ಟೀ ಎಂಬುವುದು ಎಲ್ಲೆಡೆ ದೊರೆಯುತ್ತಿದೆ. ಹಾಗದರೆ ಇನ್ನೂ ಯಾಕ್ ಯೋಚನೆ ಮಾಡುತ್ತಿದ್ದೀರಾ? ನೀವು ಟೆಸ್ಟ್ ಮಾಡಿಲ್ಲವಾದಲ್ಲಿ ಒಮ್ಮೆ ಹೋಗಿ ಬಬಲ್ ಟೀಯನ್ನು ಟ್ರೈ ಮಾಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಚುನಾವಣೆ

    ಕರ್ನಾಟಕ ಮೇ.೧೦ ಚುನಾವಣೆ

    ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು,…

  • ಆಧ್ಯಾತ್ಮ

    ದೇವಸ್ಥಾನದಲ್ಲಿ ಪ್ರದಕ್ಷಿಣೆ ಯಾಕೆ ಮಾಡಬೇಕು ಗೊತ್ತಾ! ಈ ಕಾರಣಕ್ಕಾಗಿ ಮಾಡಬೇಕು!

    ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಪ್ರದಕ್ಷಿಣೆ ಹಾಕಬೇಕು? ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ. ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಯು ನಮ್ಮೆಲ್ಲರಿಗೆ ತಿಳಿದಿರುವಂತಾಗಿದೆ. ಶಿವ…

  • ಜ್ಯೋತಿಷ್ಯ

    ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗವಿದ್ದು ಧನಾಗಮನವಾಗಲಿದೆ…ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 3 ಫೆಬ್ರವರಿ, 2019 ನೀವು ದೀರ್ಘಕಾಲದಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ಕುಟುಂಬದ…

  • ನೆಲದ ಮಾತು

    ಪಾಕ್ ಗಡಿಗೆ ಸಂಬಂದಿಸಿ,ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..!ತಿಳಿಯಲು ಇದನ್ನು ಓದಿ..

    ಭಾರತೀಯ ಸೇನೆ ಮತ್ತೊಮ್ಮೆ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ.ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮತ್ತೊಮ್ಮೆ ತಕ್ಕ ತಿರುಗೇಟು ನೀಡಿದೆ.

  • ಸುದ್ದಿ

    ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ..!ಈ ವಿಚಿತ್ರ ಜೀವಿಯ ಬಗ್ಗೆ, ವಿಶ್ವದಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ…

    ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.

  • ಜೀವನಶೈಲಿ

    ತನ್ನ ಸಂಗಾತಿ ಜೋತೆಗಿದ್ರೂ ಬೇರೆ ಹುಡುಗಿಯರನ್ನು ನೋಡುವ ಅಭ್ಯಾಸ ಏಕೆ ಗೊತ್ತಾ..?

    ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ ತೆಗೆದುಕೊಂಡ್ರೆ ಓಕೆ, ಇಲ್ಲದೇ ಇದ್ರೆ ಬ್ರೇಕಪ್ ಕೂಡ ಆಗಿಬಿಡಬಹುದು. ಎಂಥಾ ಸುದೀರ್ಘ ಕಾಲದ ಪ್ರೇಮಮಯ ಸಂಬಂಧವಾಗಿದ್ರೂ ಇತರರ ಕಡೆಗೆ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಸಂಶೋಧಕರು. ಯಾಕೆ ಎಲ್ಲರೂ ಈ ರೀತಿ ಮಾಡ್ತಾರೆ ಅನ್ನೋದಕ್ಕೆ ಕೂಡ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಹಜ. ಮಹಿಳೆ ಸಾಮಾನ್ಯವಾಗಿ…