ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ಎಂದರೆ ಪುಣ್ಯಭೂಮಿಯೇ ಸರಿ!! ಇಲ್ಲಿರುವ ಕೆಲವೊಂದು ನಿಗೂಢ ಸ್ಥಳಗಳು ಹಾಗೂ ಕೆಲವೊಂದು ವಿಚಾರಗಳು ಅಚ್ಚರಿಯನ್ನು ಮೂಡಿಸುತ್ತದೆ!! ಅದರ ಬಗ್ಗೆ ಎಷ್ಟೂ ಪರಿಶೀಲನೆ ನಡೆಸಿದರೂ ಏನೋ ದೈವೀ ಶಕ್ತಿ ಎಂಬುವುದನ್ನು ನಂಬಲೇ ಬೇಕಾಗುತ್ತದೆ!! ಇಂತಹ ಕೆಲವೊಂದು ಸಂಗತಿಗಳಿಗೂ ವಿಜ್ಞಾನಿಗಳಿಗೂ ಸವಾಲಾಗಿರುವುದಲ್ಲದೆ ಅಚ್ಚರಿಯನ್ನುಂಟು ಮಾಡಿಸುತ್ತದೆ..

ಈಗಾಗಲೇ ಭಾರತದಲ್ಲಿ ಹಲವಾರು ಕೋಟೆಗಳನ್ನು ನಾವು ಕಂಡಿದ್ದೇವೆ.. ಆದರೆ ಯಾವತ್ತಾದರೂ ತಲೆಕೆಳಗಾದ ರಹಸ್ಯ ಕೋಟೆಯ ಬಗ್ಗೆ ಯಾರಾದರೂ ಕೇಳಿದ್ದೀರಾ?! ತಲೆಕೆಳಗಾದ ಕೋಟೆ ಅಂದಾಗಲೇ ಅಚ್ಚರಿಯನ್ನುಂಟು ಮಾಡುತ್ತೆ ಅಲ್ವಾ?! ಹೌದು ಇಂತಹ ಕೋಟೆ ಉತ್ತರಖಂಡದ ಉದಮ್ ಸಿಂಗ್ ನಲ್ಲಿನ ಕಾಶಿಪುರದಲ್ಲಿದೆ. ಇಲ್ಲಿನ ಅಚ್ಚರಿಯೆಂದರೆ ಈ ಕೋಟೆಯ ಉಪ್ಪರಿಗೆ ಮೇಲೆ ನೆಲವಿದೆ. ಹಾಗೂ ಕೋಟೆಯ ಕೆಳಗಿನ ಭಾಗದಲ್ಲಿ ಆಕಾಶವಿದೆ.ಈ ವರೆಗೂ ಈ ಕೋಟೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆ ಸ್ಥಳದಲ್ಲಿ ಅವಶೇಷಗಳೂ ಸಿಗಲಾರಂಭಿಸಿದ ನಂತರ ಪುರಾತತ್ವ ವಿಭಾಗ ಇದರ ಪರಿಶೀಲನೆ ನಡೆಸಿದ್ದು ಇದು ಪಾಂಡವರಿಂದ ನಿರ್ಮಿಸಲ್ಪಟ್ಟಿದ್ದು ಈ ಕೋಟೆಯು ಮಹಾಭಾರತದ ಕಾಲದ್ದು ಎನ್ನಲಾಗುತ್ತದೆ. ಅದಲ್ಲದೆ ಪಾಂಡವರು ಶಿಕ್ಷಣ ಪಡೆದಿದ್ದು ಇಲ್ಲಿಯೇ ಎಂಬುದಕ್ಕೆ ಕೆಲ ಸಾಕ್ಷ್ಯಾಧಾರಗಳು ದೊರಕಿವೆ.. ದ್ರೋಣಾಚಾರ್ಯರು ಅರ್ಜುನನಿಗೆ ಬಿಲ್ಲುವಿದ್ಯೆ ಕಲಿಸಿದ್ದು ಇಲ್ಲೇ ಎನ್ನಲಾಗುತ್ತದೆ.

ಈ ಕೋಟೆಯು ತಲೆಕೆಳಗಾಗಿರುದಕ್ಕೆ ಯಾವುದೋ ಶಕ್ತಿ ಮೂಲಕ ಇದನ್ನು ತಲೆಗೆಳಗೆ ಮಾಡಲಾಗಿದೆ ಎನ್ನಲಾಗುತ್ತದೆ. ಯುಗ ಬದಲಾಗುವ ಜೊತೆಗೆ ಈ ಕೋಟೆಯು ನೆಲದೊಳಗೆ ಹುದುಗಿ ಹೋಗಿದೆ ಎನ್ನಲಾಗಿದ್ದು ಈ ನೆಲದೊಳಗೆ ಯುಗಪುರಾಣ ರಹಸ್ಯ ಅಡಗಿದೆ ಎನ್ನಲಾಗುತ್ತದೆ. ಪುರಾತತ್ವ ವಿಭಾಗವು ಈ ನೆಲವನ್ನು ಅಗೆದು ಪರೀಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಹಲವಾರು ರಹಸ್ಯ ವಿಚಾರಗಳು ದೊರಕಿವೆ..ಈಗಾಗಲೇ, ಶತಶತಮಾನಗಳಷ್ಟು ಹಿಂದಿನ ಸಂಗತಿಗಳು ಭೂಗರ್ಭದಲ್ಲಿ ಹುದುಗಿ ಹೋಗಿ ಅದೆಷ್ಟೋ ವಿಚಾರಗಳು ಉತ್ಖನನ ವೇಳೆಗೆ ಸಿಕ್ಕಿರುವ ವಿಚಾರಗಳ ಬಗ್ಗೆ ತಿಳಿದೇ ಇದೆ!! ಆದರೆ ರಾಮಾಯಣ, ಮಹಾಭಾರತಗಳು ನಡೆದೇ ಇಲ್ಲ, ಇದೊಂದು ಕಟ್ಟು ಕಥೆಯೆಂದು ಹೇಳಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದ ಬುದ್ಧಿಜೀವಿಗಳು ಇಲ್ಲಿ ಮತ್ತೆ ಉತ್ತರ ದೊರಕುವಂತಾಗಿದೆ!!

ಮಹಾಭಾರತದ ಕಾಲದ ವಸ್ತುಗಳು ಪುರಾತತ್ವ ವಿಭಾಗ ಪರಿಶೀಲನೆಯಿಂದ ಅನೇಕ ಮೂರ್ತಿಗಳು ದೊರಕಿದ್ದು ಮಹಾಭಾರತದ ಕಾಲದ ವಸ್ತುಗಳು ಸಿಕ್ಕಿವೆ. ಈ ಕೋಟೆಯ ಬಗ್ಗೆ ಏನೋ ದೈವೀ ಶಕ್ತಿ ಅಡಗಿದೆ ಎಂದು ಹೇಳುತ್ತಾರೆ ಯಾಕೆಂದರೆ ಇಂತಹ ವಿಸ್ಮಯಕಾರಿ ಕೋಟೆ ಎಲ್ಲೂ ನಮಗೆ ಕಾಣ ಸಿಗುವುದಿಲ್ಲ!! ಹಿಂದೆ ಈ ಕೋಟೆ ಸರಿಯಾಗಿಯೇ ಇತ್ತು. ಆದರೆ ಯಾವುದೋ ಶಾಪದ ಕಾರಣದಿಂದ ಈ ಕೋಟೆ ತಲೆಕೆಳಗಾಗಿದೆ ಎನ್ನಲಾಗುತ್ತಿದ್ದು ಅದರ ರಹಸ್ಯ ಇನ್ನೂ ತಿಳಿದಿಲ್ಲ!! ಪುರಾತತ್ವ ಇಲಾಖೆಯ ಪರಿಶೀಲನೆ ಇನ್ನೂ ಮುಗಿಯದ ಕಾರಣ ಈಗ ಇಲ್ಲಿ ಜನರಿಗೆ ಪ್ರವೇಶ ನಿಷೇಧಿಸಲಾಗಿದ್ದು ಕಲ್ಲಿನ ಅವಶೇಷಗಳು ಸಿಗಲಾರಂಭಿಸಿದೆ…
ಅದಲ್ಲದೆ ಈ ಕೋಟೆಯ ಬಗ್ಗೆ ಇನ್ನೂ ಯಾರಿಗೂ ತಿಳಿದಿಲ್ಲ.. ಇದನ್ನು ತಲೆಕೆಳಗಾಗಿಯೇ ನಿರ್ಮಿಸಲಾಗಿತ್ತಾ ಅಥವಾ ಜನರು ಹೇಳುವಂತೆ ಯಾವುದೋ ಶಕ್ತಿಯಿಂದಾಗಿ ಈ ಕೋಟೆ ತಲೆಕೆಳಗಾಗಿದೆಯಾ ಎನ್ನುವುದು ತಿಳಿದಿಲ್ಲ. ಮತ್ತೊಂದು ವಿಚಾರವೆಂದರೆ ಈ ಕೋಟೆಯಿಂದ ಸ್ವಲ್ಪ ದೂರದಲ್ಲೇ ದ್ರೋಣ ಸಾಗರವಿದೆ. ಇದನ್ನು ದ್ರೋಣಾಚಾರ್ಯರ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಗಂಗಾ ನದಿಯಷ್ಟೇ ಪವಿತ್ರ ಎನ್ನಲಾಗುತ್ತದೆ. ಇಲ್ಲಿ ದ್ರೋಣಾಚಾರ್ಯರ ಶಿಷ್ಯರು ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ. ಅದಲ್ಲದೆ ಈ ಕೋಟೆಯ ಬಗ್ಗೆ ಇನ್ನೂ ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಯುತ್ತಿದೆ..ಆದರೆ ಪ್ರಪಂಚದಲ್ಲಿ ನಡೆಯುವ ಅದೆಷ್ಟೋ ವಿಚಿತ್ರಗಳು ಒಂದು ಕ್ಷಣ ನಮ್ಮ ಕಣ್ಣು ತೆರೆಸುತ್ತವೆ. ಅಷ್ಟೇ ಅಲ್ಲದೇ, ಈ ವಿಚಿತ್ರಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಅದನ್ನೂ ಪರೀಕ್ಷಿಸಲೂ ಮುಂದಾಗುತ್ತೇವೆ ಕೂಡಾ!!! ದೇವರು ಇದ್ದಾನೆಯೇ ಅಥವಾ ಇಲ್ಲವೋ ಎಂಬ ಗೊಂದಲ ಇರುವವರಿಗೆ, ದೇವರು ಇಲ್ಲ ಎಂದು ವಾದಿಸುವವರ ಕಣ್ಣು ತೆರೆಸಬೇಕು ಎಂದು ಆ ಭಗವಂತನು ನಮಗೆ ಇಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾನೋ ಏನೋ ಗೊತ್ತಿಲ್ಲ!!… ಇಂತಹ ವಿಸ್ಮಯಗಳನ್ನು ನಾವು ನಂಬಲೇ ಬೇಕು….
ಆದರೆ ಇಂತಹ ರಹಸ್ಯ ಕೋಟೆಗಳು ವಿಜ್ಞಾನಿಗಳಿಗೂ ಅಚ್ಚರಿಯನ್ನುಂಟು ಮಾಡುತ್ತಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವ ಹಾಗೆ ಆಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ…
ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜುಲೈ 1 ರೊಳಗೆ ಜಿಎಸ್ಟಿ ಹೊರತರಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಧರಿಸಿವೆ. ಹಾಗಾದರೆ GST ಎಂದರೇನು? …
ಈಗಿನ ಮದುವೆಗಳ ಟ್ರೆಂಡೇ ಬದಲಾಗಿದೆ.ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ,ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ.ಆದ್ರೆ ಇಲ್ಲೊಂದು ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದರಿಂದ, ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ನಡೆದಿದೆ.
ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..
ಮನೆ ಬಾಗಿಲಿಗೆ ಆಹಾರ ವಿತರಿಸುವ ಜೊಮ್ಯಾಟೋ ವಿತರಕ ವ್ಯವಸ್ಥೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ವಿಚಿತ್ರ ಆರೋಪವೊಂದು ಕೇಳಿಬಂದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹೌದು ಮಹಾರಾಷ್ಟ್ರದ ಪುಣೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದ್ದು ಫುಡ್ ಡೋರ್ ಸ್ಟೆಪ್ ಡೆಲಿವರಿ ಮಾಡುವ ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ನಾಯಿ ಕಳ್ಳತನದ ಆರೋಪ ಕೇಳಿ ಬಂದಿದೆ. ಪುಣೆಯ ಕಾವೇರಿ ರಸ್ತೆಯಲ್ಲಿ ವಾಸವಾಗಿರುವ ವಂದನಾ ಎಂಬಾಕೆ ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದು…
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು‘ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್. ಧಾರಾವಾಹಿಯಲ್ಲಿ ಮನೆ ಕೆಲಸದವಳ ಪಾತ್ರದಲ್ಲಿ ಕಾಣಿಸಿಕೊಂಡ ಮೋಕ್ಷಿತಾಗೆ ಇತ್ತೀಚೆಗೆ ನಡೆದ ‘ಜೀ ಕುಟುಂಬ ಅವಾರ್ಡ್ಸ್’ನಲ್ಲಿ ಬೆಸ್ಟ್ ಲೀಡ್ ಫಿಮೇಲ್ ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೆ ಧಾರಾವಾಹಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಗೆ ಭಾರೀ ಜನಮನ್ನಣೆ ಕೂಡ ಲಭಿಸಿತ್ತು. ಪಾರು ಪಾತ್ರಧಾರಿ ಮೋಕ್ಷಿತಾ ಪೈ ಅಕ್ಟೋಬರ್ 22ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸರ್ಜಾಪುರದಲ್ಲಿರುವ ‘ತಾಯಿಮನೆ’ ಅನಾಥಾಶ್ರಮದಲ್ಲಿ 100ಕ್ಕೂ ಅಧಿಕ ಮಕ್ಕಳಿಗೆ ಬೆಳಿಗ್ಗಿನ ತಿಂಡಿಯನ್ನು ತಮ್ಮ ಕೈಯ್ಯಾರೆ ಬಡಿಸಿ ಖುಷಿಯಿಂದ ಬರ್ತಡೇ ಆಚರಿಸಿಕೊಂಡಿದ್ದಾರೆ….