ಸಂಬಂಧ

ಲಿವ್ ಇನ್ ರಿಲೇಶನ್ಶಿಪ್’ನಲ್ಲಿದ್ದ ತಂದೆ ತಾಯಿಗೆ ಮದುವೆ ಮಾಡಿಸಿದ ಮಕ್ಕಳು ಮತ್ತು ಮೊಮ್ಮಕ್ಕಳು!ಶಾಕ್ ಆಗ್ತೀರಾ, ಈ ಲೇಖನಿ ಓದಿ…..

1105

ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.

ಆದರೀಗ ಉತ್ತರ ಪ್ರದೇಶದಲ್ಲಿ ಬಿನ್ನವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಬಾರಾಂಬರಿ ಜಿಲ್ಲೆಯಲ್ಲಿ ಮದುವೆಯೊಂದು ನಡೆದಿದ್ದು, ಇಲ್ಲಿದ್ದ ವರ 80ರ ಹರೆಯದವರು ಹಾಗೂ ವಧುವಿಗೆ 70 ವರ್ಷ.

ಆದರೆ ಈ ಮದುವೆ ಇಷ್ಟೊಂದು ಚರ್ಚೆಗೀಡಾಗಲು ಕಾರಣವಾಗಿದ್ದೇನೆಂದರೆ ವಧು- ವರರಿಬ್ಬರೂ ಪ್ರೇಮಿಗಳಾಗಿದ್ದು, ಕಳೆದ 50 ವರ್ಷಗಳಿಂದ ಜೊತೆಗಿದ್ದರು ಅಂದರೆ ಲಿವ್ ಇನ್ ರಿಲೇಶನ್ಶಿಪ್’ನಲ್ಲಿದ್ದರು.

  • ಆರ್ಥಿಕ ಸಮಸ್ಯೆಯಿಂದ ಮದುವೆಯಾಗದ ಜೋಡಿ

ವರದಿಯನ್ವಯ ಬಾನುಪುರದಲ್ಲಿ ವಾಸವಿರುವ ಸುಕುಮಾರ್ ಹಾಗೂ ರಜ್’ಪತಾ ದೇವಿ ಇಬ್ಬರ ನಡುವೆ ಯುವ ಪ್ರಾಯದಲ್ಲೇ ಪ್ರೇಮಾಂಕುರವಾಗಿತ್ತು. ಆದರೆ ಆ ಸಮಯದಲ್ಲಿ ಸುಕುಮಾರ್ ತುಂಬಾ ಬಡವನಾಗಿದ್ದು, ರಜ್’ಪತಾಳೊಂದಿಗೆ ಮದುವೆಯಾಗುವಷ್ಟು ಹಣವೂ ಆತನ ಬಳಿ ಇರಲಿಲ್ಲ. ಹೀಗಾಗಿ ಇಬ್ಬರೂ ಮದುವೆಯಾಗದೆ ಜೊತೆಗಿರಲು ನಿರ್ಧರಿಸಿದ್ದಾರೆ. ಬಳಿಕ ದಿನಗೂಲಿ ಕೆಲಸ ಮಾಡಿ ಬಹಳ ಕಷ್ಟದಿಂದ ಜೀವನ ಸಾಗಿಸಿದ್ದಾರೆ. ಈ ವೇಳೆ ಇವರ ಕುಟುಂಬ ವೃದ್ಧಿಸಿದ್ದು, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಮಕ್ಕಳು ಕುಟುಂಬದ ಭಾಗವಾಗಿದ್ದಾರೆ.

ಬಿಡುವಿಲ್ಲದ ಜೀವನದಲ್ಲಿ ಇಬ್ಬರಿಗೂ ತಾವಿನ್ನೂ ಮದುವೆಯಾಗಿಲ್ಲ ಎಂಬ ವಿಚಾರವೇ ಮರೆತು ಹೋಗಿದೆ. ಇಂದು ಇವರ ಮಕ್ಕಳಿಗೂ ಮಕ್ಕಳಾಗಿವೆ, ಅಂದರೆ ಸುಕುಮಾರ್ ಹಾಗೂ ರಾಜ್’ಪತಾ ದೇವಿ ಇಬ್ಬರೂ ಅಜ್ಜ- ಅಜ್ಜಿ ಆಗಿದ್ದಾರೆ.

  • ಮಕ್ಕಳು ಮತ್ತು ಮೊಮ್ಮಕ್ಕಳಿಂದಲೇ ಮದುವೆ ದಿಬ್ಬಣ

ತಮ್ಮ ಜೀವನದ ಬಗ್ಗೆ ಮಾತನಾಡಿರುವ ಸುಕುಮಾರ್ ‘ತನ್ನ ಹಾಗೂ ರಾಜ್’ಪತಾ ನಡುವಿನ ಸಂಬಂಧ ಅದೆಷ್ಟು ಗಟ್ಟಿಯಾಗಿದೆ ಎಂದರೆ ಯಾವತ್ತೂ ನಮ್ಮ ಜೀವನದ ಹಾಗೂ ಸಮಾಜದಲ್ಲೆದುರಾದ ಸಮಸ್ಯೆಗಳು ನೆನಪಿಲ್ಲ’ ಎಂದಿದ್ದಾರೆ.

ಕೆಲ ತಿಂಗಳ ಹಿಂದೆ ಇಬ್ಬರೂ ತಮ್ಮ ಪರಿವಾರದೊಂದಿಗೆ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಜ್’ಪತಾ ‘ಈಗ ನಮ್ಮ ಕುಟುಂಬ ಪೂರ್ಣವಾಗಿದೆ, ಜೀವನದ ಅಂತಿಮ ಹಂತದಲ್ಲಿದ್ದೇವೆ ಹೀಗಿರುವಾಗ ನಾವ್ಯಾಕೆ ಮದುವೆಯಾಗಿ  ನಮ್ಮ ಪ್ರೀತಿಯನ್ನು ಸಮಾಜದೆದುರು ತೆರೆದಿಡಬಾರದು ಎಂದು ತಮ್ಮ ಮನದ ಮಾತನ್ನು’ ತಿಳಿಸಿದ್ದಾರೆ.

ಇದನ್ನು ಆಲಿಸಿದ ಮಕ್ಕಳು ತಾಯಿಯ ಇಚ್ಛೆಯನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದಾರೆ. ಮಕ್ಕಳೆಲ್ಲಾ ಸೇರಿ ತಂದೆ ಸುಕುಮಾರ್’ನನ್ನು ಜೀವನದ ಈ ಹಂತದಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಸಿ, ಅದ್ಧೂರಿಯಾಗಿ ತಂದೆ ತಾಯಿಗೆ ಮದುವೆ ಮಾಡಿಸಿದ್ದಾರೆ. ಈ ಮದುವೆಯಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರೂ ಪಾಲ್ಗೊಂಡಿದ್ದರು.
ಇನ್ನು ಇವರಿಬ್ಬರ ಕುರಿತಾಗಿ ಮಾತನಾಡಿದ ಗ್ರಾಮಸ್ಥರು ‘ಇಬ್ಬರೂ ನಿಜವಾದ ಪ್ರೇಮಿಗಳು. ಇವರು ಜೀವನ ನಡೆಸಿದ ರೀತಿ ನೋಡಿದರೆ ಇವರಿಬ್ಬರಿಗೆ ಮದುವೆಯಾಗಿಲ್ಲ ಎಂಬುವುದು ಗೊತ್ತೇ ಆಗುತ್ತಿರಲಿಲ್ಲ. ನಿಜಕ್ಕೂ ಇವರ ಪ್ರೀತಿ ಎಲ್ಲಾ ಪ್ರೇಮಿಗಳಿಗೆ ಆದರ್ಶವಾಗಿದೆ’ ಎಂದಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • ವೀಡಿಯೊ ಗ್ಯಾಲರಿ

    ನ್ಯಾಯಬೆಲೆ ಅಂಗಡಿಗಳು ಬಡವರಿಗೆ ಕೊಡುವ ಅಕ್ಕಿಯಲ್ಲಿ ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ.?ತಿಳಿಯಲು ಮುಂದೆ ನೋಡಿ ಶೇರ್ ಮಾಡಿ ಎಲ್ಲರಿಗೂ ತಿಳಿಯಲಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸರಕಾರಗಳು ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರ್ತಾರೆ.ಆದ್ರೆ ಅವುಗಳನ್ನು ಯತಾವತ್ತಾಗಿ ಜಾರಿಗೆ ಮಾಡುವಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಾರೆ. ಅವುಗಳಲ್ಲಿ ಒಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ಕೊಡುವ ರೇಷನ್. ಬಡವರಿಗಾಗಿ ಮೀಸಲಿರುವ ಈ ರೇಷನ್ ನ್ಯಾಯಯುತವಾಗಿ ಎಲ್ಲರಿಗೂ ಸಿಗುತ್ತಿದೆಯೇ ಎನ್ನುವ ಪ್ರಶ್ನೆಗೆ ಹಲವರ ಬಳಿ ಉತ್ತರವಿಲ್ಲ. ಆದ್ರೆ ನಾವು ನೀವೂ ಇದರ ಬಗ್ಗೆ ತಿಳಿಯುವುದು ಅತ್ಯಾವಶ್ಯಕ.ಯಾಕೆಂದ್ರೆ ನಮಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಅಂದ್ರೆ, ಪಡಿತರ ಅಂಗಡಿಗಳ ಮಾಲೀಕರು ಹೇಗೆಲ್ಲಾ ಮೋಸ…

  • ಸುದ್ದಿ

    ರಾತ್ರಿ ಉಳಿದ ಅನ್ನ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ..!

    ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಮತ್ತೆ ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದ್ರೆ ಇನ್ನು ಮುಂದೆ ಮಿಕ್ಕ ಅನ್ನವನ್ನು ಕಸಕ್ಕೆ ಹಾಕಬೇಡಿ. ಅದು ಆರೋಗ್ಯದ ಸಂಪತ್ತು ಎಂಬುದನ್ನು ನೆನಪಿಡಿ. ರಾತ್ರಿ ಅನ್ನ ಮಿಕ್ಕಿದ್ದರೆ, ಅದನ್ನು ಒಂದು ಮಡಿಕೆಯಲ್ಲಿ ಹಾಗೆ ಇಡಿ. ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರವಾಗದಿರಬಹುದು. ಆದ್ರೆ…

  • ಜೀವನಶೈಲಿ

    ನೀವ್ ಈ ವಸ್ತುಗಳನ್ನು ಮುಟ್ಟಿದ್ರೆ,ದುರಾದೃಷ್ಟ ನಿಮ್ಮ ಬೆನ್ನು ಬೀಳುತ್ತೆ..!ಶಾಕ್ ಆಗ್ಬೇಡಿ!ಈ ಲೇಖನಿ ಓದಿ…

    ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಾನೂ ತುಂಬಾ ಎತ್ತರಕ್ಕೆ ಬೆಳೆಯಬೇಕು,ಎಲ್ಲರಂಚೆನ್ನಾಗಿ ಬದುಕಬೇಕು, ತಾವು ಶ್ರೀಮಂತರಾಗಬೇಕು ಎಂಬ ಆಸೆಯಿಂದ, ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ, ಆದ್ರೆ ತಾವು ಎಷ್ಟು ದುಡಿದ್ರೂ ಕೆಲವರಿಗೆ ಮುಂದೆ ಬರಲು ಸಾಧ್ಯವಾಗುವುದಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ.

  • ಗ್ಯಾಜೆಟ್

    ನಿಮ್ಮ ಮೊಬೈಲ್ ನೀರಿಗೆ ಬಿದ್ರೆ,ಏನ್ ಮಾಡಬೇಕು..?ಏನ್ ಮಾಡಬಾರದು..?ತಿಳಿಯಲು ಈ ಲೇಖನ ನೋಡಿ…

    ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ. ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ.

  • ಸುದ್ದಿ

    ಜೆಡಿಎಸ್ ಪಕ್ಷ ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದೆ…ಕಾರಣ?

    ಕಾಂಗ್ರೆಸ್ ಪಕ್ಷದ ಶಾಸಕರು ಸಾಲು ಸಾಲು ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ಯುತ್ತಿರುವ ಸಂದರ್ಭದಲ್ಲೇ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಆಡಳಿತಾರೂಢ ಜೆಡಿಎಸ್ ಪಕ್ಷ ಬಿಜೆಪಿ ಜತೆ ಕೈ ಜೋಡಿಸಲು ಮುಂದಾಗಿದೆ.ನಿನ್ನೆ ತಡರಾತ್ರಿವರೆಗೂ ಜೆಡಿಎಸ್ ಹಾಗೂ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದು, ಉಭಯ ಪಕ್ಷಗಳು ತಮ್ಮೆಲ್ಲ ಹಿಂದಿನ ಮನಸ್ತಾಪಗಳನ್ನು ಬದಿಗೊತ್ತಿ ಹೊಸದಾಗಿ ಮೈತ್ರಿ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್…