ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅದೊಂದು ಊರು ಇದೆ ಅಲ್ಲಿ ಹೆಂಗಸರದ್ದೇ ಕಾರುಬಾರು ! ಅಲ್ಲಿನ ಮನೆಯ ಪ್ರತಿಯೊಂದು ನಿರ್ಣಯಗಳೂ ಕೂಡ ಮಹಿಳಾ ನಿರ್ಧರಿತವಾಗಿರುತ್ತವೆ. ಅದೂ ಸಾಲದೆಂಬಂತೆ ನಮ್ಮ ಕಡೆ ಹುಟ್ಟಿದ ಮಕ್ಕಳ ಹೆಸರಿನ ಜೊತೆಗೆ ತಂದೆಯ ಹೆಸರು ಸೇರಿಸುವುದು ಸಂಪ್ರದಾಯಿಕವಾಗಿದೆ. ಆದರೆ ಆ ಊರಿನಲ್ಲಿ ಮಕ್ಕಳ ಹೆಸರಿನ ಜೊತೆ ತಾಯಿಯ ಹೆಸರನ್ನು ಸೇರಿಸುತ್ತಾರೆ ಎಂಬುದು ಆಶ್ಚರ್ಯಕರ ವಿಚಾರ .

ಅದಲ್ಲದೆ ಈ ಊರಿನ ವಿಚಾರವು ಬಿ.ಬಿ.ಸಿ ಯಂತಹಾ ಅಂತರಾಷ್ಟ್ರೀಯ ಚಾನಲ್ ಗಳಲ್ಲೂ ಕೂಡ ಬಹಳ ಸಲ ಹೊಗಳಲ್ಪಟ್ಟಿದೆ !ಅಂದರೆ “ಈ ಊರಿನಾಗೆ ಹೆಂಗಸ್ರುದೇ ಕಾರುಬಾರು ನೋಡ್ಕಳಿ “ಅಂತೇನೂ ಆ ಚಾನಲ್ಲಿನವರು ಹೊಗಳಿಲ್ಲ ! ಅವರು ಹೊಗಳಿರುವುದು “ಈ ಊರು ಇಡೀ ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಚವಾದ ಊರು ಹಾಗೂ ಅತ್ಯಂತ ಸುಶಿಕ್ಷಿತ ಜನರು “ಎಂದು ಹೊಗಳಿದ್ದಾರೆ .
ಅದಲ್ಲದೆ ಇವರೆಲ್ಲರೂ ಹೊಗಳುವ ಮುಂಚೆಯೇ ಆ ಊರಿಗೆ “ದೇವರ ಸ್ವಂತದ ಉದ್ಯಾನವನ”ಎಂಬ ಹೆಸರು ಅಂಟಿಕೊಂಡಿತ್ತು ! ಸರಿಸುಮಾರು ‘ದೇವರ ಸ್ವಂತ ನಾಡು’ಎಂದು ಹೆಸರು ಪಡೆದಿರುವ ಕೇರಳಕ್ಕೆ ಸಡ್ಡು ಹೊಡೆಯುವಂತಹಾ ನಿಸರ್ಗ ಈ ಊರಿನ ಹೆಮ್ಮೆ !
ಈ ಊರು ಇರುವುದು ಭಾರತದ ಮೇಘಾಲಯದಲ್ಲಿ .ಊರಿನ ಹೆಸರು ಮೌಲಿನ್ನಾಂಗ್ ಎಂದಿದೆ.ಇಂತಹದಕ್ಕಿಂತಲೂ ಸಾವಿರಪಟ್ಟು ಹೆಚ್ಚು ಮಹಿಳಾ ಸ್ವಾತಂತ್ರ್ಯ ಇರುವ ಮತ್ತೊಂದು ಸಮುದಾಯವಿದೆ ಅದು ಇರುವುದು ಸಹಾರಾ ಮರುಭೂಮಿಯ ಅಕ್ಕ ಪಕ್ಕ .ಅದರ ಹೆಸರು “ಟೌರೆಗ್” .ಅದೊಂದು ವಿಚಿತ್ರ ಮುಸ್ಲಿಂ ಸಮುದಾಯ.

ಈ ಸಮುದಾಯದಲ್ಲಿ ನಾವೀಗ ನೋಡುತ್ತಿರುವಂತೆ ಹೆಂಗಸರೆಲ್ಲಾ ಮುಖ ಮುಚ್ಚುವ ಬುರ್ಕಾ ಹಾಕಿಕೊಂಡು ಜೀವನ ಸಾಗಿಸುವುದಿಲ್ಲ. ಈ ಸಮುದಾಯವು ಪ್ರಪಂಚದ ಎಲ್ಲ ಮುಸ್ಲಿಂ ಸಮುದಾಯಕ್ಕಿಂತಲೂ ವಿಭಿನ್ನ !ಇವರ ಸಮುದಾಯದಲ್ಲಿ ಗಂಡಸರೇ ಮುಖಕ್ಕೆ ಬುರ್ಖಾ ಧರಿಸಿ ಓಡಾಡಬೇಕಿದೆ ,ಹೆಂಗಸರು ತಮಗಿಷ್ಟ ಬಂದಂತಹಾ ಬಟ್ಟೆ ಧರಿಸಿ ಓಡಾಡುತ್ತಾರೆ .

ಇದು ಸಂಪ್ರದಾಯ ಎನ್ನುವುದಕ್ಕಿಂತ ಅಲ್ಲಿನ ಗಂಡಸರಿಗೆ ಇರುವ ಭಯ ಅಂತಲೇ ಹೇಳುವುದು ಸೂಕ್ತ. ಯಾಕಂದರೆ ಈ ಗಂಡಸರು ಮುಖ ಮುಚ್ಚಿಕೊಳ್ಳುವುದು ಎಲ್ಲಿ ಟೌರೆಗ್ ಮುಸ್ಲಿಂ ಮಹಿಳೆಯರು ಎತ್ಹಾಕಿಕೊಂಡು ಹೋಗಿ ಏನಾದ್ರೂ ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ ಹಾಗೆ ಮುಸುಗು ಧರಿಸುವುದು !
ಕಿಡ್ನಾಪ್ ಮಾಡಿದ ಈ ಟೌರೆಗ್ ಹೆಂಗಸರು ಕೇವಲ ಒಬ್ಬರೇ ಕಿಡ್ನಾಪ್ ಮಾಡದೇ ಹತ್ತು ಹದಿನೈದು ಹುಡುಗಿಯರು ಒಟ್ಟಾಗಿ ಸೇರಿ ಕಿಡ್ನಾಪ್ ಮಾಡುತ್ತಾರೆ ಎಂಬ ವಿಚಾರವಿದೆ.

ಈ ಮುಸ್ಲಿ ಸಮುದಾಯವು ಈಜಿಪ್ಟಿನಿಂದ ಬಂದದ್ದು ಲಿಬಿಯಾದಿಂದ ಬಂದದ್ದು ವರ್ಜೀನಿಯಾದಿಂದ ಬಂದದ್ದು ಎಂದು ಇತಿಹಾಸಕಾರರು ಮನಬಂದಂತೆ ಹೇಳುತ್ತಿದ್ದಾರಾದರೂ ದಾಖಲೆಗಳೊಂದೂ ಲಭ್ಯವಿಲ್ಲ ಆದರೂ ಈ ಮಹಿಳೆಯರು ಮಾತ್ರ ಬುರ್ಖಾ ಧರಿಸದ ಯಾವನಾದರೂ ಚೆನ್ನಾಗಿ ಕಂಡರೆ ಮಾತ್ರ ಕಿಡ್ನಾಪ್ ಮಾಡುವುದು ಮಾತ್ರ ದಾಖಲೆ ಸಹಿತ ಇತಿಹಾಸದಲ್ಲಿ ದಾಖಲೆಯಾಗಿದೆ .

ಅದರಲ್ಲಿಯೂ ಇಲ್ಲಿನ ಗಂಡಸರು ನೀಲಿ ಬಣ್ಣದ ಬುರ್ಖಾ ಧರಿಸಿರಬೇಕೆಂಬ ಕಾನೂನು ಇದೆ ಹಾಗಾಗಿ ಇವರಿಗೆ ‘ದ ಬ್ಲೂ ಮನ್ ಆಫ್ ಸಹಾರಾ’ ಎಂಬ ಹೆಸರಿದೆ ಇದರ ಜೊತೆಗೆ ಗಂಡಸರು ಸಂಜೆಯಾಗುತ್ತಿದ್ದಂತೆಯೇ ಹೊರಹೋದರೆ ಅದಾವ ಹುಡುಗಿ ನಮ್ಮನ್ನು ಅಟ್ಟಾಸಿಕೊಂಡು ಬಟ್ಟೆ ಹರಿದು ಅತ್ಯಾಚಾರ ಮಾಡಿಬಿಡುತ್ತಾಳೋ ಎಂಬ ಭಯವೂ ಇದೆ !

ಮತ್ತೊಂದು ಆಶ್ಚರ್ಯದ ವಿಚಾರ ಏನೆಂದರೆ ಈ ಹುಡುಗಿಯರು ಊರಿನಲ್ಲಿ ಯಾರ ಜೊತೆಗೆ ಬೇಕಿದ್ದರೂ ಸಂಭಂದ ಇಟ್ಟುಕೊಳ್ಳಬಹುದು. ಈ ವಿಚಾರವನ್ನು ಮನೆಯವರಾಗಲೀ ತನ್ನ ಗಂಡನಾಗಲೀ ಪ್ರಶ್ನಿಸುವಂತಿಲ್ಲ ಹಾಗೇನಾದರೂ ಪ್ರಶ್ನಿಸಿದರೆ ಅಕ್ಕಪಕ್ಕದ ಹೆಂಗಸರೆಲ್ಲಾ ಸೇರಿಕೊಂದು ಮಕ್ ಮಕ್ಕೆ ಕುಟ್ಟಿಬಿಡುತ್ತಾರೆ ಎಂಬುದೂ ಕೂಡ ಇತಿಹಾಸ ಕಂಡ ಸತ್ಯ.
ಹೀಗೆ ಗಂಡನಾದವನು ತನ್ನ ಈ ಅಪರೂಪದ ಅನೈತಿಕ ಸಂಭಂದದ ವಿರುದ್ಧ ಎಗರಾಡಿದ್ದೇ ಆದರೆ ಆ ಹೆಂಡತಿಯು ತನ್ನ ಗ್ರಾಮದ ಹಿರಿಯ ಹೆಂಗಸಿಗೆ ತಿಳಿಸಿ ತನ್ನ ಅಪರೂಪದ ಸಂಭಂದ ಹದಗೆಡಿಸುತ್ತಿರೋ ಈ ಗಂಡ ನನಗೆ ಬೇಡ ಎಂದು ಬೈಯ್ದು ಡೈವೋರ್ಸ್ ಕೊಡುತ್ತಾಳೆ.

ಈ ಡೈವೋರ್ಸ್ ಪ್ರೋಗ್ರಾಮನ್ನು ಅಕ್ಕಪಕ್ಕದ ಎರಡೂ ಊರುಗಳಲ್ಲಿ ಹಬ್ಬ ಎಂದು ಆಚರಿಸುತ್ತಾರೆ, ಏಕೆಂದರೆ ಈ ಅಮಾಯಕ ಹೆಂಡತಿಯು ಕೆಟ್ಟ ಗಂಡನಿಂದ ದೂರವಾಗಿದ್ದಾಳೆ ಹಾಗಾಗಿ ಈ ಯುವತಿಯನ್ನು ಯಾರು ಬೇಕಿದ್ದರೂ ‘ಕೂಡಾಣಿಕೆ’ ಮಾಡಿಕೊಳ್ಳಬಹುದು ಎಂದು ಈ ಹಬ್ಬ ಅಷ್ಟೇ !
ಈ ಡೈವೋರ್ಸ್ ಕೇಸಿನಲ್ಲಿ ಬಹಳ ಚೆಂದ ಇರುವ ವಿಚಾರ ಏನೆಂದರೆ ಗಂಡನೇ ತನಗೆ ಈ ಹೆಂಡತಿ ಬೇಡವೆಂದು ಗ್ರಾಮಸ್ಥರ ಮೊರೆ ಹೊಕ್ಕರೆ ನಂತರ ಗಂಡನಾದವನೇ ತನ್ನ ಹೆಂಡತಿ ಬದುಕಲಿಕ್ಕಾಗಿ ತನ್ನ ಅರ್ಧ ಆಸ್ತಿ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ಬಿಟ್ಟು ಹೆಂಡತಿ ಏನಾದರೂ ತನಗೆ ಈ ಕೆಟ್ಟ ಗಂಡ ಬೇಡವೆಂದರೆ ಸಾಕು ಆತನ ಇಡೀ ಆಸ್ತಿ ಹೆಂಡತಿಯ ಪಾಲಾಗುತ್ತದೆ !

ಇದೆಲ್ಲದರ ಹೆನ್ನೆಲೆ ಹುಡುಕಿದರೆ “ಟಿನ್ ಹಿನಾನ್”ಎಂಬ ಹೆಸರಿನ ನಾಲ್ಕನೇ ಶತಮಾನದಲ್ಲಿ ಬದುಕಿದ್ದ ರಾಣಿ ಈ ಕಾನೂನು ಮಾಡಿದ್ದು ಎಂದು ಇತಿಹಾಸ ಹೇಳುತ್ತದೆ !ಆ ರಾಣಿಯ ಚಿತ್ರ ಲಭ್ಯವಿಲ್ಲ ಆದರೂ ನಾವೆಲ್ಲ ಆ ರಾಣಿಯ ಮುಖವನ್ನೊಮ್ಮೆ ನೋಡಿಕೊಂಡು ಧನ್ಯರಾಗಬೇಕಿತ್ತು !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಉದ್ಯಮಿ ಸಿದ್ಧಾರ್ಥ್ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ. ಶಾಸಕರು ಕಾಫಿ ಡೇ ಎಂಡಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತ ಹಾಗೂ ಹಿತೈಷಿಯಾಗಿದ್ದಾರೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ ಎಂದು ಕಣ್ಣೀರು…
ಕ್ಯಾರೆಟ್ಟುಗಳಲ್ಲಿ ಕ್ಯಾಲೋರಿ ಪ್ರೋಟೀನ್ ಹಾಗೂ ಕೊಬ್ಬಿನ ಅಂಶಗಳು ತುಂಬ ಕಡಿಮೆ ಇದ್ದು, ಸುಮಾರು 86-95 ಶೇಖಡಾದಷ್ಟು ನೀರಿನ ಅಂಶವನ್ನು ಒಳಗೊಂಡಿದೆ. ಒಂದು ಮಧ್ಯಮ ಗಾತ್ರದ ಕ್ಯಾರೆಟ್ ಸೇವಿಸುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟುಗಳು ಲಭ್ಯವಾಗುತ್ತವೆ. ವಿವಿಧ ಪ್ರೋಟಿನ್, ವಿಟಮಿನ್ ಗಳನ್ನು ಹೇರಳವಾಗಿ ಹೊಂದಿರುವ ಕ್ಯಾರೆಟ್ ರೋಗ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು, ಹಲವಾರು ರೋಗಗಳನ್ನು ದೂರವಿಡುತ್ತದೆ.ರಕ್ತದ ಶುದ್ಧತೆಗೆ ಹಾಗೂ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು…
ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ 9 ನಕಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಶಿವರಾಜ ಜಾಳಿಹಾಳ, ಮಂಜುನಾಥ ಕಡೆಮನಿ, ನಿಂಗಪ್ಪ ಕಂಬಳಿ, ಮೈಲಾರಪ್ಪ, ಫಕೀರಪ್ಪ ಸೇರಿದಂತೆ 9 ಮಂದಿ ನಕಲಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಅವರು ಬೇರೆಯವರ ಹೆಸರಲ್ಲಿ ಪರೀಕ್ಷೆ ಬರೆದ ಹಿನ್ನೆಲೆಯಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಕೊಠಡಿ ಮೇಲ್ವಿಚಾರಕರು ಸೇರಿ ನಾಲ್ವರು ಅಧಿಕಾರಿಗಳನ್ನು ಪರೀಕ್ಷೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಕ್ರಮಕ್ಕೆ ಆದೇಶಿಸಲಾಗಿದೆ ಎಂದು…
ನಟ ಅಜಯ್ ರಾವ್ ಮತ್ತು ಸ್ವಪ್ನಾ ಇಬ್ಬರು ಮದುವೆಯಾಗಿದ್ದು 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಅಜಯ್ ರಾವ್ ಪತ್ನಿ ಸ್ವಪ್ನಾ ಹೊಸಪೇಟೆಯವರು. ಇವರಿಬ್ಬರದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು. ಸ್ವಪ್ನಾ ಡಿಪ್ಲೋಮಾ ಪಧವಿ ಪಡೆದಿದ್ದಾರೆ. ಅಜಯ್ ರಾವ್ ‘ಎಕ್ಸ್ಕ್ಯೂಸ್ಮೀ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದರು.’ಕೃಷ್ಣನ ಲವ್ ಸ್ಟೋರಿ, ಕೃಷ್ಣನ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ ಸನ್ ಆಫ್ ಸಿಎಂ, ಸೆಕೆಂಡ್ ಹ್ಯಾಂಡ್ ಲವರ್, ಜೈ ಭಜರಂಗಬಲಿ’ ಸಿನಿಮಾಗಳಲ್ಲೂ ಕೃಷ್ಣ ನಟಿಸಿದ್ದರು. ಕಳೆದ ವರ್ಷ ನವೆಂಬರ್ 21ಕ್ಕೆ…
ಏಪ್ರಿಲ್ನಲ್ಲಿ ನಡೆದಿದ್ದ 2019 ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಂದ ಸುದ್ದಿಗೋಷ್ಟಿ ನಡೆಯಲಿದ್ದು, ಈ ವೇಳೆ ಸಿಇಟಿ ಫಲಿತಾಂಶವನ್ನು ಪ್ರಕಟಗೊಳಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಕೆಇಎ ವೆಬ್ ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಎ. 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ…
ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು. ಏವನ್ ಮತ್ತು ಸೋಮರ್ಸೆಟ್ ಕಾನ್ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ…