ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರ್ಯಭಟ್ಟ ಕ್ರಿಶ 499 ರಲ್ಲಿ “ಸೊನ್ನೆ” (0)ಕಂಡುಹಿಡಿದ ? ನಂತರ ಬಂದ ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?
ಕ್ರಿಪೂ ಮೂರನೇ ಶತಮಾನದಲ್ಲಿ ಅಂದರೆ 800 ವರ್ಷ ಮೊದಲೇ ಪುಣೆ ಮತ್ತು ಉತ್ತರ ಪ್ರದೇಶದ ಗುಹೆಗಳಲ್ಲಿ ಸೊನ್ನೆ(ಝೀರೋ) ಕಂಡು ಬಂದಿದೆ.
ಇದಕ್ಕೂ ತುಂಬಾ ಮೊದಲು ಅಂದರೆ ಕ್ರಿಪೂ 2000 ರಲ್ಲಿ ಸುಮೇರಿಯನ್ನರು ಮತ್ತು ಬ್ಯಾಬಿಲೋನ್ ನವರೂ ಝೀರೊ ತರ ಉಪಯೋಗಿಸಿದ್ದಾರೆ.
ಆದರೆ ಅದೊಂದು ಅಂಕಿ ಅಂತ ಆಗಿರಲಿಲ್ಲ. ಖಾಲಿ ಜಾಗ ಬಿಡುತ್ತಿದ್ದರು. ಇದರಿಂದ ಗೊಂದಲ ಉಂಟಾಗುತ್ತಿತ್ತು. ಇವರಿಗೆ ಎಡದ ಅಂಕಿ ದೊಡ್ಡದು ಬಲದ ಅಂಕಿ ಚಿಕ್ಕದು ಅಂತ ಪೊಸೀಶನ್ ಸಿಸ್ಟಮ್ ಕೂಡ ಗೊತ್ತಿತ್ತು.
ಆರ್ಯಭಟ ದೊಡ್ಡ ನಂಬರ ಗಳ ಶಾರ್ಟ್ ಫಾರ್ಮ ಕಂಡು ಹಿಡಿದಿದ್ದ. ಉದಾಹರಣೆ ಗೆ – ಕ್ಯೂಘ್ರ ಅಂದರೆ 4,320,000 ಇದು ಜನಪ್ರಿಯ ಆಗಲಿಲ್ಲ.
ಬ್ರಹ್ಮ ಗುಪ್ತ ನ ನಂತರ ಅರಬ್ ಜನ ನಮ್ಮ ಪುಸ್ತಕ ಗಳನ್ನು ಭಾಷಾಂತರ ಮಾಡಿದರು. ನಮ್ಮ ನಂಬರಗಳನ್ನು ಮತ್ತು ಝೀರೋ ಕಾಪಿ ಮಾಡಿದರು. ನಮಗೆ ಗೌರವ ಕೊಡುವುದಕ್ಕಾಗಿ ಅಲ್ಲಿನ ಪಂಡಿತರು ಇದಕ್ಕೆ – ರಕಮ್ ಅಲ್ ಹಿಂದ್ ಅಂತ ಹೆಸರಿಟ್ಟರು. ಇದನ್ನು ಓದಿದಾಗ ನನಗೆ ಅನ್ನಿಸಿದ್ದು ಹಿಂದ್ ಶಬ್ದ ಆಗಿನಿಂದಲೇ ಇದೆ ಅಂತ.
ಮುಂದೆ ಅರಬ್ ರಿಂದ ಈ ಪದ್ಧತಿ ಎಲ್ಲಾ ಕಡೆಗಳಲ್ಲಿ ಹೋಗಿ ಈಗಿನ ನಂಬರ ಪದ್ದತಿ ಗೆ ಹಿಂದೂ ಅರಬ್ ಪದ್ಧತಿ ಅಂತಲೇ ಕರೆಯುತ್ತಾರೆ.
ನಂಬರ ಲೆಕ್ಕ ಮಾಡುವುದು ಅಂದರೆ ಒಂದು ಎರಡು ಮೂರು ಮಾನವ ಗುಹಾ ವಾಸಿ ಆಗಿದ್ದಾಗಲೇ ಇರುವುದರಿಂದ ಇವನ್ನು ಭಾರತೀಯರೇ ಕಂಡು ಹಿಡಿದರು ಅಂತ ಹೇಳಲಾಗುತ್ತಿಲ್ಲ. ಆದರೂ ಈಗಿನ ನಂಬರ ಪದ್ಧತಿ ಕಂಡು ಹಿಡಿದದ್ದು ಭಾರತವೇ. ಕೇವಲ ಝೀರೋ ಮಾತ್ರ ಅಲ್ಲ. ಒಂದರಿಂದ ಒಂಬತ್ತು ಹೀಗಿತ್ತು ಭಾರತ ಇಲ್ಲವಾದರೆ ಜಗತ್ತಿನ ಆಟವು ಮುಗಿದಿತ್ತು .
ಅನ್ನಲೂ ಬಹುದು. ಇದರ ಮೊದಲು 1000 ಅಂತ ಬರೆಯಲು ಓದಲು ಸುಮಾರು 1000 ಗೆರೆ ಹಾಕುತ್ತಾ ಕೂರುವ ಸ್ಥಿತಿ ಜಗತ್ತಿನ ಕೆಲವು ಕಡೆ ಇತ್ತು. ಹಾಗಂತ ಮಾಯನ್ನರೂ ಕೂಡ ತಮ್ಮದೇ ಆದ ಝೀರೋ ತರದ್ದೇ ಸ್ವಂತವಾಗಿ ಕಂಡುಹಿಡಿದಿದ್ದಾರೆ. ಆದರೆ ಎಡದ ಅಂಕಿ ದೊಡ್ಡದು, ಬಲದ ಅಂಕಿ ಚಿಕ್ಕದು ಅಂತ ಪೊಸಿಶನ್ ಸಿಸ್ಟಮ್ ಗೆ ಹೆಚ್ಚಾಗಿ ಭಾರತವೇ ಮೂಲ. ಅವರೆಲ್ಲರೂ ಕಲ್ಲಿನಲ್ಲಿ ಕೊರೆದು, ನಾವು ತಾಳೆ ಗ್ರಂಥಗಳು ಉಪಯೋಗಿಸಿದ್ದರಿಂದ ಅಧಿಕೃತ ದಾಖಲೆಗಳು ಸಿಗುತ್ತಿಲ್ಲ.
ಎಲ್ಲರಿಗೂ ಮೊದಲು ವೇದ ಕಾಲದಲ್ಲಿ ಒಂದು ಕಲ್ಪ ಅಂದರೆ 4,320,000,000 ವರ್ಷ ಗಳು .
ಸೌರವ್ಯೂಹ ದ ಉದ್ದ 1,871,206,920,000,000 ಯೋಜನಗಳು ಅಂತ ಹೇಳಿದ್ದಾರೆ. ಝೀರೋ ಬಂದಿದ್ದು ಒಂದೂವರೆ ಸಾವಿರ ವರ್ಷದ ಹಿಂದೆ ಅಂದರೆ ವೇದ ಕಾಲದಲ್ಲಿ ಈ ನಂಬರ ಕಲ್ಪಿಸಲು ಸಾಧ್ಯ ಇತ್ತೇ ?
ವೇದ ಕಾಲದಲ್ಲಿ” ದಶ, ಶತ, ಸಹಸ್ರ, ಆಯತ, ನಿಯತ, ಪ್ರಯತ, ಅರ್ಬುದ, ನಿರ್ಬುದ, ಸಮುದ್ರ, ಮಧ್ಯ, ಅಂತ, ಪರಾರ್ಥ ” ಹೀಗೆ ಲೆಕ್ಕ ಮಾಡುತ್ತಿದ್ದರಂತೆ. 2 ಆಯತ 6 ಸಹಸ್ರ 4 ಶತ 3 ದಶ 2 = 26432 ಈ ತರ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏರೋ ಇಂಡಿಯಾ 2019ರ ಏರ್ ಶೋ ನೋಡಲು ರಾಜಧಾನಿ ಬೆಂಗಳೂರಿನ ಯಲಹಂಕಕ್ಕೆ ಆಗಮಿಸಿದ್ದರು, ಎಲ್ಲರೂ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ವೈಮಾನಿಕ ಪ್ರದರ್ಶನವನ್ನು ನೋಡುವಲ್ಲಿ ಮುಳುಗಿ ಹೋಗಿದ್ದರು, ಆದರೆ ನೋಡು ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಕಷ್ಟ ಪಟ್ಟು ತೆಗೆದುಕೊಂಡಿದ್ದ ಕಾರುಗಳು ಭಸ್ಮವಾದವು. ಏರ್ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 5 ರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ 10…
ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ
ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್ಪ್ಲೇಸ್ ಆಗಿರುವ ಫ್ಲಿಪ್ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಫ್ಲಿಪ್ಕಾರ್ಟ್ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ. ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್29 ಕ್ಕೆ…
ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸೇದುವವರಿಗೆ ಯಾವುದಾದರೇನಂತೆ..? ಬೀಡಿ, ಸಿಗರೇಟ್. ಜೇಬಿನಲ್ಲಿ ಹಣ ತುಂಬಿರುವಾಗ ಸಿಗರೇಟ್ ನಂತಹ ದುಬಾರಿಗಳೇ ಬೇಕಾಗುತ್ತದೆ. ಆದರೆ ಈ ನಟ ಹಾಗಲ್ಲ. ಇವರು ಮೆಗಾ ಸ್ಟಾರ್ ನಟ. ಹಣ, ಪ್ರಚಾರ ಇದ್ದರೂ ಸಿಂಪ್ಲಿಸಿಟಿ ಫಾಲೋ ಮಾಡುತ್ತಾರೆ. ಮಲಯಾಳಂನ ಮೆಗಾ ಸ್ಟಾರ್ ನಟ ಮಮ್ಮೂಟಿ ಇಲ್ಲಿಯವರೆಗೂ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಅಲ್ಲದೇ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಕೋಟಿ,…
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…