ಉಪಯುಕ್ತ ಮಾಹಿತಿ

ಮಾರ್ಚ್ ಬಂತು.ಪರೀಕ್ಷೆ ಭಯವೇ..?ಭಯ ಬೇಡ?ಈ ಕ್ರಮಗಳನ್ನು ಅನುಸರಿಸಿ ಎಕ್ಸಾಮ್ ಭಯದಿಂದ ದೂರವಿರಿ…

989

ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಮಕ್ಕಳಿಗೆ ಟೆನ್ಷನ್ ಶುರು…. ಮಕ್ಕಳಿಗೆ ಪರೀಕ್ಷೆಯ ಟೆನ್ಷನ್ ಆದರೆ ಪಾಲಕರಿಗೆ ಮಕ್ಕಳು ಪರೀಕ್ಷೆ ಹೇಗೆ ಬರೆಯುತ್ತಾರೆಂಬ ಟೆನ್ಷನ್. ನೆನಪಿಡಿ ಟೆನ್ಷನ್ ಮಾಡಿಕೊಂಡಷ್ಟು ವಸ್ತು ವಿಷಯಗಳು ಅಸ್ಪಷ್ಟವಾಗುತ್ತಾ ಹೋಗುತ್ತವೆ. ಮಕ್ಕಳು ಹಾಗೂ ಪೋಷಕರು ಕೆಲವು ಸುಲಭ ಸೂತ್ರಗಳನ್ನು ಅನುಸರಿಸಿದರೆ ಪರೀಕ್ಷೆ ಗಳನ್ನೂ ಎಂಜಾಯ್ ಮಾಡಬಹುದು.

ಈ ಕ್ರಮಗಳನ್ನು ಅನುಸರಿಸಿ, ಪರಿಕ್ಷೆ ಭಯದಿಂದ ದೂರವಿರಿ…

  • ಮೊಟ್ಟಮೊದಲನೇಯದಾಗಿ ಪೋಷಕರೇ ನಿಮ್ಮ ಮಕ್ಕಳ ಪರೀಕ್ಷೆಗಳ ಬಗ್ಗೆ ಆತಂಕ ಪಡಬೇಡಿ. ನಿಮ್ಮ ಆತಂಕ ನಿಮ್ಮ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ಹುಟ್ಟಿಸಬಹುದು.
  • ನಿಮ್ಮ ದೈನಂದಿನ ಜೀವನದಲ್ಲಿ ಮಕ್ಕಳಿಗೋಸ್ಕರ ಒಂದು ಗಂಟೆ ಸಮಯ ಮೀಸಲಿಡಿ. ಅವರ ಜೊತೆಯಲ್ಲಿ ಕುಳಿತು ಪರೀಕ್ಷೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಿ, ಸಾಧ್ಯವಾದಲ್ಲಿ ಹೇಳಿಕೊಡಿ. ಹಾಗೆಯೇ ಪರೀಕ್ಷೆಯ ಬಳಿಕ ಅದರಲ್ಲಿ ಬಿಟ್ಟುಹೋದ ಪ್ರಶ್ನೆಗಳ ಬಗ್ಗೆ ಚರ್ಚಿಸಬೇಡಿ.

  • ದೈನಂದಿನ ಚಟುವಟಿಕೆಗಳಾದ ನಿದ್ದೆ, ಆಟ ಆಡುವುದು, ಟಿವಿ ನೋಡುವುದು, ಸ್ನೇಹಿತರೊಂದಿಗಿನ ಹರಟೆ ಯಾವುದೂ ಬೇಡ ಎನ್ನಬೇಡಿ. ಆವಾಗಲೇ ಪರೀಕ್ಷೆಯ ಬಗೆಗಿನ ಆತಂಕ ನಿವಾರಣೆಯಾಗುವುದು. ಆದರೆ ಸಾಧ್ಯವಾದಷ್ಟು ಪರೀಕ್ಷೆಗಳು ಮುಗಿಯುವವರೆಗೂ ಹೊರಗಿನ ತಿಂಡಿ ತಿನಿಸುಗಳಿಂದ ದೂರವಿರಿಸಿ.
  • ಮಕ್ಕಳೇ…. ಪರೀಕ್ಷೆಯಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ. ಪ್ರಶ್ನೆ ಸಂಖ್ಯೆಯೂ ಅಷ್ಟೇ. ಗೊತ್ತಿರದ ಪ್ರಶ್ನೆಗಳಿಗೆ ಉತ್ತರ ಯೋಚಿಸುತ್ತ ಸಮಯ ವ್ಯರ್ಥಗೊಳಿಸಬೇಡಿ. ಗೊತ್ತಿರುವ ಪ್ರಶ್ನೆಗಳಿಗೆ ಸರಿಯಾಗಿ ಸಂಖ್ಯೆ ಹಾಕಿ ಉತ್ತರ ಬರೆದುಬಿಡಿ.

  • ಪರೀಕ್ಷಾ ಸಮಯಕ್ಕಿಂತ ಕನಿಷ್ಠ 15 ನಿಮಿಷ ಮುಂಚೆನೇ ನಿಮಗಾಗಿಯೇ ಕಾಯ್ದಿರಿಸಿದ ಸ್ಥಳದಲ್ಲಿ ಹಾಜರಿರಿ. ಉತ್ತರ ಪತ್ರಿಕೆ ಕೈಗೆ ಬರುವವರೆಗೂ ಓದಬೇಡಿ. ಅದರಿಂದ confusion ಹೆಚ್ಚುತ್ತದೆ ಹೊರತು ಏನು ಲಾಭವಿಲ್ಲ. ಒಂದೊಮ್ಮೆ ಪರೀಕ್ಷಾ ಕೊಠಡಿಗೆ ಬಂದರೆ ಉತ್ತರ ಪತ್ರಿಕೆ ಕೊಡುವವರೆಗೂ ಕಣ್ಣು ಮುಚ್ಚಿ ರಿಲ್ಯಾಕ್ಸ್ ಆಗಿ. ಪರೀಕ್ಷೆ ಶುರುವಾಗುವ ಮೊದಲಿನ ಈ 10 ನಿಮಿಷಗಳು ತುಂಬಾ ಮುಖ್ಯ.
  • ಪರೀಕ್ಷೆಗೆ ಬೇಕಾಗುವ ಸಲಕರಣೆಗಳನ್ನು ಹೊರತುಪಡಿಸಿ ನಿಮ್ಮ ಬಳಿ ಇನ್ನೇನನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಅನುಮಾನಗಳೇನೇ ಇದ್ದರೂ invigilator ನ ಕೇಳಿ. ಸಹಪಾಠಿಗಳೊಂದಿಗೆ ಅನವಶ್ಯಕವಾಗಿ ಮಾತನಾಡದಿರಿ. ಇದರಿಂದ ಸಮಯವೂ ವ್ಯರ್ಥ ಜೊತೆಗೆ Bad remarks ಬರುವ ಸಾಧ್ಯತೆಗಳೂ ಉಂಟು.

ಕೊನೆಯದಾಗಿ ಒಂದು ಒಳ್ಳೆಯ ಸಲಹೆ…

ಆತಂಕದಿಂದ ಯಾವುದನ್ನೂ ಗೆದ್ದ ಉದಾಹರಣೆಗಳಿಲ್ಲ ಆದರೆ ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು. ಎಲ್ಲ ಪರೀಕ್ಷೆಗಳಿಗಿಂತ ಜೀವನ ಮುಖ್ಯ. ಕಡಿಮೆ ಅಂಕ ಗಳಿಸಿದವರಿಗೆ ಭವಿಷ್ಯವೇ ಇಲ್ಲ ಎಂಬ ಭ್ರಮೆ ಬೇಡ. ಮಕ್ಕಳಿಗೆ ಇಷ್ಟೇ ಅಂಕ ಪಡೆಯಬೇಕು, ಮೊದಲನೇ ಶ್ರೇಣಿಯಲ್ಲೇ ಉತ್ತೀರ್ಣರಾಗಬೇಕೆಂಬ ಒತ್ತಡ ಹೇರದಿರಿ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮನುಷ್ಯನ ಬುದ್ಧಿವಂತಿಕೆಯನ್ನಳೆಯುವ ಅಳತೆಗೋಲಲ್ಲ ಎಂಬ ಪುಟ್ಟ ಸತ್ಯವನ್ನು ಸದಾ ನೆನಪಿನಲ್ಲಿಡಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ