ಉಪಯುಕ್ತ ಮಾಹಿತಿ

ಮಾರ್ಚ್ ಬಂತು.ಪರೀಕ್ಷೆ ಭಯವೇ..?ಭಯ ಬೇಡ?ಈ ಕ್ರಮಗಳನ್ನು ಅನುಸರಿಸಿ ಎಕ್ಸಾಮ್ ಭಯದಿಂದ ದೂರವಿರಿ…

1210

ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಮಕ್ಕಳಿಗೆ ಟೆನ್ಷನ್ ಶುರು…. ಮಕ್ಕಳಿಗೆ ಪರೀಕ್ಷೆಯ ಟೆನ್ಷನ್ ಆದರೆ ಪಾಲಕರಿಗೆ ಮಕ್ಕಳು ಪರೀಕ್ಷೆ ಹೇಗೆ ಬರೆಯುತ್ತಾರೆಂಬ ಟೆನ್ಷನ್. ನೆನಪಿಡಿ ಟೆನ್ಷನ್ ಮಾಡಿಕೊಂಡಷ್ಟು ವಸ್ತು ವಿಷಯಗಳು ಅಸ್ಪಷ್ಟವಾಗುತ್ತಾ ಹೋಗುತ್ತವೆ. ಮಕ್ಕಳು ಹಾಗೂ ಪೋಷಕರು ಕೆಲವು ಸುಲಭ ಸೂತ್ರಗಳನ್ನು ಅನುಸರಿಸಿದರೆ ಪರೀಕ್ಷೆ ಗಳನ್ನೂ ಎಂಜಾಯ್ ಮಾಡಬಹುದು.

ಈ ಕ್ರಮಗಳನ್ನು ಅನುಸರಿಸಿ, ಪರಿಕ್ಷೆ ಭಯದಿಂದ ದೂರವಿರಿ…

  • ಮೊಟ್ಟಮೊದಲನೇಯದಾಗಿ ಪೋಷಕರೇ ನಿಮ್ಮ ಮಕ್ಕಳ ಪರೀಕ್ಷೆಗಳ ಬಗ್ಗೆ ಆತಂಕ ಪಡಬೇಡಿ. ನಿಮ್ಮ ಆತಂಕ ನಿಮ್ಮ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ಹುಟ್ಟಿಸಬಹುದು.
  • ನಿಮ್ಮ ದೈನಂದಿನ ಜೀವನದಲ್ಲಿ ಮಕ್ಕಳಿಗೋಸ್ಕರ ಒಂದು ಗಂಟೆ ಸಮಯ ಮೀಸಲಿಡಿ. ಅವರ ಜೊತೆಯಲ್ಲಿ ಕುಳಿತು ಪರೀಕ್ಷೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಿ, ಸಾಧ್ಯವಾದಲ್ಲಿ ಹೇಳಿಕೊಡಿ. ಹಾಗೆಯೇ ಪರೀಕ್ಷೆಯ ಬಳಿಕ ಅದರಲ್ಲಿ ಬಿಟ್ಟುಹೋದ ಪ್ರಶ್ನೆಗಳ ಬಗ್ಗೆ ಚರ್ಚಿಸಬೇಡಿ.

  • ದೈನಂದಿನ ಚಟುವಟಿಕೆಗಳಾದ ನಿದ್ದೆ, ಆಟ ಆಡುವುದು, ಟಿವಿ ನೋಡುವುದು, ಸ್ನೇಹಿತರೊಂದಿಗಿನ ಹರಟೆ ಯಾವುದೂ ಬೇಡ ಎನ್ನಬೇಡಿ. ಆವಾಗಲೇ ಪರೀಕ್ಷೆಯ ಬಗೆಗಿನ ಆತಂಕ ನಿವಾರಣೆಯಾಗುವುದು. ಆದರೆ ಸಾಧ್ಯವಾದಷ್ಟು ಪರೀಕ್ಷೆಗಳು ಮುಗಿಯುವವರೆಗೂ ಹೊರಗಿನ ತಿಂಡಿ ತಿನಿಸುಗಳಿಂದ ದೂರವಿರಿಸಿ.
  • ಮಕ್ಕಳೇ…. ಪರೀಕ್ಷೆಯಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ. ಪ್ರಶ್ನೆ ಸಂಖ್ಯೆಯೂ ಅಷ್ಟೇ. ಗೊತ್ತಿರದ ಪ್ರಶ್ನೆಗಳಿಗೆ ಉತ್ತರ ಯೋಚಿಸುತ್ತ ಸಮಯ ವ್ಯರ್ಥಗೊಳಿಸಬೇಡಿ. ಗೊತ್ತಿರುವ ಪ್ರಶ್ನೆಗಳಿಗೆ ಸರಿಯಾಗಿ ಸಂಖ್ಯೆ ಹಾಕಿ ಉತ್ತರ ಬರೆದುಬಿಡಿ.

  • ಪರೀಕ್ಷಾ ಸಮಯಕ್ಕಿಂತ ಕನಿಷ್ಠ 15 ನಿಮಿಷ ಮುಂಚೆನೇ ನಿಮಗಾಗಿಯೇ ಕಾಯ್ದಿರಿಸಿದ ಸ್ಥಳದಲ್ಲಿ ಹಾಜರಿರಿ. ಉತ್ತರ ಪತ್ರಿಕೆ ಕೈಗೆ ಬರುವವರೆಗೂ ಓದಬೇಡಿ. ಅದರಿಂದ confusion ಹೆಚ್ಚುತ್ತದೆ ಹೊರತು ಏನು ಲಾಭವಿಲ್ಲ. ಒಂದೊಮ್ಮೆ ಪರೀಕ್ಷಾ ಕೊಠಡಿಗೆ ಬಂದರೆ ಉತ್ತರ ಪತ್ರಿಕೆ ಕೊಡುವವರೆಗೂ ಕಣ್ಣು ಮುಚ್ಚಿ ರಿಲ್ಯಾಕ್ಸ್ ಆಗಿ. ಪರೀಕ್ಷೆ ಶುರುವಾಗುವ ಮೊದಲಿನ ಈ 10 ನಿಮಿಷಗಳು ತುಂಬಾ ಮುಖ್ಯ.
  • ಪರೀಕ್ಷೆಗೆ ಬೇಕಾಗುವ ಸಲಕರಣೆಗಳನ್ನು ಹೊರತುಪಡಿಸಿ ನಿಮ್ಮ ಬಳಿ ಇನ್ನೇನನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಅನುಮಾನಗಳೇನೇ ಇದ್ದರೂ invigilator ನ ಕೇಳಿ. ಸಹಪಾಠಿಗಳೊಂದಿಗೆ ಅನವಶ್ಯಕವಾಗಿ ಮಾತನಾಡದಿರಿ. ಇದರಿಂದ ಸಮಯವೂ ವ್ಯರ್ಥ ಜೊತೆಗೆ Bad remarks ಬರುವ ಸಾಧ್ಯತೆಗಳೂ ಉಂಟು.

ಕೊನೆಯದಾಗಿ ಒಂದು ಒಳ್ಳೆಯ ಸಲಹೆ…

ಆತಂಕದಿಂದ ಯಾವುದನ್ನೂ ಗೆದ್ದ ಉದಾಹರಣೆಗಳಿಲ್ಲ ಆದರೆ ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು. ಎಲ್ಲ ಪರೀಕ್ಷೆಗಳಿಗಿಂತ ಜೀವನ ಮುಖ್ಯ. ಕಡಿಮೆ ಅಂಕ ಗಳಿಸಿದವರಿಗೆ ಭವಿಷ್ಯವೇ ಇಲ್ಲ ಎಂಬ ಭ್ರಮೆ ಬೇಡ. ಮಕ್ಕಳಿಗೆ ಇಷ್ಟೇ ಅಂಕ ಪಡೆಯಬೇಕು, ಮೊದಲನೇ ಶ್ರೇಣಿಯಲ್ಲೇ ಉತ್ತೀರ್ಣರಾಗಬೇಕೆಂಬ ಒತ್ತಡ ಹೇರದಿರಿ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮನುಷ್ಯನ ಬುದ್ಧಿವಂತಿಕೆಯನ್ನಳೆಯುವ ಅಳತೆಗೋಲಲ್ಲ ಎಂಬ ಪುಟ್ಟ ಸತ್ಯವನ್ನು ಸದಾ ನೆನಪಿನಲ್ಲಿಡಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಈ ರಾಜ್ಯದ ದೇವಾಲಯಗಳಲ್ಲಿ ಹೊಸ ವರ್ಷದ ಆಚರಣೆ ಬ್ಯಾನ್..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯ ಅಂಗಸಂಸ್ಥೆಯಾಗಿರುವ ‘ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್‌’ ರಾಜ್ಯದ ದೇವಸ್ಥಾನಗಳಲ್ಲಿ ಹೊಸ ವರ್ಷ ಆಚರಿಸಿದಂತೆ ಆದೇಶ ಮಾಡಿದೆ.

  • ಸುದ್ದಿ

    ಹೆಬ್ಬಾವು ಕಚ್ಚಿ ಸತ್ತ ಮಹಿಳೆ ; ಸಾವಿನ ಬಳಿಕ ಮಹಿಳೆ ಮನೆಯಲ್ಲಿ 140 ಹಾವು ಪತ್ತೆ..!ಯಾಕೆ ಗೊತ್ತ?

    ಹೆಬ್ಬಾವು ಸುತ್ತಿ, ಉಸಿರುಗಟ್ಟಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಅವರ ಮನೆಯಲ್ಲಿ 140 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಮೆರಿಕದ ಇಂಡಿಯಾನಾ ಎಂಬಲ್ಲಿ 36 ವರ್ಷ ವಯಸ್ಸಿನ ಲಾರಾ ಹರ್ಸ್ಟ್ ಎಂಬ ಮಹಿಳೆಯ ದೇಹವನ್ನುಹೆಬ್ಬಾವು ಸುತ್ತಿಕೊಂಡಿತ್ತು. ಅವರು ಅದರಿಂದ ತಪ್ಪಿಸಿಕೊಳ್ಳಲುಎಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ.ಹಾಗೇ ಉಸಿರುಗಟ್ಟಿ ಅವರು ಅಸುನೀಗಿದ್ದರು. ಈ ಸಂದರ್ಭದಲ್ಲಿ ಮಹಿಳೆಯಿದ್ದ ಮನೆಯಲ್ಲಿ 140 ಹಾವಿದ್ದಿದ್ದು ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಡಾನ್ ಮುನ್ಸನ್ ಎಂಬುವವರು ಸಾಕಿದ್ದರು. ಅವರ ಬಳಿ ಲಾರಾ ಅವರು ಇಪ್ಪತ್ತಕ್ಕೂ ಹೆಚ್ಚು ಹಾವುಗಳನ್ನು ಸಾಕಲು…

  • ಜ್ಯೋತಿಷ್ಯ

    ತುಂಬಾ ಅದೃಷ್ಟವಂತರಾಗಿರುತ್ತಾರೆ ಇಂಥ ಹುಡುಗಿಯರು!ಇವರು ಮನೆಗೆ ಬಂದ್ರೆ ಬದಲಾಗುತ್ತೆ ಅದೃಷ್ಟ…

    ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ ಭಿನ್ನ ಗುಣಗಳನ್ನು ಹೊಂದಿರುತ್ತಾಳೆ. ಶಾಸ್ತ್ರಗಳ ಪ್ರಕಾರ ಕೆಲ ಮುಖ್ಯ ಗುಣಗಳನ್ನು ಹೊಂದಿರುವ ಹುಡುಗಿಯರನ್ನು ಕಣ್ಣು ಮುಚ್ಚಿಕೊಂಡು ಮದುವೆಯಾಗಬಹುದು. ಅವ್ರು ಇಡೀ ಕುಟುಂಬದ ಯಶಸ್ಸಿಗೆ ಕಾರಣವಾಗ್ತಾರೆ. ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಅನುಸರಿಸುವ, ಅದಕ್ಕೆ ಮಹತ್ವ ನೀಡುವ ಹುಡುಗಿಯರನ್ನು ಮದುವೆಯಾಗಿ ಬಂದ್ರೆ ಕುಟುಂಬದಲ್ಲಿ ಸಂತೋಷ ಮನೆ ಮಾಡಿರಲಿದೆ. ಕುಟುಂಬದ ಯಶಸ್ಸಿಗೆ…

  • ಆಧ್ಯಾತ್ಮ

    ರುದ್ರಾಕ್ಷಿ ಧರಿಸುವುದರ ಹಿಂದಿದೆ ನಿಮಗೆ ಗೊತ್ತಿಲ್ಲದ ವೈಜ್ಞಾನಿಕ ಸತ್ಯ! ಹಾಗಾದ್ರೆ ರುದ್ರಾಕ್ಷಿ ಮಹತ್ವ ಏನು ಗೊತ್ತಾ???

    ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.

  • ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

    ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

  • ಸಿನಿಮಾ

    ಚಿತ್ರೀಕರಣದ ಸೆಟ್ ನಲ್ಲೇ ಕುರಿ ಬಲಿ ನೀಡಿದ್ರಾ ರಾಧಿಕಾ ಕುಮಾರಸ್ವಾಮಿ!ಕಾರಣ ಏನು ಗೊತ್ತಾ?

    ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದು  ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ. ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ…