ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಭಾರತದ ಜೈಪುರ್ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡ
ಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು, ಕಾರಣ ಅಂದು ಅವರು ಕಟ್ಟುನಿಟ್ಟಾಗಿ “ಪರಧಾ” ಅನ್ನು (ಮುಖದ ಹೊದಿಕೆ) ಪಾಲಿಸಬೇಕಿತ್ತು

ಕೆಂಪು ಹಾಗೂ ಗುಲಾಬಿ ಮರಳುಗಲ್ಲಿನಿಂದ ಕಟ್ಟಲಾದ, ಈ ಅರಮನೆ ಜೈಪುರ್ನ ವ್ಯಾಪಾರ ಕೇಂದ್ರದ ಮುಖ್ಯ ಸಾರ್ವಜನಿಕ ರಸ್ತೆಯ ಹೃದಯ ಸ್ಥಾನದಲ್ಲಿದೆ. ಇದು ನಗರದ ಅರಮನೆಯ ಭಾಗವಾಗಿದ್ದು, ಜೆನೇನ ಅಥವಾ ಮಹಿಳೆಯರ ಕೋಣೆಗಳಿಗೆ ವಿಸ್ತರಿಸಿದೆ, ಜನಾನರ ಕೋಣೆಗಳು. ವಿಶೇಷವಾಗಿ ನಸುಕಿನಲ್ಲಿ ನೋಡಿದಾಗ ಇದು ಸೂರ್ಯೋದಯದ ಹೊಂಗಿರಣಗಳಿಂದ ಬೆಳಗಿ ಗಮನಾರ್ಹವಾಗಿ ಕಾಣುತ್ತದೆ
ಕಛ್ವಾಹ ವಂಶದ ಮಹಾರಾಜ ಸವಾಯಿ ಜೈ ಸಿಂಗ್, ರಾಜಸ್ಥಾನದ ಅರಸ ಮೂಲತಹ ಜೈಪುರ್ ನಗರವನ್ನು 1727ರಲ್ಲಿ ಯೋಜಸಿ ನಿರ್ಮಿಸಿದರು. ಹೇಗಿದ್ದರು, ಅವರ ಮೊಮ್ಮಗ ಹಾಗೂ ಮಹಾರಾಜ ಸವಾಯಿ ಮಾಧೊಸಿಂಗ್ I ರ ಮಗನಾದ, ಸವಾಯಿ ಪ್ರತಾಪ್ ಸಿಂಗ್ರವರು 1799ರಲ್ಲಿ ರಾಜಯೋಗ್ಯ ನಗರದ ಅರಮನೆಯ ಮುಂದುವರಿಕೆಯಾಗಿ ಹವಾ ಮಹಲ್ ಅನ್ನು ಕಟ್ಟಿದರು. ಹಿಂದೂ ದೇವರಾದ ಕೃಷ್ಣನ ಪ್ರತಿವಿದ್ದ ಆಳವಾದ ಭಕ್ತಿ ಪ್ರತಾಪ್ ಸಿಂಗ್ರನ್ನು ಭಗವಂತನ ಮುಕುಟ ಅಥವಾ ರುಮಾಲಾಗಿ ಅಲಂಕರಿಸಿದ ಭಂಗಿಯ ಈ ನಿರ್ಮಾಣದ ಸಮರ್ಪಣೆಗೆ ಪ್ರೇರಿಸಿತು ಎಂದು ಅನುಮಾನಿಸಲಾಗಿದೆ.ಇದರ ನಿಖರ ಇತಿಹಾಸಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲದಿದ್ದರು, ಕಟ್ಟುನಿಟ್ಟಾದ ಪರಧಾ (ಮಹಿಳೆಯರನ್ನು ಪುರುಷರು ನೋಡಲು ತಡೆಯುವ ರೂಢಿ) ಸಂಪ್ರದಾಯದ ಅಡಿಯಲ್ಲಿದ್ದ ರಾಜ ಮನೆತನದ ಮಹಿಳೆಯರು ಮಾರುಕಟ್ಟೆಯ ಕೇಂದ್ರದ ನಡಾವಳಿ ಹಾಗೂ ರಾಜಯೋಗ್ಯ ಮೆರವಣಿಗೆ ಹಾಗೂ ಉತ್ಸವಗಳನ್ನು ಕಲ್ಲಿನಿಂದ ಕೊರೆದ ಪರದೆಯ ಹಿಂದೆ ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಿದ್ದರು ಎಂದು ಊಹಿಸಲಾಗಿದೆ. ಹೊರ ಜನರು ನೋಡದಂತೆ, ಸುಖಸಾಧನಗಳ ಸೌಕರ್ಯಗಳ ಹಾಗೂ ಕಟ್ಟುನಿಟ್ಟಾದ ಪರದೆಯ ಹಿಂದಿನ ಅನನ್ಯತೆಯ ಮಧ್ಯದಲ್ಲಿ, ಇದನ್ನೆ ಹವಾ ಮಹಲ್ ವೈಖರಿಯಲ್ಲಿ ಮಾಡಿತು

ಇದರ ಅಸಾಮಾನ್ಯ ವಿನ್ಯಾಸದ ಕಿಟಕಿ ಪರದೆಗಳು ಬೇಕಿರುವ ತಂಪು ತಂಗಾಳಿಯನ್ನು ಒದಗಿಸುವ ಕಾರಣ, ಹಲವು ವರ್ಷಗಳವರೆಗೆ ಜೈಪುರ್ನ ರಾಜ ಮನೆತನದ ಆಳ್ವಿಕೆಯಲ್ಲಿ ಈ ಮಹಲ್ ಅನ್ನು ಬೇಸಿಗೆ ಕಾಲದ ಉಸಿರುಕಟ್ಟುವ ಬಿಸಿ ವಾತಾವರಣದಲ್ಲಿ ಆಶ್ರಯಧಾಮವೆಂದು ಕೂಡ ಬಳಸುತ್ತಿದ್ದರು. ಇದೊಂದು ಐತಿಹಾಸಿಕ ಅದ್ಭುತ ಅರಮನೆ.
ಈ ಅದ್ವಿತೀಯ ನಿರ್ಮಾಣದ ವಾಸ್ತುಶಿಲ್ಪಿ ಅಂದಿನ ಕಾಲದಲ್ಲಿ ಭಾರತದ ಅತ್ಯುತ್ತಮ-ಯೋಜಿತ ನಗರದಲ್ಲೊಂದಾದ ಜೈಪುರ್ ನಗರದ ಯೋಜನೆಯನ್ನು ಸಾಕಾರಿಸಿದ ಲಾಲ್ ಛಂಧ್ ಉಸ್ತಾ. ನಗರದ ಇತರ ಸ್ಮಾರಕಗಳ ರಂಗಸಜ್ಜಿಕೆಯ ಹೋಲಿಕೆಯಂತೆ ಇದನ್ನು ಕೆಂಪು ಹಾಗೂ ಗುಲಾಬಿ ಬಣ್ಣದ ಮರಲುಗಲ್ಲಿನಿಂದ ಕಟ್ಟಲಾಗಿದೆ, ಇದರ ಬಣ್ಣ ಜೈಪುರ್ಗೆ ನೀಡಿದ “ಪಿನ್ಕ್ ಸಿಟಿ” ಎಂಬ ಬಿರುದಿನ ವಿಶೇಷಣವನ್ನು ಪೂರ್ತಿಯಾಗಿ ಪ್ರಮಾಣಿಸುತ್ತದೆ. ಇದರ ಮುಂಭಾಗ ಕಠಿಣವಾಗಿ ಕೊರೆದ 953 ಗೂಡುಗಳ ಝರೋಕಗಳನ್ನು ಚಿತ್ರಿಸುತ್ತದೆ (ಕೆಲವನ್ನು ಮರದಿಂದ ಮಾಡಲಾಗಿವೆ), ಇದು ನಿರ್ಮಾಣದ ಹಿಂಭಾಗದ ನಿರಾಡಂಬರವಾಗಿ ಕಾಣುವ ಭಾಗಕ್ಕೆ ಬಲವಾದ ವಿಭಿನ್ನತೆಯನ್ನು ತೋರಿಸುತ್ತದೆ. ಇದರ ಸಾಂಪ್ರದಾಯಿಕ ಹಾಗೂ ವಾಸ್ತುಶಿಲ್ಪದ ಪರಂಪರೆ ಹಿಂದೂ ರಾಜಪುತರ ವಾಸ್ತುಶಿಲ್ಪ ಹಾಗೂ ಇಸ್ಲಾಮರವಾಸ್ತುಶಿಲ್ಪ ದ ಸಮ್ಮಿಲನದ ನಿಜವಾದ ಪ್ರತಿಬಿಂಬ; ಗುಮ್ಮಟದ ಮೇಲ್ಛಾವಣಿಗಳು, ಕೊಳವೆಯಾಕಾರದ ಸ್ಥಂಬಗಳು, ಕಮಲ ಹಾಗೂ ಹೂವಿನ ಚಿತ್ರಾಕೃತಿಗಳು ರಾಜಪುತರ ಶೈಲಿಯಲ್ಲಿ ಕಂಡು ಬರುತ್ತದೆ, ಮತ್ತು ಇದರ ಕಲ್ಲುಗಳ ಮೇಲೆ ಬಳ್ಳಿಗೆಲಸದ ಅಲಂಕಾರ ಮಾಡಿ ಖಚಿತಗೊಳಿಸಿದ ಕೃತಿ ಹಾಗೂ ಕಮಾನುಗಳು ಇಸ್ಲಾಮಿಕ್ ಶೈಲಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ
ಹವಾ ಮಹಲ್ ಮಹಾರಾಜ ಜೈ ಸಿಂಗ್ರ chef-d’œuvre ಎಂದು ಕೂಡ ಪ್ರಚಲಿತವಾಗಿತ್ತು, ಇದರ ಸೊಬಗು ಹಾಗೂ ಮಹಲಿನಲ್ಲಿ ಒಳಗೊಂಡ ಒಳಭಾಗದ ಕಾರಣ ಇದು ಅವರ ಅತ್ಯಂತ ಪ್ರಿಯ ವಿಶ್ರಾಂತಿಧಾಮವಾಗಿತ್ತು. ಮುಂಭಾಗದ ಸಣ್ಣ ಕಿಟಕಿಗಳ ಮೂಲಕ ಹಾದು ಸಾಗುವ ತಂಗಾಳಿಯಿಂದ ಕೋಣೆಗಳಲ್ಲಾಗುವ ತಂಪು ಪ್ರಭಾವವನ್ನು, ಪ್ರತಿ ಕೋಣೆಯ ಮಧ್ಯದಲ್ಲಿ ಕಟ್ಟಲಾದ ಕಾರಂಜಿಗಳು ಹೆಚ್ಚಿಸುತ್ತವೆ.

ಮಹಲಿನ ಮೇಲ್ಛಾವಣಿಯಿಂದ ನೋಡಿದ ದೃಶ್ಯಾವಳಿ ಸ್ತಬ್ಧಗೊಳಿಸುವಂತಿದೆ.. ಹಸಿರು ಕಂದರಗಳು ಹಾಗೂ ಗುಡ್ಡಗಳು ಹಾಗೂ ಆಮೆರ್ ಕೊಟೆ ಪಶ್ಚಿಮ ಹಾಗೂ ಉತ್ತರದ ದೃಶ್ಯವಿವರವನ್ನು ನಿರ್ಮಿಸುತ್ತದೆ. ಥಾರ್ ಮರುಭೂಮಿಯ, ತೀರಾ ಸಡಿಲವಾದ ಮರಳು ಹೊಂದಿರುವ ಪ್ರದೇಶವು ದಕ್ಷಿಣ ಮತ್ತು ಪೂರ್ವಕ್ಕೆ ಹೊಂದಿದೆ. ಹಿಂದಿನ ಕಠಿಣವಾದ ಹಾಗೂ ನಿರ್ಜನ ಪ್ರದೇಶವಾದ ಈ ಭೂ ಪ್ರದೇಶದ ಎಲ್ಲ ಪರಿವರ್ತನೆಯು ಜೈಪುರ್ನ ಮಹಾರಾಜರ ಐಕ್ಯ ಪ್ರಯಾಸದ ಕಾರಣದಿಂದಾಗಿ ಸಂಭವಿಸಿತು.ಎಷ್ಟು ಮಟ್ಟಿಗೆ ಅಂದರೆ ಈ ಮಹಲ್ ಅನ್ನು ವರ್ಸೆಲಿಸ್ನ ಪ್ರತಿರೂಪ ಎಂದು ಹೇಳಲಾಗಿದೆ.ಸ್ಮಾರಕದ ಮೇಲಿನ ಅಂತಸ್ತಿನಿಂದ ಜಂತರ್ ಮಂತರ್ ಹಾಗೂ ಸಿಟಿ ಪ್ಯಾಲೆಸ್ನ ದೃಶ್ಯಗಳನ್ನು ಕೂಡ ವೀಕ್ಷಿಸಬಹುದು.
ಹವಾ ಮಹಲ್ನ ಮೇಲಿನ ಎರಡು ಅಂತಸ್ತುಗಳ ಪ್ರವೇಶದ್ವಾರವನ್ನು ಬರಿ ಇಳಿವೋರೆ ಮೂಲಕ ತಯಾರಿಸಲಾಗಿದೆ. ರಾಜಸ್ಥಾನ ಸರ್ಕಾರದ ಪುರಾತತ್ವ ಶಾಸ್ತ್ರ ಇಲಾಖೆಯು ಮಹಲಿನ ಊಸ್ತುವಾರಿಯನ್ನು ನೋಡಿಕೊಳ್ಳುತ್ತದೆ
Source internet
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಕ್ಷಿಣ ಕಾಶಿ ಅಂತರಗ0ಗೆಯಲ್ಲಿ ಶಿವ ಲಕ್ಷದೀಪೋತ್ಸವ ವೈಭವ ಕಾಶಿ ವಿಶ್ವೇಶ್ವರನ ಕಲ್ಯಾಣೋತ್ಸವ,ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತಸಾಗರ ಕೋಲಾರ:- ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರದಲ್ಲಿ ಹೊರವಲಯದ ಅಂತರಗ0ಗೆಯಲ್ಲಿ ಬುಧವಾರ ರಾತ್ರಿ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತ ಸಾಗರ ಸಾಕ್ಷಿಯಾಯಿತು. ಅಂತರಗ0ಗೆಯಲ್ಲಿ ಕಳೆದ 20 ವರ್ಷಗಳಿಂದಲೂ ಅದ್ದೂರಿಯಾಗಿ ನಡೆಯುತ್ತಿರುವ ಶಿವ ಲಕ್ಷ ದೀಪೋತ್ಸವವನ್ನು ಇಲ್ಲಿನ ಕಾಶೀ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸಾರ್ವಜನಿಕ ಉತ್ಸವವನ್ನಾಗಿ ಆಚರಿಸುವ ಮೂಲಕ ಗಮನ…
ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.
ವ್ಹಾವ್…ಇಂತಹ ದೃಶ್ಯಗಳು ಎಲ್ಲಾ ಕಡೆ ಕಾಣಿಸುವುದಿಲ್ಲ, ಎಲ್ಲರ ಮನಸ್ಸನ್ನು ಸೆಳೆಯುವ ನೋಟ… ನೋಡಿದ ಅರೆಕ್ಷಣದಲ್ಲಿಯೇ ಮನಸ್ಸು ಹಕ್ಕಿಯಂತೆ ಹಾರುತ್ತದೆ ಎಂದರೆ ತಪ್ಪೇನಿಲ್ಲ… ಅಂತಹ ಮನಮೋಹಕ ದೃಶ್ಯವಿದು… ತಕ್ಷಣಕ್ಕೆ ನೀರು ಹಾಲ್ನೊರೆಯುನ್ನುಕ್ಕಿಸಿ ಧುಮ್ಮಿಕ್ಕುವಂತೆ ಕಾಣುತ್ತದೆ. ಆದರೆ, ನಿಜವಾಗಿಯೂ ಇದು ಜಲಪಾತವೇ ಅಲ್ಲ…! ನಮ್ಮ ಕಣ್ಣನ್ನೇ ನಂಬದಂತೆ ಮಾಡುವ ಇಂತಹ ಅದ್ಭುತ ದೃಶ್ಯ ಸೆರೆಯಾಗಿದ್ದು ಮಿಜೋರಾಂನ ಐಜಾಲ್ ನಗರದಲ್ಲಿ. ಮಿಜೋರಾಂ ಪ್ರಕೃತಿಯ ರಮಣೀಯ ತಾಣಗಳಲ್ಲಿ ಒಂದು. ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡುವುದೆಂದರೆ ಕಣ್ಣಿಗದು ಹಬ್ಬ. ಇದೇ ಬೆಟ್ಟದ ನಡುವೆ ಕಂಡದ್ದು…
ಕೆಲವರಿಗೆ ವಯಸ್ಸಿನ ಬಗ್ಗೆ ಕೇಳಿದ್ರೆ ತುಂಬಾ ಕೋಪ ಬರುತ್ತೆ.ನಿಮ್ಗೆ ಎಷ್ಟು ವಯಸ್ಸು ಎಂದರೆ,ಎಷ್ಟೋ ಆಗಿದೆ ಬಿಡ್ರಿ ಎಂಬ ಉಡಾಫೆ ಉತ್ತರ ಕೊಡ್ತಾರೆ.ಯಾರನ್ನೇ ಕೇಳಿದ್ರೂ,ಸರಿಯಾದ ವಯಸ್ಸು ಹೇಳೋದಿಲ್ಲ.ಸ್ವಲ್ಪ ಹೆಚ್ಚು ಕಡಿಮೆ ಹೇಳ್ತಾರೆ.
ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…
– ಮಯೂನ್ ಎನ್ ಉದ್ಯೋಗವನ್ನೂ, ಒಳ್ಳೆಯ ಭವಿಷ್ಯವನ್ನೂ ಅರಸುತ್ತಾ, ತಾಯ್ನಾಡನ್ನು ಬಿಟ್ಟು, ಹೊರದೇಶಗಳಿಗೆ ಹೋಗುವ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿಭೆಗೆ ಮನ್ನಣೆ, ಕೈತುಂಬಾ ಸಂಬಳ, ಉತ್ತಮ ಮಟ್ಟದ ಜೀವನ ವಿಧಾನಗಳಿರುವ ವಿದೇಶಗಳಲ್ಲಿರುವ ಭಾರತೀಯರು ಸಂತೋಷ, ತೃಪ್ತಿಯಿಂದ ಇರುವರು ಎಂದು ಹೇಳಲಾದೀತೇ? `ನಾವು ಕನಸು ಮನಸಿನಲ್ಲಿ ಊಹಿಸಲಾಗದಷ್ಟು ವೈಭೋಗವನ್ನು ಇಲ್ಲಿ ಕಂಡಿದ್ದೇವೆ. ಹಣವಿದೆ. ಸುಖಕೊಡುವ ವಸ್ತುಗಳಿವೆ. ವಿಸ್ಮಯ ಪಡುವ ವೈಜ್ಞಾನಿಕ ಸಲಕರಣೆಗಳಿವೆ. ಆದರೇನು ಮನಸ್ಸಿಗೆ ನೆಮ್ಮದಿ ಇಲ್ಲ. ಏನೋ ಅತೃಪ್ತಿ ನಮ್ಮನ್ನೂ ಕಾಡುತ್ತದೆ’ ಎಂದು ವಿದೇಶಗಳಲ್ಲಿರುವ…