ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರ್ಯಭಟ್ಟ ಕ್ರಿಶ 499 ರಲ್ಲಿ “ಸೊನ್ನೆ” (0)ಕಂಡುಹಿಡಿದ ? ನಂತರ ಬಂದ ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?
ಕ್ರಿಪೂ ಮೂರನೇ ಶತಮಾನದಲ್ಲಿ ಅಂದರೆ 800 ವರ್ಷ ಮೊದಲೇ ಪುಣೆ ಮತ್ತು ಉತ್ತರ ಪ್ರದೇಶದ ಗುಹೆಗಳಲ್ಲಿ ಸೊನ್ನೆ(ಝೀರೋ) ಕಂಡು ಬಂದಿದೆ.
ಇದಕ್ಕೂ ತುಂಬಾ ಮೊದಲು ಅಂದರೆ ಕ್ರಿಪೂ 2000 ರಲ್ಲಿ ಸುಮೇರಿಯನ್ನರು ಮತ್ತು ಬ್ಯಾಬಿಲೋನ್ ನವರೂ ಝೀರೊ ತರ ಉಪಯೋಗಿಸಿದ್ದಾರೆ.
ಆದರೆ ಅದೊಂದು ಅಂಕಿ ಅಂತ ಆಗಿರಲಿಲ್ಲ. ಖಾಲಿ ಜಾಗ ಬಿಡುತ್ತಿದ್ದರು. ಇದರಿಂದ ಗೊಂದಲ ಉಂಟಾಗುತ್ತಿತ್ತು. ಇವರಿಗೆ ಎಡದ ಅಂಕಿ ದೊಡ್ಡದು ಬಲದ ಅಂಕಿ ಚಿಕ್ಕದು ಅಂತ ಪೊಸೀಶನ್ ಸಿಸ್ಟಮ್ ಕೂಡ ಗೊತ್ತಿತ್ತು.
ಆರ್ಯಭಟ ದೊಡ್ಡ ನಂಬರ ಗಳ ಶಾರ್ಟ್ ಫಾರ್ಮ ಕಂಡು ಹಿಡಿದಿದ್ದ. ಉದಾಹರಣೆ ಗೆ – ಕ್ಯೂಘ್ರ ಅಂದರೆ 4,320,000 ಇದು ಜನಪ್ರಿಯ ಆಗಲಿಲ್ಲ.
ಬ್ರಹ್ಮ ಗುಪ್ತ ನ ನಂತರ ಅರಬ್ ಜನ ನಮ್ಮ ಪುಸ್ತಕ ಗಳನ್ನು ಭಾಷಾಂತರ ಮಾಡಿದರು. ನಮ್ಮ ನಂಬರಗಳನ್ನು ಮತ್ತು ಝೀರೋ ಕಾಪಿ ಮಾಡಿದರು. ನಮಗೆ ಗೌರವ ಕೊಡುವುದಕ್ಕಾಗಿ ಅಲ್ಲಿನ ಪಂಡಿತರು ಇದಕ್ಕೆ – ರಕಮ್ ಅಲ್ ಹಿಂದ್ ಅಂತ ಹೆಸರಿಟ್ಟರು. ಇದನ್ನು ಓದಿದಾಗ ನನಗೆ ಅನ್ನಿಸಿದ್ದು ಹಿಂದ್ ಶಬ್ದ ಆಗಿನಿಂದಲೇ ಇದೆ ಅಂತ.
ಮುಂದೆ ಅರಬ್ ರಿಂದ ಈ ಪದ್ಧತಿ ಎಲ್ಲಾ ಕಡೆಗಳಲ್ಲಿ ಹೋಗಿ ಈಗಿನ ನಂಬರ ಪದ್ದತಿ ಗೆ ಹಿಂದೂ ಅರಬ್ ಪದ್ಧತಿ ಅಂತಲೇ ಕರೆಯುತ್ತಾರೆ.
ನಂಬರ ಲೆಕ್ಕ ಮಾಡುವುದು ಅಂದರೆ ಒಂದು ಎರಡು ಮೂರು ಮಾನವ ಗುಹಾ ವಾಸಿ ಆಗಿದ್ದಾಗಲೇ ಇರುವುದರಿಂದ ಇವನ್ನು ಭಾರತೀಯರೇ ಕಂಡು ಹಿಡಿದರು ಅಂತ ಹೇಳಲಾಗುತ್ತಿಲ್ಲ. ಆದರೂ ಈಗಿನ ನಂಬರ ಪದ್ಧತಿ ಕಂಡು ಹಿಡಿದದ್ದು ಭಾರತವೇ. ಕೇವಲ ಝೀರೋ ಮಾತ್ರ ಅಲ್ಲ. ಒಂದರಿಂದ ಒಂಬತ್ತು ಹೀಗಿತ್ತು ಭಾರತ ಇಲ್ಲವಾದರೆ ಜಗತ್ತಿನ ಆಟವು ಮುಗಿದಿತ್ತು .
ಅನ್ನಲೂ ಬಹುದು. ಇದರ ಮೊದಲು 1000 ಅಂತ ಬರೆಯಲು ಓದಲು ಸುಮಾರು 1000 ಗೆರೆ ಹಾಕುತ್ತಾ ಕೂರುವ ಸ್ಥಿತಿ ಜಗತ್ತಿನ ಕೆಲವು ಕಡೆ ಇತ್ತು. ಹಾಗಂತ ಮಾಯನ್ನರೂ ಕೂಡ ತಮ್ಮದೇ ಆದ ಝೀರೋ ತರದ್ದೇ ಸ್ವಂತವಾಗಿ ಕಂಡುಹಿಡಿದಿದ್ದಾರೆ. ಆದರೆ ಎಡದ ಅಂಕಿ ದೊಡ್ಡದು, ಬಲದ ಅಂಕಿ ಚಿಕ್ಕದು ಅಂತ ಪೊಸಿಶನ್ ಸಿಸ್ಟಮ್ ಗೆ ಹೆಚ್ಚಾಗಿ ಭಾರತವೇ ಮೂಲ. ಅವರೆಲ್ಲರೂ ಕಲ್ಲಿನಲ್ಲಿ ಕೊರೆದು, ನಾವು ತಾಳೆ ಗ್ರಂಥಗಳು ಉಪಯೋಗಿಸಿದ್ದರಿಂದ ಅಧಿಕೃತ ದಾಖಲೆಗಳು ಸಿಗುತ್ತಿಲ್ಲ.
ಎಲ್ಲರಿಗೂ ಮೊದಲು ವೇದ ಕಾಲದಲ್ಲಿ ಒಂದು ಕಲ್ಪ ಅಂದರೆ 4,320,000,000 ವರ್ಷ ಗಳು .
ಸೌರವ್ಯೂಹ ದ ಉದ್ದ 1,871,206,920,000,000 ಯೋಜನಗಳು ಅಂತ ಹೇಳಿದ್ದಾರೆ. ಝೀರೋ ಬಂದಿದ್ದು ಒಂದೂವರೆ ಸಾವಿರ ವರ್ಷದ ಹಿಂದೆ ಅಂದರೆ ವೇದ ಕಾಲದಲ್ಲಿ ಈ ನಂಬರ ಕಲ್ಪಿಸಲು ಸಾಧ್ಯ ಇತ್ತೇ ?
ವೇದ ಕಾಲದಲ್ಲಿ” ದಶ, ಶತ, ಸಹಸ್ರ, ಆಯತ, ನಿಯತ, ಪ್ರಯತ, ಅರ್ಬುದ, ನಿರ್ಬುದ, ಸಮುದ್ರ, ಮಧ್ಯ, ಅಂತ, ಪರಾರ್ಥ ” ಹೀಗೆ ಲೆಕ್ಕ ಮಾಡುತ್ತಿದ್ದರಂತೆ. 2 ಆಯತ 6 ಸಹಸ್ರ 4 ಶತ 3 ದಶ 2 = 26432 ಈ ತರ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…
ನಮ್ಮ ಮೊಬೈಲ್’ಗಳಲ್ಲಿ ಹಾಕಿಕೊಳ್ಳುವ ಎಷ್ಟೋ appಗಳು, ನಮ್ಮ ನಿತ್ಯ ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತವೆ.ಅದರಲ್ಲಿ ಕೆಲವು appಗಳು, ಅವುಗಳ ಉಪಯೋಗಗಳು ನಿಮಗಾಗಿ…
ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ (ಬಾವಲಿ ಜ್ವರ)ದ ಸೋಂಕು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯಕೀಯ ವರದಿ ನೀಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ನಿಪಾ ವೈರಸ್ ಎಂದರೇನು?- ಲಕ್ಷಣಗಳೇನು?- ವೈರಸ್…
ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಹೊಸ ಆ್ಯಪ್ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ಆ್ಯಪ್ ಅನ್ನು ಯಾವುದೇ ಸ್ಮಾರ್ಟ್ಫೋನ್ಗೆ ಅಳವಡಿಸಬಹುದು. ನೆಟ್ವರ್ಕ್ ಇಲ್ಲದಿದ್ದರೂ ಈ ಆ್ಯಪ್ ಹಲವು ಕಿಲೋ ಮೀಟರ್ಗಳ ದೂರದವರೆಗೂ ವೈ–ಫೈ ಸಿಗ್ನಲ್ ಹೊರಸೂಸುತ್ತದೆ.
ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಲಕ್ಷ ಲಕ್ಷ ದುಡ್ಡು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ…
ಪ್ರಕೃತಿ ನಮಗೆ ನೀಡಿರುವ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದು, ಇನ್ನು ಮೀನು ಮಾಂಸದ ಆಹಾರದ ಪ್ರೀತಿಯರಿಗೆ ತುಂಬಾ ಪ್ರಿಯವಾದ ಆಹಾರ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಮೀನನ್ನ ಪ್ರಪಂಚದಲ್ಲಿ ಹೆಚ್ಚಿನ ಜನರು ತಿನ್ನುತ್ತಾರೆ. ಇನ್ನು ಕರಾವಳಿ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಮೀನು ಅಂದರೆ ಪಂಚಪ್ರಾಣ, ಮೀನು ತುಂಬಾ ಆರೋಗ್ಯಕರವಾದ ಆಹಾರ ಅನ್ನುವುದು ನಮಗೆ ತಿಳಿದಿರುವ ವಿಚಾರ ಆಗಿದೆ ಮತ್ತು ಅದನ್ನ ವೈದ್ಯಲೋಕ ದೃಡಪಸಿಡಿದೆ, ಮೀನಿನಲ್ಲಿ ಇರುವ ಹಲವು ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ತುಂಬಾ…