ಜ್ಯೋತಿಷ್ಯ

ಶುಕ್ರವಾರದ ಶುಭದಿನದೊಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ನಿಮ್ಮವರಿಗೂ ಶೇರ್ ಮಾಡಿ…

748

ಶುಕ್ರವಾರ, 23/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಹೆತ್ತವರನ್ನು ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ ಮಾಡಲಿದ್ದೀರಿ. ಹಿರಿಯರಿಗೆ ಆಗಾಗ ದೇಹಾರೋಗ್ಯ ಏರುಪೇರಾಗಲಿದೆ. ಸಾಮಾಜಿಕ ರಂಗದಲ್ಲಿ ಆಗಾಗ ಸಮಾರಂಭಕ್ಕಾಗಿ ಓಡಾಟ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಂತಸ ತರಲಿದೆ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದ ಅಧಿಕ ಲಾಭ.

ವೃಷಭ:-

ಮಕ್ಕಳ ಬಗ್ಗೆ ಗಮನ ಹರಿಸಬೇಕು. ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿಗಳು ದೊರಯುವ ಲಕ್ಷಣಗಳು ಕಂಡುಬರುವವು. ಅಧಿಕಾರಿಗಳ ಅಭಿವೃದ್ಧಿ ಸಂತಸ ತರುತ್ತದೆ. ಶತ್ರುಭಯ ಕಲಹಾದಿಗಳಿಂದ ಮುಕ್ತಿಯಿದೆ. ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ.

 

ಮಿಥುನ:

ಕೆಲಸಗಳು ನಿಧಾನವಾಗಿ ಆದರೂ ಒಂದೇ ರೀತಿಯ ಪ್ರಗತಿಯಲ್ಲಿರುವವು. ಗೃಹ ಸೌಕರ್ಯಗಳನ್ನು ಹೊಂದುವಿರಿ. ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಹರಿಸಿರಿ. ಆರ್ಥಿಕಸ್ಥಿತಿ ವೃದ್ಧಿಸಿ ಆದಾಯವು ಹೆಚ್ಚಲಿದೆ. ಅವಿವಾಹಿತರಿಗೆ ಕಂಕಣಬಲವಿರುತ್ತದೆ. ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸಲಿದ್ದೀರಿ. ಮನೆಯ ಮಂದಿಯ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದೀತು.

ಕಟಕ :-

ಮಾನಸಿಕ ಸಮ ಚಿತ್ತತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಪ್ರಸಿದ್ಧಿಯ ಗರಿ ಮುಡಿಗೇರಲಿದೆ. ಪಾರಮಾರ್ಥಿಕ ವಿಚಾರಗಳು ಮನಸ್ಸಿನಲ್ಲಿ ಮೂಡಲಿವೆ. ಸುಬ್ರಹ್ಮಣ್ಯ ದೇವರ ದರ್ಶನ ಸಾಧ್ಯತೆ. ಸ್ನೇಹಿತರ ಸಹವಾಸದಿಂದ ನೆಮ್ಮದಿ. ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾದೀತು. ಆಗಾಗ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದಿನಾಂತ್ಯ ಶುಭವಿದೆ.

 

 ಸಿಂಹ:

ನಿಮ್ಮ ಮಾತಿಗೆ ಈಗ ಹೆಚ್ಚಿನ ಮಹತ್ವ ಬರುವುದರಲ್ಲಿ ಸಂಶಯವಿಲ್ಲ. ಅನಾವಶ್ಯಕ ಕೋಪ ತಾಪಗಳಿಂದ ಉದ್ವೇಗಕ್ಕೆ ಒಳಗಾಗುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ತಪ್ಪಿ ಹೋದಾವು. ಶ್ರೀದೇವತಾದರ್ಶನ ಭಾಗ್ಯಕ್ಕೆ ಆಸಕ್ತಿ ತೋರಿ ಬಂದೀತು. ಮುಂದುವರಿಯಬೇಕು. ಆತ್ಮೀಯರೊಬ್ಬರಿಗೆ ಬದುಕಿನ ದಾರಿ ಕಲ್ಪಿಸಿಕೊಡುವಿರಿ. ಉತ್ತಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲಿದ್ದೀರಿ.

ಕನ್ಯಾ :-

ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉತ್ಸಾಹಭರಿತರಾದಾರು. ಪುಸ್ತಕ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೀರಿ. ನೆರೆಯವರೊಂದಿಗಿನ ಸಂಬಂಧ ವೃದ್ಧಿಯಾಗಲಿದೆ. ಕುಟುಂಬಕ್ಕೆ ಹೊಸಬರೊಬ್ಬರ ಆಗಮನ ಸಾಧ್ಯತೆ. ವ್ಯಾಪಾರ, ವ್ಯವಹಾರಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗಬಹುದಾಗಿದೆ. ಸಾಂಸಾರಿಕವಾಗಿ ಮನದನ್ನೆಯ ಸಲಹೆಗೆ ಸ್ಪಂದಿಸಬೇಕು.

ತುಲಾ:

ಸಾಮರ್ಥ್ಯಕ್ಕೆ ತಕ್ಕುದಾದ ಉದ್ಯೋಗ ದೊರಕಲಿದೆ. ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ನಿರೀಕ್ಷಿತ ಕಾರ್ಯಸಾಧನೆಗೆ ಪ್ರಯತ್ನಬಲ ಅಗತ್ಯ. ಬಂಧುಮಿತ್ರರ ಸಹಕಾರದಿಂದ ಮುನ್ನಡೆಗೆ ಸಾಧಕವಾಗಲಿದೆ. ನಿರುದ್ಯೋಗಿಗಳಿಗೆ ಕುಜನ ಲಾಭದಿಂದ ತಾತ್ಕಾಲಿಕ ಉದ್ಯೋಗದ ಸಾಧ್ಯತೆ ತಂದೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ. ದೇವತಾ ದರ್ಶನದಿಂದ ನೆಮ್ಮದಿ.

ವೃಶ್ಚಿಕ :-

ಮನಸ್ಸು ಸಮಾಧಾನದ ಸ್ಥಿತಿಯನ್ನು ತರಲಾರದು. ಅನಾವಶ್ಯಕ ಕೋಪತಾಪಗಳು ಹೆಚ್ಚಲಿವೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಸರಕಾರಿ ವರ್ಗದವರಿಗೆ ಕಿರಿಕಿರಿ ಇರುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ ಹೊಂದಲಿದ್ದೀರಿ. ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧ ಉತ್ತಮಗೊಳ್ಳಲಿದೆ. ಪದೋನ್ನತಿಯ ವಿಚಾರ ಪ್ರಸ್ತಾಪವಾಗಿ ಸಂತಸ.

ಧನಸ್ಸು:

ಸಹೋದರನಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಮುನ್ನಡೆಯುವ ದಿನಗಳಿಗೆ ಆಗಾಗ ಅಡಚಣೆಗಳು ಸ್ವಾಭಾವಿಕ. ನಿಮ್ಮ ಪ್ರಯತ್ನಬಲ ಹಾಗೂ ಕ್ರಿಯಾಶೀಲತೆಗೆ ಒತ್ತು ನೀಡಬೇಕಾಗುತ್ತದೆ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಮನೆಯಲ್ಲಿ ಸಂಭ್ರಮ ಮನೆಮಾಡಲಿದೆ. ನೆರೆಯವರೊಂದಿಗೆ ಹೆಚ್ಚಿನ ಕಾಲಹರಣ ಮಾಡಬೇಕಾದೀತು. ಮನಸ್ಸಿಗೆ ನೆಮ್ಮದಿ.

ಮಕರ :-

ಪ್ರವಾಸಾದಿಗಳಿಂದ ಸಂತಸ, ಸಹೋದ್ಯೋಗಿಗಳಿಂದ ಸಹಕಾರ, ಸಾಂಸಾರಿಕವಾಗಿ ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯತೆ. ತಾಂತ್ರಿಕ ಪರಿಣತರಿಗೆ ಮಾಧ್ಯಮಗಳಲ್ಲಿ ಕೆಲಸ –ಕಾರ್ಯಗಳು ದೊರೆತು ಉತ್ತಮ ಆದಾಯ ದೊರಕುವ ಸಾಧ್ಯತೆ. ಮಕ್ಕಳಿಂದ ಸಮಾಧಾನ, ದಿನಾಂತ್ಯ ಶುಭವಾರ್ತೆ ಇದೆ.

ಕುಂಭ:-

ನೇತ್ರ ಸಂಬಂಧಿ ವ್ಯಾಧಿಗಳಿಂದ ಮುಕ್ತರಾಗಲಿದ್ದೀರಿ. ಉತ್ತಮ ಸಮಯ. ರಾಹುಬಲ, ಗುರುಬಲ, ಶನಿಬಲ ಉತ್ತಮವಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ. ಹಿರಿಯರಿಗೆ ಕುಲದೇವತಾ ಭಾಗ್ಯವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ತಂದೀತು. ಮಕ್ಕಳ ವ್ಯವಹಾರಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮನೆಯವರೊಂದಿಗೆ ನೆಮ್ಮದಿಯ ದಿನವನ್ನಾಗಿಸಿಕೊಳ್ಳುವಿರಿ. ಉತ್ತಮ ಆರೋಗ್ಯ ಭಾಗ್ಯ.

ಮೀನ:-

ಲಾಭ ಸ್ಥಾನದ ಕೇತು ಆಗಾಗ ನಿಮ್ಮ ಮನೋಕಾಮನೆಗೆ ಅನುಗ್ರಹ ತಂದಾನು. ದಶಮದ ಶನಿ ನಾನಾ ರೀತಿಯ ಖರ್ಚುವೆಚ್ಚಗಳಿಗೆ ಕಾರಣನಾದಾನು. ಕಚೇರಿಯ ಸಹೋದ್ಯೋಗಿಗಳಿಂದ ಪ್ರಶಂಸೆಯ ಮಾತುಗಳೊಂದಿಗೆ ಭೋಜನ ಕೂಟದಲ್ಲಿ ಭಾಗಿಯಾಗುವಿರಿ. ಸರ್ಕಾರದಿಂದ ಬರಬೇಕಾದ ಹಣ ಕೈ ಸೇರುವ ನಿರೀಕ್ಷೆ. ಹಣ ಹೂಡಿಕೆಗಳ ಬಗ್ಗೆ ಜಾಗ್ರತೆ ವಹಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಧರಂಸಿಂಗ್ ಇನ್ನಿಲ್ಲ…

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, 80 ವರ್ಷದ ಧರಂಸಿಂಗ್’ರವರು ಉಸಿರಾಟದ ತೊಂದರೆ, ಅಸ್ತಮಾ, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ

  • ಸುದ್ದಿ

    ಮಹಾಮಳೆಯ ಆರ್ಭಟಕ್ಕೆ ಉತ್ತರ ತತ್ತರ ..!

    ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ. ಮನೆ, ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಕ್ಕುರುಳುತ್ತಿವೆ. ರಸ್ತೆಗಳು ಬಿರುಕು ಬಿಡುತ್ತಿದ್ದು, ಗುಡ್ಡಗಳು ಹೊರಳಿ ಬೀಳುತ್ತಿವೆ. ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವವರ ಕಣ್ಣೀರು, ಗೋಳಾಟ ಕೇಳಿದರೆ ಹೊಟ್ಟೆ ಉರಿಯುತ್ತದೆ. ಪ್ರವಾಹದ ಎದುರು ಈಜಲಾಗದು,…

  • ಸುದ್ದಿ

    ಬಡ ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್….!

    ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…

  • ಉಪಯುಕ್ತ ಮಾಹಿತಿ

    ನೀವೂ ಸೆಲ್ಫಿ ಹುಚ್ಚರೆ…ಎಚ್ಚರ ತುಂಬಾ ಸೆಲ್ಫಿ ಹುಚ್ಚು ಇರುವವರಿಗೆ ಏನಾಗುತ್ತೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಇವಾಗ ಸೆಲ್ಫಿ ಯುಗ.ನಮ್ಮ ಕೈನಲ್ಲಿ ಮೊಬೈಲ್ ಇದ್ದರೆ ಸಾಕು ಸೆಲ್ಫಿ ಪೋಟೋಗಳದ್ದೆ ಕಾರು ಬಾರು.ಈಗಂತೂ ಸೆಲ್ಫಿಗೆ ಇಂತದ್ದೇ ಸ್ಥಳ,ಜಾಗ,ಸಮಯ ಅಂತೇನೂ ಇಲ್ಲ. ಎಲ್ಲೆಂದರೆ ಅಲ್ಲೇ,ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತಾರೆ.

  • ಉಪಯುಕ್ತ ಮಾಹಿತಿ

    ನಿಮ್ಮ ಅಡುಗೆ ಮನೆಯಲ್ಲೇ ಇದೆ ತೂಕ ಕಳೆದು ಕೊಳ್ಳುವ ಆಹಾರಗಳು.! ಮನೆ ಮದ್ದು ಬಗ್ಗೆ ತಿಳಿಯಲು ಈ ಉಪಯುಕ್ತ ಮಾಹಿತಿ ಓದಿ..

    ಮಾರುಕಟ್ಟೆಯಲ್ಲಿ ಸಿಗು ವಂತಹ ತೂಕ ಇಳಿಸಿಕೊಳ್ಳುವ ಮಾತ್ರೆ, ಹುಡಿ ಇತ್ಯಾದಿಗಳನ್ನು ಅಡುಗೆ ಮನೆಯಲ್ಲೇ ಇದೆ ತೂಕ ಕಳೆದು ಕೊಳ್ಳುವ ಆಹಾರಗಳು ಸೇವಿಸಲು ಆರಂಭಿಸುವರು. ಆದರೆ ಇದು ತೂಕ ಇಳಿಸಿದರೂ ಇದರ ಸೇವನೆ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಹೆಚ್ಚಳವಾಗುವುದು. ಇಂತಹ ಸಮಯದಲ್ಲಿ

  • ಜ್ಯೋತಿಷ್ಯ

    ಶ್ರೀ ಅನ್ನಪೂರ್ಣೇಶ್ವರಿ ಆಶೀರ್ವಾದದೊಂದಿಗೆ ಈ ರಾಶಿಗಳಿಗೆ ಶುಭಯೋಗ.!ನಿಮ್ಮ ರಾಶಿಯೂ ಇದೆಯಾ ನೋಡಿ..

    ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ.ಸಂಪರ್ಕಿಸಿ:-9353957085 ಮೇಷ ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ನೀವು ಇತರರ ಮೇಲೆ ಹೆಚ್ಚು ಖರ್ಚು ಮಾಡಬಯಸುತ್ತೀರಿ. ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವ ಮೊದಲು ಅದಕ್ಕೆ ಎಲ್ಲರ ಅನುಮೋದನೆಯಿದೆಯೆಂದು ಖಾತ್ರಿಪಡಿಸಿಕೊಳ್ಳಿ. ಪ್ರಣಯಕ್ಕೆ ಒಳ್ಳೆಯ ದಿನ. ಒಬ್ಬ ಆಧ್ಯಾತ್ಮಿಕ ನಾಯಕರು…