ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿನ್ನೆಯ ಬಿಗ್ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ, ಟಕಿಲ,ಜಸ್ಟ್ ಲವ್ ಮತ್ತು ಪರವಶನಾದೇನು ಹಾಡಿಗೆ ಸಮ್ಮತಿ ಸೂಚಿಸಿದರು..
ಮೊದಲಿಗೆ ಕಿಚನ್ ಏರಿಯಾದಲ್ಲಿ ಶೃತಿಯವರು ಲಿಪ್ ಬಾಮ್ ಕಳಿಸಿದ್ದಕ್ಕೆ ಧನ್ಯವಾದ ಹೇಳಿದರು.
ದಿವಾಕರ್ ಅವರು ಸಕ್ಕರೆ ಖಾಲಿಯಾದ ಕಾರಣಕ್ಕೆ ಹಾಲಿಗೆ ಜಾಮೂನು ಪಾಕವನ್ನು ಸುರುವಿ ಕುಡಿದರು..
“ಸವಿ-ಸವಿ ನೆನಪು” ಚಟುವಟಿಕೆಯಲ್ಲಿ ಕ್ಯಾನ್ವಾಸ್ ಕುಂಚದ ಮೇಲೆ ಬಣ್ಣವನ್ನು ಬಳಸಿ ಆಟೋಗ್ರಾಫ್ ರಚಿಸುವುದಾಗಿತ್ತು.. ಎಲ್ಲ ಸದಸ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಆಟೋಗ್ರಾಫ್ ರಚಿಸಿದರು.. ಅದರಲ್ಲಿ ಚಂದನ್ ಮತ್ತು ಜೆಕೆಯವರ ಆಟೋಗ್ರಾಫ್ ಸೃಜನಾತ್ಮಕವಾಗಿತ್ತು..
ಈ ವೇಳೆಯಲ್ಲಿ ನಿವೇದಿತಾ ಅವರು ಪೇಂಟ್ ಸುರುವಿ ಹೋಗಿದ್ದಕ್ಕೆ ಕಣ್ಣೀರು ಹಾಕಿದ್ದು ತರ್ಕಕ್ಕೆ ನಿಲುಕದ್ದು. ಈ ಹುಡುಗಿ ಇಷ್ಟೊಂದು ಸೂಕ್ಷ್ಮವಾ ಎಂಬ ಪ್ರಶ್ನೆ ಮೂಡಿದ್ದಂತೂ ನಿಜ!
“ನನ್ನ ಬಿಗ್ಬಾಸ್ ಮನೆ” ಚಟುವಟಿಕೆಯಲ್ಲಿ ಬಿಗ್ಬಾಸ್ ಕೇಳಿದ 30ಪ್ರಶ್ನೆಗಳಲ್ಲಿ ಜೆಕೆಯವರು 15, ಶೃತಿ-ದಿವಾಕರ್ 10, ಮತ್ತು ಚಂದನ್ -ನಿವೇದಿತಾ 14 ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರು.
“ನನ್ನ ಹಾಡು ನನ್ನದು” ಉಳಿದ ಮೂರು ದಿನಗಳಲ್ಲಿ ಬೆಳಿಗ್ಗೆ ಹಾಕುವ ಮೂರು ಹಾಡನ್ನು ಸೂಚಿಸಲು ಬಿಗ್ಬಾಸ್ ಹೇಳಿದ್ದರು..ಆಗ ಚಂದನ್ ತಮ್ಮ ಟಕೀಲ ಸಿನಿಮಾದ ಹಾಡು ಮತ್ತು ಜೆಕೆ ತಮ್ಮ ಜಸ್ಟ್ ಲವ್ ಚಿತ್ರದ ಹಾಡಿಗೆ ಸಮ್ಮತಿ ಸೂಚಿಸಿದರು..
ನಿವೇದಿತಾ : ಮೆಲೊಡಿ ಸಾಂಗ್ ಇರಲಿ
ದಿವಾಕರ್: ಯಜಮಾನ ಮೂವಿ ನಮ್ಮ ಮನೆಯಲಿ ಸಾಂಗ್ ಇರಲಿ
ನಿವೇದಿತಾ: ವಿಷ್ಣುವರ್ಧನ್ ಅವರದ್ದೇ ಯಾವುದಾದರೂ ಮೆಲೊಡಿ ಸಾಂಗ್ ಹೇಳಿ.
ದಿ: ೩ದಿನವಾದ್ಮೇಲೆ ಮೆಲೊಡಿ ಸಾಂಗ್ ಹಾಕಿಸಿಕೊಡ್ತಿನಿ ಬಿಡು.. ಇವಾಗ ಇದು ಇರಲಿ..
ನಿವೇದಿತಾ: actually daily ಈ ಸಾಂಗ್ ಹಾಕಿ ಅಂತ ಬಿಗ್ಬಾಸ್ ಗೆ ಕೇಳ್ತಿದ್ದೆ.
ಜೆಕೆ: ನಂದು ಬೇಡ, ವಿಷ್ಣು ದು,ಟಕೀಲ, ಮೆಲೊಡಿ ಇರಲಿ.
ನಿವೇದಿತಾ:no problem ಯಾವುದಾದರೂ ಹಾಕೊಳ್ಳಿ!
ಚಂ: ಟಕೀಲ ಬೇಡ, ಫೀನಾಲೆಗೆ ಹಾಕೋಣ..
ದಿ: ಇವಳ್ದೆ ಹಾಕಿ, ನಂದು ಮನೆಗೆ ಹೋಗಿ ಕೇಳ್ಕೊತೀನಿ.
ನಿವೇದಿತಾ: ಇಷ್ಟೊತ್ತು ನೀವು ಹೇಳಾಯ್ತಲ್ವಾ!(ಇಲ್ಲಿಂದ ಶುರುವಾಯ್ತು)
ದಿ: ನೀ ಮುನಿಸ್ಕೊತಿಯಲ್ಲ..
ನೀ: ನೀನೇ ಮುನಿಸ್ಕೊಂಡು ರೇಗಾಡ್ತಿದೀಯಾ!
ದಿ: ನೀನು ಮಾತಾಡೋಕೆ ಬಿಟ್ರೆ ಮಾತಾಡಿಬಿಡ್ತಿಯಾ!
ನೀ: ಏನು ಹೇಳಿದ್ದು.
ದಿ: ಇಂತದ್ದು ಮಾತಾಡೋಕೆ ಬಿಟ್ರೆ ಮಾತಾಡ್ತಿಯಾ..
ನೀ: ಸುಮ್ನೆ ರೇಗಾಡ್ತಾರೆ.. ಒಂದು ಒಳ್ಳೆಯದು ಹೇಳ್ತಿದ್ರೆ!
ದಿ: ಸುಮ್ನೆ ತಲೆ ತಿಂತಾಳೆ!
ನೀ: ನೀವ್ಯಾಕೆ ತಲೆ ಕೊಡ್ತಿರಿ ನನಗೆ ತಿನ್ನೋಕೆ
ದಿ: ಮೆಂಟಲ್ ತರ ಆಡಬಾರದು.
ನೀ: ಯಾರ್ ಮೆಂಟಲ್ ಯಾರ್ ಮೆಂಟಲ್, ಮೆಂಟಲ್-ಗಿಂಟಲ್ ಅಂತೆಲ್ಲ ಹೇಳಬಾರ್ದು ಚಂದನ್
ದಿ: ಹೇಳು ಮಗ ಚಂದನ್ ಸಾಂಗ್ ಅವಳದ್ದೆ
ನೀ: ಯಾರು ಹೇಳ್ತಾರೆ ಅವರೇ ಮೆಂಟಲ್ ಆಗಿರ್ತಾರೆ.
ದಿ: ಏನ್ ಕಂಯ್ಯಾ ಕಂಯ್ಯಾ ಅಂತೀಯಾ
ನೀ: ಕಂಯ್ಯಾ ಕಂಯ್ಯಾ ಮಾಡಿಸ್ತಿರೋದು ಯಾರು..
ಬೇಗ ಹೇಳಿ
ಚಂ: ಜೆಕೆ ಲೈನ್ ಹಾಡ್ಬೇಕಂತೆ ಬನ್ನಿ, ನೀವಿ ನೀನು ಬಾ
ನೀ: ನಾನು ಬರಲ್ಲ
ಚಂ: ಏ!
ನೀ: ಎದ್ದು ಬರುತ್ತಾ, ತಲೆ ತಿಂತಾರೆ ಅಂತ ಯಾಕೆ ಕೊಡ್ಬೇಕು.
ದಿ: ಏನಾದರೂ ಹೊಸದು ಹೇಳು, ಹೇಳಿದ್ದೆ ಹೇಳ್ತಿಯಲ್ಲ.
ನೀ: ಚಂದನ್ ಗೆ ಹೊಡೆಯುತ್ತಿದ್ದಾಗ
ದಿ: ಸಿಟ್ಟು ಬಂದು ಹೊಡೆಯೋದಂತೆ..
ನೀ: ಚಂದನ್ ನಕ್ಕಿದ್ದಕ್ಕೆ ಹೊಡೆದಿದ್ದು, ನಿಮ್ಮ ಮೇಲಿನ ಸಿಟ್ಟಿಗೆ ಹೊಡೆದಿಲ್ಲ..
ದಿ: ಬೊರ್ ಹೊಡೆಯುತ್ತೆ ಜನರಿಗೆ.
ನೀ: ವಾಯಲಿನ್ ತರ ಕುಯ್ತಾರೆ.. ವಿಶ್ ಹೇರ್ ಬಂತು.
ಯಾರ ಸಾಂಗ್ ಕೂಡ ಪ್ಲೆ ಮಾಡ್ಬೇಡಿ. ನನ್ನ ಸಾಂಗ್ ಪ್ಲೆ ಮಾಡಿ..
ದಿ: ಹೊಟ್ಟೆ ಉರಿ
ನೀ: ನಾನು ನಿಮ್ಮ ಸಾಂಗ್ ಹಾಕ್ಬೇಡ ಅಂದ್ನಾ? ವಿಶ್ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಕರ್ಸ್ ಆಗುತ್ತೆ..
ದಿ: ಡಬ್ಬ ಎಲ್ಲ ಹೇಳ್ಬೇಡ, ನೀನು ಡವ್ ರಾಣಿ,ದಡ್ಡಿಯಂತೂ ಅಲ್ಲ,ಬುದ್ಧಿವಂತೆ.
ನೀ: ಚಂದನ್ ಕೈಯಿಂದ ಬಿಡಿಸಿಕೊಂಡು ಅಳ್ತಾ ಬೆಡ್ರೂಮ್ ಏರಿಯಾಗೆ ಹೋಗಿ ಅಲ್ಲಿಂದ ಕ್ಯಾಪ್ಟನ್ ರೂಮಿಗೆ ಹೋಗ್ತಾರೆ..
ಅಲ್ಲಿ ಚಂದನ್ ಅವರು ಸಮಾಧಾನ ಮಾಡಿ ಸಮಸ್ಯೆಯನ್ನು ಬಗೆಹರಿಸ್ತಾರೆ..
ಅಂತೂ-ಇಂತೂ ವಿಷ್ಣುವರ್ಧನ್ ಹಾಡು ಕ್ಯಾನ್ಸಲ್ ಆಗೋಯ್ತು..ಇಲ್ಲಿ ಯಾರ ತಪ್ಪಿದೆ ನೀವೆ ನಿರ್ಧರಿಸಿ..
ಕೃಪೆ:ಉದಯ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶ್ರೀಕೃಷ್ಣನು ಸ್ವರ್ಗದಿಂದ ತಂದ ಪಾರಿಜಾತ ವೃಕ್ಷದ ಬಗ್ಗೆ ತಿಳಿಯದವರು ಇಲ್ಲವೆಂದರೆ ಸುಳ್ಳಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಗೊತ್ತು ಶ್ರೀಕೃಷ್ಣ ಪಾರಿಜಾತ ವೃಕ್ಷದ ಬಗ್ಗೆ ಪಾರಿಜಾತ ವೃಕ್ಷ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಶ್ರೀಕೃಷ್ಣ ಹಾಗೂ ಸತ್ಯಭಾಮೆ. ಪಾರಿಜಾತ ವೃಕ್ಷವನ್ನು ಸ್ವರ್ಗದಿಂದ ಸತ್ಯಭಾಮೆಗಾಗಿ ಶ್ರೀಕೃಷ್ಣನು ತಂದಿದ್ದಾನೆ ಎನ್ನುವ ವೃತ್ತಾಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇನ್ನೂ ಹೀಗೆ ಬೋಕರಿಸಲ್ಪಟ್ಟ ಪಾರಿಜಾತ ವೃಕ್ಷ ಮತ್ತೆಲ್ಲೂ ಇಲ್ಲ. ಅದು ನಮ್ಮ ಭಾರತ ದೇಶದಲ್ಲಿಯೇ ಇದೆ. ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ತನ್ನ ಪ್ರಿಯಸಖಿಯಾದ ಸತ್ಯಭಾಮೆಗೆ ಬೋಕರಿಸಬೇಕೆಂದ್ದಿದ…
ಸಾಮಾನ್ಯವಾಗಿ ಸೆಟ್ನಲ್ಲಿ ತಂತ್ರಜ್ಞರೆಲ್ಲ ಮನೆಯವರಂತೆ ಇರುತ್ತಾರೆ. ಮನಸ್ತಾಪಗಳು ಬಂದರು ಬಹಳ ಕಾಲ ಇರುವುದಿಲ್ಲ. ಅಲ್ಲಿಂದಲ್ಲಿಗೆ ಮರೆತು ಒಂದಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ‘ಸೂರ್ಯವಂಶಿ’ ಚಿತ್ರದ ಸೆಟ್ನಲ್ಲಿ ಮಾತ್ರ ಎಲ್ಲ ಅವಾಂತರವೇ ಆಗಿಹೋಗಿದೆ. ಆ ಚಿತ್ರದ ಹೀರೋ ಅಕ್ಷಯ್ಕುಮಾರ್. ನಿರ್ದೇಶನ ಮಾಡುತ್ತಿರುವುದು ರೋಹಿತ್ ಶೆಟ್ಟಿ. ಇದೀಗ ಇವರಿಬ್ಬರು ಸೆಟ್ನಲ್ಲಿ ಹೊಡೆದಾಡಿಕೊಂಡಿದ್ದಾರೆ. ಹಾಗಾದರೆ, ಅಕ್ಷಯ್ ಮತ್ತು ರೋಹಿತ್ ಹೀಗೆ ಹೊಡೆದಾಡಿಕೊಂಡರು? ಗಾಬರಿ ಆಗಬೇಡಿ. ಇದು ನಿಜವಾದ ಜಗಳವಲ್ಲ. ಬದಲಿಗೆ, ಕಾಮಿಡಿ ಜಗಳ. ಈ ರೀತಿ ಅವರಿಬ್ಬರು ನಡೆದುಕೊಳ್ಳಲೂ ಕಾರಣವಿದೆ. ಅದೇನೆಂದರೆ, ಇತ್ತೀಚಿಗೆ…
ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ. ಪೂಜಾ ಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದುಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು. ನಿಮ್ಮ ಶಕ್ತಿಗನುಸಾರವಾಗಿ 12,…
ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ. 1.ನಿಮ್ಮಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು: ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ….
ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ರೈತ ಯಲ್ಲನಗೌಡ ಪಾಟೀಲ ಮನೆಯಲ್ಲಿ ದೀಪಾವಳಿ ಪಾಡ್ಯದ ದಿನದಂದು ದೇವಿಯ ಮೂರ್ತಿಯು ಪತ್ತೆಯಾಗಿದೆ. ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗೆ, ಗೋಡೆಯಲ್ಲಿ ಉದ್ಭವವಾಗಿದೆ ಎನ್ನಲಾದ ದೇವಿಯನ್ನು ನೋಡಲು ಇಡೀ ಊರಿಗೆ ಊರೇ ಸೇರುತ್ತಿದೆ. ಧಾರವಾಡ ನಗರದ ಹೊಸ ಯಲ್ಲಾಪುರದ ದುಂಡಿ ಓಣಿಯಲ್ಲಿರುವ ಯಲ್ಲನ್ನಗೌಡ ಪಾಟೀಲ ಅವರ ಮನೆಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂಬ ಸುದ್ದಿ ಹರಿದಾಡಿದ್ದು, ಈ ದೃಶ್ಯವನ್ನು ನೋಡಲು ಭಕ್ತ ಸಮೂಹವೇ ಹರಿದುಬರುತ್ತಿದೆ. ಯಲ್ಲನ್ನಗೌಡ ದಂಪತಿ ದೇವಿಯ ಆರಾಧಕರಾಗಿದ್ದು, ದೀಪಾವಳಿ…
ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಜಿಮ್ ನಲ್ಲಿ ಎಷ್ಟು ಕಸರತ್ತು ಮಾಡಿದ್ರೂ ಕೆಲವರ ತೂಕ ಮಾತ್ರ ಇಳಿಯೋದಿಲ್ಲ. ನಾವು ಇಂದು ಹೇಳುವ ಉಪಾಯದಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಜಿಮ್…