News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ವಿಚಿತ್ರ ಆದರೂ ಸತ್ಯ

ಮತ್ಸ್ಯ ಮಗುವಿಗೆ ಜನ್ಮ ನೀಡಿದ ಮಹಿಳೆ..!ತಿಳಿಯಲು ಈ ಲೇಖನ ಓದಿ…

515

ಮತ್ಸ್ಯಕನ್ಯೆ ಸಿಕ್ಕಿದ್ದಾಳೆ ಎನ್ನುವ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಇದನ್ನು ನಂಬುವುದು ತುಂಬಾ ಕಷ್ಟದ ಕೆಲಸ. ಆದರೆ ಕೆಲವೊಮ್ಮೆ ಇಂತಹ ಘಟನೆಗಳನ್ನು ನಂಬಲೇಬೇಕಾಗುವುದು. ಯಾಕೆಂದರೆ ಮಹಿಳೆಯೊಬ್ಬಳು ಮತ್ಸ್ಯಶಿಶುವಿಗೆ ಜನ್ಮ ನೀಡಿದ ಸುದ್ದಿಯಿದು. ಇದನ್ನು ನೀವು ಕೂಡ ಕೇಳಿರಬಹುದು.

ಮಹಿಳೆಯು ಗರ್ಭಿಣಿಯಾಗಿದ್ದಾಗ ಯಾವುದೇ ರೀತಿಯ ಔಷಧಿ ತೆಗೆದುಕೊಳ್ಳದೆ, ವೈದ್ಯರ ಸಲಹೆ ಪಡೆಯದೇ ಇರುವುದೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಭಾರತದಲ್ಲಿ ಇಂತಹ ಮತ್ಸ್ಯಶಿಶು ಹುಟ್ಟಿದರೆ ಏನಾಗಬಹುದು ಎಂದು ನೀವೊಮ್ಮೆ ಯೋಚಿಸಿ.

ಭಾರತದಲ್ಲೇ ಮಗು  ಜನಿಸಿದೆ:

ಮತ್ಸ್ಯಶಿಶುವು ಕೊಲ್ಕತ್ತಾದಲ್ಲಿ ಜನಿಸಿದೆ. ಒಂದಕ್ಕೊಂದು ಅಂಟಿಕೊಂಡಿರುವ ಕಾಲುಗಳು ಇರುವ ಮಗುವಿಗೆ ಮಹಿಳೆಯು ಜನ್ಮ ನೀಡಿದಾಗ ವೈದ್ಯರು ಕೂಡ ಒಂದು ಕ್ಷಣ ನಿಬ್ಬೆರಗಾದರು. ಇದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಹೇಳಲಾಗುತ್ತದೆ.

ಈ ವಿಚಿತ್ರಕ್ಕೆ ಜನರು ಏನು ಹೇಳುವರು….

ಈ ವಿಚಿತ್ರಕ್ಕೆ ವೈದ್ಯಕೀಯ ಲೋಕದಲ್ಲಿ `ಮೆರ್ಮೆಡ್ ಸಿಂಡ್ರಾಮ್’ ಅಥವಾ `ಸಿರೆನೊಮೆಲಿಯಾ’ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಡೆದಿರುವ ಎರಡನೇ ಘಟನೆ ಮತ್ತು ವಿಶ್ವದಲ್ಲೇ ಐದನೇಯದ್ದು ಎಂದು ವರದಿಗಳು ಹೇಳಿವೆ.

ಮಗುವಿನ ಲಿಂಗವು ಒಂದು ರಹಸ್ಯವಾಗಿಯೇ ಉಳಿಯಿತು!

ಮಗುವಿನ ಲಿಂಗ ಪತ್ತೆ ಮಾಡಲು ಸಾಧ್ಯವಾಗಲಿಲ್ಲವೆಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಮಗು ಹುಟ್ಟುವುದು ತುಂಬಾ ಅಪರೂಪದಲ್ಲಿ ಅಪರೂಪ. ಬೆಳವಣಿಗೆಯಾಗದ ಮೂತ್ರಪಿಂಡದ ಕುಳಿಗಳು ಮತ್ತು ಬೆರೆತುಕೊಂಡಿರುವ ಕಾಲುಗಳಿಂದಾಗಿ ಮಗುವಿನ ಲಿಂಗ ಪತ್ತೆ ಸಾಧ್ಯವಾಗಿಲ್ಲ. ಮಗು ಜನಿಸಿದ ನಾಲ್ಕು ಗಂಟೆಗಳಲ್ಲಿ ಮೃತಪಟ್ಟಿದೆ ಎಂದು ವರದಿಗಳು ತಿಳಿಸಿವೆ.

ಈ ಪರಿಸ್ಥಿತಿ ಬರಲು ಕಾರಣವೇನು..?

ಗರ್ಭದಲ್ಲಿರುವ ಮಗುವಿಗೆ ತಾಯಿಯಿಂದ ಸರಿಯಾದ ಪೋಷಕಾಂಶಗಳು ಸಿಗದೆ ಇರುವುದು ಮತ್ತು ರಕ್ತಸಂಚಾರ ಸರಿಯಾಗಿ ಆಗದೆ ಇದ್ದರೆ ಮಗುವಿನಲ್ಲಿ ಇಂತಹ ವಿಕಲತೆಗಳು ಕಂಡುಬರುವುದು. ಇಂತಹ ಮಗುವು ಬದುಕಿ ಉಳಿಯುವುದಿಲ್ಲ. ಹೆಚ್ಚಿನ ಸಮಯದಲ್ಲಿ ಗರ್ಭಪಾತ ಮಾಡಿಸಲಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ