ದಿನಕ್ಕೊಂದು ನೀತಿ ಕಥೆ

ಭೂಮಿ ಮೇಲೆ ಯಾರು ಹೆಚ್ಚು ಸುಖೀ?ರಾಜನಿಗೆ ಕಾಡಿದ ಈ ಪ್ರಶ್ನೆಗೆ ಉತ್ತರ ಕೊಟ್ಟವರು ಯಾರು ಗೊತ್ತಾ..?ತಿಳಿಯಲು ಈ ಕಥೆ ಓದಿ…

489

ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ. ರಾಜ್ಯದ ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ, ಅಲ್ಲಿನ ಜನರನ್ನು ಮಾತಾಡಿಸುತ್ತಾ, ಅವರ ಕಷ್ಟ-ಸುಖಗಳನ್ನು, ಆಲಿಸುತ್ತಾ, ಸಮಾಧಾನವನ್ನೋ, ಪರಿಹಾರವನ್ನೋ ಹೇಳುತ್ತಾ ನಡೆದ.

ಒಂದು ರಾತ್ರಿ ದೂರದ ಹಳ್ಳಿಯೊಂದರ ಜಗಲಿಯಲ್ಲಿ ಕುಳಿತು ಆನಂದದಿಂದ ಹಾಡುತ್ತಿದ್ದ ರೈತನೊಬ್ಬ ಕಾಣಿಸಿದ. ಮಾರುವೇಷದಲ್ಲಿದ್ದ ರಾಜನಿಗೆ ಆತನನ್ನು ಕಂಡು ಅಚ್ಚರಿಯಾಯಿತು. ಆತನ ಕುಶಲ ವಿಚಾರಿಸಿ, ಬಹಳ ಸಂತೋಷದಿಂದ ಹಾಡುತ್ತಿರುವ ಕಾರಣ ಕೇಳಿದ. ಅದಕ್ಕೆ ರೈತನ ಉತ್ತರ ಹೀಗಿತ್ತು; “ದಿನವೂ ಕಷ್ಟಪಟ್ಟು ಹೊಲದಲ್ಲಿ ದುಡಿಯುತ್ತೇನೆ. ಭಗವಂತನ ದಯೆಯಿಂದ ಸಿಕ್ಕ ಫ‌ಲದಲ್ಲಿ ಅರ್ಧ ಭಾಗವನ್ನು ಮಾತ್ರ ನನ್ನ ದೈನಂದಿನ ಜೀವನದ ನಿರ್ವಹಣೆಗೆ ಖರ್ಚು ಮಾಡುತ್ತೇನೆ. ಉಳಿದ ಅರ್ಧಭಾಗದಲ್ಲಿ ಕಾಲು ಭಾಗವನ್ನು ಸಾಲ ತೀರಿಸಲು, ಇನ್ನುಳಿದ ಕಾಲು ಭಾಗವನ್ನು ಸಾಲ ಕೊಡುವುದಕ್ಕೂ ವ್ಯಯಿಸುತ್ತೇನೆ. ಹೀಗಾಗಿ ನನ್ನ ಆದಾಯದ ಮಿತಿಯಲ್ಲಿ ನಾನು ಜೀವಿಸುತ್ತಾ ನನ್ನ ಕುಟುಂಬದವರೊಟ್ಟಿಗೆ ಸುಖ- ಸಂತೋಷದಿಂದಿದ್ದೇನೆ’ ಎಂದ.

ರೈತನ ಈ ಮಾತು ರಾಜನಿಗೆ ಒಗಟಾಗಿ ಕಂಡಿತು. “ಸಾಲ ಕೊಡುವುದು, ಸಾಲ ತೀರಿಸುವುದು ಹೀಗಂದರೇನು? ಕೊಂಚ ಬಿಡಿಸಿ ಹೇಳು ಮಹರಾಯ’ ಎಂದ. ರಾಜನ ಮಾತಿಗೆ ನಗುತ್ತ ರೈತನೆಂದ; “ಸಾಲ ಕೊಡುವುದೆಂದರೆ, ನನ್ನ ದುಡಿಮೆಯ ಕಾಲು ಭಾಗವನ್ನು ನಾನು ನನ್ನ ತಂದೆ- ತಾಯಿಯರನ್ನು ಸಾಕಲು ವ್ಯಯಿಸುತ್ತೇನೆ. ಕಾರಣ ಅವರು ನನ್ನನ್ನು ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ- ಸಲಹಿ ದೊಡ್ಡವನನ್ನಾಗಿ ಮಾಡಿ¨ªಾರೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ವೃದ್ಧರಾದ ಅವರನ್ನು ನೋಡಿಕೊಳ್ಳುವುದು ನನ್ನ ಹೊಣೆ. ಇದು ನಾನು ಪಡೆದ ಸಾಲ ತೀರಿಸುವ ರೀತಿ. ಇನ್ನು ನಿಮ್ಮ ಅನುಮಾನ ಸಾಲ ಕೊಡುವ ಕುರಿತದ್ದು; ಅದೂ ಹೀಗೆಯೇ, ನಾನು ನನ್ನ ಮಕ್ಕಳನ್ನು ಸಾಕಿ-ಸಲಹಿ, ಸಶಕ್ತರನ್ನಾಗಿ ಮಾಡುತ್ತಿದ್ದೇನೆ. ಇದು ಒಂದು ರೀತಿ ಸಾಲ ಕೊಟ್ಟಂತೆ; ಅಂದರೆ ಅವರು ಮುಂದೆ ನನಗೆ ಮತ್ತು ನನ್ನ ಹೆಂಡತಿಗೆ ವಯಸ್ಸಾದಾಗ ದಿಕ್ಕಾಗುತ್ತಾರೆ. ಇನ್ನು ಉಳಿದ ಅರ್ಧಭಾಗದಲ್ಲಿ ನನ್ನ ದೈನಂದಿನ ಜೀವನ ಹೇಗೋ ಸಾಗುತ್ತದೆ.

ಹೀಗಾಗಿ ನನ್ನ ನೆಮ್ಮದಿಯ ಜೀವನಕ್ಕೆ ಭಂಗವಿಲ್ಲ’ ಎಂದು ನಗೆ ಬೀರಿದ. ರೈತನ ಜೀವನೋತ್ಸಾಹದ ಮಾತು ರಾಜನಲ್ಲಿ ಹೊಸ ಅರಿವನ್ನೇ ಹುಟ್ಟಿಸಿತು. ಸರಳ ಜೀವನ ಹಾಗೂ ಇದ್ದುದರ ತೃಪ್ತಿ ಹೊಂದುವ ಗುಣ ಇವೇ ಬದುಕಿನ ಸುಖ-ಸಂತೋಷದ ಮೂಲ ಎನ್ನುವ ಸತ್ಯ ಗೊತ್ತಾಯಿತು. ಆಗಲೇ ರಾಜನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರವೂ ದೊರಕಿತು.

ಮೂಲ:- 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆತ್ತಲೆಯಾಗಿಯೇ ಇಡೀ ಏರ್ ಪೋರ್ಟ್’ನಲ್ಲಿ ಸುತ್ತಾಡಿದ ಯುವತಿ.!ಈ ವಿಡಿಯೋ ನೋಡಿ.ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

    ಮಹಿಳೆಯೊಬ್ಬಳು ಏರ್ ಪೋರ್ಟ್ ಒಂದರಲ್ಲಿ ಬೆತ್ತಲೆಯಾಗಿ ಓಡಾಡಿದ್ದು, ಏರ್ ಪೋರ್ಟ್’ನಲ್ಲಿ ಇದ್ದವರಿಗೆ ಮುಜುಗರವಾಗುವಂತೆ ಮಾಡಿದೆ. ಹೌದು, ಇದು ನಡೆದಿದ್ದು ಕೊರಿಯಾದ ಏರ್ ಪೋರ್ಟ್ ಒಂದರಲ್ಲಿ.ಸಾಮಾನ್ಯವಾಗಿ ಏರ್ ಪೋರ್ಟ್’ನಲ್ಲಿ  ಅಧಿಕಾರಿಗಳು ಎಲ್ಲರನ್ನೂ ಚೆಕ್ ಮಾಡಿಯೇ ಮುಂದೆ ಕಳುಹಿಸುತ್ತಾರೆ.ಆದರೆ ಅಧಿಕಾರಿಗಳು ಇಲ್ಲೊಬ್ಬ ಚೀನಿ ಮಹಿಳೆಗೆ ಚೆಕ್ ಮಾಡುವ ವೇಳೆ ಅವಳ ಬಟ್ಟೆ ಬರೆಗಳನ್ನೆಲ್ಲಾ ಬಿಚ್ಚಿಸಿದ್ದಾರೆ. ಈ ವಿಡಿಯೋ ನೋಡಿ ಶಾಕ್ ಆಗ್ತೀರಾ… ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ಆ ಮಹಿಳೆ, ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲದಂತೆ, ಇಡೀ ಏರ್…

  • ವೀಡಿಯೊ ಗ್ಯಾಲರಿ

    ನ್ಯಾಯಬೆಲೆ ಅಂಗಡಿಗಳು ಬಡವರಿಗೆ ಕೊಡುವ ಅಕ್ಕಿಯಲ್ಲಿ ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ.?ತಿಳಿಯಲು ಮುಂದೆ ನೋಡಿ ಶೇರ್ ಮಾಡಿ ಎಲ್ಲರಿಗೂ ತಿಳಿಯಲಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸರಕಾರಗಳು ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರ್ತಾರೆ.ಆದ್ರೆ ಅವುಗಳನ್ನು ಯತಾವತ್ತಾಗಿ ಜಾರಿಗೆ ಮಾಡುವಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಾರೆ. ಅವುಗಳಲ್ಲಿ ಒಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ಕೊಡುವ ರೇಷನ್. ಬಡವರಿಗಾಗಿ ಮೀಸಲಿರುವ ಈ ರೇಷನ್ ನ್ಯಾಯಯುತವಾಗಿ ಎಲ್ಲರಿಗೂ ಸಿಗುತ್ತಿದೆಯೇ ಎನ್ನುವ ಪ್ರಶ್ನೆಗೆ ಹಲವರ ಬಳಿ ಉತ್ತರವಿಲ್ಲ. ಆದ್ರೆ ನಾವು ನೀವೂ ಇದರ ಬಗ್ಗೆ ತಿಳಿಯುವುದು ಅತ್ಯಾವಶ್ಯಕ.ಯಾಕೆಂದ್ರೆ ನಮಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಅಂದ್ರೆ, ಪಡಿತರ ಅಂಗಡಿಗಳ ಮಾಲೀಕರು ಹೇಗೆಲ್ಲಾ ಮೋಸ…

  • ಕ್ರೀಡೆ

    ಇಂಗ್ಲೆಂಡ್ನಲ್ಲಿ ಮಲ್ಯಗೆ “ಕಳ್ಳ ಕಳ್ಳ” ಎಂದು ಕೂಗಿದ ಭಾರತೀಯ ಪ್ರೇಕ್ಷಕರು!ವಿಡಿಯೋ ನೋಡಿ ಬಿದ್ದು ಬಿದ್ದು ನಗ್ತೀರಾ…..

    ಭಾನುವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಾಂಪಿಯನ್ಸ್‍ ಟ್ರೋಫಿ ಕೊನೆಯ ಲೀಗ್‍ ಪಂದ್ಯ ನೋಡಲು ಬಂದ ಉದ್ಯಮಿ ಮದ್ಯದ ದೊರೆ ವಿಜಯ್‍ ಮಲ್ಯ ಅವರನ್ನು ಭಾರತೀಯ ಪ್ರೇಕ್ಷಕರು ಹೀಯಾಳಿಸಿದ ಘಟನೆ ನಡೆದಿದೆ

  • ಉಪಯುಕ್ತ ಮಾಹಿತಿ

    ಸಾಗರದ ಪಾಲಾಗಲಿದೆಯೇ ಮಂಗಳೂರು, ಮುಂಬೈ..!ತಿಳಿಯಲು ಈ ಲೇಖನ ಓದಿ ..

    ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.

  • ಸುದ್ದಿ

    ಈ ಎರಡು 2 ಆ್ಯಪ್ ನಿಮ್ಮಲ್ಲಿದ್ದರೆ ಸಾಕು, ದುಬಾರಿ ದಂಡದಿಂದ ಬಚಾವ್ ಆಗಬಹುದು,.! ಇಲ್ಲಿದೆ ನೋಡಿ ಮಾಹಿತಿ!

    ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್‌ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್‌ನಿಂದ ಬಚಾವ್ ಆಗಬಹುದು. ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ  ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ…

  • ಸುದ್ದಿ

    ಬಡ ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್….!

    ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…