ದಿನಕ್ಕೊಂದು ನೀತಿ ಕಥೆ

ಭೂಮಿ ತಲೆಕೆಳಗಾದರೆ …? ಓದಿ ದಿನಕ್ಕೊಂದು ನೀತಿ ಕಥೆ….

2473

ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತಿದ್ದಾಗ ಬೋದಿಸತ್ವ ಒಂದು ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕಾಡಿನಲ್ಲಿದ್ದ. ಆ ಕಾಡಿನ ಅಂಚಿನ ಸಮುದ್ರತೀರದಲ್ಲಿ ಒಂದು ಬೇಲದ ಮತ್ತು ತಾಳೆಯ ಮರಗಳ ತೋಪಿತ್ತು. ಒಂದು ತಾಳೆಯ ಮರ ಮತ್ತು ಬೇಲದಮರದ ಅಕ್ಕಪಕ್ಕದಲ್ಲಿ ಕಡೆ ಮೊಲವೊಂದು ವಾಸಮಾಡುತ್ತಿತ್ತು.

ಒಂದು ದಿನ ಆ ಮೊಲ ತಾಳೆಯ ಮರದ ನೆರಳಿನಲ್ಲಿ ಮಲಗಿತ್ತು. ಒಂದು ಕ್ಷಣ ಅದಕ್ಕೆ ಅಕಸ್ಮಾತ್ ಈ ಭೂಮಿಯೇ ತಲೆಕೆಳಗಾದರೇನುಗತಿ? ಎಂಬ ಯೋಚನೆ ಬಂತು. ಅದೇ ಸಮಯದಲ್ಲಿ ಒಂದು ಬೇಲದ ಹಣ್ಣು ತೊಟ್ಟು ಕಳಚಿ ತಾಳೆಯ ಗರಿಯ ಮೇಲೆ ಬಿದ್ದು ಶಬ್ದವಾಯಿತು. ಅದನ್ನು ಕೇಳಿ ಮೊಲ ಭೂಮಿ ತಲೆಕೆಳಗಾಗುತ್ತಿದೆ ಎಂದೇ ಬಾವಿಸಿ ಬೀತಿಯಿಂದ ಓಡತೊಡಗಿತು.

ವಿಪರೀತ ಭಯದಿಂದ ಓಡುತ್ತಿರುವ ಅದನ್ನು ದಾರಿಯಲ್ಲಿ ಇನ್ನೊಂದು ಮೊಲ ಕಂಡು, ‘’ಏಕೆ ಹೀಗೆ ಓಡುತ್ತಿರುವೆ? ಏನಾಯಿತು?’’ ಎಂದು ಕೇಳಿತು.

‘’ಅಯ್ಯೋ, ಅದನ್ನು ಏನೆಂದು ಹೇಳಲಿ? ಭೂಮಿ ತಲೆಕೆಳಗಾಗುತ್ತಿದೆ‘’ ಎಂದು ಅದು ಓಡುತ್ತಲೇ ಇತ್ತು. ಆ ಇನ್ನೊಂದು ಮೊಲವು ಭಯಬೀತಿಯಿಂದ ಅದರ ಹಿಂದೆ ಓಡತೊಡಗಿತು. ಅವೆರಡನ್ನೂ ನೋಡಿ ಇನ್ನೊಂದು ಮತ್ತೊಂದು, ಹೀಗೆ ಸಾವಿರ ಮೊಲಗಳ ಹಿಂಡೇ ಓಡತೊಡಗಿತು.

ಅಷ್ಟೇ ಅಲ್ಲದೆ ಅಷ್ಟು ಮೊಲಗಳ ಗಾಬರಿಯಿಂದ ಹಾಗೆ ಓಡುತ್ತಿರುವುದನ್ನು ಕಂಡು ಭೂಮಿ ತಲೆಕೆಳಗಾಗುವ ಆಪತ್ತು ಬಂದಿದೆಯೆಂದು ತಿಳಿದು ಭಯದಿಂದ ಒಂದು ಹಂದಿ, ಹಸು, ಎಮ್ಮೆ ಮತ್ತು ಹುಲಿ, ಸಿಂಹ, ಆನೆ ಇತ್ಯಾದಿ ಪ್ರಾಣಿಗಳೂ ಓಡತೊಡಗಿದವು ಹಲವು ಪ್ರಾಣಿಗಳ ಸಾಲುಗಳ ಸೇರಿ ಒಂದು ಯೋಜನದಷ್ಟು ಉದ್ದವಾಯಿತು.

ದಾರಿಯಲ್ಲಿ ಸಿಂಹವಾಗಿದ್ದ ಬೋದಿಸುತ್ತ ಈ ಮೆರವಣಿಗೆಯನ್ನು ಕಂಡು ‘’ಎಲ್ಲ ಏಕೆ ಹೀಗೆ ಓಡುತ್ತಿರುವಿರಿ?’’ ಎಂದು ಕೇಳಿದ. ಅವೆಲ್ಲ ‘ಭೂಮಿ ತಲೆಕೆಳಗಾಗುವುದು ಎಂದಾದರೂ ಸಾದ್ಯವೇ? ಇವು ಬೇರೆ ಏನನ್ನೋ ಕಂಡು ತಪ್ಪು ತಿಳಿದು ಹೀಗೆ ಓಡುತ್ತಿರಬೇಕು. ಹೀಗೆ ಬಿಟ್ಟರೆ ಎಲ್ಲ ಪ್ರಾಣಿಗಳು ಅನ್ಯಾಯವಾಗಿ ನಾಶವಾಗಿಬಿಡುತ್ತವೆ. ಅದನ್ನು ತಪ್ಪಿಸಬೇಕು’ ಎಂದು ಬೋದಿಸತ್ವ ಯೋಚಿಸಿದ.

ಕೂಡಲೇ ಸಿಂಹ ವೇಗವಾಗಿ ಓಡಿ ಬಂದು ಎಲ್ಲ ಪ್ರಾಣಿಗಳು ಅಡ್ಡವಾಗಿ ನಿಂತು ಮೂರೂ ಸಲ ಸಿಂಹನಾದ ಮಾಡಿತು. ಹೆದರಿದ ಪ್ರಾಣಿಗಳೆಲ್ಲ ನಿಂತವು. ‘’ಏಕೆ ಓಡುತ್ತಿರುವೆ?’’ಎಂದು ಅವನು ಕೇಳಿದ.

‘’ಭೂಮಿ ತಲೆಕೆಳಗಾಗುತ್ತಿದೆ.’’

‘’ಅದನ್ನು ನೋಡಿದವರಾರು?’’

‘’ಆನೆ’’

ಆನೆ ತನಗೆ ಗೊತ್ತಿಲ್ಲ, ಸಿಂಹಕ್ಕೆ ಗೊತ್ತು ಎಂದು ಹೇಳಿತು. ಸಿಂಹ ಹುಲಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು.  ಕಡೆಗೆ ಮೊಲಗಳ ಸರದಿ ಬಂತು. ಮೊಲಗಳು ತಮ್ಮ ಮುಂದೆ ಓಡಾಡುತಿದ್ದ ಮೊಲವನ್ನು ತೋರಿಸಿದೆವು.

‘’ಭೂಮಿ ತಲೆಕೆಳಗಾಗಿರುವದನ್ನು ನೋಡಿದೆಯಾ?’’ ಎಂದು ಸಿಂಹ ಮೊಲವನ್ನು ಕೇಳಿತು.

‘’ಹೌದು, ನಾನು ನೋಡಿದೆ’’ ಎಂದಿತು ಮೊಲ.

‘’ಎಲ್ಲಿ?’’

‘’ಸಮುದ್ರದಲ್ಲಿ ಹತ್ತಿರ ಬೇಲ ಮತ್ತು ತಾಳೆಯ ಮರಗಳ ತೋಪಿನಲ್ಲಿ. ಅಲ್ಲಿ ನಾನು ಬೇಲದ ಮರದ ಬುಡದಲ್ಲಿ ಮಲಗಿದ್ದೆ. ಒಂದು ವೇಳೆ ಭೂಮಿ ತಲೆಕೆಳಗಾದರೆ ಎಲ್ಲಿ ಹೋಗಲಿ? ಎಂದು ನಾನು ಯೋಚಿಸಿದ್ದೆ. ಆಗ ಭೂಮಿ ತಲೆಕೆಳಗಾಗುವ ಸದ್ದು ಕೇಳಿ ಬಂತು. ನಾನು ಓಡಿ ಬಂದೆ.’’

ನಿಜ ಸಂಗತಿಯನ್ನು ತಿಳಿಯಬೇಕೆಂದು ಸಿಂಹ ಇತರ ಪ್ರಾಣಿಗಳನ್ನು ಕುರಿತು ‘’ಈ ಮೊಲ ಹೇಳಿದ ಮಾತು ನಿಜವೇ ಎಂಬುದನ್ನು ನಾನು ತಿಳಿದು ಬರುವವರೆಗೆ ನೀವೆಲ್ಲ ಇಲ್ಲಿಯೇ ಇರಿ‘’ ಎಂದು ಹೇಳಿ ಮೊಲವನ್ನು ಕರೆದು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಹೊರಟಿತು.

ಅವೆರೆಡೂ ಬಹುಬೇಗ ಆ ತೋಪಿನ ಬಳಿಗೆ ಬಂದವು. ಮೊಲವನ್ನು ಇಳಿಸಿ ‘’ಆ ಸ್ಥಳವನ್ನು ತೋರಿಸಿ’’ ಎಂದು ಸಿಂಹ ಹೇಳಿತು. ಅದು ಹೆದುರುತ್ತಲೇ ಹೋಗಿ, ‘’ಇದೇ ಶಬ್ದವಾದ ಸ್ಥಳ’’  ಎಂದು ತೋರಿಸಿತು.

ಸಿಂಹ ಆ ಸ್ಥಳಕ್ಕೆ ಹೋಗಿ ಪರಿಶೀಲಿಸಿತು. ಅಲ್ಲೇ ತಾಳೆಗರಿಯ ಮೇಲೆ ಬಿದ್ದಿದ್ದ ಬೇಲದ ಹಣ್ಣನ್ನು ನೋಡಿ, ಇದು ಭೂಮಿ ತಲೆಕೆಳಗಾಗುತ್ತಿರುವ ಶಬ್ದವಲ್ಲ. ಬೇಲದ ಹಣ್ಣು ತಾಳೆಯ ಗರಿಯ ಮೇಲೆ ಬಿದ್ದ ಶಬ್ದವನ್ನು ಕೇಳಿ ತಪ್ಪು ತಿಳಿದುಕೊಂಡಿದೆಯೆಂದು ಅರ್ಥಮಾಡಿಕೊಂಡಿತು.

ಅನಂತರ ಮತ್ತೆ ಮೊಲವನ್ನು ಬೆನ್ನ ಮೇಲೆ ಕೂಡಿಸಿಕೊಂಡು ಸಿಂಹ ಆ ಪ್ರಾಣಿಗಳಿದ್ದ ಸ್ಥಳಕ್ಕೆ ಬಂದು, ನಿಜ ಸಂಗತಿಯನ್ನ್ಜು ತಿಳಿಸಿ ಪ್ರಾಣಿಗಳಿಗೆ ಧೈರ್ಯ ಹೇಳಿತು. ತಮ್ಮ ಪ್ರಾಣವುಳಿಸಿದ ಸಿಂಹವನ್ನು ಎಲ್ಲ ಪ್ರಾಣಿಗಳೂ ಕೊಂಡಾಡಿದವು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವ್ಯಕ್ತಿ ವಿಶೇಷಣ

    ಬರಗಾಲಕ್ಕೆ ಸೆಡ್ಡು ಹೊಡೆದು ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಿಳೆ..!ತಿಳಿಯಲು ಈ ಲೇಖನ ಓದಿ..

    ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದ ಮಹಿಳೆಯೊಬ್ಬರು ನಿರೂಪಿಸಿದ್ದಾರೆ. ರಾಂಪುರ ಗ್ರಾಮದ ಕೃಷಿಕ ಕುಟುಂಬದ ಮಹಿಳೆ ರೋಜಾ ಬರಗಾಲಕ್ಕೆ ಸೆಡ್ಡು ಹೊಡೆದು ತಂತ್ರಜ್ಞಾನವನ್ನ ಅಳವಡಿಸಿಕೊಂಡು ಹೈನುಗಾರಿಕೆ ಮಾಡ್ತಿದ್ದಾರೆ. ಇದರಿಂದ ನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೋಜಾ ಕಾರ್ಯಕ್ಕೆ ಅವರ ಪತಿಯು ಕೂಡ ಬೆಂಬಲವಾಗಿ ನಿಂತಿದ್ದಾರೆ. ನಿತ್ಯ 500 ಲೀಟರ್ ಹಾಲು ಉತ್ಪಾದಿಸಿ ಶಿಮುಲ್ ಡೈರಿಗೆ ಸರಬರಾಜು ಮಾಡುವ ಮೂಲಕ ಅಧಿಕ…

  • India, nation, ಆಧ್ಯಾತ್ಮ

    ಅದ್ಭುತ ವಾಸ್ತುಶಿಲ್ಪದ ಅಕ್ಷರ್ಧಮ್ ಮಂದಿರ

    ಸ್ವಾಮಿನಾರಾಯಣ್ ಅಕ್ಷರ್ಧಮ್ ನವದೆಹಲಿ ಹಿಂದೂ ದೇವಾಲಯ, ಮತ್ತು ಭಾರತದ ನವದೆಹಲಿಯಲ್ಲಿರುವ ಆಧ್ಯಾತ್ಮಿಕ-ಸಾಂಸ್ಕೃತಿಕ ಆವರಣ. ಅಕ್ಷರ್ಧಮ್ ದೇವಸ್ಥಾನ ಅಥವಾ ದೆಹಲಿ ಅಕ್ಷರ್ಧಮ್ ಎಂದೂ ಕರೆಯಲ್ಪಡುವ ಈ ಸಂಕೀರ್ಣವು ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಸಹಸ್ರಮಾನಗಳನ್ನು ಪ್ರದರ್ಶಿಸುತ್ತದೆ. ಯೋಗಿಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ರಚಿಸಿದ ಇದನ್ನು ಬಿಎಪಿಎಸ್ ನಿರ್ಮಿಸಿದೆ. ಈ ದೇವಾಲಯವನ್ನು  ನವೆಂಬರ್ 6, 2005 ರಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಡಾ. ಎ. ಪಿ….

  • ಸುದ್ದಿ

    ಮನೆಯಲ್ಲೆ ರಕ್ಷಣೆ ಇಲ್ಲದ್ದಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ,ಇದನ್ನೊಮ್ಮೆ ಓದಿ …!

    2017ರಲ್ಲಿಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ 25ರಂದು ಬಿಡುಗಡೆಮಾಡಿರುವ ಅಧ್ಯಯನ ವರದಿ. ನವೆಂಬರ್ 25, ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗೆ ಗೊತ್ತು ಮಾಡಲಾದ ಅಂತರರಾಷ್ಟ್ರೀಯ ದಿನವೂ ಹೌದು. ಈ 87 ಸಾವಿರವಾಗಲೀ 50 ಸಾವಿರವಾಗಲೀ ಸರ್ಕಾರಿ ಲೆಕ್ಕದಿಂದ ತೆಗೆದುಕೊಂಡದ್ದುಮಾತ್ರ ಎಂಬುದನ್ನು ಗ್ರಹಿಸಿದರೆ, ಇದರಾಚೆಗಿನ ಸತ್ಯದ ಭೀಕರತೆಯನ್ನು ಊಹಿಸಬಹುದು….

  • ದೇಶ-ವಿದೇಶ

    ಅಗಸ್ಟ್ 15ರ ನಂತರ ಮೋದಿ ಸರ್ಕಾರದಿಂದ, ಭ್ರಷ್ಟ ಅಧಿಕಾರಿಗಳಿಗೆ ಕಾದಿದೆ ಮಾರಿ ಹಬ್ಬ..!ಏನು ಗೊತ್ತಾ?ಈ ಲೇಖನಿ ಓದಿ…

    1000 ಮತ್ತು 500ರೂಗಳ ನೋಟ್ ಬ್ಯಾನ್ ಮಾಡಿ ಕಾಳಧನಿಕರ ಸೊಕ್ಕಡಿಗಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಈಗ ಮತ್ತೊಂದು ಕಾರ್ಯಕ್ಕೆ ಡೆಡ್ ಲೈನ್ ಕೊಟ್ಟಿದೆ.

  • ಸುದ್ದಿ

    ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕೊನೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ….

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲರಿಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊನೆಯ ಅವಕಾಶವನ್ನು ನೀಡಿದರು. ಮುಂಬೈನಿಂದ ಬಂದು ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲವೆ ಅನರ್ಹತೆಗೆ ದೂರು ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕಾಂಗ ಪಕ್ಷದ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು…

  • ಆರೋಗ್ಯ

    ಶುದ್ದೀಕರಿಸಿದ ನೀರನ್ನು ಕುಡಿಯುವುದಕ್ಕೆ ಮುಂಚೆ ಈ ಲೇಖನಿ ಓದಿ….

    ಶುದ್ದಿಕರಿಸಿದ ಈ ನೀರನ್ನು ಕುಡಿಯುವುದರಿಂದ ಮನುಷ್ಯರ ಡಿಏನ್ ಗೆ ಹಾನಿಯುಂಟಾಗುವ ಸಾದ್ಯತೆಗಳಿವೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.