ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .
ಇತ್ತ ಕಾಶಿಯಲ್ಲಿ ಬ್ರಹ್ಮದತ್ತನಿಗೆ ಸಕಲರೂ ತನ್ನ ಸದ್ಗುಣಗಳನ್ನೇ ಹಾಡಿ ಹೋಗಳತ್ತಿರುವುದನ್ನು ಕೇಳಿ ಕೇಳಿ ಒಂದು ಸಂದೇಹ ಬಂತು. ‘’ಪ್ರತಿಯೊಬ್ಬರೂ ನನ್ನನ್ನೂ ಹೊಗಳುತ್ತಾರೆ, ಕೀರ್ತಿಸುತ್ತಾರೆ. ಅಂದರೆ ನಾನು ಸರ್ವಗುಣ ಸಂಪನನ್ನೇ?ನನ್ನಲ್ಲಿ ಯಾವ ದೋಷವು ಇಲ್ಲವೇ?ಇದ್ದರೂ, ಕಂಡರೂ, ಯಾರೂ ಅದನ್ನು ನನ್ನ ದಾಕ್ಷೀಣ್ಯದಿಂದ ಹೇಳುತ್ತಿಲ್ಲವೇ?’’ ಎಂದುಕೊಂಡ.
ಯಾರಾದರೊಬ್ಬರಿಗೆ ತನ್ನಲ್ಲಿರುವ ದೋಷ ಕಾಣಿಸಬಹುದು, ಯಾರಾದರೊಬ್ಬರಿಗೆ ತನ್ನ ಕೊರತೆಯನ್ನು ಧೈರ್ಯವಾಗಿ ಆಡಿ ತೋರಿಸಬಹುದು, ಎಂದು ಅವನು ಹುಡುಕತೊಡಗಿದ. ಮೊದಲು ಅವನು ತನ್ನ ಪರಿವಾರದಲ್ಲಿ ಹುಡುಕಿದ.
ಆದರೆ ಅವರಲ್ಲಿ ಯಾರೂ ರಾಜನಲ್ಲಿ ದೋಷವಿದೆಯೆಂದು ಹೇಳಲಿಲ್ಲ ಅರಮನೆಯ ಪರಿವಾರದವರು ದೋಷ ಕಂಡವರು ಯಾರೂ ಇರಲಿಲ್ಲ. ನಗರದ ಹೊರಗೆ ವೇಷ ಮರೆಸಿಕೊಂಡು ಸಂಚಾರ ಮಾಡಿದ ಅಲ್ಲೂ ಕೂಡ ಎಲ್ಲ ಅವನ ಗುಣಗಾನ ಮಾಡಿದರೇ ಹೊರತು, ಒಬ್ಬನಾದರೂ ರಾಜನ ನಡತೆಯಲ್ಲಿ ಈ ತಪ್ಪಿದೆ ಎಂದು ಹೇಳಲಿಲ್ಲ.
ಕಡೆಗೆ ಅವನು ಹಿಮಾಲಯಕ್ಕೆ ಹೋದ. ಆ ಗುಡ್ಡ ಗಾಡಿನ ತುಂಬಾ ಸಂಚರಿಸಿದ. ಕಡೆಗೆ ಬೋಧಿಸತ್ವನ ಪರ್ಣಕುಟೀರ ಕಣ್ಣಿಗೆ ಬಿತ್ತು. ರಾಜ ಅಲ್ಲಿಗೆ ಹೋಗಿ ಅವನಿಗೆ ನಮಸ್ಕರಿಸಿ ಕುಳಿತುಕೊಂಡ. ಬೋಧಿಸತ್ವ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಂಡ.
ಬೋಧಿಸತ್ವ ಆಗ ಕಾಡಿನಿಂದ ತಂದಿದ್ದ ಅರಳಿ ಹಣ್ಣುಗಳನ್ನು ತಿನ್ನುತ್ತಿದ್ದ. ಅವನ್ನೇ ರಾಜನಿಗೆ ನೀಡಿ, ‘’ಅಯ್ಯಾ, ಹಸಿದಿರುವಂತಿದೆ, ಈ ಅರಳಿ ಹಣ್ಣುಗಳನ್ನು ತಿಂದು ನೀರು ಕುಡಿ’’ ಎಂದ.
ರಾಜ ಹಾಗೇ ಮಾಡಿದ. ಆ ಅರಳಿ ಹಣ್ಣುಗಳು ಅಮೃತದಂತಿದ್ದವು. ‘’ಪೂಜ್ಯರೆ, ಈ ಹಣ್ಣುಗಳು ಇಷ್ಟೊಂದು ಮಧುರವಾಗಿರಲು ಕಾರಣವೇನು?’’ ಎಂದು ಕೇಳಿದ.
ಬೋಧಿಸತ್ವ ಹೇಳಿದ, ‘’ಈ ಪ್ರಾಂತ್ಯವನ್ನು ಆಳುತ್ತಿರುವ ರಾಜ ಧರ್ಮವನ್ನು ಮೀರದೆ, ನ್ಯಾಯದಿಂದ ನಡೆದುಕೊಳ್ಳುತ್ತಿದ್ದಾನೆ. ಅದಕ್ಕೇ ಈ ಹಣ್ಣುಗಳು ಇಷ್ಟು ಸಿಹಿಯಾಗಿವೆ.’’
‘’ಪೂಜ್ಯರೆ’’ ಬೋಧಿಸತ್ವ ಹೇಳಿದ, ‘’ಸಿಹಿ ಕೊಡುವ ಪದಾರ್ಥಗಳು ತಮ್ಮ ಸಿಹಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಇಡೀ ದೇಶವೇ ಸತ್ವವನ್ನು ಕಳೆದುಕೊಂಡು ನಾಶವಾಗುತ್ತದೆ.’’
ರಾಜ ತನ್ನ ಪರಿಚಯವನ್ನು ಹೇಳಿಕೊಳ್ಳದೆ ನಮಸ್ಕರಿಸಿ ಅಲ್ಲಿಂದ ಹೊರಟು ಬಂದ.
ಬೋಧಿಸತ್ವನ ಹೇಳಿದ ಮಾತುಗಳನ್ನು ಪರೀಕ್ಷಿಸುವ ಮನಸ್ಸಾಯಿತು. ರಾಜ ಅಂದಿನಿಂದ ಅಧರ್ಮದಿಂದ ರಾಜ್ಯಭಾರ ಮಾಡುತ್ತ ಅನ್ಯಾಯದಿಂದ ನಡೆದುಕೊಳ್ಳತೊಡಗಿದ.
ಕೆಲವು ಕಾಲದ ನಂತರ ಮತ್ತೆ ಅವನು ಬೋಧಿಸತ್ವನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡ. ಆ ದಿನವೂ ಬೋಧಿಸತ್ವ ಅವನಿಗೆ ಅರಳಿ ಹಣ್ಣುಗಳನ್ನು ಕೊಟ್ಟ ಅದನ್ನು ಬಾಯಿಗಿಟ್ಟುಕೊಂಡ ಕೂಡಲೇ ಕಹಿಯಾಗಿ ರಾಜ ತಿನ್ನಲಾರದೆ ಉಗಿದುಬಿಟ್ಟ. ‘’ಪೂಜ್ಯರೇ, ಈ ಹಣ್ಣುಗಳನ್ನು ತಿನ್ನಲಾರದಷ್ಟು ಕಹಿಯಗಿವೆ’’ ಎಂದ.
ಬೋಧಿಸತ್ವ ಹೇಳಿದ, ‘’ಹಾಗಾದರೆ ರಾಜ ನಿಜವಾಗಲೂ ಅಧರ್ಮಿಯಗಿರಬೇಕು. ಅದರಿಂದಲೇ ಹಣ್ಣುಗಳನ್ನು ತಮ್ಮ ಸಿಹಿ ಕಳೆದುಕೊಂಡಿದೆ. ರಾಜ ಅಧಾರ್ಮಿಕನಾದರೆ ಇಡೀ ಪ್ರಜಸಮೂಹಂ ಅಧರ್ಮಚರಣೆ ಮಾಡುತ್ತ ದೇಶವೇ ದುಃಖಕ್ಕೆ ಒಳಗಾಗುತ್ತದೆ,’’
ರಾಜ ತನ್ನ ಪರಿಚಯವನ್ನು ಬಹಿರಂಗಪಡಿಸಿದ. ‘’ಪೂಜ್ಯರೇ, ನಾನೇ ಅರಳಿ ಹಣ್ಣನ್ನು ಸಿಹಿ ಮಾಡಿದೆ. ಅನಂತರ ನಾನೇ ಅದನ್ನು ಕಹಿ ಮಾಡಿದೆ. ಈಗ ಮತ್ತೆ ಸಿಹಿ ಮಾಡುತ್ತೇನೆ’’ ಎಂದು ನಮಸ್ಕರಿಸಿದ.
ಹಿಂದಿರುಗಿ ಕಾಶಿಗೆ ಹೋಗಿ ಧರ್ಮದಿಂದ ರಾಜ್ಯಭಾರ ಮಾಡಿದ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.
KOLAR NEWS PAPER 25-12-2022
ರೈಲು ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಜನಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಅತೀ ದೂರ ಪ್ರಯಾಣ ಮಾಡಲು ನೆರವಾಗುತ್ತಿರುವ ಸಾರಿಗೆ ಅಂದರೆ ಅದೂ ರೈಲು ಸಾರಿಗೆ ಮಾತ್ರ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಒಂದು ರೈಲು ಇಂಜಿನ್ ಬೆಲೆ ಸುಮಾರು 14 ರಿಂದ 17 ಕೋಟಿ ಇರುತ್ತದೆ, ಇನ್ನು ರೈಲುಗಳನ್ನ ಯಾರಿಗೂ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ, ಹೌದು ರೈಲುಗಳು ಚಲಿಸಲು ಪ್ರಮುಖವಾಗಿ ಬೇಕಾಗಿರುವುದು ರೈಲುಗಳು ಹಳಿಗಳು ಮತ್ತು ಎಲ್ಲಾ ರೈಲುಗಳು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ….
ಪಾಕ್ ಪರವಾಗಿ ಘೋಷಣೆಯನ್ನು ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಇಂದು ಜಾಮೀನು ನೀಡಿದೆ. ಹೌದು ಹುಬ್ಬಳಿಯ ನ್ಯಾಯಾಲಯ ಜೆಎಂಎಫ್ಸಿ-2 ಇಂದು ಜಾಮೀನಿನ ಮೇಲೆ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದೆ. ಇದು ಪೋಲೀಸರ ನಿರ್ಲ್ಯಕ್ಷ ಹಾಗೂ ಇವರ ಸೋಮಾರಿತನದಿಂದ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಜಾಮೀನಿನ ಮುಖಾಂತರ ಹೊರಗಡೆ ಬಂದಿದ್ದಾರೆ ಇದರ ವಿರುದ್ಧ ವಕೀಲ ಸಂಘದ ಅಧ್ಯಕ್ಷ ಅಶೋಕ್ ಕಿಡಿಕಾರಿದ್ದಾರೆ. ಹುಬ್ಬಳಿ ಗ್ರಾಮೀಣದ ಪೊಲೀಸರು ಸರಿಯಾದ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಸದೇ ಇರುವ ಕಾರಣ ನ್ಯಾಯಾಲಯ ದೇಶ…
ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ. ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ. ”ಶ್ರೀ” ಎಂದರೆ ಶ್ರೀಹರಿಯ ಸ್ವರೂಪ. ಇನ್ನು “ಚಕ್ರ” ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪರಿಪಾಲನೆ ಮಾಡುತಾ ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತಾ ನಮ್ಮಲ್ಲಿರುವ ಸತ್ವಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂತಹುದ್ದೇ…
ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂಬೈ ಮೆಟ್ರೋ ನಿಗಮ ನಿರ್ಧರಿಸಿದೆ, ಕಾಮಗಾರಿಯೂ ಆರಂಭಗೊಂಡಿದೆ. ಗ್ಯಾಲರಿ ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ. ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್ ಸೇಂಟ್ಸ್ ಚರ್ಚ್ ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ…