ತಂತ್ರಜ್ಞಾನ

ನೆಲದ ಮೇಲೆ ಹಾಗೊ ಆಕಾಶದಲ್ಲಿ ಹಾರುವ ಕಾರು..!ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ …

282

ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ.

ನೀವು ಈ ಮುಂಚೆ ಕೇಳಿರಬಹುದು. ರೋಡಿನಲ್ಲೂ ಚಲಿಸುವ, ಗಾಳಿಯಲ್ಲೂ ಹಾರುವ ವಾಹನ ಅನ್ವೇಷಣೆಯ ಹಂತದಲ್ಲಿದೆ ಎಂದು. ಹೌದು ಈಗ ಆ ಹಾರುವ ಕಾರಿನ ಅಭಿವೃದ್ಧಿ ಕಾರ್ಯ ಮುಗಿದಿದ್ದು, 2018 ರಲ್ಲಿ ಹಾರುವ ಕಾರು ರೋಡಿಗಿಳಿಯಲಿದೆ. ಅಲ್ಲಾ, ಗಾಳಿಯಲ್ಲಿ ಹಾರಲಿದೆ.

ಹಾರುವ ಕಾರು:-

ತಂತಾನೇ ಓಡಬಲ್ಲ ಕಾರಿದ್ದರೆ ಅಪಗಾತಗಳನ್ನು ತಡೆಗಟ್ಟಬಹುದು ಆದರೆ ರಸ್ತೆಯ ದಟ್ಟಣೆಗೆ ಏನು ಮಾಡುವುದು ? ಹಾರುವ ಕಾರು ಇಂತದೊಂದು ಕೇಳ್ವಿಗೆ ಉತ್ತರವಾಗಬಲ್ಲದು. ರಸ್ತೆಯಲ್ಲಿ ಓಡುವ ಕಾರು ಮತ್ತು ಬಾನಲ್ಲಿ ಹಾರುವ ವಿಮಾನದ ನಡುವಿನ ನಡೆ ಇದು.

ಕಾರು ಮೇಲೆ ಹಾರಬೇಕೆಂದರೆ ಅದು ನೆಲಸೆಳೆತವನ್ನು (earth’s gravity) ಮೀರಬೇಕು ಅಂದರೆ ಅದಕ್ಕೆ ಇದಿರು-ನೆಲಸೆಳೆತ (anti-gravity) ಒದಗಿಸುವಂತ ಚಳಕಗಳು ಎಟುಕಬೇಕು, ಅದೂ ಕಡಿಮೆ ಬೆಲೆಯಲ್ಲಿ.

ಸ್ಯಾಮ್ ಸನ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿರುವ ಹಾರುವ ಕಾರಿನ ಹೆಸರು ‘ಸ್ಯಾಮ್ ಸನ್ ಸ್ವಿಚ್ ಬ್ಲೇಡ್’ ಇದಕ್ಕೆ ಮೂರು ಚಕ್ರಗಳಿದ್ದು, ಎರಡು ಆಸನಗಳನ್ನು ಜೋಡಿಸಲಾಗಿದೆ. ರಸ್ತೆಯಲ್ಲೂ ಹಾಗೂ ಗಾಳಿಯಲ್ಲೂ ಹಾರುವ ಜಗತ್ತಿನ ಮೊದಲ ವಿಶಿಷ್ಟ ಕಾರು ಇದಾಗಿದೆ.

ಸ್ವಿಚ್ ಬ್ಲೇಡ್ ಕಾರನ್ನು ಎಲ್ಲೆಂದರಲ್ಲಿ ಹಾರಿಸುವಂತಿಲ್ಲ. ಬದಲಾಗಿ ಮೊದಲು ವಿಮಾನ ಹಾರುವಂತಹ ರನ್ ವೇ ಸ್ಥಳಕ್ಕೆ ಕಾರನ್ನು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಅಲ್ಲಿಂದ ಹಾರಿಸಬೇಕು. ಕಾರನ್ನು ಗಾಳಿಯಿಂದ ಕೆಳಗಿಳಿಸುವಾಗಲು ರನ್ ವೇ ಇರುವಂತಹ ಸ್ಥಳದಲ್ಲೆ ಇಳಿಸಬೇಕು. ಬಳಿಕ ತಲುಪಬೇಕಾದ ಜಾಗಕ್ಕೆ ಸಾಮಾನ್ಯ ಕಾರಿನಂತೆ ಚಲಾಯಿಸಿಕೊಂಡು ಹೋಗಬಹುದು.

ಗಂಟೆಗೆ 305 ಕಿ.ಮೀ ಓಡುವ,13,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ಈ ಕಾರಿಗಿದೆ. 6.3 ಅಡಿ ಉದ್ದದ,8.2 ಅಡಿ ಅಗಲದ ರೆಕ್ಕೆಗಳನ್ನು ಬೇಕೆಂದಾಗ ಮಡಿಚುವ, ಬಿಚ್ಚುವ ವ್ಯವಸ್ಥೆ ಮಾಡಲಾಗಿದೆ. ಇದರ ಬೆಲೆ 77 ಲಕ್ಷ ರೂಪಾಯಿಯಾಗಿದ್ದು, ಅದರ ಬಿಡಿಭಾಗಗಳನ್ನು ಜೋಡಿಸಲು ಮತ್ತೆ 13 ಲಕ್ಷಕೊಡಬೇಕಾಗಿದೆ. 2018ರ ವರ್ಷದಲ್ಲಿ ಸ್ವಿಚ್ ಬ್ಲೇಡ್ ಕಾರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೀ ಪ್ರಿಯರಿಗೋಂದು ಸಿಹಿ ಸುದ್ದಿ, ಬೆಂಗಳೂರಿಗೆ ಬಂತು ಬಬಲ್ ಟೀ..!

    ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್‌ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ ….

  • ಸುದ್ದಿ

    ರೈತರಿಗೆ ಮತ್ತೊಂದು ಬಂಪರ್ ಆಫರ್ ಕೊಟ್ಟ ಮೋದಿ ಸರ್ಕಾರ…!

    ಮುಂದಿನ ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೊಳಿಸಿದೆ. ರೈತರಿಗೆ ಕೃಷಿ ಕಾರ್ಯಗಳಿಗೆ ಯಂತ್ರಗಳನ್ನು ಬಾಡಿಗೆಗೆ ನೀಡಲು ಕೃಷಿ ಸಚಿವಾಲಯ ಸಿ.ಹೆಚ್.ಸಿ. ಫಾರ್ಮ್ ಮೆಷಿನರಿ ಆಪ್ ಪರಿಚಯಿಸಿದೆ. ಇದರ ಮೂಲಕ ರೈತರು ಕೃಷಿ ಉಪಕರಣ ಬಾಡಿಗೆ ಪಡೆಯಬಹುದಾಗಿದೆ. ಕೃಷಿ ಕೇಂದ್ರಗಳಿಂದ 50 ಕಿಲೋಮೀಟರ್ ದೂರದಲ್ಲಿನ ಪ್ರದೇಶಗಳಿಗೆ ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. 12 ಭಾಷೆಗಳಲ್ಲಿ ಆಪ್ ಮಾಹಿತಿ ನೀಡಲಿದೆ. ರೈತರು ತಮಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಮೂಲಂಗಿ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾದ್ರೆ, ಈಗಲೇ ತಿನ್ನೋಕೆ ಶುರು ಮಾಡ್ತೀರಾ…

    ಮೂಲಂಗಿ ಕೆಲವರಿಗೆ ಹಿಡಿಸುವುದಿಲ್ಲ. ಮತ್ತೆ ಕೆಲವರು ಹಾಗೇ ಹಸಿ ಹಸಿ ತಿನ್ನುವುದನ್ನೇ ಇಷ್ಟ ಪಡುತ್ತಾರೆ. ನಿಜಕ್ಕೂ ಮೂಲಂಗಿ ಹಾಗೂ ಅದರ ಬೀಜ ದೇಹಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನ ತಿಳಿಯೋಣ. * ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ. * ಹೊಟ್ಟೆ ಉಬ್ಬರ, ಗ್ಯಾಸ್‌ ಹೆಚ್ಚಿದ್ದರೆ ಬಾರ್ಲಿಯನ್ನು ಬೇಯಿಸಿ ಅದಕ್ಕೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ತುಂಬಾ ಜನಕ್ಕೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ನಿದ್ರೆ ಬರುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ ..

    ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಆದರೆ ತುಂಬಾ ಜನರಿಗೆ ಆ ನಿದ್ರೆಯೇ ದೊಡ್ಡ ಸಮಸ್ಯೆಯಾಗಿದೆ, ರಾತ್ರಿಯೆಲ್ಲಾ ನಿದ್ರೆ ಬರುವುದಿಲ್ಲ ಹಗಲೆಲ್ಲಾ ಕಣ್ಣು ಮುಚ್ಚುತ್ತಲೇ ಇರುತ್ತಾರೆ, ಎಷ್ಟು ಪ್ರಯತ್ನಿಸಿದರು ರಾತ್ರಿ ಸಮಯ ಬಾರದ ನಿದ್ರೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ಅದು ಬಂದು ಬಿಡುತ್ತದೆ.

  • ಜ್ಯೋತಿಷ್ಯ

    ಮೀನ ರಾಶಿ ಜಾತಕರಿಗೆ ಸಮಸ್ಯೆಗಳಿಗೆ ಪರಿಹಾರಗಳು.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what 1. ಯಾರೇ ಕೊಟ್ಟಿರುವ…

  • ಸೌಂದರ್ಯ

    ‘ಕೊತ್ತಂಬರಿ ಸೊಪ್ಪು’ ಚರ್ಮದ ಕಾಂತಿಗೆ ಉಪಯೋಗಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬೇಕು. ನೀವೇ ಓದಿ.