News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಆರೋಗ್ಯ, ಉಪಯುಕ್ತ ಮಾಹಿತಿ

ನೀವು ಸುಸ್ತು ಅಂತ ಮಲಗುತ್ತಿದಿರಾ..!ಹಾಗಾದ್ರೆ ಈ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ..

1590

ಹಲವರಲ್ಲಿ ನಿಶ್ಯಕ್ತಿ ಸಿಕ್ಕಾಪಟ್ಟೆ ಕಾಟ ಕೊಡ್ತಿರುತ್ತೆ. ಸ್ವಲ್ಪನೇ ಕೆಲಸ ಮಾಡಿದ್ರು ಜಾಸ್ತಿ ಸುಸ್ತಾಗೋವಂತ ತುಂಬಾ ಜನ ನಮ್ಮ ಮಧ್ಯನೇ ಇದಾರೆ. ಸುಸ್ತು ಖಾಯಿಲೆಯ ಗುರುತಾಗಿರಬಹುದು.ಥೈರಾಯಿಡ್ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಒತ್ತಡ ಇತರೆ ಹತ್ತು ಹಲವು ಸಮಸ್ಯೆಗಳು ನಿಶ್ಯಕ್ತಿಗೆ ಮೂಲ ಕಾರಣವಾಗಿರಬಹುದು.

ಇಂದು ನಮ್ಮ ಜೀವನ ಹೇಗಾಗಿದೆ ಎಂದರೆ ಮನೆ ಯಿಂದ ಹೊರಗೆ ಹೋಗಿ ಮತ್ತೆ ಮನೆಗೆ ಬಂದು ಕುಳಿತ ಕೂಡಲೆ ಸುಸ್ತು ಬಂದು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಮನೆಯಿಂದ ಐದು ಕಿ.ಮೀ ಇರುವ ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಸೀಮೋಲ್ಲಂಘನ ಮಾಡಲಾಗದೆ ಬಸವಳಿ ಯುವ ಸರದಿ ನಮ್ಮದಾಗಿರುತ್ತದೆ. ಬರೀ ಟ್ರಾಫಿಕ್ ಮಾತ್ರ ನಮ್ಮನ್ನು ಸುಸ್ತು ಮಾಡುತ್ತದೆ ಎಂದು ಭಾವಿಸಬೇಡಿ. ಜೊತೆಗೆ ನಮ್ಮ ಅನಾರೋಗ್ಯಕರ ಆಹಾರ ಸೇವನೆ ಕ್ರಮವು ಸಹ ನಮ್ಮನ್ನು ಹಾಳು ಮಾಡುತ್ತಿದೆ. ಸೇವಿಸುವ ಆಹಾರದಲ್ಲಿ ಸತ್ವ ಇಲ್ಲವೆಂದಾದಲ್ಲಿ ನಮ್ಮ ದೇಹಕ್ಕೆ ಶಕ್ತಿ ಎಲ್ಲಿಂದ ಬರಬೇಕು?

ಮಾನವ ಅನಾದಿ ಕಾಲದಲ್ಲಿ ಬೇಟೆಯಾಡುತ್ತಾ ಬದುಕುತ್ತಿದ್ದ ಕಾಲದಲ್ಲಿ, ಪ್ರಾಣಿಗಳಿಗೆ ಸರಿಸಮಾನವಾದ ಸಾಮರ್ಥ್ಯವನ್ನು ಹೊಂದಿದ್ದನು. ಆಗ ಅವನಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ಅವನು ಮೊರೆ ಹೋಗುತಿದ್ದುದು ಸ್ವಾಭಾವಿಕ ಪದಾರ್ಥಗಳನ್ನೆ. ಸ್ವಾಭಾವಿಕವಾದ ಉತ್ಪನ್ನಗಳು ನಮ್ಮ ದೇಹಕ್ಕೆ ಶಕ್ತಿಯನ್ನು, ಆರೋಗ್ಯವನ್ನು ಮತ್ತು ತಾಕತ್ತನ್ನು ಎಲ್ಲವನ್ನೂ ನೀಡುತ್ತದೆ. ಬನ್ನಿ ಅದಕ್ಕಾಗಿಯೇ ಇಂದು ಬೋಲ್ಡ್‌ಸ್ಕೈ ನಿಮಗಾಗಿ ತಕ್ಷಣ ನಿಮ್ಮ ತಾಕತ್ತನ್ನು ಹೆಚ್ಚಿಸುವ ಜ್ಯೂಸ್ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಆ ಜ್ಯೂಸ್ ಯಾವುದು ಎಂಬ ಕುತೂಹಲ ನಿಮಗಿದೆಯಲ್ಲವೇ? ಅದೇ ಬೀಟ್‌ರೂಟ್ ಜ್ಯೂಸ್. ಇದು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯ ಗಳನ್ನು ತಕ್ಷಣ ಹೆಚ್ಚಿಸುತ್ತದೆ.

ಸುಸ್ತು ಸುಸ್ತು ಅಂತ ಸುಮ್ನೆ ಮಲಗಿ ಜೀವನ ವೇಸ್ಟ್ ಮಾಡ್ಕೊಳೋ ಬದ್ಲು ಈ ಟಿಪ್ಸ್ ಅಳವಡಿಸ್ಕೊಳಿ ಲೈಫ್ ಎಂಜಾಯ್ ಮಾಡಿ!!!

ಬೀಟ್‌ರೂಟ್‌ಗಳಲ್ಲಿ ಸಾವಯವವಲ್ಲದ ನೈಟ್ರೇಟ್ ಸಮೃದ್ಧವಾಗಿರುತ್ತದೆ. ಇದು ನಿಮಗೆ ಶಕ್ತಿಯನ್ನು ನೀಡಲು ಪ್ರಮುಖ ಪಾತ್ರವನ್ನು ನಿರ್ವ ಹಿಸುತ್ತದೆ. ಅಧ್ಯಯನಗಳ ಪ್ರಕಾರ ಬೀಟ್ ರೂಟ್ ಜ್ಯೂಸ್   ಪ್ರತಿಯೊಬ್ಬರ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ. ಆದ್ರೆ ಬೀಟ್ರೂಟ್ನಲ್ಲಿ ರುಟಿನ್, ಕೆಫೀಕ್ ಆಸಿಡ್, ಎಪಿಕೆಟೆಚಿನ್ ಮತ್ತೆ ಬೀಟಾಲಿನ್ಸ್ ಅನ್ನೋ ರೋಗನಿರೋಧಕಗಳು ಹೇರಳವಾಗಿದೆ. ಅವು ಫ್ರೀ ರಾಡಿಕಲ್ಸ್ ಹಾರಾಟನ ತಣ್ಣಗ್ ಮಾಡತ್ತೆ. ಹಾಗಾಗಿ ಪದೇ ಪದೇ ಖಾಯಿಲೆ ಬೀಳದು ತಪ್ಪಿ, ಪ್ರತಿರೋಧ ಶಕ್ತಿ ಬರತ್ತೆ. ಫ್ರೀ ರಾಡಿಕಲ್ಸ್, ದೇಹದಲ್ಲಿ ಕೆರಳಿ ಹಾನಿ ಮಾಡೋದನ್ನ ಬೀಟ್ ರೂಟ್ ತಡಿಯತ್ತೆ.

ಈ ಫ್ರೀ ರಾಡಿಕಲ್ ನಮ್ ದೇಹದಲ್ಲಿ ನಡಿಯೋ ಮಾಮೂಲಿ ಪಚನ ಕ್ರಿಯೆಯಿಂದ, ಜೀವನಶೈಲಿಯಿಂದ, ತಿನ್ನೋ ಅಭ್ಯಾಸದಿಂದ ಮತ್ತೆ ಮಾನಸಿಕ ಒತ್ತಡದಿಂದಾನೂ ಉತ್ಪತ್ತಿಯಾಗಿ ಕೆರಳ್ಬೋದು. ಇದೆಲ್ಲಾ ಒಳಗಿಂದ ಆಗೋದು. ಇನ್ನು ಹೊರಗೆ ಓಡಾಡುವಾಗ ವಾತವರಣದಲ್ಲಿರೋ ಧೂಳು, ಫ್ಯಾಕ್ಟರಿಯಿಂದ ಬಿಡುಗಡೆ ಆಗೋ ರಾಸಾಯನಿಕಗಳಿಂದಾನೂ ಉತ್ಪತ್ತಿಯಾಗತ್ತೆ. ಅದೇನ್ ಮಾಡತ್ತೆ ಬಿಡಿ ಅನ್ನೋಹಾಗಿಲ್ಲ ಯಾಕಂದ್ರೆ ಈ ಫ್ರೀ ರಾಡಿಕಲ್ಸ್ ಕೆರಳೋದ್ರಿಂದನೇ ಕ್ಯಾನ್ಸರ್, ಸಂಧಿವಾತ ಮತ್ತೆ ಆಲ್ಝೈಮರ್ಸ್ ಖಾಯಿಲೆ ಎಲ್ಲಾ ಬರೋದು. ಬಹುತೇಕ ಅಥ್ಲಿಟ್‌ಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಬೀಟ್‌ರೂಟ್ ರಸದ ಮೊರೆ ಹೋಗುತ್ತಾರೆ. ಕೆಲವೊಂದು ಅಧ್ಯಯನಗಳ ಪ್ರಕಾರ ಬೀಟ್‌ರೂಟ್ ರಸವನ್ನು ಸೇವಿಸಿದರೆ ಆಯಾಸ ವಿಲ್ಲದೆ ಎಲ್ಲಾ ಕೆಲಸ ಕಾರ್ಯ ಗಳನ್ನು ಮಾಡಬಹುದಂತೆ. ಬನ್ನಿ ಇನ್ನು ತಡ ಮಾಡದೆ ಈ ರಸವನ್ನು ತಯಾರಿಸಿ ಕೊಳ್ಳುವ ವಿಧಾನವನ್ನು ತಿಳಿದುಕೊಳ್ಳೋಣ…

ಅಗತ್ಯವಾದ ಪದಾರ್ಥಗಳು:-

1-2 ಹಣ್ಣಾದ ಬೀಟ್‌ರೂಟ್   1 ಸೇಬು  1 ಶುಂಠಿ ತುಂಡು  ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳಿ. ನಿಮಗೆ ಅಗತ್ಯವಾದರೆ ಇದಕ್ಕೆ ಐಸ್ ಕ್ಯೂಬ್ ಸಹ ಬೆರೆಸಿಕೊಳ್ಳಬಹುದು.

ವಾರಕ್ಕೆ ೩-೪ ಬಾರಿ ಈ ರಸವನ್ನು ಸೇವಿಸಿ. ಆಗ ನೋಡಿ, ನಿಮ್ಮ ಸಾಮರ್ಥ್ಯವು ಹೇಗೆ ಸುಧಾರಿಸುತ್ತದೆ ಎಂದು. ಆದರೆ ಒಂದು ಮಾತು ನೆನಪಿಡಿ. ಇದನ್ನು ಒಂದೇ ಬಾರಿಗೆ ಸೇವಿ ಸುವ ಮೊದಲು ಸ್ವಲ್ಪ ಸೇವಿಸಿ, ರುಚಿ ನೋಡಿ. ಇದರ ರುಚಿಯು ನಿಮಗೆ ಒಗ್ಗಿದರೆ ಮುಂದುವರಿಯಿರಿ. ಇಲ್ಲವಾದರೆ ಬೇಡ.

ಸುಸ್ತು ಅಂತ ಸುಮ್ನೆ ಮಲಗ ಬೇಡಿ ಬೀಟ್ ರೂಟ್ ಜ್ಯೂಸ್  ತಯಾರಿಸಿ ಕುಡಿದು ಲೈಫ್ ಎಂಜಾಯ್ ಮಾಡಿ..!

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕ್ರೀಡೆ

    ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ!ವೇಳಾಪಟ್ಟಿ ಪ್ರಕಟ..ಮೊದಲ ಮ್ಯಾಚ್ RCB ವರ್ಸಸ್.?

    ಐಪಿಎಲ್ 12 ನೇ ಆವೃತ್ತಿಯ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ – 2019 ರ ಪಂದ್ಯಗಳು ಮಾರ್ಚ್ 23 ರಿಂದ ಶುರುವಾಗಲಿದೆ. ಉದ್ಘಾಟನೆ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವೀಟರ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 17 ಪಂದ್ಯಗಳ ವೇಳಾಪಟ್ಟಿಯನ್ನು ಟ್ವಿಟ್ ಮಾಡಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪಂದ್ಯಗಳು ನಡೆಯಲಿವೆ. ಕೊಲ್ಕತ್ತಾ, ಚೆನ್ನೈ,…

  • ಸುದ್ದಿ

    ದಾರಿ ಮಧ್ಯೆ ಕಾರು ನಿಲ್ಲಿಸಿ ವೃದ್ಧನಿಗೆ ಹಣ ನೀಡಿದ ಕನ್ನಡದ ಟಾಪ್ ನಟ,.!ಯಾರು ಗೊತ್ತೇ

    ಇತ್ತೀಚೆಗೆ ಶಿವರಾಜ್‍ಕುಮಾರ್ ಅವರು ತಮ್ಮ ನಿವಾಸ ನಾಗಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರು ಬಿಸಿಲಲ್ಲಿ ನಿಂತಿದ್ದ ಹಿರಿಯ ವೃದ್ಧರೊಬ್ಬರನ್ನು ನೋಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಶಿವಣ್ಣ ವ್ಯಕ್ತಿ ನಿಂತಿದ್ದ ಜಾಗದಿಂದ ಸ್ವಲ್ಪ ಮುಂದೆ ಹೋಗಿದ್ದಾರೆ. ನಂತರ ಅವರನ್ನು ನೋಡಿ ಮತ್ತೆ ಕಾರು ರಿವರ್ಸ್ ಮಾಡಿ ವಾಪಸ್ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಂಡು ವೃದ್ಧರೊಬ್ಬರಿಗೆ  ನೀಡಿ ಮಾನವೀಯತೆ ಮೆರೆದಿದ್ದಾರೆ. ಶಿವರಾಜ್‍ಕುಮಾರ್ ಅವರು ಹಣ ನೀಡುತ್ತಿರುವಾಗ ಪಕ್ಕದಲ್ಲಿದ್ದ ವ್ಯಕ್ತಿ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ….

  • ಸುದ್ದಿ

    ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬರಲು ಕಾರಣವೇನು ಗೊತ್ತಾ?

    ‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ. 5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು…

  • ಉಪಯುಕ್ತ ಮಾಹಿತಿ

    ನಿಮ್ಗೆ ಭೂಮಿಯ ಬಗ್ಗೆ ಗೊತ್ತಿರದ ಈ 5 ವಿಸ್ಮಯ ಸಂಗತಿಗಳು!ಗೊತ್ತಾಗ್ಬೇಕೆಂದ್ರೆ ಈ ಲೇಖನಿ ಓದಿ ಶೇರ್ ಮಾಡಿ….

    ಅದೆಷ್ಟೋ ಲಕ್ಷ ಜೀವಿಗಳು ಕೋಟ್ಯಾನುಕೋಟಿ ವರ್ಷಗಳಿಂದ ಭೂಮಿ ಮೇಲೆ ನೆಲೆಯನ್ನು ಕಂಡುಕೊಂಡಿವೆ ಎಂಬುದೇನೋ ನಿಜ.

  • ಸುದ್ದಿ

    ಖ್ಯಾತ ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಾಡಿದ್ದೇನು ಗೊತ್ತಾ..?

    ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್‍ಮೆಂಟ್‍ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್‍ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…

  • ಆರೋಗ್ಯ

    ಖಾಲಿ ಹೊಟ್ಟೆಯಲ್ಲಿ Tea & Coffee ಕುಡಿಯುತ್ತಿದ್ದರೆ 1 ನಿಮಿಷದಲ್ಲಿ ಈ ಲೇಖನವನ್ನ ತಪ್ಪದೇ ಓದಿ .

    ಪ್ರೀತಿಯ ಸ್ನೇಹಿತರೇ ಮನುಷ್ಯ ಪ್ರತಿಯೊಂದನ್ನು ಮಾಡಲು ಜೀವನದಲ್ಲಿ ಆರೋಗ್ಯಕರವಾಗಿ ಬದುಕಲು ಎಷ್ಟೊಂದು ಆಹಾರವನ್ನು ಪ್ರತಿನಿತ್ಯ ನಾವು ಸೇವಿಸುತ್ತಿರುತ್ತಾರೆ ಇಂತಹ ಆಹಾರದಲ್ಲಿ ದೇಹಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಯಾವ ಸಮಯದಲ್ಲಿ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕನಿಷ್ಠ ಮಾಹಿತಿಯೂ ಕೂಡ ನಮಗೆ ಇರುವುದಿಲ್ಲ ಅಂಥದ್ದೇ ಒಂದು ಪಾನೀಯವಾದ ಟೀ ಕಾಫಿ ಇದು ದೇಹಕ್ಕೆ ಎಂತಹ ದುಷ್ಪರಿಣಾಮವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೀಡುತ್ತೇನೆಂದರೆ ದೇಹವನ್ನು ಯಾವ ಮಟ್ಟಿಗೆ ಹಾಳು ಮಾಡುತ್ತದೆ ಎಂಬುದರ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನು ನಾನು…