ಸುದ್ದಿ

ನೀವು ಇನ್ಸೂರೆನ್ಸ್ ಬಳಕೆದಾರರೇ? ಆಗದರೆ ತಪ್ಪದೇ ಇದನ್ನು ಒಮ್ಮೆ ಓಧಿ…..!

62

ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವಿಮೆ, ಆಸ್ತಿ ವಿಮೆ, ಆರೋಗ್ಯ ವಿಮೆ ಹೀಗೆ ಹಲವಾರು ರೀತಿಯ ವಿಮಾ ಸುರಕ್ಷೆಯ ಪಾಲಿಸಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಹಣಕಾಸು ಉತ್ಪನ್ನಗಳಿಗೆ ಸಹ ವಿಮೆ ಸುರಕ್ಷೆ ಇರುತ್ತದೆ ಎಂಬುದು ಬಹುತೇಕರಿಗೆ ಈವರೆಗೂ ತಿಳಿದಿಲ್ಲ. ಕೆಲ ಹಣಕಾಸು ಉತ್ಪನ್ನಗಳಿಗೆ ಉಚಿತ ವಿಮಾ ಸುರಕ್ಷೆ ಇದ್ದರೆ ಇನ್ನು ಕೆಲವಕ್ಕೆ ಅತಿ ಕಡಿಮೆ ಹಣ ಪಾವತಿಸುವುದರ ಮೂಲಕ ವಿಮಾ ಸೌಲಭ್ಯ ಪಡೆಯಬಹುದು. ಯಾವೆಲ್ಲ ಹಣಕಾಸು ಉತ್ಪನ್ನಗಳಿಗೆ ವಿಮಾ ಸೌಲಭ್ಯವಿದೆ ಹಾಗೂ ಅವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ವಿಮೆಗಳ ಬಗ್ಗೆ ಮೇಲ್ನೋಟಕ್ಕೆ ತಿಳಿಯುವ ಬದಲು ಆಳವಾಗಿ ಕೂಡ ಅಭ್ಯಸಿಸಬೇಕಾಗುತ್ತದೆ. ನಿಮಗೆ ಗೊತ್ತಿರದ ಕೆಲ ಪ್ರಮುಖ ಉಚಿತ ಅಂತರ್ಗತ ವಿಮಾ ಸುರಕ್ಷತೆ-ಇನ್ಸೂರೆನ್ಸ್‌ ಕವರ್ ಬಗ್ಗೆ ತಿಳಿಯೋಣ ಬನ್ನಿ..

  1. ಬ್ಯಾಂಕ್ ಡಿಪಾಸಿಟ್‌ಗಳು ; ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರಾದೇಶಿಕ, ಸಹಕಾರಿ ಹಾಗೂ ವಿದೇಶಿ ಬ್ಯಾಂಕುಗಳು ಸೇರಿದಂತೆ ಇತರ ಎಲ್ಲ ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಗಳಿಗೆ ಸರಕಾರದ ಡಿಪಾಸಿಟ್ ಇನ್ಸೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಯಿಂದ ವಿಮಾ ಸುರಕ್ಷತೆ ನೀಡಲಾಗಿರುತ್ತದೆ. ಒಂದೊಮ್ಮೆ ಯಾವುದೇ ಬ್ಯಾಂಕು ವಿಲೀನ ಅಥವಾ ಲೈಸೆನ್ಸ್ ರದ್ದತಿಯ ಕಾರಣದಿಂದ ಗ್ರಾಹಕರ ಫಿಕ್ಸೆಡ್ ಡಿಪಾಸಿಟ್ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದಲ್ಲಿ ಹೂಡಿಕೆ ಮೊತ್ತ ಹಾಗೂ ಬಡ್ಡಿಯ ಮೇಲೆ 1 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷತೆ ಇರುತ್ತದೆ. ಆದರೆ ಒಂದು ವೇಳೆ ಎಫ್‌ಡಿ ಇಟ್ಟ ಗ್ರಾಹಕನು ಬ್ಯಾಂಕಿಗೆ ಯಾವುದಾದರೂ ಮೊತ್ತ ಪಾವತಿಸಬೇಕಿದ್ದಲ್ಲಿ ಡಿಐಸಿಜಿಸಿ ಮೊದಲಿಗೆ ಅದನ್ನು ಕಡಿತಗೊಳಿಸುತ್ತದೆ. ಇಂಥ ವಿಮೆಯ ಪಾಲಿಸಿ ಹಣವನ್ನು ಬ್ಯಾಂಕುಗಳೇ ಭರಿಸುತ್ತವೆ. ಉಳಿತಾಯ, ಚಾಲ್ತಿ ಖಾತೆ, ಫಿಕ್ಸೆಡ್ ಡಿಪಾಸಿಟ್ ಹಾಗೂ ರೆಕರಿಂಗ್ ಡಿಪಾಸಿಟ್ ಖಾತೆಗಳಿಗೆ ಡಿಐಸಿಜಿಸಿ ವಿಮಾ ಸುರಕ್ಷತೆ ಇರುತ್ತದೆ.
  2. ಗೃಹೋಪಕರಣಗಳಿಗೆ ವಿಮೆ ; ಫ್ರಿಜ್, ಟಿವಿ ಮತ್ತು ವಾಶಿಂಗ್ ಮಶೀನ್ ಸೇರಿದಂತೆ ಇನ್ನಿತರ ಇನ್ನೂ ಹಲವಾರು ಗೃಹೋಪಯೋಗಿ ಉಪಕರಣಗಳು ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ತೊಂದರೆಯಿಂದ ಹಾಳಾದಲ್ಲಿ ಅದಕ್ಕೆ ವಿಮಾ ಸುರಕ್ಷತೆ ಯೋಜನೆಯನ್ನು ಆಯಾ ಗೃಹೋಪಯೋಗಿ ವಸ್ತು ತಯಾರಿಕಾ ಕಂಪನಿಗಳು ನೀಡುತ್ತವೆ. ಈ ವಿಮಾ ಸೌಲಭ್ಯವನ್ನು ವಾರಂಟಿಯೊಂದಿಗೆ ತಳಕು ಹಾಕಿ ಗೊಂದಲ ಮಾಡಿಕೊಳ್ಳಬೇಡಿ. ಇವೆರಡೂ ಭಿನ್ನ ಸಂಗತಿಗಳಾಗಿವೆ. ಸಾಮಾನ್ಯವಾಗಿ ಹಬ್ಬದ ಸೇಲ್ ಸಂದರ್ಭಗಳಲ್ಲಿ ಇಂಥ ವಿಮಾ ಸೌಕರ್ಯಗಳನ್ನು ಹೆಚ್ಚುವರಿಯಾಗಿ ಕಂಪನಿಗಳು ಆಫರ್ ಮಾಡುತ್ತವೆ. ಈ ವಿಮೆಗೆ ನೀವು ನೇರವಾಗಿ ಯಾವುದೇ ಮೊತ್ತವನ್ನು ಪಾವತಿ ಮಾಡುವುದಿಲ್ಲವಾದರೂ ಕಂಪನಿಗಳೇ ತಮ್ಮ ಉಪಕರಣಗಳ ಬೆಲೆಯನ್ನು ಒಂದಿಷ್ಟು ಹೆಚ್ಚಿಸಿ ಅದರಿಂದ ವಿಮಾ ಖರ್ಚಿನ ಮೊತ್ತವನ್ನು ಭರಿಸುತ್ತವೆ.
  3. ಮೊಬೈಲ್ ಫೋನುಗಳಿಗೆ ವಿಮೆ ; ಮೊಬೈಲ್ ತಯಾರಿಕಾ ಕಂಪನಿಗಳು ಮೊಬೈಲ್ ಫೋನುಗಳಿಗೆ ವಿಮಾ ಸೌಲಭ್ಯ ನೀಡುತ್ತಿವೆ. ಮೊಬೈಲ್ ಫೋನ್ ಕಳುವಾದಲ್ಲಿ ಅಥವಾ ಹಾನಿಗೀಡಾದಲ್ಲಿ ವಿಮಾ ಸುರಕ್ಷತೆ ಪಡೆಯಬಹುದು. ಉದಾಹರಣೆಗೆ ನೋಡುವುದಾದರೆ, ನೋಕಿಯಾ ಕಂಪನಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸಹಯೋಗದಲ್ಲಿ ತನ್ನ ಕಂಪನಿಯ ಮೊಬೈಲ್ ಫೋನುಗಳಿಗೆ ವಿಮಾ ಸುರಕ್ಷತೆ ಒದಗಿಸುತ್ತಿದೆ. ಹಾಗೆಯೇ ಟೆಲಿನಾರ್ ಇಂಡಿಯಾ ಕಮ್ಯೂನಿಕೇಶನ್ ಕಂಪನಿ ತನ್ನ ಗ್ರಾಹಕರಿಗೆ ಸುಮಾರು 50 ಸಾವಿರ ರೂ.ಗಳವರೆಗೂ ವಿಮಾ ಸೌಲಭ್ಯ ನೀಡುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
  4. ಎಲ್ಪಿಜಿ ವಿಮಾ ; ಸುರಕ್ಷೆ ಎಲ್ಲ ನೋಂದಾಯಿತ ಎಲ್ಪಿಜಿ ಗ್ರಾಹಕರು ಹಾಗೂ ಅವರ ಕುಟುಂಬಸ್ಥರಿಗೆ ಗ್ಯಾಸ್ ಸಿಲಿಂಡರ್‌ನಿಂದ ಉಂಟಾಗಬಹುದಾದ ಅಪಘಾತಗಳ ಸಂದರ್ಭದಲ್ಲಿ ವಿಮಾ ಸುರಕ್ಷತೆ ನೀಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಪಘಾತ ಪ್ರಕರಣದ ಬಗ್ಗೆ ಮೊದಲಿಗೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕು. ಈ ಬಗ್ಗೆ ಎಲ್ಪಿಜಿ ವಿತರಕರಿಗೆ ಸಹ ಲಿಖಿತವಾಗಿ ದೂರು ಸಲ್ಲಿಸಬೇಕಾಗುತ್ತದೆ. ಆದರೆ ಈ ರೀತಿಯ ವಿಮೆ ಪಡೆಯಬೇಕಾದರೆ ನೀವು ಮಾನ್ಯತೆ ಪಡೆದ ಐಎಸ್‌ಐ ಮಾರ್ಕಿನ ಗ್ಯಾಸ್ ಪೈಪ್ ಹಾಗೂ ಲೈಟರ್‌ಗಳನ್ನೇ ಉಪಯೋಗಿಸುತ್ತಿರಬೇಕು. ಹಾಗೆಯೇ ವಿತರಕರಲ್ಲಿ ನೋಂದಾಯಿತ ವಿಳಾಸದಲ್ಲಿಯೇ ಎಲ್ಪಿಜಿ ಸಂಪರ್ಕವನ್ನು ಬಳಸುತ್ತಿರಬೇಕು. ನೀವು ನೀಡಿದ ವಿಳಾಸ ಹಾಗೂ ಎಲ್ಪಿಜಿ ಕನೆಕ್ಷನ್ ಬಳಸುತ್ತಿರುವ ಸ್ಥಳ ಬೇರೆಯಾಗಿದ್ದಲ್ಲಿ ಈ ವಿಮೆ ಕ್ಲೇಮ್ ಮಾಡಲಾಗದು.
  5. ರೈಲು ಪ್ರಯಾಣ ; ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಮ್ಮ ಲಗೇಜ್‌ಗಳು ಕಳುವಾದಲ್ಲಿ ಅದಕ್ಕೆ ವಿಮಾ ಸೌಲಭ್ಯ ಸಿಗುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ನೀವು ಇ-ಟಿಕೆಟ್ ಬುಕ್ ಮಾಡಿದಾಗಲೇ ಐಆರ್‌ಸಿಟಿಸಿ ಈ ವಿಮೆ ನೀಡಿರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ಅಥವಾ ಲಗೇಜು ಕಳುವಾದಲ್ಲಿ ಈ ವಿಮಾ ಸೌಲಭ್ಯವನ್ನು ಕ್ಲೇಮ್ ಮಾಡಬಹುದು. ಮೊಬೈಲ್ ಫೋನ್, ಲ್ಯಾಪಟಾಪ್ ಹಾಗೂ ಇನ್ನಿತರ ಯಾವುದೇ ಬೆಲೆಬಾಳುವ ವಸ್ತುಗಳಿಗೂ ಈ ವಿಮೆ ಅನ್ವಯಿಸುತ್ತದೆ.
  6. ಜೀರೊ ಲಯಾಬಿಲಿಟಿ ; ಕಾರ್ಡ್ಸ್ (ಶೂನ್ಯ ಹೊಣೆಗಾರಿಗೆ ಕಾರ್ಡ್) ವೀಸಾ ಹಾಗೂ ಮಾಸ್ಟರಕಾರ್ಡ್ ಕಾರ್ಡುಗಳನ್ನು ಹೊಂದಿದ ಗ್ರಾಹಕರಿಗೆ ಹಲವಾರು ಬ್ಯಾಂಕುಗಳು ಜೀರೊ ಲಯಾಬಿಲಿಟಿ ಇನ್ಸೂರೆನ್ಸ್ ಕವರೇಜ್ ನೀಡುತ್ತವೆ. ತಮ್ಮ ಕಾರ್ಡುಗಳ ಮೇಲೆ ನಡೆಯುವ ಯಾವುದೇ ಅನಧಿಕೃತ ವ್ಯವಹಾರಗಳಿಗೆ ಬ್ಯಾಂಕುಗಳು ವಿಮಾ ಸುರಕ್ಷೆ ನೀಡುತ್ತವೆ. ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ತಕ್ಷಣ ಬ್ಯಾಂಕಿಗೆ ತಿಳಿಸಿದಲ್ಲಿ ಆ ಕಾರ್ಡ್‌ನಿಂದ ಮಾಡಲಾಗುವ ಯಾವುದೇ ಅನಧಿಕೃತ ವ್ಯಹಹಾರಗಳ ಹಾನಿಯನ್ನು ಬ್ಯಾಂಕುಗಳೇ ಭರಿಸುತ್ತವೆ. ಹಾಗೆಯೇ ಡೆಬಿಟ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಗ್ರಾಹಕರಿಗೆ ಉಂಟಾಗುವ ಹಾನಿಯನ್ನು ಬ್ಯಾಂಕುಗಳು ಮರುಪಾವತಿಸುತ್ತವೆ.
  7. ಪ್ರಧಾನ ಮಂತ್ರಿ ಜನ ಧನ ಯೋಜನೆ ; ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ಸೌಲಭ್ಯದೊಂದಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರಿಗೆ ಕ್ರಮವಾಗಿ 1 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮೆ ಹಾಗೂ 30 ಸಾವಿರ ರೂ.ಗಳವರೆಗೆ ಜೀವ ವಿಮಾ ಸುರಕ್ಷತೆ ಇರುತ್ತದೆ.
  8. ರುಪೇ ಕಾರ್ಡ್ ; ರುಪೇ ಎಂಬುದು ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಾರ್ಡುಗಳ ಬದಲಿಗೆ ಭಾರತೀಯ ಕಾರ್ಡ್ ಕಂಪನಿಯಾಗಿದೆ. ಇದನ್ನು ಎಟಿಎಂಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇ-ಕಾಮರ್ಸ್ ವೆಬ್ಸೈಟ್‌ಗಳಲ್ಲಿ ಬಳಸಬಹುದು. ಈ ಕಾರ್ಡ್ ಹೊಂದಿದವರಿಗೆ ವೈಯಕ್ತಿಕ ಅಪಘಾತ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭಗಳಲ್ಲಿ 2 ಲಕ್ಷ ರೂ.ಗಳವರೆಗೆ ಉಚಿತ ವಿಮಾ ಸುರಕ್ಷತೆ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
  9. ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (ಇಡಿಎಲ್‌ಐ) ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ; ಸದಸ್ಯರಿಗೆ 6 ಲಕ್ಷ ರೂ. ಮೊತ್ತದ ವಿಮಾ ಸುರಕ್ಷತೆ ಇರುತ್ತದೆ. ಇಪಿಎಫ್ ಸದಸ್ಯನೋರ್ವ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ವಿಮಾ ಸುರಕ್ಷತೆ ನೀಡಲಾಗುತ್ತದೆ. ಎಲ್ಲ ಇಪಿಎಫ್ ಸದಸ್ಯರು ಇಡಿಎಲ್‌ಐ ವಿಮಾ ಸುರಕ್ಷತೆ ಪಡೆದಿರುತ್ತಾರೆ. ಇಪಿಎಫ್ ಹೊಂದಿದ ಕಾರ್ಮಿಕನ ಒಟ್ಟು ವಂತಿಗೆಯಲ್ಲಿ ಶೇ 0.5 ರಷ್ಟು ಮೊತ್ತವನ್ನು ಇಡಿಎಲ್‌ಐಗೆ ಪ್ರೀಮಿಯಂ ಮೊತ್ತವಾಗಿ ಪಾವತಿಸಲಾಗಿರುತ್ತದೆ.
  10. ಮ್ಯೂಚುವಲ್ ಫಂಡ್‌ಗಳಿಗೆ ವಿಮಾ ಸುರಕ್ಷೆ ಬಿರ್ಲಾ ಸನ್ ಲೈಫ್; ಐಸಿಐಸಿಐ ಪ್ರುಡೆನ್ಷಿಯಲ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಸೇರಿದಂತೆ ಇನ್ನೂ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಸಿಪ್ (SIP) ಹೂಡಿಕೆದಾರರಿಗೆ ಜೀವ ವಿಮಾ ಸೌಲಭ್ಯ ನೀಡುತ್ತಿವೆ. ಈ ಯೋಜನೆಯಡಿ ಫಂಡ್ ಹೂಡಿಕೆದಾರ ಅನಿರೀಕ್ಷಿತವಾಗಿ ಸಾವನ್ನಪ್ಪಿದಲ್ಲಿ ಫಂಡ್ ಕಂಪನಿ ತಾನಾಗಿಯೇ ಪ್ರೀಮಿಯಂ ಪಾವತಿ ಜಾರಿಯಲ್ಲಿಡುತ್ತದೆ. ಫಂಡ್ ಮ್ಯಾಚುರಿಟಿ ನಂತರ ನಾಮಿನಿಗೆ ಮೊತ್ತ ಪಾವತಿಸಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಉಪಯುಕ್ತ ಮಾಹಿತಿ

    ಪ್ಯಾನ್ ಕಾರ್ಡ್ ಇಲ್ಲದೇ ಈ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ… !ತಿಳಿಯಲು ಈ ಲೇಖನ ಓದಿ..

    ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..

  • ಸ್ಪೂರ್ತಿ

    ತನ್ನ ಸಾಧನೆಯಿಂದಾಗಿ ಇಡೀ ದೇಶದ ಗಮನ ಸೆಳೆದ ಕೇವಲ ಎರಡೇ ವರ್ಷದ ಮೈಸೂರಿನ ಪುಟ್ಟ ಪೋರಿ..!

    ಬುದ್ದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇನ್ನೂ ಕೇವಲ ಎರಡು ವರ್ಷದ ಮಗುವೆ ಸಾಕ್ಷಿ. ಈ ಮಗುವಿನ ಬುದ್ದಿವಂತಿಕೆ ಅವಳ ವಯಸ್ಸಿಗೆ ಮೀರಿದ್ದು.ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಕರೆಯುವ ಮೈಸೂರಿನ ಪುಟ್ಟಪೋರಿ ಈಡೀ ದೇಹವೇ ಮೆಚ್ಚವಂತ ಸಾಧನೆ ಮಾಡಿದ್ದಾಳೆ. ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿರುವ ಮೈಸೂರಿನ ಹಳ್ಳದಕೇರಿ ನಿವಾಸಿಯಾಗಿರುವ ಗಣೇಶ್ ಹಾಗೂ ನಯನ ದಂಪತಿಯ ಸುಪುತ್ರಿ ದ್ಯುತಿ ಎರಡೇ ವರ್ಷಕ್ಕೆ ಇಡೀ ಜಗತ್ತನ್ನು ಗೆದ್ದು ಬಿಗಿದ್ದಾಳೆ. ತನ್ನ ಬುದ್ಧಿ ಸಾಮಾರ್ಥ್ಯದಿಂದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿ…

  • inspirational

    ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸಬೇಕಾಗಿದ್ದ ಆ ಸಿನಿಮಾ ನಿಂತಿದ್ದೇಕೆ? ಇಂದ್ರಜಿತ್ ಬಿಚ್ಚಿಟ್ರು ಮೂಲ ಕಾರಣ.

    ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು…

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮನ್ನು ವಿಚಲಿತಗೊಳಿಸಲು ವಿರೋಧಿಗಳು ಸನ್ನದ್ಧರಾಗಿಯೇ ಆಟ ಆಡುತ್ತಾರೆ. ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಜನತೆಗೆ ಕೈಲಾಗದ ಭರವಸೆಗಳನ್ನು ನೀಡಬೇಡಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಕಾಯಿಲೆ

    19 ನೇ ಶತಮಾನದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿತು

    1800 ರ ಉತ್ತರಾರ್ಧದಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಜಗತ್ತನ್ನು ಧ್ವಂಸಗೊಳಿಸಿದ ಮೂರನೇ ಪ್ಲೇಗ್ ಸಾಂಕ್ರಾಮಿಕವು ಇಂದಿನ COVID-19 ಸಾಂಕ್ರಾಮಿಕ ರೋಗಕ್ಕೆ ಹೋಲುತ್ತದೆ. ಇದು 1860 ರ ದಶಕದಲ್ಲಿ ಚೀನಾದಲ್ಲಿ ತನ್ನ ಕೊಳಕು ತಲೆಯನ್ನು ಬೆಳೆಸಿತು, 1894 ರಲ್ಲಿ ಹಾಂಗ್ ಕಾಂಗ್, ಆಗಸ್ಟ್ 1896 ರಲ್ಲಿ ಮುಂಬೈ, ಡಿಸೆಂಬರ್ 1897 ರಲ್ಲಿ ಹುಬ್ಬಳ್ಳಿ ಮತ್ತು ಆಗಸ್ಟ್ 1898 ರಲ್ಲಿ ಬೆಂಗಳೂರು ತಲುಪಿತು.

  • ಜ್ಯೋತಿಷ್ಯ

    ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು….!

    75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ? 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ…