ಉಪಯುಕ್ತ ಮಾಹಿತಿ

ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೊಸ ಟ್ರಿಕ್ಸ್..!ತಿಳಿಯಲು ಈ ಲೇಖನ ಓದಿ …

336

ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.


ಶೌಚಾಲಯದಲ್ಲಿ ನೀವು ಬಳಸುವ ಬ್ರಶ್ ಆಗಿರಬಹುದು, ಟಾಯ್ಲೆಟ್ ಸೀಟ್ ಆಗಿರಬಹುದು, ಫ್ಲಶ್ ಬಟನ್‌ ಆಗಿರಬಹುದು ಹೀಗೆ ನಾವು ಯೋಚಿಸಲೂ ಸಾಧ್ಯವಾಗದೇ ಇರುವ ಕಡೆಗಳಲ್ಲಿ ಕೀಟಾಣುಗಳು ಮನೆ ಮಾಡಿಕೊಂಡುಬಿಡುತ್ತವೆ. ನೀವು ವಾರಕ್ಕೊಮ್ಮೆ ಸ್ವಚ್ಛಮಾಡಿದರೂ ಕೆಲವೊಮ್ಮೆ ಪ್ರಮುಖ ಅಂಶಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ.

ಟಾಯ್ಲೆಟ್ ಬ್ರಶ್:-

ಒಮ್ಮೆ ನೀವು ಬ್ರಶ್ ಬಳಸಿ ಸ್ವಚ್ಛಮಾಡಿದ ನಂತರ ಈ ಬ್ರಶ್ ಅನ್ನು ಬ್ಲೀಚ್‌ನಲ್ಲಿ ರಾತ್ರಿಪೂರ್ತಿ ನೆನೆಸಿಕೊಳ್ಳಿ. ಇದರಿಂದ ನಿಮ್ಮ ಬ್ರಶ್ ಸ್ವಚ್ಛಗೊಳ್ಳುತ್ತದೆ. ಟಾಯ್ಲೆಟ್‌ನ ಹಿಂಭಾಗವನ್ನು ತೊಳೆಯುವುದು ಕಷ್ಟದ ಕೆಲಸವಾಗಿದೆ ವೈಪ್ ಬದಲಿಗೆ ಸ್ಪ್ರೇಯನ್ನು ಬಳಸಿ.


ಸೋಂಕು ನಿವಾರಕ :-

ಸೋಂಕು ನಿವಾರಕವನ್ನು ಸಿಂಪಡಿಸಿ ಮತ್ತು ರಾತ್ರಿಯಲ್ಲಿ ಅದನ್ನು ಹಾಗೆಯೇ ಬಿಟ್ಟುಬಿಡಿ, ಟಾಯ್ಲೆಟ್ ಕಲೆಗಳು ಹಠಮಾರಿಯಾಗಿರುವುದರಿಂದ ನೀವು ಸೋಂಕುನಿವಾರಕವನ್ನು ಅಥವಾ ಶುಚಿಗೊಳಿಸುವ ದ್ರಾವಣದಲ್ಲಿ ಬೆರೆಸಿಕೊಳ್ಳಬಹುದು, ಒಂದು ಕೈಯಲ್ಲಿ ಬ್ರಶ್‌ನ ಒಂದು ತುದಿಯನ್ನು ಹಿಡಿದುಕೊಳ್ಳಿ.

ಟಾಯ್ಲೆಟ್ ಸುತ್ತಲೂ ತೊಳೆಯಿರಿ ಮತ್ತು ಅದನ್ನು ವೈಪ್ ಮಾಡಿ :-

ಟಾಯ್ಲೆಟ್ ರಿಮ್ ಅಡಿಯಲ್ಲಿ ಹೆಚ್ಚು ಕೊಳೆ ಸಂಗ್ರಹವಾಗುತ್ತದೆ, ಮತ್ತು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಈ ಭಾಗದಲ್ಲಿ ಸೋಂಕುನಿವಾರಕವನ್ನು ಬಳಸಿಕೊಂಡು ಸ್ವಚ್ಛಮಾಡಿ. ಈ ರಿಮ್ ಅನ್ನು ನೀವು ಸ್ವಚ್ಛಗೊಳಿಸಿಲ್ಲ ಎಂದಾದಲ್ಲಿ ಆ ಭಾಗ ಸೂಕ್ಷ್ಮ ಜೀವಿಗಳ ಮನೆಯಾಗುತ್ತದೆ.

ಬ್ರಶ್ :-

ನಿಮ್ಮ ರಿಮ್ ಅನ್ನು ಸ್ವಚ್ಛಗೊಳಿಸುವ ಸೂಕ್ತ ಬ್ರಶ್ ಅನ್ನು ಆರಿಸಿಕೊಳ್ಳಿ. ಟಾಯ್ಲೆಟ್ ಸ್ವಚ್ಛಗೊಳಿಸುವಾಗ ಗ್ಲೌಸ್ ಬಳಸುವುದನ್ನು ಮರೆಯಬೇಡಿ. ನಿಮ್ಮ ಟಾಯ್ಲೆಟ್ ಸ್ವಚ್ಛಗೊಳಿಸಲು ನೀವು ಸರಿಯಾದ ಟಾಯ್ಲೆಟ್ ಸ್ವಚ್ಛಕಗಳನ್ನು ಬಳಸಬೇಕು.

ಬಿಳಿ ವಿನೇಗರ್ :-

ನಿಮ್ಮ ಫ್ಲಶ್ ಟ್ಯಾಂಕ್‌ಗೆ ಬಿಳಿ ವಿನೇಗರ್ ಅನ್ನು ಹಾಕಿ ಮತ್ತು ಇದು ಸುವಾಸನೆ ಬೀರುವವರೆಗೆ ಫ್ಲಶ್ ಮಾಡಿ. ನಿಮ್ಮ ಸ್ಯಾನಿಟರಿ ವೇರ್‌ನಲ್ಲಿ ಯಾವುದಾದರೂ ಗಾಢ ನೀರು ಡಿಪಾಸಿಟ್ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದೊಂದು ಉತ್ತಮ ಸೋಂಕು ನಿವಾರಕವಾಗಿದ್ದು ಕೊಳೆಯನ್ನು ಶೀಘ್ರದಲ್ಲಿಯೇ ನಿವಾರಿಸುತ್ತದೆ.

ಫ್ಲಶ್ ಟ್ಯಾಂಕ್‌ಗೆ ವಿನೇಗರ್ ಅನ್ನು ಸುರಿಯುವುದು ನಿಮ್ಮ ವಾರಾಂತ್ಯದ ಶೌಚಾಲಯ ಸ್ವಚ್ಛತೆ ಕೆಲಸವನ್ನು ಸುಲಭಗೊಳಿಸುತ್ತದೆ.

ಬೇಕಿಂಗ್ ಸೋಡಾ :-

ಟಾಯ್ಲೆಟ್ ಬೌಲ್‌ಗೆ 3 ಚಮಚದಷ್ಟು ಬೇಕಿಂಗ್ ಸೋಡಾವನ್ನು ರಾತ್ರಿಯೇ ಹಾಕಿ. ರಾತ್ರಿ ಪೂರ್ತಿ ಈ ಮಿಶ್ರಣ ಹೀಗೆಯೇ ಇರಲಿ. ಮರುದಿನ ಬೆಳಗ್ಗೆ, ಟಾಯ್ಲೆಟ್ ಅನ್ನು ಫ್ಲಶ್ ಮಾಡಿ ಬೌಲ್‌ನ ಬದಿಗಳನ್ನು ಸ್ಕ್ರಬ್ ಮಾಡಿ ಮತ್ತು ಬೌಲ್ ಪೂರ್ತಿ ಬೆಳ್ಳಗೆ ಹೊಳೆಯುವವರೆಗೆ ಫ್ಲಶ್ ಮಾಡಿ.

ಲಿಂಬೆ ರಸ ಮತ್ತು ಬೋರಾಕ್ಸ್ :-

ನಿಮ್ಮ ಮನೆಯ ಎಂತಹ ಹಠಮಾರಿ ಕಲೆಯನ್ನು ಹೋಗಲಾಡಿಸಲು ಲಿಂಬೆಯನ್ನು ನಿಮಗೆ ಬಳಸಬಹುದಾಗಿದೆ. ಟಾಯ್ಲೆಟ್ ಬೌಲ್ ಅನ್ನು ಹೊಳೆಯುವಂತೆ ಮಾಡಲು, ಬೌಲ್‌ಗೆ ಒಂದು ಕಪ್‌ನಷ್ಟು ಬೋರಾಕ್ಸ್ ಅನ್ನು ಹಾಕಿ.

ಬೋರಾಕ್ಸ್‌ಗೆ 2 ಲಿಂಬೆ ರಸಗಳನ್ನು ಹಿಂಡಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಒಳಭಾಗವನ್ನು ಚೆನ್ನಾಗಿ ಫ್ಲಶ್ ಮಾಡಿ. ಸ್ಪಾಂಜ್ ಬಳಸಿ ಈ ಪೇಸ್ಟ್ ಅನ್ನು ಒಳಭಾಗಕ್ಕೆ ಸವರಿ.
ಸರಿಯಾಗಿ ಫ್ಲಶ್ ಮಾಡಿ :-

ನಿಮ್ಮ ಟಾಯ್ಲೆಟ್ ಅಥವಾ ಶೌಚಾಲಯವನ್ನು ನೀಟಾಗಿ ಇರಿಸಬೇಕು ಎಂದಾದಲ್ಲಿ ಸರಿಯಾಗಿ ಫ್ಲಶ್ ಮಾಡುವುದು ಅತ್ಯವಶ್ಯಕ. ನೀಟಾಗಿ ಫ್ಲಶ್ ಮಾಡುವುದರ ಜೊತೆಗೆ ಫ್ಲಶ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.

ನೀವು ಫ್ಲಶ್ ಮಾಡಿದಂತೆಲ್ಲಾ ಶೌಚಾಲಯವು ಸಣ್ಣ ಕಣಗಳನ್ನು ಸಿಂಪಡಿಸುವ ಅಭ್ಯಾಸವನ್ನು ಹೊಂದಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಪರಿಚಿತ ವ್ಯಕ್ತಿಗಳಿಂದ ಮೊಬೈಲ್‌ ಚಾರ್ಜರ್‌ ಪಡೆಯುವ ಮುನ್ನ ಎಚ್ಚರ…!

    ಇಂದಿನ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಮೊಬೈಲ್‌ ಚಾರ್ಜರ್‌ನ್ನು ಇನ್ನೊಬ್ಬರಿಂದ ಪಡೆಯುವುದು ಸಹಜ. ಇನ್ನೇನು ಸ್ವಿಚ್‌ ಆಫ್‌ ಆಗುತ್ತದೆ ಎನ್ನುವ ವೇಳೆ ಇನ್ನೊಬ್ಬರಿಂದ ಚಾರ್ಜರ್‌ ಕೇಳುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಪಡೆಯುವಾಗ ಎಚ್ಚರದಿಂದ ಇರಿ. ಹೌದು, ಚಾರ್ಜರ್‌ ಪಡೆಯುವುದರಿಂದ ಏನು ಸಮಸ್ಯೆ ಎಂದು ಯೋಚಿಸುತ್ತಿದ್ದರೆ, ಈ ರೀತಿ ಚಾರ್ಜಿಂಗ್‌ ಕೇಬಲ್‌ ಪಡೆಯುವುದರಿಂದಲೂ ಮೊಬೈಲ್‌ ಗೆ ವೈರಸ್‌ ಬರುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ವರದಿ ಹೊರ ಬಿದಿದ್ದೆ. ಐಬಿಎಂ ಸೆಕ್ಯುರಿಟಿಯ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. ಇನ್ನೊಬ್ಬರ…

  • ಸಿನಿಮಾ

    ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಾಗಿರುವ ರಮ್ಯಾ ಈ ಬಾರಿಯಾದ್ರೂ ತಮ್ಮ ವೋಟ್ ಹಾಕಿದ್ರಾ..?

    ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದು, ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ರಾಜ್ಯ ರಾಜಕಾರಣದಿಂದ ದೂರವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡುವ ಗೋಜಿಗೂ ರಮ್ಯಾ ಹೋಗಿರಲಿಲ್ಲ. ಇದೀಗ ಗುರುವಾರದಂದು ರಾಜ್ಯದಲ್ಲಿ ಮೊದಲ ಹಂತದ…

  • ಸುದ್ದಿ

    ಭಾರಿ ಮಳೆಗೆ ಒಡೆದ ಸೇತುವೆ : 6 ಬಲಿ,17 ಮಂದಿ ನಾಪತ್ತೆಯಾಗಿದ್ದಾರೆ……!

    ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ರತ್ನಗಿರಿ ತಾವ್ರೆ ಆಣೆಕಟ್ಟು ಮುರಿದು ಬಿದ್ದಿದೆ. ಆಣೆಕಟ್ಟಿನ ಕೆಳಗಿರುವ 7 ಹಳ್ಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಈವರೆಗೆ 6 ಶವವನ್ನು ಹೊರ ತೆಗೆಯಲಾಗಿದೆ. 17 ಮಂದಿ ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಆಣೆಕಟ್ಟೆಯ ಪಕ್ಕದಲ್ಲಿಯೇ ಇದ್ದ 12 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. 12 ಮನೆಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗ್ತಿಲ್ಲ. ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ…

  • ರಾಜಕೀಯ

    ನ್ಯಾಯ ಸಿಗದೇ ಆತ್ಮಹತ್ಯಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದ ಶಾಸಕ..!

    ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ  ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ…

  • ಜ್ಯೋತಿಷ್ಯ

    ಗುರುವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?ಶುಭವೋ ಅಶುಭವೋ ನೋಡಿ ತಿಳಿಯಿರಿ…

    ಗುರುವಾರ, 22/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ. ಭೂಮಿ ಖರೀದಿ, ಮನೆ ನಿರ್ಮಾಣ ಕಾರ್ಯಗಳಿಗೆ ಒಳ್ಳೆಯ ಕಾಲ. ವಿನಾಕಾರಣ ಮನಸ್ತಾಪ ಬೇಡ. ದೂರ ಪ್ರಯಾಣದ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ನೀವು ಉತ್ತಮ. ವೃಷಭ:- ತೊಂದರೆಗಳು ಹಂತಹಂತವಾಗಿ ಪರಿಹಾರವಾಗಲಿವೆ.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯಭಾಗ್ಯ ಉತ್ತಮವಾಗಿದೆ. ಮಕ್ಕಳು ಹೆಚ್ಚು ಶ್ರಮವಹಿಸಬೇಕು. ವಿನಾಕಾರಣ ಮನೆಯಲ್ಲಿ ಮನಸ್ತಾಪ. ಮಿಥುನ:– ಉದ್ಯೋಗಿಗಳಿಗೆ ಭಡ್ತಿ.ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರದಿಂದ ಅಧಿಕ ಲಾಭ. ವಾದ-ವಿವಾದಗಳ ಬಗ್ಗೆ ಹೆಚ್ಚಿನ ಜಾಗ್ರತೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ…

  • ಆರೋಗ್ಯ

    ದಿನಾಲೂ ನಿಂಬೆ ರಸ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನೆಗಳು ಆಗುತ್ತೆ, ಒಮ್ಮೆ ಈ ಲೇಖನ ಓದಿ ನೋಡಿ…

    ಬೆಳಗ್ಗಿನ ಸಮಯದಲ್ಲಿ ಎದ್ದ ತಕ್ಷಣ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿದ ನಂತರ ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ! ನಿಂಬೆರಸ ಕುಡಿಯೋದ್ರಿಂದ ಸಿಗುವಂತ ಲಾಭಗಳೇನು? ಇಲ್ಲಿದೆ ನೋಡಿ… *ನಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಇನ್ನಿತರ ಕೆಲವೊಂದು ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.   *ಬಾಯಿಯ ದುರ್ವಾಸನೆ ನಿವಾರಿಸುತ್ತದೆ  ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಮುಕ್ತರಾಗಲು ನೆರವಾಗುತ್ತದೆ. *ನಿಂಬೆಯ ಅತ್ಯುತ್ತಮ…