ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಶೌಚಾಲಯದಲ್ಲಿ ನೀವು ಬಳಸುವ ಬ್ರಶ್ ಆಗಿರಬಹುದು, ಟಾಯ್ಲೆಟ್ ಸೀಟ್ ಆಗಿರಬಹುದು, ಫ್ಲಶ್ ಬಟನ್ ಆಗಿರಬಹುದು ಹೀಗೆ ನಾವು ಯೋಚಿಸಲೂ ಸಾಧ್ಯವಾಗದೇ ಇರುವ ಕಡೆಗಳಲ್ಲಿ ಕೀಟಾಣುಗಳು ಮನೆ ಮಾಡಿಕೊಂಡುಬಿಡುತ್ತವೆ. ನೀವು ವಾರಕ್ಕೊಮ್ಮೆ ಸ್ವಚ್ಛಮಾಡಿದರೂ ಕೆಲವೊಮ್ಮೆ ಪ್ರಮುಖ ಅಂಶಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ.
ಟಾಯ್ಲೆಟ್ ಬ್ರಶ್:-
ಒಮ್ಮೆ ನೀವು ಬ್ರಶ್ ಬಳಸಿ ಸ್ವಚ್ಛಮಾಡಿದ ನಂತರ ಈ ಬ್ರಶ್ ಅನ್ನು ಬ್ಲೀಚ್ನಲ್ಲಿ ರಾತ್ರಿಪೂರ್ತಿ ನೆನೆಸಿಕೊಳ್ಳಿ. ಇದರಿಂದ ನಿಮ್ಮ ಬ್ರಶ್ ಸ್ವಚ್ಛಗೊಳ್ಳುತ್ತದೆ. ಟಾಯ್ಲೆಟ್ನ ಹಿಂಭಾಗವನ್ನು ತೊಳೆಯುವುದು ಕಷ್ಟದ ಕೆಲಸವಾಗಿದೆ ವೈಪ್ ಬದಲಿಗೆ ಸ್ಪ್ರೇಯನ್ನು ಬಳಸಿ.
ಸೋಂಕು ನಿವಾರಕ :-
ಸೋಂಕು ನಿವಾರಕವನ್ನು ಸಿಂಪಡಿಸಿ ಮತ್ತು ರಾತ್ರಿಯಲ್ಲಿ ಅದನ್ನು ಹಾಗೆಯೇ ಬಿಟ್ಟುಬಿಡಿ, ಟಾಯ್ಲೆಟ್ ಕಲೆಗಳು ಹಠಮಾರಿಯಾಗಿರುವುದರಿಂದ ನೀವು ಸೋಂಕುನಿವಾರಕವನ್ನು ಅಥವಾ ಶುಚಿಗೊಳಿಸುವ ದ್ರಾವಣದಲ್ಲಿ ಬೆರೆಸಿಕೊಳ್ಳಬಹುದು, ಒಂದು ಕೈಯಲ್ಲಿ ಬ್ರಶ್ನ ಒಂದು ತುದಿಯನ್ನು ಹಿಡಿದುಕೊಳ್ಳಿ.
ಟಾಯ್ಲೆಟ್ ಸುತ್ತಲೂ ತೊಳೆಯಿರಿ ಮತ್ತು ಅದನ್ನು ವೈಪ್ ಮಾಡಿ :-
ಟಾಯ್ಲೆಟ್ ರಿಮ್ ಅಡಿಯಲ್ಲಿ ಹೆಚ್ಚು ಕೊಳೆ ಸಂಗ್ರಹವಾಗುತ್ತದೆ, ಮತ್ತು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಈ ಭಾಗದಲ್ಲಿ ಸೋಂಕುನಿವಾರಕವನ್ನು ಬಳಸಿಕೊಂಡು ಸ್ವಚ್ಛಮಾಡಿ. ಈ ರಿಮ್ ಅನ್ನು ನೀವು ಸ್ವಚ್ಛಗೊಳಿಸಿಲ್ಲ ಎಂದಾದಲ್ಲಿ ಆ ಭಾಗ ಸೂಕ್ಷ್ಮ ಜೀವಿಗಳ ಮನೆಯಾಗುತ್ತದೆ.
ಬ್ರಶ್ :-
ನಿಮ್ಮ ರಿಮ್ ಅನ್ನು ಸ್ವಚ್ಛಗೊಳಿಸುವ ಸೂಕ್ತ ಬ್ರಶ್ ಅನ್ನು ಆರಿಸಿಕೊಳ್ಳಿ. ಟಾಯ್ಲೆಟ್ ಸ್ವಚ್ಛಗೊಳಿಸುವಾಗ ಗ್ಲೌಸ್ ಬಳಸುವುದನ್ನು ಮರೆಯಬೇಡಿ. ನಿಮ್ಮ ಟಾಯ್ಲೆಟ್ ಸ್ವಚ್ಛಗೊಳಿಸಲು ನೀವು ಸರಿಯಾದ ಟಾಯ್ಲೆಟ್ ಸ್ವಚ್ಛಕಗಳನ್ನು ಬಳಸಬೇಕು.
ಬಿಳಿ ವಿನೇಗರ್ :-
ನಿಮ್ಮ ಫ್ಲಶ್ ಟ್ಯಾಂಕ್ಗೆ ಬಿಳಿ ವಿನೇಗರ್ ಅನ್ನು ಹಾಕಿ ಮತ್ತು ಇದು ಸುವಾಸನೆ ಬೀರುವವರೆಗೆ ಫ್ಲಶ್ ಮಾಡಿ. ನಿಮ್ಮ ಸ್ಯಾನಿಟರಿ ವೇರ್ನಲ್ಲಿ ಯಾವುದಾದರೂ ಗಾಢ ನೀರು ಡಿಪಾಸಿಟ್ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದೊಂದು ಉತ್ತಮ ಸೋಂಕು ನಿವಾರಕವಾಗಿದ್ದು ಕೊಳೆಯನ್ನು ಶೀಘ್ರದಲ್ಲಿಯೇ ನಿವಾರಿಸುತ್ತದೆ.
ಫ್ಲಶ್ ಟ್ಯಾಂಕ್ಗೆ ವಿನೇಗರ್ ಅನ್ನು ಸುರಿಯುವುದು ನಿಮ್ಮ ವಾರಾಂತ್ಯದ ಶೌಚಾಲಯ ಸ್ವಚ್ಛತೆ ಕೆಲಸವನ್ನು ಸುಲಭಗೊಳಿಸುತ್ತದೆ.
ಬೇಕಿಂಗ್ ಸೋಡಾ :-
ಟಾಯ್ಲೆಟ್ ಬೌಲ್ಗೆ 3 ಚಮಚದಷ್ಟು ಬೇಕಿಂಗ್ ಸೋಡಾವನ್ನು ರಾತ್ರಿಯೇ ಹಾಕಿ. ರಾತ್ರಿ ಪೂರ್ತಿ ಈ ಮಿಶ್ರಣ ಹೀಗೆಯೇ ಇರಲಿ. ಮರುದಿನ ಬೆಳಗ್ಗೆ, ಟಾಯ್ಲೆಟ್ ಅನ್ನು ಫ್ಲಶ್ ಮಾಡಿ ಬೌಲ್ನ ಬದಿಗಳನ್ನು ಸ್ಕ್ರಬ್ ಮಾಡಿ ಮತ್ತು ಬೌಲ್ ಪೂರ್ತಿ ಬೆಳ್ಳಗೆ ಹೊಳೆಯುವವರೆಗೆ ಫ್ಲಶ್ ಮಾಡಿ.
ಲಿಂಬೆ ರಸ ಮತ್ತು ಬೋರಾಕ್ಸ್ :-
ನಿಮ್ಮ ಮನೆಯ ಎಂತಹ ಹಠಮಾರಿ ಕಲೆಯನ್ನು ಹೋಗಲಾಡಿಸಲು ಲಿಂಬೆಯನ್ನು ನಿಮಗೆ ಬಳಸಬಹುದಾಗಿದೆ. ಟಾಯ್ಲೆಟ್ ಬೌಲ್ ಅನ್ನು ಹೊಳೆಯುವಂತೆ ಮಾಡಲು, ಬೌಲ್ಗೆ ಒಂದು ಕಪ್ನಷ್ಟು ಬೋರಾಕ್ಸ್ ಅನ್ನು ಹಾಕಿ.
ಬೋರಾಕ್ಸ್ಗೆ 2 ಲಿಂಬೆ ರಸಗಳನ್ನು ಹಿಂಡಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಒಳಭಾಗವನ್ನು ಚೆನ್ನಾಗಿ ಫ್ಲಶ್ ಮಾಡಿ. ಸ್ಪಾಂಜ್ ಬಳಸಿ ಈ ಪೇಸ್ಟ್ ಅನ್ನು ಒಳಭಾಗಕ್ಕೆ ಸವರಿ.
ಸರಿಯಾಗಿ ಫ್ಲಶ್ ಮಾಡಿ :-
ನಿಮ್ಮ ಟಾಯ್ಲೆಟ್ ಅಥವಾ ಶೌಚಾಲಯವನ್ನು ನೀಟಾಗಿ ಇರಿಸಬೇಕು ಎಂದಾದಲ್ಲಿ ಸರಿಯಾಗಿ ಫ್ಲಶ್ ಮಾಡುವುದು ಅತ್ಯವಶ್ಯಕ. ನೀಟಾಗಿ ಫ್ಲಶ್ ಮಾಡುವುದರ ಜೊತೆಗೆ ಫ್ಲಶ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ನೀವು ಫ್ಲಶ್ ಮಾಡಿದಂತೆಲ್ಲಾ ಶೌಚಾಲಯವು ಸಣ್ಣ ಕಣಗಳನ್ನು ಸಿಂಪಡಿಸುವ ಅಭ್ಯಾಸವನ್ನು ಹೊಂದಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್. ಬಹುಭಾಷೆಯಲ್ಲಿ ಬೇಡಿಕೆ ಇರುವ ಬಹುಮುಖ ಪ್ರತಿಭೆ. ಪೈಲ್ವಾನ್ ಸಕ್ಸಸ್ ಸಂಭ್ರಮ , ಪೈರಸಿ ಸಂಗ್ರಾಮವನ್ನು ಮುಗಿಸಿಕೊಂಡು ಈಗ ಪೋಲೆಂಡ್ ದೇಶಕ್ಕೆ ಹಾರಿದ್ದಾರೆ. ಕಾರಣ ಕೋಟಿಗೋಬ್ಬ -3 ಸಿನಿಮಾದ ಶೂಟಿಂಗ್. ಕಳೆದ ಎರಡು ವರ್ಷದಿಂದ ‘ಕೋಟಿಗೊಬ್ಬ-3’ ಚಿತ್ರದ ಕಾರ್ಯಗಳು ಪ್ರಗತಿಯಲ್ಲಿವೆ. ನಾಲ್ಕೈದು ಶೆಡ್ಯೂಲ್ ಶೂಟಿಂಗ್ ಅನ್ನು ಕೂಡ ಚಿತ್ರತಂಡ ಮುಗಿಸಿಕೊಂಡಿದೆ. ಈಗ ಸೂರಪ್ಪ ಬಾಬು ನಿರ್ಮಾಣದ ಈ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ದೂರದ ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ‘ಕೋಟಿಗೊಬ್ಬ-3’ ಸಿನಿಮಾದ…
ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಮೂವರು ಮೃತಪಟ್ಟು, 20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವರ ಕುಟುಂಬಗಳಿಗೆ 5ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್ನಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಿದ್ದಿತ್ತು. ಈ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು….
ಸ್ವಾಮಿನಾರಾಯಣ್ ಅಕ್ಷರ್ಧಮ್ ನವದೆಹಲಿ ಹಿಂದೂ ದೇವಾಲಯ, ಮತ್ತು ಭಾರತದ ನವದೆಹಲಿಯಲ್ಲಿರುವ ಆಧ್ಯಾತ್ಮಿಕ-ಸಾಂಸ್ಕೃತಿಕ ಆವರಣ. ಅಕ್ಷರ್ಧಮ್ ದೇವಸ್ಥಾನ ಅಥವಾ ದೆಹಲಿ ಅಕ್ಷರ್ಧಮ್ ಎಂದೂ ಕರೆಯಲ್ಪಡುವ ಈ ಸಂಕೀರ್ಣವು ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಸಹಸ್ರಮಾನಗಳನ್ನು ಪ್ರದರ್ಶಿಸುತ್ತದೆ. ಯೋಗಿಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ರಚಿಸಿದ ಇದನ್ನು ಬಿಎಪಿಎಸ್ ನಿರ್ಮಿಸಿದೆ. ಈ ದೇವಾಲಯವನ್ನು ನವೆಂಬರ್ 6, 2005 ರಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಡಾ. ಎ. ಪಿ….
ಪಾರ್ಲಿಮೆಂಟ್ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರು ಕೇಂದ್ರ ಬಜೆಟ್(Union Budget) ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಇದರ ಜೊತೆಗೆ ಮಧ್ಯಮ ವರ್ಗಕ್ಕೆ ಬಂಪರ್ ನ್ಯೂಸ್…
ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ..
ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.