ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.
ಮಾರುಕಟ್ಟೆಗೆ ಅದೆಷ್ಟೇ ಹೊಸ ಹೇರ್ ಆಯಿಲ್ ಬಂದರೂ ಪ್ಯಾರಾಚ್ಯೂಟ್ ಆಯಿಲನ್ನು ಮಾತ್ರ ಇಂದಿಗೂ ಬಹಳಷ್ಟು ಮಂದಿ ಬಳಸುತ್ತಿದ್ದಾರೆ. ಆದರೆ ಈ ಆಯಿಲ್ ಬಗ್ಗೆ ನಿಮಗೊಂದು ಸಂಗತಿ ಗೊತ್ತಾ.? ನಿಜವಾಗಿ ನಾವು ಈ ಎಣ್ಣೆಯನ್ನು ಹೇರ್ ಆಯಿಲ್ ಆಗಿ ಬಳಸುತ್ತಿದ್ದೇವಾದರೂ, ಪ್ಯಾರಾಚ್ಯೂಟ್ ಕೋಕೊನಟ್ ಹೇರ್ ಆಯಿಲ್ ಅಲ್ಲವಂತೆ. ಹೌದು ನೀವು ಕೇಳಿದ್ದು ನಿಜ. ಅದು ಕುಕಿಂಗ್ ಆಯಿಲ್ ಅಂತೆ. ಹೌದು ಸಾಕ್ಷಾತ್ ಅದನ್ನು ತಯಾರಿಸುವ ಕಂಪೆನಿಯೇ ಆ ಮಾತು ಹೇಳುತ್ತಿದೆ.
ಪ್ಯಾರಾಚ್ಯೂಟ್ ಕೋಕನಟ್ ಹೇರ್ ಆಯಿಲ್ ಅಲ್ಲ. ಅದು ಕುಕಿಂಗ್ ಆಯಿಲ್. ಬೇಕಿದ್ದರೆ ಅದರ ಪ್ಯಾಕಿಂಗ್ ಮೇಲೆ ನೋಡಿದರೆ ಕೋಕೊನಟ್ ಆಯಿಲ್ ಎಂದಿರುತ್ತದಾದರೂ..ಹೇರ್ ಆಯಿಲ್ ಎಂದು ಇರಲ್ಲ ಅಲ್ಲವೇ. ಅಷ್ಟೇ ಅಲ್ಲ, ಆ ಆಯಿಲ್ ಕುಕಿಂಗ್ ಆಯಿಲ್ ಎಂದು ಹೇಳಿ ಅದನ್ನು ತಯಾರಿಸುವ ಕಂಪೆನಿ ವಾದಿಸುತ್ತಾ ಸರಕಾರಕ್ಕೆ ತೆರಿಗೆ ವಂಚಿಸುತ್ತಿದೆ. ಯಾಕೆಂದರೆ…ಕುಕಿಂಗ್ ಆಯಿಲ್ಸ್ ಮೇಲೆ ಅಬಕಾರಿ ಸುಂಕ ಇರಲ್ಲ. ಕಾಸ್ಮೆಟಿಕ್ಸ್ನ ಒಂದು ಭಾಗವಾದ ಹೇರ್ ಆಯಿಲ್ ಮೇಲೆ ಈ ಸುಂಕ ಇರುತ್ತದೆ. ಆದಕಾರಣ ಮರಿಕೋ ಎಂಬ ಕಂಪೆನಿ ಏನು ಮಾಡುತ್ತಿದೆ ಎಂದರೆ… ತನ್ನ ಪ್ಯಾರಾಚ್ಯೂಟ್ ಕೋಕೋನಟ್ ಆಯಿಲನ್ನು ಕುಕಿಂಗ್ ಆಯಿಲ್ ಎಂದು ಹೇಳುತ್ತಿದೆ.
ಈ ಸಂಬಂಧ ಸರಕಾರ ಕೋರ್ಟ್ ಮೆಟ್ಟಿಲೇರಿತು. ಮರಿಕೋ ಕಂಪೆನಿ ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಕುಕಿಂಗ್ ಆಯಿಲ್ ಅಲ್ಲ, ಹೇರ್ ಆಯಿಲ್ ಎಂದು, ಆದಕಾರಣ ಅದರ ಮೇಲೆ ತೆರಿಗೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಕೋರ್ಟನ್ನು ಸರಕಾರ ಕೋರಿದೆ. ಆದರೆ ಕೋರ್ಟ್ ಇದಕ್ಕೆ ವಿವರಣೆ ಕೇಳಿದರೆ ಸದರಿ ಮರಿಕೋ ಕಂಪೆನಿ ತನ್ನ ವಾದವನ್ನು ಮಂಡಿಸಿತು. ತಾವು ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಆಯಿಲ್ ಕುಕಿಂಗ್ ಆಯಿಲ್ ಎಂದು, ಹೇರ್ ಆಯಿಲ್ ಅಲ್ಲವೆಂದು, ಅದರ ಮೇಲೆ ಎಲ್ಲೂ ಹೇರ್ ಆಯಿಲ್ ಎಂದು ಬರೆದಿಲ್ಲವೆಂದು, ಬೇಕಿದ್ದರೆ ಪರಿಶೀಲಿಸಬಹುದೆಂದು ವಾದಿಸಿತು.
ಆದರೆ 200 ಎಂಎಲ್ಗಿಂತಲೂ ಕಡಿಮೆ ಪ್ರಮಾಣದಲ್ಲಿ ಪ್ಯಾಕ್ ಶಾಚೆಗಳನ್ನು ಯಾಕೆ ಕೊಡುತ್ತಿದ್ದೀರಿ ಎಂದು ಕೇಂದ್ರ ಕೇಳಿದ್ದಕ್ಕೆ, ಅದಕ್ಕೆ ಮರಿಕೋ ಪ್ರತಿಕ್ರಿಯಿಸುತ್ತಾ, ಆ ರೀತಿಯ ಶಾಚೆಗಳು ಬಡ, ಮಧ್ಯಮ ವರ್ಗದ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಯಾರಿಸಿದೇವೆಂದು, ಅವರು ಆಯಿಲನ್ನು ಅಡುಗೆಗೆ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆಂದು, ಹಾಗಾಗಿ ದೊಡ್ಡ ಪ್ಯಾಕೆಟ್ ಅಗತ್ಯವಿಲ್ಲವೆಂದು, ಚಿಕ್ಕ ಪ್ಯಾಕೆಟ್ ಸಾಕೆಂದು ಹಾಗಾಗಿ ಅವನ್ನು ಬಳಸುತ್ತಿದ್ದೇವೆಂದು ಮರಿಕೋ ವಾದಿಸಿತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಟ್ಟಿದ ದಿನದ ಪ್ರಕಾರ ನೀವು ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ಇಲ್ಲಿ ತಿಳಿದು ಕೊಳ್ಳಿ.ನಿಮ್ಮದು ಸ್ವಲ್ಪ ವಿಶೇಷವಾದ ವ್ಯಕ್ತಿತ್ವ, ನೀವು ರಿಸ್ಕ್ ತೊಗೊಳಕ್ಕೆ ಹಿಂದೇಟಾಕಲ್ಲ ಆದ್ರೆ ಸುಮಾರ್ ಸತಿ ನಿಮ್ಮ ತಪ್ಪು ನಿರ್ಧಾರದಿಂದ ಒಳ್ಳೆ ಪಾಠ ಕಲಿತೀರಿ. ನಿಮಗೆ ಆಕ್ಟಿಂಗ್, ಕಲೆ ವಿಭಾಗದಲ್ಲಿ ಒಳ್ಳೆ ಬೆಳವಣಿಗೆ ಇರತ್ತೆ.
ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ 23 ವಯಸ್ಸಿನ ಹೆಣ್ಣು ಮಗಳು ಸಾಧನೆ ಮಾಡಿ ತೋರಿಸಿದ್ದಾಳೆ. ಸಾಧನೆ ಅನ್ನೋದು ಬರಿ ಶ್ರೀಮಂತರಿಗೆ ಅಷ್ಟೇ ಅಲ್ಲ ಅನ್ನೋದನ್ನ ಕೂಡ ತೋರಿಸಿದ್ದಾಳೆ. ಈಕೆಯ ಸಾಧನೆಯ ದಾರಿ ಹೇಗಿತ್ತು ಹಾಗೂ ಇದರ ಇಂದಿನ ಪರಿಶ್ರಮ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ಬನ್ನಿ. ಈಕೆಯ ಹೆಸರು ಅನುಪ್ರಿಯಾ ಲಾಕ್ರಾ ಎಂಬುದಾಗಿ ಒಬ್ಬ ಸಾಮಾನ್ಯ…
ಸ್ಯಾಂಡಲವುಡ್ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್ನ ಬೆಲೆ 1000 ರೂಪಾಯಿ….
ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ ಪಪ್ಪಾಯ ತಿನ್ನುವವರು ಪಪ್ಪಾಯ ತಿನ್ನದಿರುವವರಿಗಿಂತ ಆರೋಗ್ಯವಾಗಿರುತ್ತಾರೆ. ಖಾಯಿಲೆಗೆ ತುತ್ತಾಗುವುದು ಕಡಿಮೆ. ಹಾಗೆ ಕಚೇರಿಯಲ್ಲಿ ಉತ್ತಮ ಕೆಲಸ ಮಾಡಲು ಉತ್ಸಾಹಿತರಾಗಿರುತ್ತಾರೆ. ಪಪ್ಪಾಯಿಯಲ್ಲಿ ವಿಟಮಿನ್ ಹಾಗೂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ದೇಹಕ್ಕೆ ಕಡಿಮೆಯಾಗಿರುವ ನೀರಿನ ಅಂಶವನ್ನು ಇದು ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಪಪ್ಪಾಯಿಯಲ್ಲಿ ಕೊಬ್ಬಿನಂಶವಿರುವುದಿಲ್ಲ. ಇದು ಶಕ್ತಿಯ ಒಂದು…