ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.
ದೀಪಾವಳಿಯ ಕಥೆಗಳು ಹಲವಾರು. ಕೆಲವರು ಈ ದಿನದಂದು ರಾಮ ಸೀತೆ ಹಾಗೂ ಲಕ್ಷ್ಮಣರು 14 ವರ್ಷಗಳ ನಂತರ ಅಯೋಧ್ಯೆಗೆ ಮರಳಿದ ದಿನಗಳು ಎಂದರೆ. ಮತ್ತೆ ಕೆಲವರು ಇದು ಪಾಂಡವರು 12 ವರ್ಷ ವನವಾಸ ಮತ್ತು 1 ವರ್ಷ ಅಜ್ಞಾತವಾಸವನ್ನು ಮುಗಿಸಿ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದ ದಿವಸಗಳು ಎನ್ನುತ್ತಾರೆ. ಇನ್ನು ವಿಷ್ಣುಪುರಾಣಗಳು ಈ ದಿನದಂದು ಲಕ್ಮೀ ಮಾತೆ ಹಾಲಿನ ಸರೋವರದಿಂದ ಜನಿಸಿದ್ದು. ತದನಂತರ ವಿಷ್ಣುವನ್ನು ಒಪ್ಪಿ ಮದುವೆಯಾದ ದಿನಗಳು ಆದ್ದರಿಂದಲೇ ಈ ದಿನದಂದು ಲಕ್ಷ್ಮೀ ಪೂಜೆಯನ್ನು ಮಾಡಿದರೆ ಮಾತೆ ಒಲಿಯುತ್ತಾಳೆ ಎಂಬ ಕಥಾನಕವನ್ನೂ ನೀಡುತ್ತದೆ.
ಇನ್ನೂ ಹಿಂದೆ ಹೋದರೆ ಕಥೋಪನಿಷದ್ ಈ ದಿನದಂದು ಯಮ ಮತ್ತು ನಚಿಕೇತರ ನಡುವಿನ ಕಥೆಯನ್ನು ತೆರೆದಿಡುತ್ತದೆ. ಮೊದಲದಿನವಾದ ನರಕ ಚರ್ತುದಶಿಯಂದು ನಚಿಕೇತನು ಧರ್ಮ -ಅಧರ್ಮ, ಸರಿ-ತಪ್ಪು, ಅಜ್ಞಾನ-ಜ್ಞಾನ ಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದ ದಿನ ಎಂದು ತಿಳಿಸುತ್ತದೆ.
ಇನ್ನು ಇದರೊಂದಿಗೆ ಬಲಿ ಚಕ್ರವರ್ತಿಯ ಕಥೆಯೂ ಸೇರಿಕೊಂಡಿದೆ. ಸ್ವರ್ಗವನ್ನೇ ಗೆದ್ದು ಅಲ್ಲಿ ಭೂಮಿಯ ಹಾಗೆ ಏನು ಇಲ್ಲ ಎಂದು ಹಿಂದಿರುಗಿದ ಮಹಾ ಪರಾಕ್ರಮಿ ಬಲಿ ಚಕ್ರವರ್ತಿಯು ಇಂದ್ರ ಸ್ಥಾನವನ್ನು ಪಡೆಯಲು ಯಜ್ಞ ಮಾಡುತ್ತಿರುವಾಗ ದೇವತೆಗಳ ಬೇಡಿಕೆಯಂತೆ ವಾಮನ ಅವತಾರದಲ್ಲಿ ಪ್ರತ್ಯಕ್ಷನಾದ ವಿಷ್ಣುವು 3 ಪಾದ (ಅಡಿ) ಜಾಗವನ್ನು ಕೇಳಿದಾಗ ಯಾವುದೇ ಯೋಚನೆ ಮಾಡದೇ ದಾನದ ಅರ್ಗ್ಯ ನೀಡಿದ ಬಲಿಗೆ ತನ್ನ ಬಲವ ಪ್ರದರ್ಶಿಸಿ ಭೂ-ಮಂಡಲದಲ್ಲೊಂದು ಕಾಲು ಆಕಾಶದಲ್ಲೊಂದು ಪಾದವಿರಿಸಿ..
ಇನ್ನೊಂದು ಪಾದವೆಲ್ಲಿರಿಸಲಿ ಎಂದಾಗ ಸರ್ವತ್ಸ್ವವನ್ನೂ ಅರ್ಪಿಸುತ್ತ ತನ್ನ ಶಿರಸ್ಸಿನ ಮೇಲಿರಿಸಿ ಎಂದ. ಅದಕ್ಕನುಗುಣವಾಗಿ ವಾಮನನು ಅವನನ್ನು ಭೂಗರ್ಭಕ್ಕಿಳಿಸಿದ. ಆತನ ತ್ಯಾಗಕ್ಕೆ ಮೆಚ್ಚಿ ನಿನಗೇನು ಬೇಕು ಎಂದಾಗ ಮುಕ್ತಿ ಎಂದನಂತೆ.
ಇಂತಹ ತ್ಯಾಗಮನೋಭಾವದಿಂದ ಪ್ರಭಾವಿತನಾದ ವಿಷ್ಣುವು ಈ ದಿನವನ್ನು ಬಲಿಪಾಡ್ಯ ಎಂದೇ ವಿಶ್ವದಾದ್ಯಂತ ಆಚರಿಸುತ್ತಾರೆ ಎಂಬ ವರನಿತ್ತ ಎಂಬ ಪ್ರತೀತಿ ಕೂಡ ಇದೆ.
ಇವೆಲ್ಲವನ್ನೂ ಒಡಗೂಡಿ ನರಕಾಸುರನನ್ನು ವಧೆ ಮಾಡಿದ ದಿನವೂ ಇದೇ ಎಂದೂ ಹೇಳುವುದುಂಟು. ಹತ್ತು ಹಲವಾರು ಕಥೆಗಳನ್ನು ದೀಪಾವಳಿ ಹೊಂದಿದ್ದರೂ, ಇವೆಲ್ಲರ ಅರ್ಥ ಒಂದೇ ಒಳ್ಳೆಯದರ ಗೆಲುವು. ನಮ್ಮೆಲ್ಲರ ಮನಸ್ಸಿನ ವಿಕಾರಗಳಾದ ಕಾಮ, ಕ್ರೋಧ ಮದ, ಮತ್ಸರಗಳನ್ನು ಜುಸಿ.(ಬಲಿಯಾಗಿಸಿ), ಹೊಸ ತನದಿಂದ ಉತ್ತಮ ವಿಚಾರಗಳ ಉಗಮವಾಗಬೇಕು. ಮನದ ಕೊಳೆಯನ್ನು ಕಳಚಿ ಶುಭ್ರ ಬಟ್ಟೆಯ ತೊಡುವ ಹಾಗೆ, ನಿರಾಕಾರ ಜ್ಯೋತಿಯಷ್ಟೇ ಪರಿಶುದ್ಧ ಮನಸ್ಸನ್ನು ಪಡೆಯುವುದು. ನೀರು ತುಂಬುವ ಆಚರಣೆಂದ ಆರಂಭವಾಗುವ ಈ ಹಬ್ಬದ ಪ್ರತಿದಿನಕ್ಕೂ ಅದರದೇ ಆದ ವೈಶಿಷ್ಟ್ಯತೆ ಇದೆ.
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ಸುರಕ್ಷಿತವಾಗಿ ಆಚರಿಸುವುದು ಕೂಡ ಮುಖ್ಯ.
ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಭರಾಟೆಯಲ್ಲಿ ಮಕ್ಕಳು ಕಣ್ಣು, ಕೈ, ಕಾಲಿಗೆ ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಪಟಾಕಿ ಸಿಡಿಸುವಾಗ ಏನು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಅಮೋದ್ ನಾಯಕ್ ಹೇಳುತ್ತಾರೆ.
– ಪಟಾಕಿ ಸಿಡಿಸುವಾಗ ಮಕ್ಕಳು ಪಟಾಕಿಯಿಂದ ಕನಿಷ್ಠ ತೋಳಿನಷ್ಟು ದೂರದಲ್ಲಿರಬೇಕು.
– ಪಟಾಕಿ ಹೊಡೆಯುವಾಗ ಸಡಿಲ ಬಟ್ಟೆಗಳನ್ನು ಧರಿಸಬೇಡಿ.
-ರಕ್ಷಕ ಕವಚಗಳನ್ನು ದೇಹಕ್ಕೆ ಧರಿಸಿಕೊಳ್ಳಿ.
-ಬೇಡದ ವಸ್ತುಗಳು ದೇಹಕ್ಕೆ ಬಿದ್ದರೆ ನೀರಿನಿಂದ ತೊಳೆಯಿರಿ.
-ರಕ್ಷಾ ಫಲಕವಾಗಿ ಕಾಂಟಾಕ್ಸ್ಟ್ ಬದಲು ಗ್ಲಾಸುಗಳನ್ನು ಧರಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಪ್ರಪಂಚದಲ್ಲಿ ಅದೆಷ್ಟೋ ನಿಗೂಢಗಳು ಇನ್ನು ಇದೆ ಮತ್ತು ಆ ನಿಗೂಢಗಳನ್ನ ಭೇದಿಸಲು ಮನುಷ್ಯನಿಂದ ಇನ್ನು ಕೂಡ ಸಾಧ್ಯವಾಗಿಲ್ಲ, ದೇವರ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾವುದೇ ಜೀವಿ ಕೂಡ ಜೀವಿಸಬೇಕು ಅಂದರೆ ಆಹಾರ, ನೀರು ಮತ್ತು ಗಾಳಿಯನ್ನ ಸೇವನೆ ಮಾಡಲೇಬೇಕು, ಹೆಚ್ಚುಕಮ್ಮಿ ಒಂದೆರಡು ದಿನ ಊಟ ಇಲ್ಲದೆ ಜೀವನವನ್ನ ಮಾಡಬಹುದು ಆದರೆ ಜಾಸ್ತಿ ದಿನ ಊಟ ಮಾಡದೆ ಇರಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಹೆಚ್ಚು ದಿನ ಆಹಾರವನ್ನ ಬಿಟ್ಟು ಇದ್ದರೆ ಆ ಜೀವಿಯ ಸಾವು ಕೂಡ…
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ 416 ಕಂತುಗಳ ಪ್ರಸಾರ ಆಗಿದೆ.
ಹಸಿವು, ಬಡತನ ಅನ್ನೋದು ಯಾರಿಂದ ಎಂಥ ಕೆಲಸ ಬೇಕಾದರೂ ಮಾಡಿಸುತ್ತೆ. ಕೀನ್ಯಾ ದೇಶಲ್ಲಿ ಬಡತನದಿಂದಾಗಿ ಕೆಲವರು ತಂತಮ್ಮ ಪತ್ನಿಯರನ್ನೇ ಬಾಡಿಗೆಗೆ ನೀಡುವಂಥ ದುಃಸ್ಥಿತಿ ಅಲ್ಲಿದೆ. ಕೀನ್ಯಾದಲ್ಲಿ ಬಡತನದ ಪ್ರಮಾಣ ಎಷ್ಟಿದೆಯೆಂದರೆ ನಮ್ಮಲ್ಲಿ ಗಂಡ ಹಾಗೂ ಹೆಂಡತಿ ಕೆಲಸಕ್ಕೆಂದು ಆಫೀಸಿಗೆ ಹೋದಂತೆ ಅಲ್ಲಿ ಪ್ರವಾಸಿಗರಿಗೆ ಮೈಮಾರಿಕೊಳ್ಳಲು ಹೋಗುತ್ತಾರೆ. ಶ್ರೀಮಂತ ವಿದೇಶಿ ಪ್ರವಾಸಿಗರಿಂದ ಸಾಕಷ್ಟು ಹಣ ಪಡೆದು ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಾರೆ.ದುಡಿದು ಗಳಿಸುವ ಹಣ ಊಟಕ್ಕೂ ಸಾಲುತ್ತಿಲ್ಲವಾದಾಗ ಗಂಡನೇ ಪತ್ನಿಯನ್ನು ಈ ದಂಧೆಗೆ ಕಳುಹಿಸುವುದು ಅಲ್ಲಿ ಕಾಮನ್. ಹಾಗೆಯೇ ಪತ್ನಿಗೂ ಬೇರೆ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(30 ನವೆಂಬರ್, 2018) ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಪ್ರೀತಿಗಾಗಿ ವಿಶೇಷ…
ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…
ಈಗ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಗಲ್ಲಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆಯದ್ದೇ ಮಾತುಕತೆ. ಅಷ್ಟೇ ಅಲ್ಲದೇ ಯಾವ ಪಕ್ಷ ಗೆಲ್ಲುತ್ತೆ? ಯಾರು ಈ ದೇಶದ ಚುಕ್ಕಾಣಿ ಹಿಡಿಯುತ್ತಾರೆ?ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ ಎಂಬ ವಾದ ವಿವಾದಗಳು ಜೋರಾಗಿಯೇ ನಡೆಯುತ್ತಿವೆ. ಈಗ ಹಾಲಿ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ಪ್ರಧಾನಿ ರೇಸ್ ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಪ್ರಧಾನಿ ಆಗ್ತಾರ ಎಂಬುದರ ಬಗ್ಗೆ ಸಿ ವೋಟರ್–ಐ.ಎ.ಎನ್.ಎಸ್. ಸಮೀಕ್ಷೆ ನಡೆಸಿದ್ದು ಮತದಾರ ಪ್ರಭು ಏನು…