ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ಅನಾಮಿಕ ವ್ಯಕ್ತಿಗಳು ನಮ್ಮ ಮೊಬೈಲ್’ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ.ಅವರು ಯಾರೂ ಎಂದು ನಮಗೆ ತಿಳಿಯುವುದಿಲ್ಲ.ಹಾಗಾಗಿ ನಾವು ಹೆಚ್ಚಾಗಿ ಈಗ ನಮ್ಮ ಮೊಬೈಲ್’ಗಳಲ್ಲಿ ಟ್ರೂ ಕಾಲರ್ ಆ್ಯಪ್’ನ್ನು ಬಳಸುವುದು ಹೆಚ್ಚು.ನಮ್ಮ ಮೊಬೈಲ್ನಲ್ಲಿ ನಂಬರ್ ಸೇವ್ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಮ್ಮ ಮೊಬೈಲ್ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನಾವು ಟ್ರೂ ಕಾಲರ್ ಆ್ಯಪ್ ಅನ್ನು ಮೊಬೈಲ್ಗೆ ಡೌನ್ಲೋಡ್ ಮಾಡಿಕೊಂಡಿರುತ್ತೇವೆ.
ನಿಜ ವಿಷಯ ಏನಪ್ಪಾ ಅಂದರೆ ಅನಾಮಿಕನ ಕರೆ ವಿವರ ನಮಗೆ ಲಭಿಸಿದಷ್ಟೇ ಮಾಹಿತಿ ಕರೆ ಮಾಡಿದವನಿಗೂ ಸಿಗುತ್ತದೆ. ಅಲ್ಲದೇ ನಮ್ಮ ಮೊಬೈಲ್ನಲ್ಲಿನ ಎಲ್ಲಾ ಮಾಹಿತಿ ಸೋರಿಕೆಯಾಗಿ ಮತ್ತೊಬ್ಬರ ಕೈಗೆ ಸಿಗುತ್ತಿದೆ. ಆದರೆ ಅದು ನಮಗೆಗೊತ್ತೇ ಆಗುವುದಿಲ್ಲ. ಹಾಗಾಗಿ ಟ್ರೂ ಕಾಲರ್ ಮೊಬೈಲ್ ಅಪ್ಲಿಕೇಶನ್ ಬಗ್ಗೆ ನಾವು ಎಚ್ಚರದಿಂದಿರುವುದು ಬಹಳ ಸೂಕ್ತ.
ನಮ್ಮ ಮೊಬೈಲ್ ನಲ್ಲಿ ಸೇವ್ ಆಗದೆ ಇರುವ ನಂಬರ್ ಗಳಿಂದ ನಮಗೇನಾದರೂ ಕರೆ ಬಂದರೆ ಕರೆ ಮಾಡಿದವರ ಹೆಸರು, ಮತ್ತು ಅದರಲ್ಲಿರುವ ಇತರ ಮಾಹಿತಿಗಳನ್ನು ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸುತ್ತದೆ. ಅದು ಹೇಗೆ ಅಂತ ಗೊತ್ತಾ? ‘ಟ್ರೂ ಕಾಲರ್ ಗೆ ಈ ಎಲ್ಲಾ ಮಾಹಿತಿಗಳು ಎಲ್ಲಿಂದ ಸಿಗುತ್ತವೆ’ ಎಂಬ ಸುಳಿವು ನಮಗೆ ದೊರೆತಿದೆಯೇ?
ಅವರು ಈ ಮಾಹಿತಿಗಳನ್ನೆಲ್ಲಾ ನಮ್ಮಿಂದಲೇ, ಅಂದರೆ ನಾವು ಯಾರೆಲ್ಲಾ ಟ್ರೂ ಕಾಲರ್ ಆ್ಯಪ್ ಉಪಯೋಗಿಸುತ್ತೀರೋ ಅವರಿಂದಲೇ ಪಡೆದಿರುತ್ತಾರೆ. ಈ ಆ್ಯಪ್ ಅನ್ನು ಉಪಯೋಗಿಸುವ ಮೂಲಕ ನಾವು ನಮ್ಮ ಬಗ್ಗೆ ಮಾಹಿತಿ ಅಷ್ಟೇ ಅಲ್ಲ, ಯಾರೆಲ್ಲ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇವ್ ಆಗಿದ್ದಾರೋ ಅವರ ಬಗ್ಗೆ ಮಾಹಿತಿಯನ್ನೂ ಈ ಸಂಸ್ಥೆಗೆ ನೀಡುತ್ತಿರುತ್ತೀವಿ. ಇಲ್ಲಿ ಓದಿ:-ನಿಮ್ಮ ಸ್ಮಾರ್ಟ್ ಫೋನ್’ನ ಈ 8 ಸೀಕ್ರೆಟ್ ಆಪ್ಷನ್ಸ್’ಗಳು ನಿಮ್ಗೆ ಗೊತ್ತಿದೆಯೇ?
ಟ್ರೂ ಕಾಲರ್ ಆಪ್ ಇನ್ಸ್ಟಾಲ್ ಮಾಡಿದ ನಮ್ಮ ಮೊಬೈಲ್ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.ಇದರಿಂದ ಯಾರಾದರೂ ಒಂದು ಹೆಸರು ಅಥವಾ ನಂಬರ್ ಟ್ರೂ ಕಾಲರ್ ನಲ್ಲಿ ಸರ್ಚ್ ಮಾಡಿದಾಗ ನಮ್ಮ ಮತ್ತು ನಮ್ಮ ಸಂಪರ್ಕದಲ್ಲಿರುವವರ ಮಾಹಿತಿ ಅದೆಷ್ಟೋ ಜನರಿಗೆ ಸುಲಭವಾಗಿ ಸಿಗುತ್ತದೆ. ನಮಗೆ ಇದು ಸರಿ ಎನಿಸುತ್ತದೆಯೇ? ಅವರಲ್ಲಿ ಕೇಳದೇನೆ ನಾವು ನಮ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ತಪ್ಪಲ್ಲವೇ?
ಟ್ರೂ ಕಾಲರ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
ನಾವು ಟ್ರೂ ಕಾಲರ್ ಆ್ಯಪ್ ಅನ್ನು ನಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿದಾಗ ಅದು ಸುಲಭವಾಗಿ ನಮ್ಮ ಫೋನ್ ನಲ್ಲಿರುವ ಪ್ರತಿಯೊಂದು ಕಾಂಟ್ಯಾಕ್ಟ್ ನಂಬರ್ ಮತ್ತು ಇತರ ಮಾಹಿತಿಗಳನ್ನು ತನ್ನ ಸರ್ವರ್ ಗೆ ರವಾನೆ ಮಾಡುತ್ತದೆ. ಯಾರಾದರೂ ಒಂದು ಮೊಬೈಲ್ ನಂಬರ್ ಅಥವಾ ಒಂದು ಹೆಸರನ್ನು ಸರ್ಚ್ ಮಾಡಿದಾಗ ಟ್ರೂ ಕಾಲರ್ ನಮ್ಮಿಂದ ಪಡೆದುಕೊಂಡ ಮಾಹಿತಿಗಳನ್ನು, ನಂಬರ್ ಗಳನ್ನು ಹುಡುಕುವವರಿಗೆ ರಿಸಲ್ಟ್ ಆಗಿ ಕೊಡುತ್ತದೆ. ಟ್ರೂ ಕಾಲರ್ ಕೆಲಸ ಮಾಡುವುದೇ ಹೀಗೆ… ಪ್ರಪಂಚಾದಾದ್ಯಂತ ಇರುವ ಎಲ್ಲಾ ಫೋನ್ ನಂಬರ್ ಗಳನ್ನು, ಹೆಸರು ಸಮೇತ ಪಡೆದುಕೊಂಡು ಅದನ್ನೇ ಇನ್ನೊಂದು ರೂಪದಲ್ಲಿ ನಮಗೆ ಒದಗಿಸುತ್ತದೆ.
ನಾವು ಟ್ರೂ ಕಾಲರ್ ಆ್ಯಪ್ ನಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಮಾಡದೇ ಇದ್ದರೂ, ನಾವು ಟ್ರೂ ಕಾಲರ್ ವೆಬ್ ಸೈಟ್ ನಲ್ಲಿ ಯಾವುದಾದರೂ ಹೆಸರು ಮತ್ತು ನಂಬರ್ ಹುಡುಕಲು ಹೋದರೆ ಅದು ನಮ್ಮನ್ನು ಫೇಸ್ ಬುಕ್, ಗೂಗಲ್, ಯಾಹೂ ಅಥವಾ ಮೈಕ್ರೋಸಾಫ್ಟ್ ಖಾತೆಗಳ ಮೂಲಕ ಸೈನ್ ಇನ್ ಆಗಲು ಸೂಚಿಸುತ್ತದೆ. ಯಾಕೆಂದರೆ ಹೆಚ್ಚಿನ ಜನರು ತಮ್ಮ ಫೋನ್ ನಂಬರ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುತ್ತೇವೆ. ಹೀಗೆ ನಾವು ನಮ್ಮ ಸಾಮಾಜಿಕ ಪ್ರೊಫೈಲ್ ಗಳ ಮೂಲಕ ಟ್ರೂ ಕಾಲರ್ ವೆಬ್ ಸೈಟ್ ಗೆ ಹೋದಾಗ ಅದು ನಮ್ಮ ಮತ್ತು ನಿಮ್ಮ ಗೆಳೆಯರ ನಂಬರ್ ಮತ್ತು ಹೆಸರುಗಳನ್ನೂ ಕಸಿದುಕೊಳ್ಳುತ್ತದೆ.
ಯಾಕೆ ಉಪಯೋಗಿಸಬಾರದು?
ಈ ಆ್ಯಪ್ ಅನಗತ್ಯ ಸ್ಪ್ಯಾಮ್ ಕಾಲ್ ಗಳನ್ನು ತಡೆಗಟ್ಟುವುದು ತಮ್ಮ ಪ್ರಥಮ ಕೆಲಸ ಎಂದು ಹೇಳಿಕೊಳ್ಳುತ್ತದೆ. ಆದರೆ ನಿಜವಾದ ವಿಷಯ ಏನೆಂದರೆ, ಈ ಆ್ಯಪ್ ಬಳಸಿದರೆ, ಅನಗತ್ಯ ಕರೆಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಆ್ಯಪ್ ಬಳಸದೇ ಇದ್ದರೂ ನೀಮಗೆ ಅಪರಿಚಿತ ಕರೆ ಬರುತ್ತಿದ್ದರೆ, ನಿಮ್ಮ ಕಾಲ್ ಲಿಸ್ಟ್ ನಲ್ಲಿರುವ ಗೆಳೆಯರು ಈ ಆ್ಯಪ್ ಬಳಸುತ್ತಿದ್ದಾರೆ. ಅದು ಪರಿಣಾಮ ಇದು ಎಂದು ನೀವು ಅರಿತುಕೊಳ್ಳಬೇಕು.
ನಾವೇನು ಮಾಡಬೇಕು?
ನಿಮ್ಮ ಮಾಹಿತಿಯನ್ನು ಆದಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಷೇರ್ ಮಾಡದೆ ಗುಪ್ತವಾಗಿಡುವುದು ಸುರಕ್ಷಿತ ವಿಧಾನ.ನೀವು ಅಂತರ್ಜಾಲದಲ್ಲಿ ಏನೆಲ್ಲಾ ಮಾಹಿತಿ ಹಾಕುತ್ತೀರೋ ಅದೆಲ್ಲಾ ಸಾರ್ವಜನಿಕವಾಗಿ ತಕ್ಷಣ ಅಥವಾ ಸ್ವಲ್ಪ ತಡವಾಗಿಯಾದರೂ ಬಹಿರಂಗವಾಗುತ್ತದೆ ಎಂದು ನೆನಪಿರಲಿ.
ಇಷ್ಟೆಲ್ಲಾ ತಿಳಿದ ಮೇಲೆ ನಿಮಗೇನಾದರೂ ಟ್ರೂ ಕಾಲರ್ ಆ್ಯಪ್ ನಿಂದ ಹೊರ ಬರಬೇಕು ಅನಿಸಿದರೆ, ತಡಮಾಡಬೇಡಿ ಟ್ರೂ ಕಾಲರ್ ಆ್ಯಪ್ ಗೆ ಹೋಗಿ ಅನ್-ಲಿಸ್ಟ್ ಗೆ ಕ್ಲಿಕ್ ಮಾಡಿ. ಅಷ್ಟೇ! ನೀವು ಅಲ್ಲಿಂದ ಹೊರ ಬಂದಾಯ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ: ನಿಮ್ಮದೇ ಆದ ಭಾವನಾಲೋಕದಲ್ಲಿನ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆ ತರಬಲ್ಲವು. ಎಚ್ಚರ. .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121 ಮಿಥುನ ಸೂಕ್ಷ್ಮವಾಗಿ ಯೋಚಿಸಿ, ವಿಷಯವೊಂದನ್ನು…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…
ಕನ್ನಡ ಚಿತ್ರ ರಂಗದ ನವರಸನಾಯಕ ನಟ ಮತ್ತು ರಾಜಕಾರಣಿ ಜಗ್ಗೇಶ್’ರವರು ಮಾಡಿದ ಒಂದು ಟ್ವೀಟ್ ಕಾರಣದಿಂದಾಗಿ ವಿವಾದದಲ್ಲಿ ಸಿಲುಕಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮತದಾನ ಪ್ರತಿಯೊಬ್ಬರ ಹಕ್ಕು. ಆದರೆ ಎಲ್ಲಾ ಸರಿಯಿದ್ದರೂ ತಮ್ಮ ಹಕ್ಕು ಚಲಾಯಿಸದೇ ಅವರು ಸರಿ ಇಲ್ಲ ಇವರು ಸರಿ ಇಲ್ಲ ಅಂತ ಮಾತನಾಡುವವರೇ ಹೆಚ್ಚು. ಆದರೆ ತನ್ನ ಎರಡೂ ಕೈ ಇಲ್ಲದಿದ್ದರೂ ಕಾಲಿನಿಂದಲೇ ಯುವತಿಯೊಬ್ಬರು ಮತದಾನ ಮಾಡಿದ್ದಾರೆ. ಹೌದು, ಕಾನಹೊಸಳ್ಳಿಯ ಲಕ್ಷ್ಮಿಯವರಿಗೆ ಎರಡೂ ಕೈಗಳಿಲ್ಲ. ಆದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳದ ಲಕ್ಷ್ಮಿ ಕಾಲುಗಳಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಂಡಮುಣುಗಿಯ ಮತಗಟ್ಟೆ ಸಂಖ್ಯೆ 118 ರಲ್ಲಿ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಎರಡೂ ಕೈಯಿಲ್ಲದ ಲಕ್ಷ್ಮಿಯವರಿಗೆ ಚುನಾವಣಾ ಸಿಬ್ಬಂದಿ…
‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ತಮ್ಮ ಗಾಯನದಿಂದಲೇ ಮೋಡಿ ಮಾಡಿದ ಸಂಗೀತ ಮಾಂತ್ರಿಕ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಜಯಗಳಿಸಿದ್ದಾರೆ.ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.
ಈಗಂತೂ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಆವಳಿ ತುಂಬಾ ಜೋರಾಗಿದ್ದು, ಅವರಿಗೆ ಲಗಾಮು ಹಾಕುವವರೇ ಇಲ್ಲದಂತಾಗಿತ್ತು.ಪೋಷಕರು ಸಹ ತಮ್ಮ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಕಷ್ಟವಾದರೂ ಸರಿಯೇ, ಬೇರೆ ದಾರಿಯಿಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅತೀ ಹೆಚ್ಚು ಶುಲ್ಕ ಕೊಡುತ್ತಾ ಬಂದಿದ್ದಾರೆ. ಇದರ ಬಗ್ಗೆ ಸರಕಾರಕ್ಕೆ ಹಲವು ದೂರುಗಳು ಸಹ ಬಂದಿವೆ.ಇದಕ್ಕೆ ಸ್ಪಂದಿಸಿರುವ ಸರ್ಕಾರ ಹೊಸದಾದ ಕಾಯಿದೆಯನ್ನು ತಂದಿದ್ದಾರೆ.ಅದೆಂದರೆ ಪೋಷಕರು ಅತೀ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ ಎಂದು. ಹೌದು,ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಶುಲ್ಕಾ ಪಟ್ಟಿಯನ್ನು…