karnataka

ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

1313

ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.

ಉದಯ ನ್ಯೂಸ್ ಸಿಬ್ಬಂದಿಗಳಿಗೆ ಸಂಚಕಾರ..!

ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ ಮಾಲೀಕ ಕಲಾನಿಧಿ ಮಾರನ್ 73 ಸಿಬ್ಬಂದಿಗಳ ಉದ್ಯೋಗ ಖಾತ್ರಿಯನ್ನು ಕಿತ್ತುಕೊಳ್ಳಲು ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಿದ್ದಾರೆ. ಕಾರ್ಪೊರೇಟ್ ಭ್ರಮೆಯಲ್ಲಿ ಮಿಂದೇಳುತ್ತಿರುವ ದೇಶದಲ್ಲಿ, ಬೃಹತ್ ಕಾರ್ಪೊರೇಟ್ ಮಾಧ್ಯಮ ಸಂಸ್ಥೆಯೊಂದು ಹೇಗೆ ತನ್ನ ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.

ಕರ್ನಾಟಕದ ಮೊದಲ ಖಾಸಗಿ ಚಾನೆಲ್…

ಕರ್ನಾಟಕದ ಖಾಸಗಿ ಟಿವಿ ವಲಯಕ್ಕೆ ಮೊದಲು ಕಾಲಿಟ್ಟಿದ್ದು ಉದಯ ಟಿವಿ. ಸುಮಾರು 19 ವರ್ಷಗಳ ಹಿಂದೆ ರಾಜ್ಯದಲ್ಲಿ ಡಿಡಿ 1 ಹಾಗೂ ಚಂದನ ವಾಹಿನಿಗಳು ನೀಡುತ್ತಿದ್ದ ಮನೋರಂಜನೆಯನ್ನು ಸ್ಥಿತ್ಯಂತರಗೊಳಿಸಿದ್ದು ತಮಿಳುನಾಡು ಮೂಲದ ‘ಸನ್ ನೆಟ್ವರ್ಕ್’ ಮಾಧ್ಯಮ ಸಂಸ್ಥೆ. ಉದಯ ಟಿವಿ ಹೆಸರಿನಲ್ಲಿ ಅದು ಮೊದಲು ತನ್ನ ಕಾರ್ಯಾಚರಣೆ ಶುರು ಮಾಡುತ್ತಿದ್ದಂತೆ ಜನ ಕೂಡ ಹೊಸ ಮಾದರಿಯ ಮನೋರಂಜನೆಗೆ ಒಗ್ಗಿಕೊಂಡರು. ಅಲ್ಲಿಂದ ಸುಮಾರು ಒಂದೂವರೆ ದಶಕಗಳ ಕಾಲ ಕರ್ನಾಟಕದ ಮನೋರಂಜನಾ ಲೋಕದ ಅನಭಿಷಕ್ತ ದೊರೆಯಾಗಿ ಉದಯ ಟಿವಿ ಆಳ್ವಿಕೆ ನಡೆಸಿತು.

ಹೀಗಿರುವಾಗಲೇ, 2000ನೇ ಇಸವಿಯಲ್ಲಿ ನಟ ರಾಜ್ ಕುಮಾರ್ ಅಪಹರಣ ಪ್ರಕರಣ ನಡೆಯಿತು. ತನ್ನ ಬಳಿ ಇದ್ದ ಸುದ್ದಿ ವಾಹಿನಿಯ ಪರವಾನಗಿಯನ್ನು ಅನುಷ್ಠಾನಕ್ಕೆ ಇಳಿಸಲು ‘ಸನ್ ನೆಟ್ವರ್ಕ್’ ಮುಂದಾಯಿತು. ಹಾಗೆ ತರಾತುರಿಯಲ್ಲಿ ಆರಂಭಗೊಂಡಿದ್ದು ‘ಉದಯ ನ್ಯೂಸ್’. “ಅವತ್ತು ಹೆಚ್ಚಿನ ಸಿದ್ದತೆಗಳೂ ಇರಲಿಲ್ಲ.

ಉದಯ ಮನೋರಂಜನಾ ವಾಹಿನಿಯಲ್ಲಿದ್ದ ಸಿಬ್ಬಂದಿಗಳನ್ನೇ ಹೊಸ ನ್ಯೂಸ್ ಚಾನಲ್ಗೆ ವರ್ಗಾವಣೆ ಮಾಡಲಾಯಿತು. ತಾಂತ್ರಿಕ ಉಪಕರಣಗಳನ್ನು ಎರವಲು ಪಡೆಯಲಾಯಿತು. ಮೊನ್ನೆ ಮೊನ್ನೆವರೆಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಮಾಡಲು ಒದ್ದಾಡುತ್ತಿದ್ದೆವು. ಈಗಿರುವುದು 3 ವಿಡಿಯೋ ಎಡಿಟರ್ಗಳು, ಡೆಸ್ಕ್ನಲ್ಲಿ ಐವರು ಸಿಬ್ಬಂದಿ. ಕಳಪೆ ಮಟ್ಟದ ಸೌಕರ್ಯ ನೀಡಿ ರೇಟಿಂಗ್ ತನ್ನಿ ಎಂದರೆ ಹೇಗೆ ಸಾಧ್ಯ?” ಎನ್ನುತ್ತಾರೆ ಉದಯ ನ್ಯೂಸ್ ಹಿರಿಯ ಸಿಬ್ಬಂದಿಯೊಬ್ಬರು.

ಇವತ್ತಿಗೂ ಕಡಿಮೆ ಖರ್ಚಿನಲ್ಲಿ ನಡೆಯುತ್ತಿರುವ ಸುದ್ದಿವಾಹಿನಿ…

ಇವತ್ತಿಗೆ ಡಜನ್ ಸಂಖ್ಯೆ ಮುಟ್ಟಿರುವ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಚರಣೆ ನಡೆಸುತ್ತಿರುವುದು ‘ಉದಯ ನ್ಯೂಸ್’. ಇಲ್ಲಿನ ಆಂತರಿಕ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, “ಪ್ರತಿ ತಿಂಗಳು ಸುದ್ದಿ ವಾಹಿನಿಗೆ ಖರ್ಚಾಗುತ್ತಿರುವುದು 25 ಲಕ್ಷ ರೂಪಾಯಿಗಳು. ಇದರಲ್ಲಿ ಸಂಸ್ಥೆಯಲ್ಲಿರುವ 73 ಸಿಬ್ಬಂದಿಗಳಿಗೆ ಸಂಬಳ ರೂಪದಲ್ಲಿ ವೆಚ್ಚ ಮಾಡುತ್ತಿದ್ದದ್ದು 13 ಲಕ್ಷ. ಜತೆಗೆ ಇದಕ್ಕೆ ಪ್ರತ್ಯೇಕವಾದ ಮಾರ್ಕೆಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.”

ಚಾನಲ್ ಮುಚ್ಚುವ ಬಗ್ಗೆ ಸಂಸ್ಥೆ ಲೇಬರ್ ಕಮಿಷನರ್ ಗೆ ಬರೆದ ಪತ್ರ:-

ಕಳೆದ ನಾಲ್ಕು ವರ್ಷಗಳಿಂದ ‘ಉದಯ ನ್ಯೂಸ್’ ಮುಚ್ಚಲಾಗುತ್ತಂತೆ ಅನ್ನುವ ವರ್ತಮಾನ ಇಲ್ಲಿನ ಸಿಬ್ಬಂದಿಗಳಿಗೆ ಸಾಮಾನ್ಯ ಸಂಗತಿಯಾಗಿ ಬದಲಾಗಿತ್ತು. ಮೊದಲು ಬಾಯ್ಮಾತಿನಲ್ಲಿ, ಗಾಳಿ ಸುದ್ದಿ ರೂಪದಲ್ಲಿದ್ದ ಈ ಸುದ್ದಿ ಇತ್ತೀಚೆಗೆ ‘ಸನ್ ನೆಟ್ವರ್ಕ್’ ಕಡೆಯಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಸಲ್ಲಿಸಿದ ‘ಫಾರ್ಮ್ ಕ್ಯೂ’ ರೂಪದಲ್ಲಿ ವಾಸ್ತವದ ಸ್ವರೂಪ ಪಡೆದುಕೊಂಡಿದೆ.

ಕಾರ್ಮಿಕ ವಿವಾದಗಳ ಕಾಯ್ದೆ ಪ್ರಕಾರ 50 ಜನ ಮೀರಿರುವ ಸಂಸ್ಥೆಯನ್ನು ಮುಚ್ಚುವ ಮುನ್ನ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇದನ್ನೀಗ ‘ಸನ್ ನೆಟ್ವರ್ಕ್’ ಪಾಲಿಸಿದೆ. ಜತೆಗೆ, ‘ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ, ನಷ್ಟದಲ್ಲಿರುವ ಸಂಸ್ಥೆ’ಯನ್ನು ಮುಚ್ಚುವುದಾಗಿ ಕಾರಣವನ್ನೂ ನೀಡಿದೆ.

 “ಮಾರನ್ ದಂಪತಿ ಸಂಸ್ಥೆಯಿಂದ ಪಡೆದ ಸಂಬಳ, ಭತ್ಯೆಗಳಿಗೆ ಹೋಲಿಸಿದರೆ ಉದಯ ನ್ಯೂಸ್ ಕಾರ್ಯಾಚರಣೆಗೆ ಖರ್ಚಾಗುತ್ತಿರುವುದು ಅತ್ಯಂತ ಕಡಿಮೆ ಹಣ.

ಮಾರನ್ ಮಗಳ ಪಾಕೆಟ್ ಮನಿಯಲ್ಲಿ ಈ ವಾಹಿನಿಯನ್ನು ಮುನ್ನಡೆಸಬಹುದು,” ಎನ್ನುತ್ತಾರೆ ವಾಹಿನಿಯ ಜತೆ ಹಲವು ವರ್ಷಗಳ ಒಡನಾಟ ಹೊಂದಿರುವ ಪತ್ರಕರ್ತರೊಬ್ಬರು.

ಮುಂದೆ ಏನಾಗಬಹುದು…

2010ರಲ್ಲಿ ಕರ್ನಾಟಕದಲ್ಲಿಯೂ ಉದಯ ಟಿವಿ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದರು. “ಆ ದಿನಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೆವು. ನಮ್ಮ ನಾಯಕತ್ವವಹಿಸಿಕೊಂಡ ಕೆಲವರು ಕೊನೆಗೆ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಟ್ಟರು. ಹೀಗಾಗಿ ಈ ಬಾರಿ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.

ಈಗ ನೋಟಿಸ್ ನೀಡಿರುವುದನ್ನು ನೋಡಿದರೆ, ಆಡಳಿತ ಮಂಡಳಿ ಉದ್ಯೋಗಿಗಳ ಮುಂದಿನ ನಡೆ ಏನು ಎಂಬುದನ್ನು ಗಮನಿಸುವ ತಂತ್ರವೂ ಆಗಿರಬಹುದು. ಇಲ್ಲಿ 73 ಸಿಬ್ಬಂದಿಗಳಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿಗಳ ಸಂಖ್ಯೆ 20 ದಾಟುವುದಿಲ್ಲ,” ಎನ್ನುತ್ತಾರೆ ಉಯದ ನ್ಯೂಸ್ ನ ಮತ್ತೊಬ್ಬ ಹಿರಿಯ ಉದ್ಯೋಗಿ ಒಬ್ಬರು.

ಒಂದು ಬೃಹತ್ ಕಾರ್ಪೊರೇಟ್ ಸಂಸ್ಥೆ, ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವನ್ನು ಘೋಷಿಸಿಕೊಂಡು ಬರುತ್ತಿರುವ ಸಾಮ್ರಾಜ್ಯ, ಕೋಟಿ ಲೆಕ್ಕದಲ್ಲಿ ಸಂಬಳ, ಭತ್ಯೆಗಳನ್ನು ಪಡೆಯುವ ಅದರ ಮಾಲೀಕರು ಹೀಗೆ ಕೆಳಹಂತದ ವಿಚಾರದಲ್ಲಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟವಾಗಿ ಬಿಡಿಸಿಡುತ್ತಿದೆ.

ಸುದ್ದಿವಲಯದ ಸಹೋದ್ಯೋಗಿಗಳ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು..?

ಊರ ತುಂಬಾ ಅನ್ಯಾಯಗಳು ನಡೆದಾಗ ಧ್ವನಿ ಎತ್ತುತ್ತೀವಿ ಎನ್ನುವ ಮಾಧ್ಯಮಗಳು, ತಮ್ಮದೇ ವಲಯದ ಸಹೋದ್ಯೋಗಿಗಳು ಸಂಕಷ್ಟಕ್ಕೆ ಸಿಕ್ಕಾಗ ಮೌನಕ್ಕೆ ಶರಣಾಗುತ್ತವೆ. ಇದಕ್ಕಿಂತ ಕ್ರೂರವಾದುದ್ದು ಏನೆಂದರೆ, ಒಂದು ವೇಳೆ ಅನ್ಯಾಯವನ್ನು ಪ್ರಶ್ನಿಸಿದರೆ, ಅಂತಹ ಪತ್ರಕರ್ತರನ್ನು ಹಣಿಯುವ ಮಟ್ಟಕ್ಕೂ ಇಳಿದು ಬಿಡುತ್ತಾರೆ. ಇಂತಹ ಅಸಹ್ಯಕರ ಇತಿಹಾಸಗಳನ್ನು ಹೊಂದಿರುವ ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಈಗ ಅಭದ್ರತೆಯ ಭಾವಗಳನ್ನು ‘ಉದಯ ನ್ಯೂಸ್’ ಸಿಬ್ಬಂದಿಗಳು ಎದುರಿಸುತ್ತಿದ್ದಾರೆ.

ಮೂಲ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಇದು ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ! ಈ ಲೇಖನಿ ಓದಿ ಶಾಕ್ ಆಗ್ತೀರಾ…

    ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ

  • ಆರೋಗ್ಯ

    ಕ್ಯಾರೆಟ್ ನ ಉಪಯೋಗಗಳು ಗೊತ್ತಾದ್ರೆ ಅಚ್ಚರಿ ಪಡ್ತಿರಾ.! ಈ ಮಾಹಿತಿ ನೋಡಿ.

    ಆರೋಗ್ಯ ತಜ್ಞರ ಪ್ರಕಾರ  ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಸಾಧ್ಯವಾದಷ್ಟು ತಮ್ಮ ಆಹಾರಕ್ರಮದಲ್ಲಿ ಕ್ಯಾರೆಟ್‌ನ್ನು ಸೇವಿಸಬೇಕಂತೆ. ಕ್ಯಾರೆಟ್ ಅನ್ನು ಹೆಚ್ಚಾಗಿ ಮಕ್ಕಳಿಗೆ ನೀಡಬೇಕು. ಇದರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುವುದರ ಜೊತೆಗೆ ಅವರುಗಳಲ್ಲಿ ಮೂಳೆಗಳು ಸದೃಢಗೊಳ್ಳುತ್ತವೆ. ನಿತ್ಯದಲ್ಲೂ ಅವರಿಗೆ ಲಂಚ್ ಬಾಕ್ಸ್ಗಳಿಗೆ ಪೀಸ್ಗಳನ್ನೂ ಹಾಕಬೇಕು, ಅವರಿಗೆ 2 ದಿನೊಕೊಮ್ಮೆ ಅದರಲ್ಲಿ ಪಾಯಸ ಮಾಡಿ ಕೊಡಬೇಕು. ಇಲ್ಲದೆ ಹೋದಲ್ಲಿ ಚಿಕ್ಕ ತುಂಡುಗಳನ್ನು ಮಾಡಿ ಅದರ ಮೇಲೆ ಸ್ವಲ್ಪ ಉಪ್ಪು ಪೆಪ್ಪರ್/ ಮೆಣಸಿನ ಪುಡಿ ಹಾಕಿ…

  • ಸುದ್ದಿ

    ‘ಪಿತೃ ಪಕ್ಷ’ಕ್ಕೂ ಮಹಾಭಾರತದ ಕರ್ಣನಿಗೂ ಏನು ಸಂಬಂಧ ಗೊತ್ತ….!

    ಗತಿಸಿದ ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಈ ಮಾಸಾಂತ್ಯದವರೆಗೆ ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಪಿತೃಪಕ್ಷದ ಪರಂಪರೆ ನಡೆದುಕೊಂಡು ಬಂದಿದೆ. ಮಹಾಭಾರತದಲ್ಲಿ ತನ್ನ ಕರ್ಣಕುಂಡಲವನ್ನು ಕೊಟ್ಟು ಮರಣವನ್ನಪ್ಪಿದ ಕರ್ಣ, ಸ್ವರ್ಗ ಲೋಕಕ್ಕೆ ಹೋದ ವೇಳೆ ಆಹಾರವಾಗಿ ವಜ್ರ, ವೈಢೂರ್ಯಗಳನ್ನು ನೀಡಲಾಗುತ್ತದೆ. ಆಗ ಕರ್ಣ ಈ ಕುರಿತು ಪ್ರಶ್ನಿಸಿದಾಗ, ಹಿರಿಯರಿಗೆ ಶ್ರಾದ್ದ ಮಾಡದ ಹಿನ್ನಲೆಯಲ್ಲಿ ಕರ್ಣ ಮಾಡಿದ ದಾನಕ್ಕೆ ಅನುಸಾರವಾಗಿ ಇದನ್ನು ನೀಡಲಾಗುತ್ತದೆ ಎನ್ನಲಾಗುತ್ತದೆ….

  • ರಾಜಕೀಯ

    ಕಾಂಗ್ರೆಸ್ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

    ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ( Congress Candidate List ) 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈಲನ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೊದಲು 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸಿಂಗಲ್ ಅಭ್ಯರ್ಥಿಗಳಿರುವಂತ 124 ಕ್ಷೇತ್ರಗಳಿಗೆ…

  • ಸಿನಿಮಾ

    ‘ಒಂದು ಮೊಟ್ಟೆಯ ಕಥೆ’ಇದು ಕನ್ನಡದ ಸಿನಿಮಾ!ಈ ಸಿನಿಮಾ ಹೇಗಿದೆ ಗೊತ್ತಾ?ಈ ಲೇಖನಿ ಓದಿ…

    ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.