karnataka

ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

1316

ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.

ಉದಯ ನ್ಯೂಸ್ ಸಿಬ್ಬಂದಿಗಳಿಗೆ ಸಂಚಕಾರ..!

ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ ಮಾಲೀಕ ಕಲಾನಿಧಿ ಮಾರನ್ 73 ಸಿಬ್ಬಂದಿಗಳ ಉದ್ಯೋಗ ಖಾತ್ರಿಯನ್ನು ಕಿತ್ತುಕೊಳ್ಳಲು ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಿದ್ದಾರೆ. ಕಾರ್ಪೊರೇಟ್ ಭ್ರಮೆಯಲ್ಲಿ ಮಿಂದೇಳುತ್ತಿರುವ ದೇಶದಲ್ಲಿ, ಬೃಹತ್ ಕಾರ್ಪೊರೇಟ್ ಮಾಧ್ಯಮ ಸಂಸ್ಥೆಯೊಂದು ಹೇಗೆ ತನ್ನ ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.

ಕರ್ನಾಟಕದ ಮೊದಲ ಖಾಸಗಿ ಚಾನೆಲ್…

ಕರ್ನಾಟಕದ ಖಾಸಗಿ ಟಿವಿ ವಲಯಕ್ಕೆ ಮೊದಲು ಕಾಲಿಟ್ಟಿದ್ದು ಉದಯ ಟಿವಿ. ಸುಮಾರು 19 ವರ್ಷಗಳ ಹಿಂದೆ ರಾಜ್ಯದಲ್ಲಿ ಡಿಡಿ 1 ಹಾಗೂ ಚಂದನ ವಾಹಿನಿಗಳು ನೀಡುತ್ತಿದ್ದ ಮನೋರಂಜನೆಯನ್ನು ಸ್ಥಿತ್ಯಂತರಗೊಳಿಸಿದ್ದು ತಮಿಳುನಾಡು ಮೂಲದ ‘ಸನ್ ನೆಟ್ವರ್ಕ್’ ಮಾಧ್ಯಮ ಸಂಸ್ಥೆ. ಉದಯ ಟಿವಿ ಹೆಸರಿನಲ್ಲಿ ಅದು ಮೊದಲು ತನ್ನ ಕಾರ್ಯಾಚರಣೆ ಶುರು ಮಾಡುತ್ತಿದ್ದಂತೆ ಜನ ಕೂಡ ಹೊಸ ಮಾದರಿಯ ಮನೋರಂಜನೆಗೆ ಒಗ್ಗಿಕೊಂಡರು. ಅಲ್ಲಿಂದ ಸುಮಾರು ಒಂದೂವರೆ ದಶಕಗಳ ಕಾಲ ಕರ್ನಾಟಕದ ಮನೋರಂಜನಾ ಲೋಕದ ಅನಭಿಷಕ್ತ ದೊರೆಯಾಗಿ ಉದಯ ಟಿವಿ ಆಳ್ವಿಕೆ ನಡೆಸಿತು.

ಹೀಗಿರುವಾಗಲೇ, 2000ನೇ ಇಸವಿಯಲ್ಲಿ ನಟ ರಾಜ್ ಕುಮಾರ್ ಅಪಹರಣ ಪ್ರಕರಣ ನಡೆಯಿತು. ತನ್ನ ಬಳಿ ಇದ್ದ ಸುದ್ದಿ ವಾಹಿನಿಯ ಪರವಾನಗಿಯನ್ನು ಅನುಷ್ಠಾನಕ್ಕೆ ಇಳಿಸಲು ‘ಸನ್ ನೆಟ್ವರ್ಕ್’ ಮುಂದಾಯಿತು. ಹಾಗೆ ತರಾತುರಿಯಲ್ಲಿ ಆರಂಭಗೊಂಡಿದ್ದು ‘ಉದಯ ನ್ಯೂಸ್’. “ಅವತ್ತು ಹೆಚ್ಚಿನ ಸಿದ್ದತೆಗಳೂ ಇರಲಿಲ್ಲ.

ಉದಯ ಮನೋರಂಜನಾ ವಾಹಿನಿಯಲ್ಲಿದ್ದ ಸಿಬ್ಬಂದಿಗಳನ್ನೇ ಹೊಸ ನ್ಯೂಸ್ ಚಾನಲ್ಗೆ ವರ್ಗಾವಣೆ ಮಾಡಲಾಯಿತು. ತಾಂತ್ರಿಕ ಉಪಕರಣಗಳನ್ನು ಎರವಲು ಪಡೆಯಲಾಯಿತು. ಮೊನ್ನೆ ಮೊನ್ನೆವರೆಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಮಾಡಲು ಒದ್ದಾಡುತ್ತಿದ್ದೆವು. ಈಗಿರುವುದು 3 ವಿಡಿಯೋ ಎಡಿಟರ್ಗಳು, ಡೆಸ್ಕ್ನಲ್ಲಿ ಐವರು ಸಿಬ್ಬಂದಿ. ಕಳಪೆ ಮಟ್ಟದ ಸೌಕರ್ಯ ನೀಡಿ ರೇಟಿಂಗ್ ತನ್ನಿ ಎಂದರೆ ಹೇಗೆ ಸಾಧ್ಯ?” ಎನ್ನುತ್ತಾರೆ ಉದಯ ನ್ಯೂಸ್ ಹಿರಿಯ ಸಿಬ್ಬಂದಿಯೊಬ್ಬರು.

ಇವತ್ತಿಗೂ ಕಡಿಮೆ ಖರ್ಚಿನಲ್ಲಿ ನಡೆಯುತ್ತಿರುವ ಸುದ್ದಿವಾಹಿನಿ…

ಇವತ್ತಿಗೆ ಡಜನ್ ಸಂಖ್ಯೆ ಮುಟ್ಟಿರುವ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಚರಣೆ ನಡೆಸುತ್ತಿರುವುದು ‘ಉದಯ ನ್ಯೂಸ್’. ಇಲ್ಲಿನ ಆಂತರಿಕ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, “ಪ್ರತಿ ತಿಂಗಳು ಸುದ್ದಿ ವಾಹಿನಿಗೆ ಖರ್ಚಾಗುತ್ತಿರುವುದು 25 ಲಕ್ಷ ರೂಪಾಯಿಗಳು. ಇದರಲ್ಲಿ ಸಂಸ್ಥೆಯಲ್ಲಿರುವ 73 ಸಿಬ್ಬಂದಿಗಳಿಗೆ ಸಂಬಳ ರೂಪದಲ್ಲಿ ವೆಚ್ಚ ಮಾಡುತ್ತಿದ್ದದ್ದು 13 ಲಕ್ಷ. ಜತೆಗೆ ಇದಕ್ಕೆ ಪ್ರತ್ಯೇಕವಾದ ಮಾರ್ಕೆಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.”

ಚಾನಲ್ ಮುಚ್ಚುವ ಬಗ್ಗೆ ಸಂಸ್ಥೆ ಲೇಬರ್ ಕಮಿಷನರ್ ಗೆ ಬರೆದ ಪತ್ರ:-

ಕಳೆದ ನಾಲ್ಕು ವರ್ಷಗಳಿಂದ ‘ಉದಯ ನ್ಯೂಸ್’ ಮುಚ್ಚಲಾಗುತ್ತಂತೆ ಅನ್ನುವ ವರ್ತಮಾನ ಇಲ್ಲಿನ ಸಿಬ್ಬಂದಿಗಳಿಗೆ ಸಾಮಾನ್ಯ ಸಂಗತಿಯಾಗಿ ಬದಲಾಗಿತ್ತು. ಮೊದಲು ಬಾಯ್ಮಾತಿನಲ್ಲಿ, ಗಾಳಿ ಸುದ್ದಿ ರೂಪದಲ್ಲಿದ್ದ ಈ ಸುದ್ದಿ ಇತ್ತೀಚೆಗೆ ‘ಸನ್ ನೆಟ್ವರ್ಕ್’ ಕಡೆಯಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಸಲ್ಲಿಸಿದ ‘ಫಾರ್ಮ್ ಕ್ಯೂ’ ರೂಪದಲ್ಲಿ ವಾಸ್ತವದ ಸ್ವರೂಪ ಪಡೆದುಕೊಂಡಿದೆ.

ಕಾರ್ಮಿಕ ವಿವಾದಗಳ ಕಾಯ್ದೆ ಪ್ರಕಾರ 50 ಜನ ಮೀರಿರುವ ಸಂಸ್ಥೆಯನ್ನು ಮುಚ್ಚುವ ಮುನ್ನ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇದನ್ನೀಗ ‘ಸನ್ ನೆಟ್ವರ್ಕ್’ ಪಾಲಿಸಿದೆ. ಜತೆಗೆ, ‘ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ, ನಷ್ಟದಲ್ಲಿರುವ ಸಂಸ್ಥೆ’ಯನ್ನು ಮುಚ್ಚುವುದಾಗಿ ಕಾರಣವನ್ನೂ ನೀಡಿದೆ.

 “ಮಾರನ್ ದಂಪತಿ ಸಂಸ್ಥೆಯಿಂದ ಪಡೆದ ಸಂಬಳ, ಭತ್ಯೆಗಳಿಗೆ ಹೋಲಿಸಿದರೆ ಉದಯ ನ್ಯೂಸ್ ಕಾರ್ಯಾಚರಣೆಗೆ ಖರ್ಚಾಗುತ್ತಿರುವುದು ಅತ್ಯಂತ ಕಡಿಮೆ ಹಣ.

ಮಾರನ್ ಮಗಳ ಪಾಕೆಟ್ ಮನಿಯಲ್ಲಿ ಈ ವಾಹಿನಿಯನ್ನು ಮುನ್ನಡೆಸಬಹುದು,” ಎನ್ನುತ್ತಾರೆ ವಾಹಿನಿಯ ಜತೆ ಹಲವು ವರ್ಷಗಳ ಒಡನಾಟ ಹೊಂದಿರುವ ಪತ್ರಕರ್ತರೊಬ್ಬರು.

ಮುಂದೆ ಏನಾಗಬಹುದು…

2010ರಲ್ಲಿ ಕರ್ನಾಟಕದಲ್ಲಿಯೂ ಉದಯ ಟಿವಿ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದರು. “ಆ ದಿನಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೆವು. ನಮ್ಮ ನಾಯಕತ್ವವಹಿಸಿಕೊಂಡ ಕೆಲವರು ಕೊನೆಗೆ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಟ್ಟರು. ಹೀಗಾಗಿ ಈ ಬಾರಿ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.

ಈಗ ನೋಟಿಸ್ ನೀಡಿರುವುದನ್ನು ನೋಡಿದರೆ, ಆಡಳಿತ ಮಂಡಳಿ ಉದ್ಯೋಗಿಗಳ ಮುಂದಿನ ನಡೆ ಏನು ಎಂಬುದನ್ನು ಗಮನಿಸುವ ತಂತ್ರವೂ ಆಗಿರಬಹುದು. ಇಲ್ಲಿ 73 ಸಿಬ್ಬಂದಿಗಳಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿಗಳ ಸಂಖ್ಯೆ 20 ದಾಟುವುದಿಲ್ಲ,” ಎನ್ನುತ್ತಾರೆ ಉಯದ ನ್ಯೂಸ್ ನ ಮತ್ತೊಬ್ಬ ಹಿರಿಯ ಉದ್ಯೋಗಿ ಒಬ್ಬರು.

ಒಂದು ಬೃಹತ್ ಕಾರ್ಪೊರೇಟ್ ಸಂಸ್ಥೆ, ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವನ್ನು ಘೋಷಿಸಿಕೊಂಡು ಬರುತ್ತಿರುವ ಸಾಮ್ರಾಜ್ಯ, ಕೋಟಿ ಲೆಕ್ಕದಲ್ಲಿ ಸಂಬಳ, ಭತ್ಯೆಗಳನ್ನು ಪಡೆಯುವ ಅದರ ಮಾಲೀಕರು ಹೀಗೆ ಕೆಳಹಂತದ ವಿಚಾರದಲ್ಲಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟವಾಗಿ ಬಿಡಿಸಿಡುತ್ತಿದೆ.

ಸುದ್ದಿವಲಯದ ಸಹೋದ್ಯೋಗಿಗಳ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು..?

ಊರ ತುಂಬಾ ಅನ್ಯಾಯಗಳು ನಡೆದಾಗ ಧ್ವನಿ ಎತ್ತುತ್ತೀವಿ ಎನ್ನುವ ಮಾಧ್ಯಮಗಳು, ತಮ್ಮದೇ ವಲಯದ ಸಹೋದ್ಯೋಗಿಗಳು ಸಂಕಷ್ಟಕ್ಕೆ ಸಿಕ್ಕಾಗ ಮೌನಕ್ಕೆ ಶರಣಾಗುತ್ತವೆ. ಇದಕ್ಕಿಂತ ಕ್ರೂರವಾದುದ್ದು ಏನೆಂದರೆ, ಒಂದು ವೇಳೆ ಅನ್ಯಾಯವನ್ನು ಪ್ರಶ್ನಿಸಿದರೆ, ಅಂತಹ ಪತ್ರಕರ್ತರನ್ನು ಹಣಿಯುವ ಮಟ್ಟಕ್ಕೂ ಇಳಿದು ಬಿಡುತ್ತಾರೆ. ಇಂತಹ ಅಸಹ್ಯಕರ ಇತಿಹಾಸಗಳನ್ನು ಹೊಂದಿರುವ ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಈಗ ಅಭದ್ರತೆಯ ಭಾವಗಳನ್ನು ‘ಉದಯ ನ್ಯೂಸ್’ ಸಿಬ್ಬಂದಿಗಳು ಎದುರಿಸುತ್ತಿದ್ದಾರೆ.

ಮೂಲ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಮಂಗಳವೊ ಅಮಂಗಳವೋ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಫೆಬ್ರವರಿ, 2019) ಇಂದು ನೀವು ಹೆಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ…

  • ಉಪಯುಕ್ತ ಮಾಹಿತಿ

    ಇನ್ಮುಂದೆ ಈ ರೂಲ್ಸ್ ತಿರಸ್ಕರಿಸಿದ ತಕ್ಷಣವೆ ನಿಮ್ಮ ಫೇಸ್ಬುಕ್ ಬ್ಲಾಕ್….!

    ನ್ಯೂಜಿಲ್ಯಾಂಡ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ನಿಯಮಗಳನ್ನು ಬದಲಾಯಿಸಿಕೊಂಡಿದೆ. ಉಗ್ರನೋರ್ವ ಹಿಂಸಾತ್ಮಕ ದಾಳಿಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಆಗಿ ವಿಡಿಯೋ ಮಾಡಿದ ನಂತರ, ಫೇಸ್‌ಬುಕ್ ತನ್ನ ಲೈವ್-ಸ್ಟ್ರೀಮಿಂಗ್ ಸೇವೆಯನ್ನು ಬಳಸುವುದಕ್ಕೆ ನಿಬಂಧನೆಗಳನ್ನು ಹೇರಿರುವುದಾಗಿ ಘೋಷಿಸಿದೆ. ನ್ಯೂಜಿಲ್ಯಾಂಡ್ ದಾಳಿಯಿಂದ ಭಾರೀ ವಿವಾದಕ್ಕೆ ಒಳಗಾಗಿದ್ದ ಫೇಸ್‌ಬುಕ್ ತನ್ನ ನೇರ ಪ್ರಸಾರ ನಿಯಮಗಳನ್ನು ಬದಲಿಸಿರುವುದಾಗಿ ತಿಳಿಸಿದ್ದು, ತಾನು ನೂತನವಾಗಿ ಜಾರಿಗೆ ತಂದಿರುವ ನಿಯಮಗಳನ್ನು ಮೀರಿ ಯಾರಾದರೂ ಹಿಂಸಾತ್ಮಕ ವೀಡಿಯೊ ಸ್ಟ್ರೀಮಿಂಗ್ ಅಥವಾ ಪೋಸ್ಟ್‌ಗಳನ್ನು ಅಪ್ ಲೋಡ್…

  • ಶ್ರದ್ಧಾಂಜಲಿ

    ಪ್ರಧಾನಿ ನರೇಂದ್ರ ಮೋದಿಯವರ ತಾಯಿ ನಿಧನ

    ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ  ಅವರ ತಾಯಿ ಹೀರಾ ಬೆನ್(100) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಮ್ಮ ತಾಯಿ 100 ನೇ ವಯಸ್ಸಿನಲ್ಲಿ ನಿಧನರಾಗಿದ್ದಾಗಿ ಪ್ರಧಾನಿ ಮೋದಿ ಟ್ಟಿಟ್ ಮೂಲಕ ತಿಳಿಸಿದ್ದಾರೆ. ಹೀರಾ ಬೆನ್ ‌ಕಳೆದೆರಡು ದಿನದಿಂದ ಅಹ್ಮದಾಬಾದ್ ನ ಯುನ್ ಮೆಹ್ತಾ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಎರಡು ದಿನಗಳ ಹಿಂದೆ ಅವರನ್ನು ಗುಜರಾತ್ ನ ಅಹಮದಾಬಾದ್ ನಲ್ಲಿರುವ  ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯದಲ್ಲಿ…

  • ಸುದ್ದಿ

    ಅತಿಯಾದ್ರೆ ʼಹಾಲುʼ ವಿಷವಾಗಿ ಪರಿವರ್ತಿಸುತ್ತೆ ಎಚ್ಚರ..!ಹೇಗೆ ಗೊತ್ತ?

    ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು ಆತಂಕ ಪಡುವಂತಹ ವಿಷಯವೊಂದನ್ನು ಹೊರಹಾಕಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದ್ರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ. 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು…

  • ವಿಸ್ಮಯ ಜಗತ್ತು

    ಈ ಕಣಿವೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಲ್ಲು ತನ್ನಷ್ಟಕ್ಕೇ ಚಲಿಸುತ್ತದೆ..!ತಿಳಿಯಲು ಈ ಲೇಖನ ಓದಿ…

    ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.

  • ಸುದ್ದಿ

    ಕೇವಲ 21 ವರ್ಷಕ್ಕೆ ಜಗತ್ತಿನ ಎಲ್ಲ ‘ದೇಶ’ ಸುತ್ತಿ ಬಂದಂತಹ ಯುವತಿ…!

    ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ. ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್‌ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ…