ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಊಟದ ನಂತರ ತಾಂಬೂಲ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ: ವೀಳ್ಯದೆಲೆ ಅಥವಾ ವೀಳ್ಯೆಲೆ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ.
ಸಂಸ್ಕೃತದಲ್ಲಿ ನಾಗವಲ್ಲಿ ಎಂದು ಕರೆಯಲ್ಪಡುವ ಇದು ರುಚಿಯಲ್ಲಿ ಕಟು (ಖಾರ), ತಿಕ್ತ (ಕಹಿ), ಮಧುರ (ಸಿಹಿ) ರಸಗಳಿಂದ ಕೂಡಿದ್ದ ಉಷ್ಣ, ತೀಕ್ಷ್ಣ ಹಾಗೂ ಕ್ಷಾರ ಗುಣವುಳ್ಳದ್ದಾಗಿದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನಾಗವಲ್ಲಿ ವೃಷ್ಯ ಎಂದರೆ ಕಾಮೋತ್ತೇಜಕವಾಗಿದ್ದು, ಬಸ್ತಿರೋಧಕ, ಮೂತ್ರಪಿಂಡ ಹಾಗೂ ಹೃದಯ ರೋಗಗಳಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ.ತಾಂಬೂಲ ಸೇವಿಸುತ್ತಿದ್ದರು.

ಹಳ್ಳಿಗಳಲ್ಲಿ ಊಟದ ನಂತರ ತಾಂಬೂಲ ಸೇವನಾ ಸಾಮಾನ್ಯ, ಹಳ್ಳಿಗರಿಗೆ ಅದರ ಲಾಭವೂ ಗೊತ್ತಿದೆ, ಊಟದ ನಂತರ ತಾಂಬೂಲ ಸೇವನೆಯಿಂದ ಜೀರ್ಣಕ್ರೀಯೆ ಸುಲಭವಾದರೆ, ಹಲ್ಲುಗಳು ಗಟ್ಟಿಯಾಗುತ್ತವೆ ಎನ್ನುವುದು ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿ.

ಇಷ್ಟೆ ಅಲ್ಲ ತಾಂಬೂಲ ಸೇವನೆಯಿಂದ ನಿಮಗೆ ಗೊತ್ತಿದರ ಅನೇಕ ಲಾಭಗಳೂ ಇವೆ. ಮಧುಮೇಹ ರೋಗವುಳ್ಳವರಿಗೆ ತಾಂಬೂಲ ಸೇವನೆ ಒಂದು ಪಥ್ಯ ಅಭ್ಯಾಸ. ದಿನದಲ್ಲಿ ಎರಡು ಅಥವಾ ಮೂರು ಸಲ, ಊಟವಾದ ನಂತರ ತಾಂಬೂಲ ಸೇವಿಸುವುದು ಹಿತಕರ ಹಾಗೂ ಆರೋಗ್ಯದಾಯಕ.
ಪ್ರತಿದಿನ ತಾಂಬೂಲ ಸೇವನೆ ಮಾಡುವುದರಿಂದ ಶರೀರದ ಉಷ್ಣತೆ ಸಮತೋಲನದಲ್ಲಿದ್ದು, ಮುಖ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮನಸ್ಸು ಪ್ರಸನ್ನಗೊಳ್ಳುತ್ತದೆ, ಬುದ್ಧಿ ಚುರುಕಾಗುತ್ತದೆ. ಮುಪ್ಪು ಮುಂದೂಡಲ್ಪಟ್ಟು ಯೌವನ ದೀರ್ಘಕಾಲ ರಕ್ಷಿಸಲ್ಪಡುತ್ತದೆ.

ಇವೆಲ್ಲಕ್ಕಿಂತ ಮೇಲಾಗಿಸ್ತ್ರೀ-ಪುರುಷರಿಬ್ಬರಿಗೂ ತಾಂಬೂಲ ಉತ್ತಮ ಕಾಮೋತ್ತೇಜಕವಾಗಿದ್ದು, ಮುದ ನೀಡುತ್ತದೆ. ವೀಳ್ಯದ ಎಳೆಯಲ್ಲಿ ಕಾಮವನ್ನು ಉತ್ತೇಜಿಸುವ ಅಂಶಗಳಿದ್ದು, ಹಿಂದಿನ ಕಾಲದಲ್ಲಿ ಪತಿ – ಪತ್ನಿಯರು ಮಲಗುವ ಮುನ್ನ ಸಾಮಾನ್ಯವಾಗಿ ತಾಂಬೂಲ ಸೇವಿಸುತ್ತಿದ್ದರು.
ಮಧುಮೇಹದಲ್ಲಿ ಬಾಯಾರಿಕೆ ಹಾಗೂ ಬಾಯಿಂದ ದುರ್ಗಂಧ, ವಾಸನೆ ಇವು ಸಾಮಾನ್ಯ.

ಈ ತೊಂದರೆಗಳ ನಿವಾರಣೆಗೆ ತಾಂಬೂಲ ಸೇವನೆ ಉತ್ತಮ ಉಪಚಾರ ಎನ್ನಲಾಗಿದೆ. ತಾಂಬೂಲ ಸೇವನೆಯನ್ನು ಯಾವಾಗಲೂ ಊಟದ ನಂತರ ಮಾಡಬೇಕು. ಎಲೆ, ಅಡಿಕೆ, ಸುಣ್ಣಗಳನ್ನು ಚೆನ್ನಾಗಿ ಅಗಿದ ಮೇಲೆ ಸುಗಂಧ ದ್ರವ್ಯಗಳಾದ ಲವಂಗ, ಜಕಾಯಿ, ಗಂಧ ಮೆಣಸು, ಏಲಕ್ಕಿ, ನಾಗಕೇಸರಿ ಮುಂತಾದ ದ್ರವಗಳನ್ನು ಜತೆಗೆ ಸೇರಿಸಿಕೊಂಡು, ತಾಂಬೂಲವನ್ನು ಚೆನ್ನಾಗಿ ಅಗಿಯಬೇಕು. ಇದು ಬಾಯಿಯ ರುಚಿಯನ್ನು
ಹೆಚ್ಚು ಮಾಡುವುದೇ ಅಲ್ಲದೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಸಮೋತ್ತೇಜಕವಾಗಿದ್ದು, ಯೌವನವನ್ನು ಕಾಪಾಡುತ್ತದೆ.
ತಾಂಬೂಲ ಸೇವನೆಯಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ತಾಂಬೂಲವು ಬಾಯಿಗೆ ನಿರ್ಮಲತೆ ಮತ್ತು ಪರಿಮಳ ಕೊಟ್ಟು ಮುಖದಲ್ಲಿ ಕಾಂತಿ ಮತ್ತು ಪ್ರಸನ್ನತೆಯನ್ನುಂಟುಮಾಡುತ್ತದೆ. ದವಡೆ ಹಲ್ಲು, ವಸಡುಗಳಿಗೆ ಬಲ, ನಾಲಿಗೆಗೆ ರುಚಿ ಕೊಡುತ್ತದೆ. ಸ್ವರವನ್ನು ಸ್ವಚ್ಛಗೊಳಿಸಿ, ಮಲಬದ್ಧತೆ ನಿವಾರಿಸುತ್ತದೆ. ಬಾಯಿ ಮತ್ತು
ಗಂಟಲುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ನೆಗಡಿ, ಗಂಟಲು ನೋವು ಮುಂತಾದ ರೋಗಗಳು ಉಂಟಾಗದಂತೆ ತಡೆಯುತ್ತದೆ.

ಜೀರ್ಣಾಂಗಗಳನ್ನು ಉದ್ದೀಪನಗೊಳಿಸಿ ಅಗ್ನಿಮಾಂದ್ಯ, ಅಜೀರ್ಣ ರೋಗಗಳನ್ನು ನಿವಾರಿಸುತ್ತದೆ.
ಗರದಿಕ್ಷ ಗುಲ್ಮ ಮುಂತಾದ ರೋಗಗಳಿಗೆ ಒಳ್ಳೆಯದು.
ತಾಂಬೂಲದ ಮೂರನೆ ಮುಖ್ಯ ಘಟಕವೇ ಸುಣ್ಣ. ಸುಧಾ, ಕ್ಷಾರ ಎಂದು ಕರೆಯಲ್ಪಡುವ ಇದು ತೀಕ್ಷ್ಣ ಉಷ್ಣ, ಕ್ಷಾರ ಗುಣಗಳಿಂದ ಕೂಡಿದ್ದು, ವಾತ ಕಫಾ ದೋಷಗಳನ್ನು
ನಾಶಮಾಡುತ್ತದೆ.

ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣವುಳ್ಳ ಸುಣ್ಣ ಒಳ್ಳೆಯ ಜೀರ್ಣಕಾರಕ ಹಾಗೂ ಕ್ರಿಮಿನಾಶಕವಾಗಿದೆ. ಮೂಳೆ ಮತ್ತು ದಂತಗಳ
ಬೆಳವಣಿಗೆ ಮತ್ತು ಪೋಷಣೆಗೆ ಸಹಾಯ ಮಾಡುತ್ತವೆ. ತಾಂಬೂಲದ ಜತೆ ಉಪಯೋಗಿಸುವ ಲವಂಗ, ಏಲಕ್ಕಿ, ಜಾಕಾಯಿ, ಜಾಪತ್ರೆ, ಪಚ್ಚ ಕರ್ಪೂರ ಮುಂತಾದ ಸುಗಂಧ
ದ್ರವ್ಯಗಳು ತಾಂಬೂಲಕ್ಕೆ ಪರಿಮಳ ಮತ್ತು ರುಚಿಯನ್ನು ಕೊಡುವುದೇ ಅಲ್ಲದೆ ಅನೇಕ ಉತ್ತಮ ಔಷದ ಗುಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಣೆಗೆ ಪೂರಕವಾಗುತ್ತವೆ.
ನಿಮ್ಮ ಆರೋಗ್ಯಕ್ಕೆ
ಇಂತಹ ಅಮೂಲ್ಯ ಔಷದ ಗುಣಗಳಿಂದ ಕೂಡಿರುವ ತಾಂಬೂಲ ಸೇವನೆಗೆ ನಮ್ಮ ಪ್ರಾಚೀನ ಆಯುರ್ವೇದ ವೈದ್ಯಶಾಸ್ತ್ರ ಬಹಳ ಮಹತ್ವ ನೀಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು
ಅರೆ ತಲೆನೋವು ಬಂತು ಎಂದರೆ ಮಾನಸಿಕವಾಗಿ ತುಂಬ ಹಿಂಸೆ ಅನುಭವಿಸುತ್ತೇವೆ. ಈ ಅರೆ ತಲೆನೋವು ಸಹಿಸಿಕೊಳ್ಳಲಾಗದಷ್ಟು ನೋವು ಕೊಡುತ್ತದೆ. ಇಂತಹ ಅರೆತಲೆನೋವಿಗೆ ಮನೆಯಲ್ಲಿ ಪರಿಹರಿಸುವ ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಇದೆ.
ಇಂದು ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನ.ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.
ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆಯಾಗಿ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ…
ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.
ಸ್ಯಾಂಡಲ್ವುಡ್ ನಲ್ಲಿ ನಟ-ನಟಿಯರು ಸ್ಕ್ರೀನ್ ಮೇಲಿನ ಅನೇಕ ಜೋಡಿಗಳು ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ. ಈಗ ಹಿರಿಯ ಖ್ಯಾತ ನಟ ಸಿಹಿ-ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಕೂಡ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ‘ಹಾಗೆ ಸುಮ್ಮನೆ’ ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಹಾಗೂ ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಅಭಿನಯಿಸಿರುವ ಹಿತಾ ಚಂದ್ರಶೇಖರ್ ಪ್ರೀತಿಸುತ್ತಿದ್ದು, ಅವರು ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಕಿರಣ್ ನಮ್ಮ ಕುಟುಂಬದವರಿಗೆ ಪರಿಚಯವಿದ್ದಾರೆ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಮೊದಲಿಗೆ…