ಜೀವನಶೈಲಿ

ಈ 5 ಕೆಲಸಗಳನ್ನು ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಮಾಡಿದ್ರೆ, ಅದೃಷ್ಟ ತಾನಾಗೇ ನಿಮ್ಮ ಬಳಿ ಬರುವುದು..!

6669

ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಇವತ್ತಿನ ಇಡೀ ದಿನ ಚೆನ್ನಗಿರಲೆಂದು, ಎಲ್ಲರೂ ದೇವರಲ್ಲಿ ಪ್ರಾರ್ಥಿಸುವುದು ಸಾಮಾನ್ಯ. ಹಾಗೆಯೇ ತಮ್ಮ ಮನಸ್ಸನ್ನು ತುಂಬಾ ಪ್ರಶಾಂತವಾಗಿ ಇಟ್ಟುಕೊಂಡು ದಿನ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಇಷ್ಟೇ ಅಲ್ಲದೆ, ನಾವೀಗ ಹೇಳಲಿರುವ ಕೆಳಗಿನ ಸೂಚನೆಗಳೊಂದಿಗೆ ದಿನ ಪ್ರಾರಂಭಿಸಿದರೆ, ಅದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲವೂ ಶುಭವಾಗುತ್ತದೆ.ಉದ್ಯೋಗಿಗಳಾದರೆ ತಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿ ಮುಂದೆ ಸಾಗುತ್ತಾರೆ. ಆ ಸೂಚನೆಗಳು ಏನೂ ಅಂತ ಈಗ ತಿಳಿದುಕೊಳ್ಳೋಣ,

1. ಹಿರಿಯರ ಆಶೀರ್ವಾದ

ಮನೆಯಿಂದ ಹೊರಗೆ ಹೋಗುವಾಗ ಯಾರೇ ಆಗಿರಲಿ ನಮಗಿಂತ ದೊಡ್ಡವರ ಆಶೀರ್ವಾದ ಪಡೆಯಬೇಕು. ಆಶೀರ್ವಾದ ಪಡೆಯಬೇಕಾದ ಸಮಯದಲ್ಲಿ  ಬಾಗುತ್ತಾರಾದ್ದರಿಂದ, ಆ ಸ್ಥಿತಿಯಲ್ಲಿ ರಕ್ತ ಸಂಚಲನೆ ಮಿದುಳಿಗೆ ಹೆಚ್ಚಾಗಿ ಆಗಿ ಆ ಭಾಗ ಶಾರ್ಪ್ ಆಗುತ್ತದೆ. ಇದರಿಂದ ಆಲೋಚನಾ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಇದರಿಂದ ಅದೃಷ್ಟ ಕೂಡಿಬರುತ್ತದೆ. ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರಟರೆ ಎಲ್ಲವೂ ಒಳಿತಾಗುತ್ತದೆ. ನೆಗಟೀವ್ ಎನರ್ಜಿಯಿಂದ ಹೊರಬಂದು ಪಾಸಿಟೀವ್ ಎನರ್ಜಿ ಹೆಚ್ಚಾಗುತ್ತದೆ.  

  2. ನಿಮ್ಮ ಎರಡು ಅಂಗೈಗಳನ್ನು ನೋಡಿಕೊಳ್ಳಿ 

ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಅಂಗೈಯನ್ನು ನೋಡಿಕೊಳ್ಳಬೇಕು. ಎರಡೂ ಅಂಗೈಗಳನ್ನು ಹತ್ತಿರಹತ್ತಿರ ಹಿಡಿದು ಆ ಕೆಲಸ ಮಾಡಬೇಕು. ಹಾಗೂ  ಅಂಗೈಗಳನ್ನು ನೋಡಿಕೊಳ್ಳುತ್ತಾ ಈ ಶ್ಲೋಕವನ್ನು ಒಮ್ಮೆ ಪಠಿಸಿ:-

           ಕರಾಗ್ರೆ ವಸತೇ ಲಕ್ಷ್ಮಿ , ಕರಮಧ್ಯೇ ಸರಸ್ವತಿ!                                                                             ಕರಮೂಲೆ ಸ್ಥಿತಾ ಗೌರಿ, ಪ್ರಭಾತೆ ಕರದರ್ಶನಂ!!

ಈ ರೀತಿ  ಮಾಡುವುದರಿಂದ ಕೈ ಬೆರಳುಗಳ ಕೊನೆಯಲ್ಲಿರುವ ಲಕ್ಷ್ಮಿದೇವಿ, ಮಧ್ಯದಲ್ಲಿರುವ ಸರಸ್ವತಿ, ಮಣಿಕಟ್ಟು ಬಳಿ ಇರುವ ಗೌರಿ, ಈ ಮೂವರ ಆಶೀರ್ವಾದ ನಮಗೆ ಸಿಗುತ್ತದೆ. ಇದರಿಂದ ವಿದ್ಯೆ, ಜ್ಞಾನ, ಧನ ಎಲ್ಲವೂ ಕೈಗೂಡತ್ತದೆ.

      3. ಕನ್ನಡಿ

ದಂಪತಿಗಳು ತಮ್ಮತಮ್ಮ ಬೆಡ್ ರೂಮಿನಲ್ಲಿ ಯಾವುದೇ ಕಾರಣಕ್ಕೂ ಕನ್ನಡಿ ಇಟ್ಟುಕೊಳ್ಳಬಾರದು. ಆ ರೀತಿ ಮಾಡುವುದರಿಂದ ಅವರ ವೈವಾಹಿಕ ಜೀವನ ಸುಖಕರವಾಗಿರಲ್ಲ. ಎಲ್ಲವೂ ಸಮಸ್ಯೆಗಳೇ ಬರುತ್ತವಂತೆ. ಆ ರೀತಿ ಕನ್ನಡಿ ಇಟ್ಟುಕೊಂಡು ಬೆಳಗ್ಗೆಯೇ ನೋಡಿದರೆ ಎಲ್ಲವೂ ಅಶುಭ ನಡೆಯುತ್ತದೆ. ಇದು ಕೂಡಿಬರುವುದಿಲ್ಲವಂತೆ.

     4.ಬೆಲ್ಲ

ಬೆಳಗ್ಗೆ ಮನೆಯಿಂದ ಹೊರಗೆ ಹೋಗಬೇಕಾದರೆ ಸ್ವಲ್ಪ ಬೆಲ್ಲ ತಿಂದು ನೀರು ಕುಡಿಯಬೇಕು. ಆ ಬಳಿಕ ಹೊರಗೆ ಹೋಗಬೇಕು. ಈ ರೀತಿಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದಷ್ಟೇ ಅಲ್ಲದೆ, ನಿತ್ಯ ಉತ್ಸಾಹದಿಂದ ಇರುತ್ತೀರ. ಅದರ ಜತೆಗೆ ಪಾಸಿಟೀವ್ ಎನರ್ಜಿ ಜೊತೆಗೆ ಇರುತ್ತದೆ. ಆಗ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ.

    5.ಒತ್ತಡ

ಒತ್ತಡ, ಮಾನಸಿಕ ಸಮಸ್ಯೆಗಳೊಂದಿಗೆ ಒದ್ದಾಡುತ್ತಿರುವವರು ಒಮ್ಮೆ ತಾವು ಮಲಗುತ್ತಿರುವ ಪ್ರದೇಶಕ್ಕೆ ವಿರುದ್ಧವಾಗಿ ಕನ್ನಡಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಕನ್ನಡಿ ಇದ್ದರೆ ಕೂಡಲೆ ಅದನ್ನು ತೆಗೆಯಬೇಕು. ಆ ರೀತಿ ಸಾಧ್ಯವಾಗದಿದ್ದರೆ ಆ ಕನ್ನಡಿಯನ್ನು ವಸ್ತ್ರದಿಂದ ಮುಚ್ಚಬೇಕು. ಇದರಿಂದ ಆಯಾ ಸಮಸ್ಯೆಗಳಿಂದ ಉಪಶಮನ ಸಿಗುತ್ತದೆ. ಈ ರೀತಿ ಇರುವವರು ಕನ್ನಡಿಯನ್ನು ಬೆಳಗ್ಗೆ ಯಾವುದೇ ಕಾರಣಕ್ಕೂ ನೋಡಬಾರದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಹಾರದಲ್ಲಿ ಹಣ್ಣಿನ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ…..

    ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 165 ಕ್ಕೇರಿದ್ದು, ಮಕ್ಕಳ ಸಾವಿಗೆ ಮೆದುಳಿನ ಉರಿಯೂತವೇ ಕಾರಣ ಎನ್ನಲಾಗಿದೆ. ಮೆದುಳಿನ ಉರಿಯೂತ ಅಂದರೆ Acute Encephalitis Syndrome ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಇಲ್ಲಿನ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ(ಎಸ್ ಕೆ ಎಂಸಿಎಚ್) ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ. ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು…

  • ಸಿನಿಮಾ

    ಉಪ್ಪಿ ರಾಜಕೀಯ ಎಂಟ್ರಿ?ಯಾವ ರಾಜಕೀಯ ಪಕ್ಷ ಸೇರ್ತಾರೆ ಗೊತ್ತಾ?ಮುಂದೆ ಓದಿ…

    ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್‍ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್‍ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

  • ಸುದ್ದಿ

    ಈ ಹುಡುಗಿಯನ್ನು ಮದ್ವೆ ಆಗೋ ಹುಡುಗರಿಗೆ ಸಿಗುತ್ತೆ ಕೋಟಿ ಕೋಟಿ ರೂಪಾಯಿಗಳ ಆಸ್ತಿ..!

    ಥೈಲ್ಯಾಂಡ್ ನ ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗುವ ವ್ಯಕ್ತಿಗೆ ಅನನ್ಯ ಮತ್ತು ಆಸಕ್ತಿದಾಯಕ ಷರತ್ತು ವಿಧಿಸಿದ್ದಾನೆ. ಈತನ ಮಗಳನ್ನು ಮದುವೆಯಾದ್ರೆ 2 ಕೋಟಿ ರೂಪಾಯಿ ಹಣವನ್ನು ತಂದೆ ನೀಡಲಿದ್ದಾನಂತೆ. ಥೈಲ್ಯಾಂಡ್ ನ ಶ್ರೀಮಂತ ವ್ಯಕ್ತಿ, ಮಗಳ ಸುರಕ್ಷತೆ ಜವಾಬ್ದಾರಿಯನ್ನು ಹೊತ್ತಿದ್ದಾನೆ. ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆಪರ್ ನೀಡಿದ್ದಾನೆ. ತಂದೆಯ ಪ್ರಕಟಣೆ ನಂತ್ರ ಅನೇಕ ಯುವಕರು ಮದುವೆಯಾಗಲು ಮುಂದೆ ಬಂದಿದ್ದಾರೆ. ಈವರೆಗೆ 10,000 ಹುಡುಗ್ರು ಮದುವೆಯಾಗಲು ಆಸಕ್ತಿ ತೋರಿಸಿದ್ದಾರಂತೆ. 58 ವರ್ಷದ ತಂದೆ ಮಿಸ್ಟರ್ ರಾತೊಂಗ್ ನನ್ನು…

  • inspirational, ಸುದ್ದಿ

    ಹಾಲರುವೆ ಉತ್ಸವದ ಸಂಭ್ರಮ- ಹರ್ಷೋದ್ಘಾರದ ಮಧ್ಯೆ ಮಾದಪ್ಪನ ಜಾತ್ರೆ..!ಇದರ ವಿಶೇಷ, ಹಿನ್ನೆಲೆಯೇನು?

    ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ….

  • ಜ್ಯೋತಿಷ್ಯ

    ಹೊಸ ವರ್ಷ ಆ ಮಹಾದೇವನ ಕೃಪೆ ನಿಮ್ಮ ಮೇಲೆ ಆಗಬೇಕೆಂದ್ರೆ ತಪ್ಪದೇ ಹೀಗೆ ಮಾಡಿ…

    ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ…

  • ದೇಶ-ವಿದೇಶ

    ಅಮೇರಿಕಾವನ್ನು ಧ್ವಂಸ ಮಾಡುವುದಾಗಿ, ಬಹಿರಂಗವಾಗಿ ಸವಾಲು ಹಾಕಿದ ಈ ಸರ್ವಾಧಿಕಾರಿ!

    ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು, ಇದೆ ಸಮಯದಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.