ಜೀವನಶೈಲಿ

ಈ 5 ಕೆಲಸಗಳನ್ನು ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಮಾಡಿದ್ರೆ, ಅದೃಷ್ಟ ತಾನಾಗೇ ನಿಮ್ಮ ಬಳಿ ಬರುವುದು..!

6654

ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಇವತ್ತಿನ ಇಡೀ ದಿನ ಚೆನ್ನಗಿರಲೆಂದು, ಎಲ್ಲರೂ ದೇವರಲ್ಲಿ ಪ್ರಾರ್ಥಿಸುವುದು ಸಾಮಾನ್ಯ. ಹಾಗೆಯೇ ತಮ್ಮ ಮನಸ್ಸನ್ನು ತುಂಬಾ ಪ್ರಶಾಂತವಾಗಿ ಇಟ್ಟುಕೊಂಡು ದಿನ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಇಷ್ಟೇ ಅಲ್ಲದೆ, ನಾವೀಗ ಹೇಳಲಿರುವ ಕೆಳಗಿನ ಸೂಚನೆಗಳೊಂದಿಗೆ ದಿನ ಪ್ರಾರಂಭಿಸಿದರೆ, ಅದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲವೂ ಶುಭವಾಗುತ್ತದೆ.ಉದ್ಯೋಗಿಗಳಾದರೆ ತಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿ ಮುಂದೆ ಸಾಗುತ್ತಾರೆ. ಆ ಸೂಚನೆಗಳು ಏನೂ ಅಂತ ಈಗ ತಿಳಿದುಕೊಳ್ಳೋಣ,

1. ಹಿರಿಯರ ಆಶೀರ್ವಾದ

ಮನೆಯಿಂದ ಹೊರಗೆ ಹೋಗುವಾಗ ಯಾರೇ ಆಗಿರಲಿ ನಮಗಿಂತ ದೊಡ್ಡವರ ಆಶೀರ್ವಾದ ಪಡೆಯಬೇಕು. ಆಶೀರ್ವಾದ ಪಡೆಯಬೇಕಾದ ಸಮಯದಲ್ಲಿ  ಬಾಗುತ್ತಾರಾದ್ದರಿಂದ, ಆ ಸ್ಥಿತಿಯಲ್ಲಿ ರಕ್ತ ಸಂಚಲನೆ ಮಿದುಳಿಗೆ ಹೆಚ್ಚಾಗಿ ಆಗಿ ಆ ಭಾಗ ಶಾರ್ಪ್ ಆಗುತ್ತದೆ. ಇದರಿಂದ ಆಲೋಚನಾ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಇದರಿಂದ ಅದೃಷ್ಟ ಕೂಡಿಬರುತ್ತದೆ. ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರಟರೆ ಎಲ್ಲವೂ ಒಳಿತಾಗುತ್ತದೆ. ನೆಗಟೀವ್ ಎನರ್ಜಿಯಿಂದ ಹೊರಬಂದು ಪಾಸಿಟೀವ್ ಎನರ್ಜಿ ಹೆಚ್ಚಾಗುತ್ತದೆ.  

  2. ನಿಮ್ಮ ಎರಡು ಅಂಗೈಗಳನ್ನು ನೋಡಿಕೊಳ್ಳಿ 

ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಅಂಗೈಯನ್ನು ನೋಡಿಕೊಳ್ಳಬೇಕು. ಎರಡೂ ಅಂಗೈಗಳನ್ನು ಹತ್ತಿರಹತ್ತಿರ ಹಿಡಿದು ಆ ಕೆಲಸ ಮಾಡಬೇಕು. ಹಾಗೂ  ಅಂಗೈಗಳನ್ನು ನೋಡಿಕೊಳ್ಳುತ್ತಾ ಈ ಶ್ಲೋಕವನ್ನು ಒಮ್ಮೆ ಪಠಿಸಿ:-

           ಕರಾಗ್ರೆ ವಸತೇ ಲಕ್ಷ್ಮಿ , ಕರಮಧ್ಯೇ ಸರಸ್ವತಿ!                                                                             ಕರಮೂಲೆ ಸ್ಥಿತಾ ಗೌರಿ, ಪ್ರಭಾತೆ ಕರದರ್ಶನಂ!!

ಈ ರೀತಿ  ಮಾಡುವುದರಿಂದ ಕೈ ಬೆರಳುಗಳ ಕೊನೆಯಲ್ಲಿರುವ ಲಕ್ಷ್ಮಿದೇವಿ, ಮಧ್ಯದಲ್ಲಿರುವ ಸರಸ್ವತಿ, ಮಣಿಕಟ್ಟು ಬಳಿ ಇರುವ ಗೌರಿ, ಈ ಮೂವರ ಆಶೀರ್ವಾದ ನಮಗೆ ಸಿಗುತ್ತದೆ. ಇದರಿಂದ ವಿದ್ಯೆ, ಜ್ಞಾನ, ಧನ ಎಲ್ಲವೂ ಕೈಗೂಡತ್ತದೆ.

      3. ಕನ್ನಡಿ

ದಂಪತಿಗಳು ತಮ್ಮತಮ್ಮ ಬೆಡ್ ರೂಮಿನಲ್ಲಿ ಯಾವುದೇ ಕಾರಣಕ್ಕೂ ಕನ್ನಡಿ ಇಟ್ಟುಕೊಳ್ಳಬಾರದು. ಆ ರೀತಿ ಮಾಡುವುದರಿಂದ ಅವರ ವೈವಾಹಿಕ ಜೀವನ ಸುಖಕರವಾಗಿರಲ್ಲ. ಎಲ್ಲವೂ ಸಮಸ್ಯೆಗಳೇ ಬರುತ್ತವಂತೆ. ಆ ರೀತಿ ಕನ್ನಡಿ ಇಟ್ಟುಕೊಂಡು ಬೆಳಗ್ಗೆಯೇ ನೋಡಿದರೆ ಎಲ್ಲವೂ ಅಶುಭ ನಡೆಯುತ್ತದೆ. ಇದು ಕೂಡಿಬರುವುದಿಲ್ಲವಂತೆ.

     4.ಬೆಲ್ಲ

ಬೆಳಗ್ಗೆ ಮನೆಯಿಂದ ಹೊರಗೆ ಹೋಗಬೇಕಾದರೆ ಸ್ವಲ್ಪ ಬೆಲ್ಲ ತಿಂದು ನೀರು ಕುಡಿಯಬೇಕು. ಆ ಬಳಿಕ ಹೊರಗೆ ಹೋಗಬೇಕು. ಈ ರೀತಿಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದಷ್ಟೇ ಅಲ್ಲದೆ, ನಿತ್ಯ ಉತ್ಸಾಹದಿಂದ ಇರುತ್ತೀರ. ಅದರ ಜತೆಗೆ ಪಾಸಿಟೀವ್ ಎನರ್ಜಿ ಜೊತೆಗೆ ಇರುತ್ತದೆ. ಆಗ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ.

    5.ಒತ್ತಡ

ಒತ್ತಡ, ಮಾನಸಿಕ ಸಮಸ್ಯೆಗಳೊಂದಿಗೆ ಒದ್ದಾಡುತ್ತಿರುವವರು ಒಮ್ಮೆ ತಾವು ಮಲಗುತ್ತಿರುವ ಪ್ರದೇಶಕ್ಕೆ ವಿರುದ್ಧವಾಗಿ ಕನ್ನಡಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಕನ್ನಡಿ ಇದ್ದರೆ ಕೂಡಲೆ ಅದನ್ನು ತೆಗೆಯಬೇಕು. ಆ ರೀತಿ ಸಾಧ್ಯವಾಗದಿದ್ದರೆ ಆ ಕನ್ನಡಿಯನ್ನು ವಸ್ತ್ರದಿಂದ ಮುಚ್ಚಬೇಕು. ಇದರಿಂದ ಆಯಾ ಸಮಸ್ಯೆಗಳಿಂದ ಉಪಶಮನ ಸಿಗುತ್ತದೆ. ಈ ರೀತಿ ಇರುವವರು ಕನ್ನಡಿಯನ್ನು ಬೆಳಗ್ಗೆ ಯಾವುದೇ ಕಾರಣಕ್ಕೂ ನೋಡಬಾರದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    “ವಾಸಿಸುವವನೇ ಮನೆ ಒಡೆಯ” ಯೋಜನೆಗೆ ರಾಷ್ಟ್ರಪತಿಗಳಿಂದ ಸಿಕ್ಕ ಅಂಕಿತದ ಬಗ್ಗೆ ತಿಳಿಯಬೇಕೆ…? ಹಾಗಾದ್ರೆ ಈ ಲೇಖನ ಓದಿ….!

    ವಾಸಿಸುವವನೇ ಮನೆ ಒಡೆಯ ಎಂಬ ಐತಿಹಾಸಿಕ ಕಾಯ್ದೆ ಜಾರಿಗೆ ರಾಷ್ಟ್ರಪತಿಯವರ ಅಂಕಿತ ವಷ್ಟೇ ಬಾಕಿ. ಭೂ ಸುಧಾರಣೆಗಳ ತಿದ್ದುಪಡಿ ಕಾಯ್ದೆಯಲ್ಲಿ ‘ಯಾವುದೇ ಇತರ ಕಾನೂನು ಏನೇ ಇದ್ದರೂ, 1979ರ ಜನವರಿ ಮೊದಲ ದಿನಕ್ಕೆ ನಿಕಟಪೂರ್ವದಲ್ಲಿ ಯಾವುದೇ ಕೃಷಿ ಕಾರ್ಮಿಕನು, ಯಾವುದೇ ಗ್ರಾಮದಲ್ಲಿ ತನಗೆ ಸೇರಿರದ ಭೂಮಿಯಲ್ಲಿರುವ ವಾಸದ ಮನೆಯಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಲ್ಲಿ, ಅಂಥ ವಾಸದ ಮನೆಯನ್ನು, ಅದು ಇರುವ ನಿವೇಶನದ ಸಹಿತವಾಗಿ ಮತ್ತು ಅದಕ್ಕೆ ನಿಕಟವಾಗಿ ತಾಗಿಕೊಂಡಿರುವ ಮತ್ತು ಅದರ ಅನುಭೋಗಕ್ಕೆ ಅವಶ್ಯವಾಗಿರುವ ಭೂಮಿಯು ಅದರ ಮಾಲೀಕನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು’ ಎಂದು ಹೇಳಿದೆ.

  • ಉಪಯುಕ್ತ ಮಾಹಿತಿ

    ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಆನ್‌ಲೈನ್ ಮೂಲಕ ಪಡೆಯಬಹುದು ಹೇಗೆ..?ತಿಳಿಯಲು ಈ ಲೇಖನ ಓದಿ..

    ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲಾಗುತ್ತಿದ್ದು, ಅಂತರ್ಜಾಲದ ಮೂಲಕ ಪಡಿತರ ಚೀಟಿ ಪಡೆಯಬಹುದಾಗಿದೆ. ಜೊತೆಗೆ ರಾಜ್ಯದ ಯಾವುದೇ ಮೂಲೆಯಲ್ಲಿ ವಾಸವಾಗಿದ್ದರೂ, ಆ ಪ್ರದೇಶದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳ ಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.

  • ವಿಸ್ಮಯ ಜಗತ್ತು

    ಈ ಊರಿನ ಜನ ಸೂರ್ಯನನ್ನ ನೋಡೋದು 40 ದಿವಸಕ್ಕೆ ಒಂದೇ ಸಲ ಅಂತೆ..!ಯಾವ ಊರು ಗೊತ್ತಾ..?

    ಈ ನಗರವು ಪೋಲಾರ್ ವೃತ್ತದ ಆಚೆಗೆ ಕಾಣ ಸಿಗುವಂತದ್ದು, ಈ ನಗರದ ಹೆಸರು ಮುರ್ಮ್ಯಾನ್ಸ್ಕ್ಬೆ (Murmansk) ಇದು ರಷ್ಯಾ ದೇಶದ ನಾರ್ತ್ ಪೋಲ್ ನಲ್ಲಿ ಕಂಡುಬರುವ ಒಂದು ನಗರ.

  • inspirational

    ಈಕೆ ಹೇಗೆ IPS ಆಫೀಸರ್ ಆದಳು ಎಂದು ಗೊತ್ತಾದರೆ ನಿಂತಲ್ಲಿಯೇ ಸೆಲ್ಯೂಟ್ ಹೊಡೆಯುತ್ತೀರಾ.

    ಎಲ್ಲರ ಜೀವನ ಅವರು ಅಂದುಕೊಂಡಷ್ಟು ಸುಲಭವೂ ಸುಗಮವೂ ಆಗಿರಲ್ಲ. ಇಂದು ನೀವು ಯಾರನ್ನು ಯಶಸ್ವಿ ವ್ಯಕ್ತಿಗಳು ಎಂದು ಗುರುತಿಸುತ್ತೀರೋ ಅವರು ಹುಟ್ಟಿದಾಗಿನಿಂದ ಯಶಸ್ಸು ಪಡೆದು ಬಂದವರಲ್ಲ ಬದಲಿಗೆ ಅವಮಾನ ಸನ್ಮಾನ ಎಲ್ಲವನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿ ಬದುಕಿದವರು. ನೆನಪಿರಲಿ ಬದುಕಿನ ದಾರಿಯಲ್ಲಿ ನಮ್ಮವರಿಂದಲೇ ನಮಗೆ ವಾಮನ ನಮ್ಮವರಿಂದಲೇ ಸನ್ಮಾನ. ಅದೇನೇ ಇರಲಿ ಇಲೊಬ್ಬಳು ಹೆಣ್ಣುಮಗಳಿದ್ದಾಳೆ ಆಕೆ ಹೇಗೆ ಐಪಿಎಸ್ ಅಧಿಕಾರಿ ಆದಳು ಎನ್ನುವ ಸ್ಟೋರಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ. ಈ ಸ್ಟೋರಿ ಕೇಳಿದ ನೀವು…

  • ಸುದ್ದಿ

    ಆನ್‌ ಲೈನ್‌ ವ್ಯಾಪಾರಕ್ಕೆ ಬೀಳಲಿದೆಯಾ ಬ್ರೇಕ್…?

    ಹಬ್ಬಗಳ ದಿನ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ನೀಡುತ್ತಿವೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಭಾರತ ಸರ್ಕಾರಕ್ಕೆ ದೂರು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆ. ಸಿಎಐಟಿ ಅಧ್ಯಕ್ಷ ಬಿ.ಸಿ. ಭಾರತೀಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಕೇವಲ ಆನ್‌ಲೈನ್ ಮಾರುಕಟ್ಟೆಗಳಾಗಿದ್ದು, ಅವಾಗಿಯೇ ಸಾಮಾನುಗಳ ಸಂಗ್ರಹಣೆ ಹಾಗೂ…

  • ಸುದ್ದಿ

    ಆಹಾರಗಳನ್ನು ಫ್ರಿಜ್ಜಿನಲ್ಲಿ ಇಟ್ಟ ಮಾತ್ರಕ್ಕೆ ಅದು ಸುರಕ್ಷಿತವೇ…?

    ಆಹಾರಗಳನ್ನು ತಾಜಾರೂಪದಲ್ಲಿ ಸೇವಿಸಿದಷ್ಟೂಉತ್ತಮ. ಏಕೆಂದರೆ ಒಮ್ಮೆ ತಯಾರಿಸಿದ ಆಹಾರ ಕೊಂಚಹೊತ್ತಿನ ಬಳಿಕ ಹಳಸಲು ತೊಡಗುತ್ತದೆ. ಈ ಹಳಸುವಿಕೆಯನ್ನುತಡವಾಗಿಸಲು ಈಗ ನಮ್ಮೆಲ್ಲರ ಮನೆಗಳಲ್ಲಿ ಫ್ರಿಜ್ಜುಗಳಿವೆ. ಆದ್ದರಿಂದ ನಾವೆಲ್ಲಾ ಕೊಂಚ ಹೆಚ್ಚಿನ ಪ್ರಮಾಣವನ್ನುತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮುಂದಿನ ಒಂದೆರಡು ದಿನಗಳವರೆಗೆ ಸೇವಿಸುತ್ತೇವೆ. ಆದರೆ ಫ್ರಿಜ್ಜಿನಲ್ಲಿಟ್ಟಆಹಾರವನ್ನೇ ಪ್ರತಿ ಬಾರಿ ಸೇವಿಸಲು ಮೂರು ಅಥವಾ ನಾಲ್ಕು ಬಾರಿ ಬಿಸಿ ಮಾಡಿ ಮತ್ತೆ ತಣಿಸಿ ಇಡುವುದುಖಂಡಿತಾ ಆರೋಗ್ಯಕರವಲ್ಲ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ! ಫ್ರಿಜ್ಜಿನಲ್ಲಿಟ್ಟರೂಪ್ರತಿ ಆಹಾರವಸ್ತು ತಾಜಾ ಇರುವ ಅವಧಿ ಬೇರೆಬೇರೆಯಾಗಿರುತ್ತದೆ. ಕೆಲವು ಒಂದೆರಡು…