ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡನನ್ನು ಕಳೆದುಕೊಂಡ ತಾಯಿಗೆ ಆಸರೆಯಾಗಿ ನಿಂತ 22 ವರ್ಷದ ಮಗಳು. ವಿಧವೆಯಾದ ತನ್ನ 53 ವರ್ಷಗಳ ತಾಯಿಗಾಗಿ ವರನನ್ನು ಹುಡುಕಿ ತಂದಳು. ಹತ್ತಿರದಲ್ಲೇ ಇದ್ದು ಮದುವೆ ಮಾಡಿಸಿದಳು. ಈ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.
ಆ ಮಗಳ ಹೆಸರು ಸಂಹಿತಾ. ತಾಯಿ ಹೆಸರು ಗೀತಾ ಅಗರ್ವಾಲ್. ಶಾಲಾ ಶಿಕ್ಷಕಿ. 2016ರ ಮೇ ತಿಂಗಳಲ್ಲಿ ಹೃದಯಾಘಾತದಿಂದ ಗೀತಾ ಅಗರ್ವಾಲ್ ಗಂಡ ಮುಕೇಶ್ ಗುಪ್ತಾ ಮರಣಿಸಿದರು. ಇದರಿಂದ ಗೀತಾ ಅಗರ್ವಾಲ್ ಖಿನ್ನತೆಗೆ ಒಳಗಾಗಿದ್ದರು.
ಆಸ್ಪತ್ರೆಯ ಸುತ್ತ ಅಲೆದಾಡಬೇಕಾದ ಪರಿಸ್ಥಿತಿ ಬಂತು. ಗುರುಗಾವ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಮಾಡುತ್ತಿರುವ ಆಕೆಯ ಮಗಳು ಸಂಹಿತಾ… ತಾಯಿಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು.ಉದ್ಯೋಗಕೆ ರಾಜೀನಾಮೆ ನೀಡಿ ಜೈಪುರಕ್ಕೆ ಹೋದರು. ತಾಯಿಗೆ ಆಸೆಯಾಗಿ ನಿಂತರು. ತಾಯಿಗೆ ಹೇಗಾದರೂ ಮದುವೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದರು. ಆಕೆ ನಿರ್ಧಾರಕ್ಕೆ ಮನೆಯವರೆಲ್ಲಾ ವಿರೋಧ ವ್ಯಕ್ತಪಡಿಸಿದರು.
53 ವರ್ಷಗಳ ವಯಸ್ಸಲಿ ಮದುವೇನಾ ಎಂದು ಬಾಯಿಬಾಯಿ ಬಿಟ್ಟರು. ಆದರೂ ಸಂಹಿತಾ ತನ್ನ ನಿರ್ಧಾರ ಬದಲಾಯಿಸಲಿಲ್ಲ. ತನ್ನ ತಾಯಿಗೆ ಹೊಸ ಜೀವನ ಕೊಡಬೇಕೆಂದುಕೊಂಡರು.ಆಕೆಯ ಹುಡುಕಾಟ ಆರಂಭವಾಯಿತು. ವಿಧವೆಯರಿಗಾಗಿ ಇರುವ ಮ್ಯಾರೇಜ್ ಬ್ಯೂರೋಗಳಲ್ಲಿ, ವೆಬ್ಸೈಟ್ಗಳಲ್ಲಿ ಹುಡುಕಾಡಿದರು. ರಾಜಸ್ಥಾನದಲಿ ತಮಗೆ ಗೊತ್ತಿರುವ ಕುಟುಂಬಗಳನ್ನು ಭೇಟಿಯಾದರು.
ಕೊನೆಗೂ ಆಕೆಯ ಹುಡುಕಾಟಕ್ಕೆ ಪ್ರತಿಫಲ ಸಿಕ್ಕಿತು. ರಾಜಸ್ಥಾನದ ಬಾನ್ಸ್ವಾರ್ ನಗರದ 55 ವರ್ಷಗಳ ರೆವೆನ್ಯೂ ಇನ್ಸ್ಪೆಕ್ಟರ್ ಕೆಜಿ ಗುಪ್ತಾ ಆಸಕ್ತಿ ತೋರಿದರು. ಅವರು ಪತ್ನಿ 2010ರಲ್ಲಿ ಕ್ಯಾನ್ಸರ್ ಕಾರಣ ಮರಣಿಸಿದ್ದರು.
ಅಂದಿನಿಂದ ಅವರು ಸಹ ಒಂಟಿ ಜೀವನ ನಡೆಸುತ್ತಿದ್ದಾರೆ. ಗೀತಾ ಅಗರ್ವಾಲ್ರನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಅವರು ಸಂಹಿತಾರನ್ನು ಸಂಪರ್ಕಿಸಿದರು. ಸುಮ್ಮನೆ ಕುರುಡು ಕುರುಡಾಗಿ ಮದುವೆ ಮಾಡಲಿಲ್ಲ ಆಕೆ. ಎಲ್ಲಾ ಸಂಗತಿಗಳ ಬಗ್ಗೆ ತಿಳಿದುಕೊಂಡರು ಮದುವೆಯಾದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್ಪುರ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾನಿಂಗ್ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ. ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್ ಇನ್ವರ್ಸಸ್’ ಎಂದು ಕರೆಯಲಾಗುವ ಇದೊಂದು…
ನವದೆಹಲಿ: ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..!ಇದು ಸಾಧ್ಯಾನಾ ಎಂದು ಮೂಗು ಮುರಿಯಬೇಡಿ.. ಖಂಡಿತಾ ಸಾಧ್ಯ. ಅದೂ ಕೂಡ ವಿಶ್ವದ ಪ್ರತಿಷ್ಠಿತ ಸಂಸ್ಥೆಯೊಂದು ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ರೂ ಸಂಬಳ ನೀಡುವುದಾಗಿ ಹೇಳಿದೆ, ಹೌದು ಅಧ್ಯಯನವೊಂದರ ನಿಮಿತ್ತ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನಿದ್ರೆ ಮಾಡುವವರಿಗೆ 13 ಲಕ್ಷ ರೂ ಸಂಬಳ ನೀಡುವುದಾಗಿ ಘೋಷಣೆ ಮಾಡಿದೆ….
ಪೆಟ್ರೋಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಜುಲೈ ತಿಂಗಳಿನಿಂದ ದೇಶದಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ತಂದರೆ ಇವುಗಳ ಬೆಲೆ ಅರ್ಧದಷ್ಟು ಅಗ್ಗವಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಿಸುವ ಫ್ಯಾಕ್ಟಲಿಡಾಟ್ಇನ್ (Factly.in) ಅಂತರ್ಜಾಲ ತಾಣವು ಅಭಿಪ್ರಾಯಪಟ್ಟಿದೆ.
ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್ಗೆ ಒಂದೇ ಕುಟುಂಬದ ಮೂವರು ಅಕ್ಕತಂಗಿಯರು ಕಮಲ, ಗೀತ, ಮಮತಾರಿಗೆ (ಜಿಲ್ಲಾಧಿಕಾರಿಯಾಗಿ) ರ್ಯಾಂಕ್ 32, 64, 128 ಬಂದಿದೆ.
ಬಹುಶಃ ಈಗಂತೂ ಸ್ಮಾರ್ಟ್ಫೋನ್ ಇರದೆ ಇರುವ ವ್ಯಕ್ತಿಯು ಸಿಗುವುದು ತುಂಬಾ ವಿರಳ. ಎಲ್ಲರ ಪಾಕೆಟ್ನಲ್ಲಿ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಈ ಸತ್ಯದ ಹೊರತಾಗಿಯೂ, ನಂಬಲಾಗದ ವಿಷಯೇನಂದರೆ, ಆಂಡ್ರಾಯ್ಡ್ ಫೋನ್ ನ ಎಷ್ಟೋ ವಿಶಿಷ್ಟ ಆಪ್ಷನ್ಸ್ ಗಳು ಎಷ್ಟೋ ಬಳಕೆದಾರರಿಗೆ ಗೊತ್ತಿಲ್ಲಾ ಎನ್ನುವುದೇ ಸೋಜಿಗದ ವಿಷಯ.
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.