ಆರೋಗ್ಯ

ಈ ಕಾರಣಗಳಿಂದ ಮೈಗ್ರೇನ್‌ ತಲೆನೋವು ಬರುತ್ತದೆ..!ಇದರ ನಿವಾರಣೆ ಹೇಗೆ?ತಿಳಿಯಲು ಈ ಲೇಖನ ಓದಿ…

2863

ಮೈಗ್ರೇನ್‌ ಅನ್ನುವುದು ಒಂದು ಸಾಮಾನ್ಯ ರೀತಿಯ ತಲೆನೋವು. ವಾಕರಿಕೆ, ವಾಂತಿ ಅಥವಾ ಬೆಳಕಿಗೆ ಸಂವೇದನಾಶೀಲತೆ ಇರುವುದು ಇತ್ಯಾದಿ ರೋಗಲಕ್ಷಣಗಳ ಜತೆಗೆ ಇದು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ  ತಲೆಯ ಒಂದೇ ಬದಿಯಲ್ಲಿ ಇರಿಯುವಂತಹ ನೋವು ಕಾಣಿಸಿಕೊಳ್ಳಬಹುದು.

ಹಾಗೆಂದು ಎಲ್ಲಾ ತಲೆನೋವುಗಳೂ ಮೈಗ್ರೇನ್ ಅಲ್ಲ. ದೃಷ್ಟಿದೋಷ, ನೆಗಡಿಗೆ ಸಂಬಂಧಿಸಿದ ತೊಂದರೆಗಳು, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಆದರೆ ಅದು ಮೈಗ್ರೇನ್ ಅಲ್ಲ. ಆದರೆ ಮೈಗ್ರೇನ್ ತಲೆನೋವು ಅತ್ಯಂತ ಸಾಮಾನ್ಯವಾದದ್ದು.

ಮೈಗ್ರೇನ್ ಎಂದರೇನು ?

ಕೆಲವು ಕಾರಣಗಳಿಂದ ಒಂದು ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ತಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ.ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಅದೇ ಮೈಗ್ರೇನ್.

ಕಾರಣಗಳು, ಸಂದರ್ಭ ಮತ್ತು ಅಪಾಯಕಾರಿ ಅಂಶಗಳು:

ಸಾಮಾನ್ಯವಾಗಿ ಮೈಗ್ರೇನ್‌ ತಲೆನೋವು 10 ರಿಂದ 45 ವಯಸ್ಸಿನ ನಡುವೆ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಜೀವನದ ಅಂತಿಮ ಹಂತಗಳಲ್ಲಿಯೂ ಸಹ ಕಾಣಿಸಿಕೊಳ್ಳಬಹುದು.ಮೈಗ್ರೇನ್‌ ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮೈಗ್ರೇನ್‌ ತಲೆನೋವು ವಂಶಪರಂಪರಾಗತವಾಗಿ ಬರಬಹುದು. ಕೆಲವು ಮಹಿಳೆಯರಲ್ಲಿ , ಎಲ್ಲರಲ್ಲಿಯೂ ಅಲ್ಲ , ಅವರು ಗರ್ಭಿಣಿ ಆಗಿರುವಾಗ ಮೈಗ್ರೇನ್‌ ಕಾಣಿಸಿಕೊಳ್ಳಬಹುದು.

ಇದಕ್ಕೆ ನಿರ್ಧಿಷ್ಟ ಕಾರಣವನ್ನು ಹೇಳಲಾಗದಿದ್ದರೂ ಈ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಬಹುದು.
1  ಹೆಚ್ಚು ಕೆಲಸದಿಂದಾಗಿ ಮಾನಸಿಕ ಒತ್ತಡ ಇರುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇದು ಸಾಮಾನ್ಯ. ಅವರಿಗೆ ದಿನದ ಹೆಚ್ಚುಕಾಲ  ಒತ್ತಡದ ಕೆಲಸ ಮತ್ತು ನಿದ್ರೆ ಕಡಿಮೆ, ಅನಿಯಮಿತ ಆಹಾರದ ಸೇವನೆ ಇರುತ್ತದೆ.

2 . ಮಾನಸಿಕ ಒತ್ತಡಗಳಾದ ಕೋಪ,ಚಿಂತೆ, ಖಿನ್ನತೆ,ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.

3 .ಆಹಾರ ಸೇವನೆಯಿಂದ ವ್ಯತ್ಯಾಸವಾದ ಹಸಿವೆ, ಮದ್ಯ ಸೇವನೆ, ಕಡಿಮೆ ನೀರು ಕುಡಿಯುವುದರಿನ್ದಲೂ ತಲೆನೋವು ಉದ್ರೇಕವಾಗುತ್ತದೆ.

4 . ನಿದ್ರೆ ಮಾತ್ರೆ ಸೇವನೆ,  ಬಿ. ಪಿ.,  ಹಲ್ಲು ನೋವು, ಕಣ್ಣಿನ ತೊಂದರೆ, ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿಸದ ಆಹಾರ ಸೇವನೆ, ಅತಿ ಮುಖ್ಯವಾಗಿ ನಿದ್ರಾಹೀನತೆ ಮುಂತಾದುವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.

5 . ಹೆಚ್ಚು ಕಾಲ ಬಿಸಿಲಿನಲ್ಲಿ ಇರುವುದು, ದೀರ್ಘಕಾಲ ಪ್ರಯಾಣ ಮಾಡುವುದು, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭದಲ್ಲಿ ಹೆಚ್ಚು ಹೊತ್ತು ಭಾಗವಹಿಸುವುದು, ಕೆಲವರಿಗೆ  ಹೆಚ್ಚಾಗಿ ಓದುವುದು, ಹೆಚ್ಚು ಕಾಲ ಸಿನೆಮಾ / ಟಿ. ವಿ, ನೋಡುವುದು ಇವುಗಳಿಂದ ತಲೆನೋವು ಉದ್ರೇಕಗೊಳಬಹುದು.

6 . ಕೆಲವು ಸ್ತ್ರೀಯರಿಗೆ ಋತುಚಕ್ರದ ಏರುಪೇರುಗಳಿಂದ ತಲೆನೋವು ಉದ್ರೇಕಗೊಳ್ಳಬಹುದು.

ಮೈಗ್ರೇನ್  ರೋಗಲಕ್ಷಣಗಳು:

ದೃಷ್ಟಿ ಅಸ್ತವ್ಯಸ್ತಗೊಳ್ಳುವುದು, ಅಥವಾ ಕಣ್ಣಿನ ಬದಿಗಳಲ್ಲಿ ಬೆಳಕಿನ ಬಿಂಬಗಳು ಅಥವಾ ಪ್ರಭಾವಳಿ ಸುತ್ತುತ್ತಿರುವಂತೆ ಅನ್ನಿಸುವುದನ್ನು  ಮೈಗ್ರೇನ್‌ ಬರುತ್ತಿದೆ ಎನ್ನುವುದರ ಎಚ್ಚರಿಕೆಯ ಸೂಚನೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಬೆಳಕಿನ ಬಿಂಬಗಳು ಒಂದು ಅಥವಾ ಎರಡೂ ಕಣ್ಣಿನ ಬದಿಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕೆಳಗೆ ಹೇಳುವ ಒಂದು ಅಥವಾ ಎಲ್ಲ ರೋಗಲಕ್ಷಣಗಳ ಜತೆಗೆ ಕಾಣಿಸಿಕೊಳ್ಳಬಹುದು.

ಕಣ್ಣಿನಲ್ಲಿ ತಾತ್ಕಾಲಿಕವಾಗಿ ಆಂಶಿಕ ಕುರುಡುತನ ಅಥವಾ ಕಣ್ಣಿನ ಎದುರು ಕಪ್ಪು ಚುಕ್ಕೆಗಳು ಗೋಚರಿಸುವುದು,ದೃಷ್ಟಿ  ಮಬ್ಟಾಗುವುದು,ಕಣ್ಣು ನೋವು,ಕಣ್ಣಿನ ಸುತ್ತಲೂ ನಕ್ಷತ್ರಗಳು ಅಥವಾ ಅಂಕುಡೊಂಕಾದ ಗೆರೆಗಳು ಗೋಚರಿಸುವುದು

ಕೊಳವೆಯೊಳಗಿನಿಂದ ನೋಡಿದಂತೆ ದೃಶ್ಯಗಳು ಅರೆಬರೆ ಕಾಣಿಸುವುದು (ಟನೆಲ್‌ಷನ್‌-ಕಣ್ಣಿನ ಮುಂಭಾಗದ ದೃಶ್ಯಗಳು ಮಾತ್ರವೇ ಗೋಚರಿಸಿ ಬದಿಗಳಲ್ಲಿನ ದೃಶ್ಯ ಕಾಣಿಸದೆಯೇ ಇರುವುದು)

ಮೈಗ್ರೇನ್‌ ಇರುವ ಎಲ್ಲ ವ್ಯಕ್ತಿಗಳಿಗೂ ಬೆಳಕಿನ ಪುಂಜ ಕಾಣಿಸದೆ ಇರಬಹುದು. ಇಂತಹ ಬೆಳಕಿನ ಪುಂಜ ಕಾಣಿಸಿಕೊಳ್ಳುವವರಲ್ಲಿ ತಲೆನೋವು ಕಾಣಿಸಿಕೊಳ್ಳುವುದಕ್ಕೆ ಸುಮಾರು 10-15 ನಿಮಿಷ ಮೊದಲು ಇದು ಕಾಣಿಸಿಕೊಳ್ಳಬಹುದು.  ಹಾಗಿದ್ದರೂ ಸಹ ಅದು ಕೆಲವೇ ನಿಮಿಷಗಳಿಗೆ ಮೊದಲು ಅಥವಾ 24 ಗಂಟೆಗಳಿಗೂ ಮೊದಲು ಕಾಣಿಸಿಕೊಳ್ಳಬಹುದು. ಬೆಳಕಿನ ಪುಂಜ ಕಾಣಿಸಿಕೊಂಡ ಅನಂತರ ಯಾವಾಗಲೂ ತಲೆನೋವು ಬಂದೇ ಬರುತ್ತದೆ ಎಂದು ಹೇಳುವಂತಿಲ್ಲ.

ಮೈಗ್ರೇನ್‌ ತಲೆನೋವು ಬಹಳ ಸಣ್ಣದಾಗಿ ಇರಬಹುದು ಅಥವಾ ತೀವ್ರ ರೂಪದಲ್ಲಿಯೂ ಬಾಧಿಸಬಹುದು. ನೋವು ಕಣ್ಣಿನ ಹಿಂಭಾಗದಲ್ಲಿ ಅಥವಾ ಕತ್ತು ಮತ್ತು ತಲೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ರೋಗಿಗಳಲ್ಲಿ  ಪ್ರತಿಯೊಂದು ಬಾರಿಯೂ ತಲೆನೋವು ಒಂದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ತಲೆನೋವು ಸಾಮಾನ್ಯವಾಗಿ ಈ ರೀತಿಯಲ್ಲಿ ಇರಬಹುದು.

 

ಬಹಳ ಸಣ್ಣದಾಗಿ ಆರಂಭವಾದ ನೋವು ಕೆಲವೇ ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ ತೀವ್ರಗೊಳ್ಳಬಹುದು. 6 ರಿಂದ 48 ಗಂಟೆಗಳ ವರೆಗೂ ಇರಬಹುದು.

ಮೈಗ್ರೇನ್ ನ ನಿವಾರಣೆ :-

1 . ಮೈಗ್ರೇನ್ ತಲೆನೋವು ಬಂದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು [ Pain killer ] ತೆಗೆದುಕೊಂಡರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ.

2 . ಇನ್ನು ಕೆಲವರಿಗೆ ಏನನ್ನೂ ಉಪಯೋಗಿಸದೆ ನಿಷ್ಯಬ್ದವಾದ ಕೊಠಡಿಯಲ್ಲಿ ಕೆಲವು ಕಾಲ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ತಲೆನೋವು ಕಡಿಮೆಯಾಗುತ್ತದೆ.

3 . ಇದಲ್ಲದೆ ಜೀವನ ಶೈಲಿಯನ್ನ್ನು ಬದಲಾಯಿಸಿಕೊಳ್ಳುವುದರಿಂದ ಈ ತೆರನ ತಲೆನೋವನ್ನು ನಿಯಂತ್ರಿಸಿಕೊಳ್ಳಬಹುದು.

  • ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು.
  • ನಿತ್ಯ ವ್ಯಾಯಾಮ.
  • ಸರಿಯಾದ ಊಟದ ಕ್ರಮ. ಪೌಷ್ಟಿಕ ಆಹಾರದ ಸೇವನೆ.
  • ತಂಬಾಕು, ಮದ್ಯ ಸೇವನೆಯಿಂದ ದೂರ ಇರುವುದು. ಕಾಫಿ ಕುಡಿಯುವುದನ್ನು ಕಡಿಮೆ ಮಾಡುವುದು.
  • ಜೀವನದ ಬಗ್ಯೆ ಸಕಾರಾತ್ಮಕ ಮನೋಭಾವ.

ಮುನ್ಸೂಚನೆಗಳು:
ಚಿಕಿತ್ಸೆಗೆ ಪ್ರತಿಯೊಬ್ಬನೂ ಸ್ಪಂದಿಸುವ ರೀತಿ ಹಾಗೂ ಪ್ರಮಾಣ ಭಿನ್ನ-ಭಿನ್ನವಾಗಿರುತ್ತವೆ. ಕೆಲವರಿಗೆ ಸ್ವಲ್ಪಮಟ್ಟಿನ ಚಿಕಿತ್ಸೆಯಿಂದ ಅಥವಾ ಚಿಕಿತ್ಸೆಯೇ ಇಲ್ಲದೆ ತಲೆನೋವು ಕಡಿಮೆ ಆಗಬಹುದು, ಇನ್ನು ಕೆಲವರಿಗೆ ಅನೇಕ ಔಷಧಿಗಳನ್ನು ಉಪಯೋಗಿಸಬೇಕಾಗಿ ಬರಬಹುದು ಅಥವಾ ಆಸ್ಪತ್ರೆಗೂ ಸೇರಬೇಕಾಗಬಹುದು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಜಿಯೋ ಫ್ರೀ 4G ಫೋನ್ ಬುಕಿಂಗ್ ಶುರು!ಇವತ್ತೇ ಬುಕ್ ಮಾಡಿ.ಬುಕ್ ಮಾಡೋದು ಹೇಗೆ ಗೊತ್ತಾ?ಈ ಲೇಖನಿ ಓದಿ…

    ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು. ಈ ಜಿಯೋ ಫೋನ್ ಬೆಲೆ ಕೇವಲ 1500ರೂ ಗಳು ಇರಲಿದ್ದು, ಈ 1500ರೂ ಗಳನ್ನು ಡೆಪಾಸಿಟ್ ಮಾಡಿದ್ರೆ, ಮೂರೂ ವರ್ಷದ ನಂತರ ಈ ಹಣವನ್ನು ಹಿಂದಿಗಿಸುವುದಾಗಿ ಹೇಳಿಕೊಂಡಿತ್ತು.

  • ವಿಸ್ಮಯ ಜಗತ್ತು

    ಇವರು ಮದುವೆಯಾಗಿದ್ದು ಒಂದು ಪ್ರಾಣಿ ಜೊತೆ..!ಆ ಪ್ರಾಣಿ ಯಾವುದು ಗೊತ್ತಾ?

    ನಮ್ಮ ದೇಶದಲ್ಲಿ ಮಳೆ ಬರುವಂತೆ ಪ್ರಾರ್ಥಿಸಿ ಕತ್ತೆ, ಕಪ್ಪೆ ಹಾಗೂ ಇತರ ಪ್ರಾಣಿಗಳ ಜೊತೆ ಮಾಡುವೆ ಮಾಡುವುದು ಸಾಮಾನ್ಯವಾಗಿದೆ. ಈ ಪ್ರಾಣಿಗಳ ಜೊತೆ ಮದುವೆ ಮಾಡಿಕೊಂಡು ಮೆರೆವಣಿಗೆ ಮಾಡೋದು ಎಲ್ಲರಿಗು ಗೊತ್ತಿರುವ ವಿಚಾರ.ಹೀಗೆ ವಿದೇಶಗಳಲ್ಲಿ ಇಂತಹ ಸಂಪ್ರದಾಯಗಳು ಚಾಲ್ತಿಯಲ್ಲಿವೆ.

  • ಸುದ್ದಿ

    ಜಮೀನಿನಲ್ಲಿ ಕೆಲಸವನ್ನ ಮಾಡುತ್ತಿದ್ದ ಕೂಲಿಗೆ ಜಮೀನಿನಲ್ಲಿ ಸಿಕ್ಕಿದ್ದೇನು ಗೊತ್ತಾ.!

    ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ…

  • ಸುದ್ದಿ

    ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು ಕಾರಣ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ವರ ಬೋಳುಮಂಡೆಯವನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(2 ಜನವರಿ, 2019) ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ…

  • ಸುದ್ದಿ

    ಷಾಕಿಂಗ್ ನ್ಯೂಸ್ ; ಭಿಕ್ಷುಕಿಯ ಅಕೌಂಟಿನಲ್ಲಿ ಪತ್ತೆಯಾಯ್ತು 5 ಕೋಟಿಗೂ ಹೆಚ್ಚು ಹಣ,.!ಹೇಗೆ ಗೊತ್ತಾ,..!!

    ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಮೃತಪಟ್ಟ ಭಿಕ್ಷುಕನ ಮನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿತ್ತು. ಈಗ ವಿದೇಶದ ಭಿಕ್ಷುಕಿಯೊಬ್ಬರ ಬ್ಯಾಂಕ್ ಅಕೌಂಟ್ ಖಾತೆಯಲ್ಲಿ 5 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ಅರಬ್ ದೇಶದ ಲೆಬನನ್​ನ ವಾಫಾ ಮಹಮ್ಮದ್ ಎಂಬ ಭಿಕ್ಷುಕಿಯ ಬ್ಯಾಂಕ್ ಅಕೌಂಟಿನಲ್ಲಿ ಬರೋಬ್ಬರಿ 1.33 ಮಿಲಿಯನ್ ಲೆಬನಾನ್ ಪೌಂಡ್(ಭಾರತೀಯ ರೂಗಳಲ್ಲಿ 5.62 ಕೋಟಿ ರೂ.) ಪತ್ತೆಯಾಗಿದೆ. ಲೆಬನನ್​ನ ಜಮ್ಮಲ್ ಟ್ರಸ್ಟ್​ ಬ್ಯಾಂಕ್​ ನಲ್ಲಿ ಹಣವಿಡಲಾಗಿದ್ದು, ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಸ್ವತಃ…