ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್ನಲ್ಲೂ ಹಲವು ಮಾಲ್ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್ನಿಂದ ತೆಗೆದುಹಾಕಿದೆ. ಆದರೂ ಇನ್ನೂ ಸಾಕಷ್ಟು ಆಪ್ಸ್ ಇವೆಯಂತೆ. ಅಂತಹವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ. ಇವುಗಳಲ್ಲಿ ಯಾವುದಾದರೂ ಆಪ್ನ್ನು ನೀವು ಈಗಾಗಲೆ ಇನ್ಸ್ಟಾಲ್ ಮಾಡಿಕೊಂಡಿದ್ದರೆ ಕೂಡಲೆ ತೆಗೆದುಬಿಡಿ. ಇಲ್ಲದಿದ್ದರೆ ಎಷ್ಟೋ ಬೆಲೆಬಾಳುವ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹ್ಯಾಕರ್ಗಳ ಪಾಲಾಗುವ ಅಪಾಯವಿದೆ. ಆ ಆಪ್ಸ್ ಯಾವುದು ಎಂದು ಈಗ ನೋಡೋಣ.
1. ಗೈಡ್ ಫಾರ್ ಫಿಫಾ ಮೊಬೈಲ್ (Guide for FIFA Mobile)
ಗೂಗಲ್ ಪ್ಲೇಸ್ಟೋರ್ನಲ್ಲಿ ಇರುವ ಈ ಆಪ್ನಲ್ಲಿ ವೈರಸ್ ಇದೆ. ಇದನ್ನು ಕೂಡಲೆ ತೆಗೆದುಬಿಡಿ. ಈಗಾಗಲೆ ಇದನ್ನು ಲಕ್ಷದಷ್ಟು ಜನ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ನಿಮ್ಮ ಡಿವೈಸ್ನಲ್ಲಿದ್ದರೆ ಕೂಡಲೆ ಅನ್ಇನ್ಸ್ಟಾಲ್ ಮಾಡಿ.
2. ಗೈಡ್ ಫಾರ್ ಲೆಗೋ ನೆಕ್ಸೋ ನೈಟ್ಸ್ (Guide for LEGO Nexo Knights)
ಪ್ಲೇ ಸ್ಟೋರ್ನಲ್ಲಿರುವ ಈ ಆಪ್ನಲ್ಲಿ ಮಾಲ್ವೇರ್ ಇದೆ. ಇದನ್ನು ಈಗಾಗಲೆ 50 ಸಾವಿರಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ನೀವೂ ಡೌನ್ಲೋಡ್ ಮಾಡಿಕೊಂಡಿದ್ದರೆ ಕೂಡಲೆ ರಿಮೂವ್ ಮಾಡಿ.
3. ಗೈಡ್ ಫಾರ್ ರೋಲಿಂಗ್ ಸ್ಕೈ (Guide for Rolling sky)
ಇದನ್ನು 10 ಸಾವಿರ ಮಂದಿ ಬಳಕೆದಾರರು ಈಗಾಗಲೆ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ಸಹ ಅಪಾಯಕಾರಿ. ಆದಕಾರಣ ಇದನ್ನೂ ತೆಗೆದುಬಿಡಿ.
4. ಗೈಡ್ ಫಾರ್ ಲೆಗೋ ಸಿಟಿ ಮೈ ಸಿಟಿ (Guide for LEGO City My City)
ಈ ಆಪ್ನ್ನು 50 ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿಯಾದ ಆಪ್. ಕೂಡಲೆ ತೆಗೆದುಬಿಡಿ.
5. ಗೈಡ್ ಫಾರ್ ಪೋಕಿಮಾನ್ ಗೋ (Guide for Pokemon GO)
ಪೋಕಿಮಾನ್ ಗೇಮ್ಗೆ ಸೇರಿದ ಗೈಡ್ ಆಪ್ ಆಗಿರುವ ಇದು ಪ್ಲೇಸ್ಟೋರಲ್ಲಿದೆ. ಇದನ್ನು ಲಕ್ಷ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಆದಕಾರಣ ಇದನ್ನು ಅನ್ಇನ್ಸ್ಟಾಲ್ ಮಾಡಿಬಿಡಿ.
6. ಗೈಡ್ ಡ್ರೀಮ್ ಲೀಗ್ ಸಾಕರ್ (Guide Dream League Soccer)
ಈ ಆಪ್ನ್ನು 50 ಸಾವಿರ ಮಂದಿ ಈಗಾಗಲೆ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್ನಲ್ಲೂ ಸಹ ಮಾಲ್ವೇರ್ ಇದೆ. ಆದಕಾರಣ ಇದನ್ನು ನಿಮ್ಮ ಫೋನ್ನಿಂದ ಕೂಡಲೆ ತೆಗೆದುಬಿಡಿ.
7. ಲೀಗೈಡ್ ಲೆಗೋ ಸಿಟಿ ಅಂಡರ್ ಕವರ್ (LEGUIDE LEGO City Undercover)
ಇದು ಸಹ ಅಪಾಯಕಾರಿ ಆಪ್. ಇದನ್ನು ಈಗಾಗಲೆ 50 ಸಾವಿರ ಮಂದಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ನೀವು ಸಹ ಆ ಕೆಲಸ ಮಾಡಿದ್ದರೆ ಕೂಡಲೆ ತೆಗೆದುಬಿಡಿ.
8. ಗೈಡ್ ಫರ್ ಕಾಡಿಲ್ಲಾಕ್ಸ್ (Guide for Cadillacs)
ಇದನ್ನು 10 ಸಾವಿರ ಮಂದಿವರೆಗೂ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ವೈರಸ್ ಇರುವುದಾಗಿ ಗುರುತಿಸಲಾಗಿದೆ. ಆದಕಾರಣ ಇದನ್ನು ಇನ್ಸ್ಟಾಲ್ ಮಾಡಿಕೊಂಡಿರುವವರು ಕೂಡಲೆ ತೆಗೆದುಬಿಡಿ.
9. ಲೀ ಗೈಡ್ ಲೆಗೋ ಸಿಟಿ ಮೈ ಸಿಟಿ (LEGUIDE LEGO City My City)
ಇದನ್ನು 10 ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಇದನ್ನು ಕೂಡಲೆ ತೆಗೆದುಬಿಡಿ.
10. ಗೈಡ್ ಫಾರ್ ಫೀಫಾ 17 (Guide For FIFA 17)
ಈ ಆಪ್ ಸಹ 50 ಸಾವಿರ ಮಂದಿ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ಮಾಲ್ವೇರ್ ಇದೆ. ಆದಕಾರಣ ಇದನ್ನೂ ಸಹ ತೆಗೆದುಬಿಡಿ.
11. ಗೈಡ್ ಫಾರ್ ಸ್ಲಿತರ್.ಐಓ (Guide for slither.io)
ಸುಮಾರು 1 ಲಕ್ಷ ಮಂದಿ ಬಳಕೆದಾರರು ಈ ಆಪನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಆ ರೀತಿ ನೀವು ಮಾಡಿದ್ದರೆ ಕೂಡಲೆ ಈ ಆಪನ್ನು ತೆಗೆದುಬಿಡುವುದು ಒಳ್ಳೆಯದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವತಂತ್ರ ಹೋರಾಟಗಾರರು, ಕವಿಗಳು, ಸೈನಿಕರು, ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿವೆ.
ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು. ಈ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಯೊಂದರ ಲಾಭ ಪಡೆದು ಮಧುರೈ ಮಹಿಳೆಯೊಬ್ಬಳು ಕೋಟ್ಯಾಧಿಪತಿಯಾಗಿದ್ದಾರೆ. ಅರುಲ್ಮೋಜಿ ಸರ್ವ್ನಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದ್ರಾ ಯೋಜನೆ ಲಾಭ ಪಡೆದು ತನ್ನದೇ ಸ್ವಂತ ವ್ಯಾಪಾರ ಶುರು ಮಾಡಿದ್ದಾರೆ. ಅರುಲ್ಮೋಜಿ ಕೇವಲ 234 ರೂಪಾಯಿಗೆ ವ್ಯಾಪಾರ ಶುರು ಮಾಡಿದ್ದರು. ಈಗ ಕಂಪನಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಪ್ರಧಾನ ಮಂತ್ರಿ ಕಚೇರಿಗೆ ಥರ್ಮೋಪ್ಲೆಕ್ಸ್ ಅವಶ್ಯಕತೆಯಿದೆ ಎಂಬುದು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ ನಿಂದ ಅರುಲ್ಮೋಜಿಗೆ ಗೊತ್ತಾಗಿದೆ. ತಕ್ಷಣ ಅರುಲ್ಮೋಜಿ ಈ ಬಗ್ಗೆ…
ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು…
ಬಿಹಾರದ ಈ ಗ್ರಾಮದ ಜನತೆ ಪ್ರವಾಹದಿಂದ ಮನೆ, ಬೆಳೆ ಎಲ್ಲವನ್ನೂ ಕಳೆದುಕೊಂಡಿದ್ದು, ಇದೀಗ ತಿನ್ನಲು ಆಹಾರ ಸಿಗದೇ ಇಲಿಗಳನ್ನು ಹಿಡಿದು ತಿನ್ನುವ ಪರಿಸ್ಥಿತಿ ಎದುರಾಗಿದೆ. ಬಿಹಾರದಲ್ಲಿ ಎದುರಾಗಿರುವ ಪ್ರವಾಹದಿಂದಾಗಿ ದೂರದ ಗ್ರಾಮಗಳ ಜನರಿಗೆ ತಿನ್ನಲು ಆಹಾರವೂ ದೊರೆಯುತ್ತಿಲ್ಲ ಎಂಬುದಕ್ಕೆ ಕಟಿಹಾರ್ ಜಿಲ್ಲೆಯ ದಂಗಿ ಟೋಲಾ ಗ್ರಾಮಸ್ಥರೇ ನಿದರ್ಶನ! ಈ ಗ್ರಾಮದ ಜನತೆ ಪ್ರವಾಹದಿಂದ ಮನೆ, ಬೆಳೆ ಎಲ್ಲವನ್ನೂ ಕಳೆದುಕೊಂಡಿದ್ದು, ಇದೀಗ ತಿನ್ನಲು ಆಹಾರ ಸಿಗದೇ ಇಲಿಗಳನ್ನು ಹಿಡಿದು ತಿನ್ನುವ ಪರಿಸ್ಥಿತಿ ಎದುರಾಗಿದೆ. ಈ ಪ್ರದೇಶದಲ್ಲಿ ವಾಸವಿದ್ದ ಸುಮಾರು…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿ ನಿಮ್ಮ…