ಜ್ಯೋತಿಷ್ಯ

ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

253

ಇಂದು ಭಾನುವಾರ , 18/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಆಗಾಗ ಸಂಚಾರದಿಂದ ಕಾರ್ಯಸಿದ್ಧಿಯಾದರೂ ದೇಹಾಯಾಸ ತಂದೀತು. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಂದಾವು. ಸೂಕ್ತ ಸಲಹೆಗಾಗಿ ಹಿತೈಷಿಗಳು ನಿಮ್ಮ ಮಾರ್ಗದರ್ಶನಕ್ಕೆ ಬಂದಾರು.

ವೃಷಭ:-

ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉದಾಸೀನತೆ ತೋರಿಸಿಯಾರು. ವೃತ್ತಿರಂಗದಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಯಾವುದೇ ಸಮಸ್ಯೆಗಳನ್ನು ತಾಳ್ಮೆ ಸಮಾಧಾನದಿಂದ ಪರಿಹರಿಸಿಕೊಳ್ಳಬೇಕು. ಸ್ನೇಹಿತರೊಂದಿಗೆ ದಿನವನ್ನು ಸಂತೋಷದಿಂದ ಕಳೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಓಡಾಟ, ಜತೆಗೆ ಮಕ್ಕಳ ಸಲುವಾಗಿ ವ್ಯಾಪಾರ ಮಾಡುವ ಸಾಧ್ಯತೆ. ಉತ್ತಮ ಆರೋಗ್ಯ.

 

ಮಿಥುನ:

ಕಾರ್ಯಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ಅನುಸರಿಸಿದ ಮಾರ್ಗಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ. ಕಚೇರಿಯಲ್ಲಿ ನಿಮ್ಮ ಸ್ಥಾನ ಮಾನಗಳು ಗಟ್ಟಿಯಾಗುವ ಜತೆಗೆ ಕಾರ್ಯ ಬಾಹುಳ್ಯ ಅಧಿಕವಾಗಲಿದೆ. ಸಹಧರ್ಮಿಣಿಯ ಸಾರ್ಥಕ ಸಹಯೋಗ ಸುಖವರ್ಧನೆಗೆ ಪ್ರಚೋದನೆ ನೀಡಲಿದೆ. ಹಾಗೆ ಆರ್ಥಿಕವಾಗಿ ಮುನ್ನಡೆ ತೋರಿ ಬಂದರೂ ಖರ್ಚುವೆಚ್ಚಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಕಟಕ :-

ನೌಕರ ವರ್ಗಕ್ಕೆ ಸಂತಸ ಸುದ್ದಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕ್ಷತಿ ಇರಲಾರದು. ಗೃಹ ಬದಲಾವಣೆಯ ಸಾಧ್ಯತೆ ಇರುತ್ತದೆ. ಸ್ವಪಯತ್ನಬಲಕ್ಕೆ ವಿಶ್ವಾಸವಿಟ್ಟು ಮುಂದುವರಿಯಿರಿ. ಕಚೇರಿ ಕೆಲಸಗಳ ಸುಗಮತೆಗೆ ಸಹವರ್ತಿಗಳ ಸಲಹೆ ಸಹಕಾರ ಕೋರಲಿದ್ದೀರಿ. ಸಂಗಾತಿಗೆ ಹೊಸ ಉದ್ಯೋಗದಿಂದ ಸಂತೋಷ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಟ್ಟು ಕಾರ್ಯನಿರ್ವಹಿಸುವುದು ಒಳಿತು.

 

 ಸಿಂಹ:

ಮನೆಯಲ್ಲಿ ದೇವತಾಕಾರ್ಯಗಳ ಚಿಂತನೆ ನಡೆಯಲಿದೆ. ಪ್ರವಾಸಾದಿಗಳಿಂದ ಸಂತಸ ತರುತ್ತದೆ. ಆರ್ಥಿಕ ಹಿಡಿತವಿದ್ದಲ್ಲಿ ಹೆಚ್ಚಿನ ಸಮಸ್ಯೆ ಇರಲಾರದು. ಅವಿವಿರತ ದುಡಿಮೆ ದೇಹಾಯಾಸ ತಂದೀತು. ಉದ್ಯೋಗದಲ್ಲಿ ಸ್ಥಾನ ಮಾನಗಳು ಅಧಿಕಗೊಳ್ಳುವುದು. ರೈತಾಪಿ ವರ್ಗದವರಿಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ತೊಡಕುಗಳು ಎದುರಾದೀತು. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಸಮೃದ್ಧಿ.

ಕನ್ಯಾ :-

ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಹೊಸ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಸಂಗಾತಿಯ ಇಷ್ಟಾರ್ಥಗಳನ್ನು ಈಡೇರಿಸಲಿದ್ದೀರಿ. ಆಭರಣ ಖರೀದಿ ಸಾಧ್ಯತೆ. ಗೃಹ ನಿರ್ಮಾಣಕಾರ್ಯಗಳಿಗೆ ಸಕಾಲವಿದು. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ತೋರಿ ಬಂದೀತು. ದಾಂಪತ್ಯ ಜೀವನದಲ್ಲಿ ಸಂತೃಪ್ತಿ ತರುತ್ತದೆ. ಗುರುಹಿರಿಯರ ಸೇವೆ ಶಾಂತಿ ಸಮಾಧಾನ ತರಲಿದೆ.

 

ತುಲಾ:

ವಾದೀತು. ಬಂಧುಮಿತ್ರರ ಸಹಕಾರದಿಂದ ನೆಮ್ಮದಿ ತಂದೀತು. ದೇವರ ಉಪಾಸನೆಯಿಂದ ಮನಸ್ಸಿನ ಮನೋಕಾಮನೆಗಳು ನಡೆಯಲಿವೆ. ಕಾರ್ಯದೊತ್ತಡಗಳಿಂದ ಕಾರ್ಯವಿಳಂಬ ಒದಗಿಬಂದಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸ್ನೇಹಿತನ ಸಹಾಯಕ್ಕೆ ನಿಲ್ಲಬೇಕಾದ ಅವಕಾಶ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗದ ಅವಕಾಶ ದೊರೆತು ನೆಮ್ಮದಿ ಮೂಡುವುದು.

ವೃಶ್ಚಿಕ :-

ಆರ್ಥಿಕವಾಗಿ ವ್ಯಾಪಾರ ವ್ಯವಹಾರಗಳ ಬಗ್ಗೆ ಜಾಗ್ರತೆ ವಹಿಸಬೇಕು. ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾದೀತು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಲಲಿತ ಕಲೆಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮುಖ್ಯವಾದ ವಿಷಯವೊಂದರ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕಾದೀತು. ಭಾವೋದ್ವೇಗ ತಗ್ಗಿಸಿಕೊಳ್ಳುವಿರಿ.

 

ಧನಸ್ಸು:

ಹಣಕಾಸಿನ ಅಡಚಣೆಗಳು ದೂರವಾಗಲಿವೆ. ಜೀವನದಲ್ಲಿ ಬದಲಾವಣೆ ತರುವ ಘಟನೆಯೊಂದು ಎದುರಾಗುವ ಸಾಧ್ಯತೆ ಇದೆ. ಸಂಪನ್ಮೂಲಗಳು ಕೂಡಿಬರಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಮುನ್ನಡೆ ಸಾಧಕವಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸಮಾಧಾನ ಕಂಡು ಬರುತ್ತದೆ. ಯೋಗ್ಯ ವಯಸ್ಕರು ಕಂಕಣಬಲವನ್ನು ಪಡೆಯಲಿದ್ದಾರೆ. ದಿನಾಂತ್ಯ ಶುಭವಿದೆ.

 

ಮಕರ :-

ಆತ್ಮೀಯರೊಂದಿಗೆ ಹಣಕಾಸಿನ ಪರಿಸ್ಥಿತಿ ಚರ್ಚಿಸಲಿದ್ದೀರಿ. ನಿವೇಶನ ಕೊಳ್ಳುವ ವಿಚಾರ ಮುಂದೂಡುವ ಬದಲಾಗಿ ಹೊಂದಾಣಿಕೆಯಿಂದ ಮುಂದುವರೆಯುವುದು ಸೂಕ್ತ. ಆರೋಗ್ಯ ಉತ್ತಮವಾಗಿರುವುದು. ಆಗಾಗ ರಾಹು ಕೇತು ಪೀಡೆಯಿಂದ ಮಾನಸಿಕ, ದೈಹಿಕ ಸಮಸ್ಯೆಗಳನ್ನು ಅನುಭವಿಸುವಿರಿ. ಶಕ್ತಿ ಸಾಮರ್ಥ್ಯಗಳಿದ್ದರೂ ಆಗಾಗ ಆಲಸ್ಯ ವಿರುತ್ತದೆ. ದಿನಾಂತ್ಯ ಶುಭವಾರ್ತೆ ಇದೆ.

ಕುಂಭ:-

ಕ್ರೀಡಾಪಟುಗಳಿಗೆ ಹಾಗೂ ರಾಜಕೀಯ ವರ್ಗದವರಿಗೆ ಯಶಸ್ಸು ಹಿಂಬಾಲಿಸಲಿದೆ. ಆರ್ಥಿಕ ಸ್ಥಿತಿ ಉನ್ನತಿ ತರುತ್ತದೆ. ಧರ್ಮಪತ್ನಿಯ ಸಲಹೆಗಳಿಗೆ ಸ್ಪಂದಿಸಬೇಕಾಗುತ್ತದೆ. ಶುಭವಿದೆ. ಸಮಾಜ ಸೇವೆಯ ನಿಮಿತ್ತ ಹೆಚ್ಚಿನ ಓಡಾಟ ಮಾಡಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಮಿತ್ರರೊಬ್ಬರು ಸನಿಹಕ್ಕೆ ಬರುವ ಸಾಧ್ಯತೆ. ಆರ್ಥಿಕ ಅನುಕೂಲತೆಗಳು ಸಹಜವಾಗಿರುವುದು.

ಮೀನ:-

ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ಒಪ್ಪಂದ ಏರ್ಪಟ್ಟು ಸಂತೋಷ ತರುವುದು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಪ್ರಶಸ್ತಿ, ಗೌರವಾದರಗಳು ಲಭ್ಯ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಮಾತಿನಿಂದ ಅನಾವಶ್ಯಕ ಸಮಸ್ಯೆ ತಂದೀತು. ಚತುರತೆಯಿಂದ ಕಾರ್ಯ ಸಾಧಿಸಬೇಕಾಗುತ್ತದೆ. ರಾಹು ಕಿರಿಕಿರಿಯನ್ನು ಹಾಗೆ ಶನಿಯು ಆರ್ಥಿಕ ನಷ್ಟ ತಂದಾನು. ಜಾಗ್ರತೆಯಿಂದ ಇರಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…

    ಗುರುವಾರ, 29/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ತೆರಿಗೆ ಅಧಿಕಾರಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಮುನ್ನಡೆ ಇರುತ್ತದೆ. ಮನೆಯಲ್ಲಿ ಪಕ್ಕದವರ ಕಿರಿಕಿರಿಗಳಿಗೆ ತಲೆ ಕೆಟ್ಟು ಹೋಗುತ್ತದೆ. ಸಮಾಧಾನವಿರಲಿ. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ವೃಷಭ:- ಮನೆ ಮಾರಾಟ, ಫ್ಲಾಟ್‌ ಖರೀದಿಗಳಿಗೆ ಅವಸರಿಸದಿರಿ. ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ…

  • ಉಪಯುಕ್ತ ಮಾಹಿತಿ, ಸೌಂದರ್ಯ

    17 ವರ್ಷಗಳ ನಂತರ ಭಾರತಕ್ಕೆ ಒಲಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ..!ತಿಲಿಲಿಯಲು ಈ ಲೇಖನ ಓದಿ ..

    17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

  • ಜ್ಯೋತಿಷ್ಯ

    ಆಂಜಿನೇಯ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಇತಿಹಾಸ

    ʼಮೈಸೂರು ದಸರಾʼ ಶುರುವಾಗಿದ್ದೇಗೆ ಗೊತ್ತಾ?,ಅದರ ಹಿನ್ನೆಲೆ ಏನೆಂದು ತಿಳಿಹಿರಿ…!

    ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…

  • Village

    ಕೋಲಾರ ಜಿಲ್ಲೆಯಲ್ಲಿರುವ ಹುಂಗೇನಹಳ್ಳಿ ಗ್ರಾಮದ ಬಗ್ಗೆ ನಿಮಗೆಷ್ಟು ಗೊತ್ತು? ಓದಿ ಈ ಲೇಖನವನ್ನು

    ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…

    Loading